Posts

Showing posts from March, 2026

ಆಯ್ಕೆ

“ಅವನು..., ಆ ರಾಕ್ಷಸ ಬಂದು ನನ್ನ ಬದುಕನ್ನು ಸರ್ವನಾಶ ಮಾಡಿ ಹೋದ!” “ಹೇಗೆ?” “....” “ಹೋದ ಅನ್ನುತ್ತಿದ್ದೀಯ....! ಇನ್ನೇನು ಚಿಂತೆ?” “....” “ಅವ ನಿನ್ನ ಜೀವನ ಸರ್ವನಾಶ ಮಾಡುವಾಗ ನೀನೇನು ಮಾಡುತ್ತಿದ್ದೆ? ನಿನಗದರ ಅರಿವಾಗುತ್ತಿರಲಿಲ್ಲವಾ? ಅದಕ್ಕೆ ಯಾಕೆ ಅವಕಾಶ ಕೊಟ್ಟೆ?” “....” “ನಿನ್ನ ಜೀವನ ಸರ್ವನಾಶ ಮಾಡಿದ ಅವನ ಬದುಕು ಹೇಗಿದೆ?” “....” “ಹೀಗೆ ಮೌನವಾಗಿದ್ದರೆ ಏನರ್ಥ? ಮಾತಾಡು!” “ನಿನಗೆ ಅರ್ಥವಾಗುವುದಿಲ್ಲ!” “ಸರಿ...! ಇಷ್ಟು ಮಾತ್ರ ಯಾವತ್ತಿಗೂ ನೆನಪಿಟ್ಟುಕೋ....! ನಮ್ಮ ಬದುಕಿಗೆ ಪರಿಪೂರ್ಣವಾಗಿ ನಾವೇ ಹೊಣೆಗಾರರು! ಯಾರೋ ಬಂದು ನಮ್ಮ ಬದುಕನ್ನು ಹಾಳುಮಾಡಿದರೆಂದೋ ನಾಶ ಮಾಡಿದರೆಂದೋ ಹೇಳುವುದರಷ್ಟುದೊಡ್ಡ ಮೂರ್ಖತನ ಬೇರೆಯಿಲ್ಲ. ಅದು ಆತ್ಮವಿಶ್ವಾಸವಿಲ್ಲದ..., ಕೈಯ್ಯಲ್ಲಾಗದ ಹೇಡಿಗಳು ಹೇಳುವ ಮಾತು! ಹಾಗೆಯೇ..., ಯಾರೋ ಬಂದು ನಮ್ಮನ್ನು ಉದ್ದಾರ ಮಾಡುತ್ತಾರೆಂದು ಕಾಯುತ್ತಾ ಕೂರುವುದೂ....! ಒಬ್ಬರನ್ನು ನಾವು ನಂಬಿದ್ದರಿಂದಾಗಿ..., ಒಬ್ಬರಿಗೆ ನಾವು ಕೊಟ್ಟ ಮಹತ್ವದಿಂದಾಗಿ- ಸ್ಥಾನದಿಂದಾಗಿ..., ಒಂದು ಹಂತದಲ್ಲಿ..., ನಮ್ಮ ಬದುಕಿನಲ್ಲಿ ಅಲ್ಪ ಸ್ವಲ್ಪ ಏರುಪೇರು ಉಂಟಾಗಬಹುದಾಗಲಿ..., ನಮ್ಮ ಪರಿಪೂರ್ಣ ಬದುಕನ್ನು ನಿರ್ಧರಿಸುವ ಅವಕಾಶ ನಮಗೆ ಮಾತ್ರ! ನಾವು ನೆಮ್ಮದಿಯಾಗಿರಬೇಕೋ ಬೇಡವೋ..., ಗೆಲ್ಲಬೇಕೋ ಬೇಡವೋ..., ಕೊನೆಗೆ ನಮ್ಮ ಬದುಕನ್ನು ನಿರ್ಧರಿಸುವ ಅವಕಾಶವನ್ನು ಇನ್ನೊಬ್ಬರಿಗೆ ಕೊಡಬೇಕೋ ಬೇಡವೋ ಅನ್ನುವುದು ...