Posts

ಆಯ್ಕೆ

“ಅವನು..., ಆ ರಾಕ್ಷಸ ಬಂದು ನನ್ನ ಬದುಕನ್ನು ಸರ್ವನಾಶ ಮಾಡಿ ಹೋದ!” “ಹೇಗೆ?” “....” “ಹೋದ ಅನ್ನುತ್ತಿದ್ದೀಯ....! ಇನ್ನೇನು ಚಿಂತೆ?” “....” “ಅವ ನಿನ್ನ ಜೀವನ ಸರ್ವನಾಶ ಮಾಡುವಾಗ ನೀನೇನು ಮಾಡುತ್ತಿದ್ದೆ? ನಿನಗದರ ಅರಿವಾಗುತ್ತಿರಲಿಲ್ಲವಾ? ಅದಕ್ಕೆ ಯಾಕೆ ಅವಕಾಶ ಕೊಟ್ಟೆ?” “....” “ನಿನ್ನ ಜೀವನ ಸರ್ವನಾಶ ಮಾಡಿದ ಅವನ ಬದುಕು ಹೇಗಿದೆ?” “....” “ಹೀಗೆ ಮೌನವಾಗಿದ್ದರೆ ಏನರ್ಥ? ಮಾತಾಡು!” “ನಿನಗೆ ಅರ್ಥವಾಗುವುದಿಲ್ಲ!” “ಸರಿ...! ಇಷ್ಟು ಮಾತ್ರ ಯಾವತ್ತಿಗೂ ನೆನಪಿಟ್ಟುಕೋ....! ನಮ್ಮ ಬದುಕಿಗೆ ಪರಿಪೂರ್ಣವಾಗಿ ನಾವೇ ಹೊಣೆಗಾರರು! ಯಾರೋ ಬಂದು ನಮ್ಮ ಬದುಕನ್ನು ಹಾಳುಮಾಡಿದರೆಂದೋ ನಾಶ ಮಾಡಿದರೆಂದೋ ಹೇಳುವುದರಷ್ಟುದೊಡ್ಡ ಮೂರ್ಖತನ ಬೇರೆಯಿಲ್ಲ. ಅದು ಆತ್ಮವಿಶ್ವಾಸವಿಲ್ಲದ..., ಕೈಯ್ಯಲ್ಲಾಗದ ಹೇಡಿಗಳು ಹೇಳುವ ಮಾತು! ಹಾಗೆಯೇ..., ಯಾರೋ ಬಂದು ನಮ್ಮನ್ನು ಉದ್ದಾರ ಮಾಡುತ್ತಾರೆಂದು ಕಾಯುತ್ತಾ ಕೂರುವುದೂ....! ಒಬ್ಬರನ್ನು ನಾವು ನಂಬಿದ್ದರಿಂದಾಗಿ..., ಒಬ್ಬರಿಗೆ ನಾವು ಕೊಟ್ಟ ಮಹತ್ವದಿಂದಾಗಿ- ಸ್ಥಾನದಿಂದಾಗಿ..., ಒಂದು ಹಂತದಲ್ಲಿ..., ನಮ್ಮ ಬದುಕಿನಲ್ಲಿ ಅಲ್ಪ ಸ್ವಲ್ಪ ಏರುಪೇರು ಉಂಟಾಗಬಹುದಾಗಲಿ..., ನಮ್ಮ ಪರಿಪೂರ್ಣ ಬದುಕನ್ನು ನಿರ್ಧರಿಸುವ ಅವಕಾಶ ನಮಗೆ ಮಾತ್ರ! ನಾವು ನೆಮ್ಮದಿಯಾಗಿರಬೇಕೋ ಬೇಡವೋ..., ಗೆಲ್ಲಬೇಕೋ ಬೇಡವೋ..., ಕೊನೆಗೆ ನಮ್ಮ ಬದುಕನ್ನು ನಿರ್ಧರಿಸುವ ಅವಕಾಶವನ್ನು ಇನ್ನೊಬ್ಬರಿಗೆ ಕೊಡಬೇಕೋ ಬೇಡವೋ ಅನ್ನುವುದು ...

ಒಂದು ಸಣ್ಣ ಕಥೆ/ಕವಿತೆ!

ನನಗೆ ದಕ್ಕದ ಕವಿತೆ..., ಅವಳು! ಅವಳಿಗೆ ಬೇಡದ ಕಥೆ..., ನಾನು! ಕವಿತೆ ದಕ್ಕದಿರಲು ಕಾರಣ..., ಅದು ಅರ್ಥವಾಗುವುದಿಲ್ಲ! ಕಥೆ ಬೇಡದಿರಲು ಕಾರಣ..., ಅದು ಅರ್ಥವಾಗುತ್ತದೆ!! 😁😁😁

ನಾನೇಕೆ ಬರೆಯುತ್ತೇನೆ?

  ನಾನೇಕೆ ಬರೆಯುತ್ತೇನೆ? ಬರೆಯದೇ ಇರಲು ನನ್ನಿಂದ ಸಾಧ್ಯವಿಲ್ಲ- ಆದ್ದರಿಂದ!! ಎರಡು ತಿಂಗಳು ಪ್ರಯತ್ನಪೂರ್ವಕವಾಗಿ..., ನನ್ನೊಳಗೆ ಯಾವುದೇ ಹೊಸ ವಿಷಯ ಹುಟ್ಟದಂತೆ ನೋಡಿಕೊಂಡೆ! ಹೊರ ಪ್ರಪಂಚದ ಯಾವುದೇ ವಿಷಯವನ್ನು ಆಸಕ್ತಿಯಿಂದ ನೋಡಲಿಲ್ಲ- ಯೋಚಿಸಲಿಲ್ಲ! ಸುತ್ತಾಟಕ್ಕೆ ಹೋಗಲಿಲ್ಲ..., ಯಾರೊಂದಿಗೂ ವಿಷಯಾಧಾರಿತ ಮಾತುಕತೆಯಾಗಲಿಲ್ಲ..., ಚರ್ಚೆಯಿಲ್ಲ- ಯಾರನ್ನೂ ಭೇಟಿಯಾಗಲೂ ಶ್ರಮಿಸಲಿಲ್ಲ...! ಬರೆಯಬಾರದು- ಅಷ್ಟೇ...! ಆದರೇನು ಮಾಡುವುದು? ನನ್ನರಿವಿಲ್ಲದೇ..., ನನ್ನ ಪ್ರಯತ್ನವನ್ನು ಮೀರಿ ಕೆಲವೊಂದು ವಿಷಯಗಳು ನನ್ನೊಳಗೆ ತುಡಿಯುತ್ತಿರುತ್ತದೆ! ಅದನ್ನು ಬರೆಯದೇ ಇರಲು ಶ್ರಮಿಸಿದಷ್ಟೂ..., ಬೇರೆ ಏನನ್ನೂ ಮಾಡಲು ನನಗೆ ಏಕಾಗ್ರತೆಯೇ ಸಿಗುವುದಿಲ್ಲ! ಇತ್ತೀಚಿನ ದಿನಗಳಲ್ಲಿ ಓದುಗರಿಗಿಂತ ಹೆಚ್ಚು ಬರಹಗಾರರೇ ಇದ್ದಾರೆ! ಈಗ ಬರೆಯುತ್ತಿರುವ ಈ ಬರಹವನ್ನು ಕೂಡ ಸ್ಕ್ರೋಲ್‌ಮಾಡಿ-ನೋಡಿ ಮುಂದಕ್ಕೆ ಹೋಗುತ್ತಾರೆ ಹೊರತು ಓದುವುದಿಲ್ಲ ಅನ್ನುವ ಅರಿವು ನನಗಿದೆ! ಆದರೂ ಬರೆಯುತ್ತೇನೆ- ಯಾಕೆ? ನಾನೊಂದು ರೀತಿಯಲ್ಲಿ ಓದುಗರಿಲ್ಲದ ಕಥೆಗಾರ! ಅಥವಾ..., ಓದುಗರು ಒಪ್ಪದ ಕಥೆಗಳನ್ನು ಬರೆಯುವ ಕಥೆಗಾರ!! ಅಷ್ಟೇ ಉತ್ತರ- ನನ್ನ ಕಥೆಗಳು/ಬರಹಗಳು ಒಳಗಿಟ್ಟುಕೊಳ್ಳಲಾರದ್ದಕ್ಕೆ ಹೊರ ಹಾಕುತ್ತೇನೆ ಹೊರತು- ಯಾರಾದರೂ ಓದಲೆಂದೋ ಓದಲೇ ಬೇಕೆಂದೋ ಅಲ್ಲ! ಓದಿದರೆ- ಓದಿ ಮೆಚ್ಚಿದರೆ, ಬೈದರೆ, ವಿಮರ್ಶೆ ಮಾಡಿದರೆ ಖುಷಿಯೇ ಹೊರತು..., ಓದಲೇ ಬೇಕೆನ್ನುವ ತುಡಿತವೋ...

ಕಥೆಯೂ- ವಾಸ್ತವವೂ- ಕಥೆಗಾರನೂ!

      “ ಅಲ್ಲವೋ ..., ನೀನು ಹಾಗೆಲ್ಲಾ ಬರೆದರೆ ಅದು ನಿನ್ನದೇ ವಿಷಯ ಅನ್ನಿಸಿ ಎಲ್ಲರೂ ನಿನ್ನನ್ನು ದೂರ ಇಡಲ್ವಾ ?” ಎಂದಳು ಗೆಳತಿ ! “ ಉದಾಹರಣೆ ಹೇಳು !” ಎಂದೆ . “ ಅದೇ ..., ನಾವು ಸೇರುವಾಗ ..., ' ನಿನ್ನನ್ನು ಯಾರಾದರೂ ತಡೆದುಕೊಂಡಿದ್ದಾರ ರಾಕ್ಷಸ ?’- ಅಂತ ನಾನು ಕೇಳಿದೆ ! ನೀನು - ' ಹಾಗೊಬ್ಬರನ್ನು ಹುಡುಕಬೇಕು ' ಅಂದೆ ! ಅದನ್ನೇ ಆಮೇಲೆ ..., ಹುಡುಕಿ ..., ಸಿಕ್ಕವಳೊಂದಿಗೆ ಸೇರಿದೆ , ಅವಳು ನನ್ನನ್ನು ತಡೆದುಕೊಳ್ಳಲಿಲ್ಲ ಅನ್ನುವಂತೆ ಕಥೆ ಬರೆದೆ !! ನೀನು ' ಹಾಗೊಬ್ಬಳನ್ನು ಹುಡುಕಬೇಕು ' ಅಂತ ಹೇಳಿದ್ದು ನನಗೆ ಪರ್ಸನಲ್ ಆಗಿ ! ಕಥೆಯಲ್ಲಿ ನಾನೂ ..., ನೀ ಹುಡುಕಿದ ಅವಳೂ ..., ಕರ್ಮ - ಓದುಗರ ವಿಷಯ ಬಿಡು - ನನಗಾದರೂ ನಿನ್ನ ಕಥೆ ಓದಿ ಏನನ್ನಿಸಬೇಡ ?!” ಎಂದಳು . “ ಏನನ್ನಿಸಿತು ?” ಎಂದೆ . “ ಡೌಟ್ ಬಂದೇ ಬರುತ್ತೆ !?” ಎಂದಳು . “ ಕಣ್ಮಣಿ ..., ಒಂದು ಕಥೆ ಹೇಳ್ತೇನೆ ಕೇಳು ! ಅದನ್ನ ನೀನು ನಂಬ್ತೀಯೋ ಇಲ್ವೋ ಅನ್ನೋದರಮೇಲೆ ನಿನ್ನ ಪ್ರಶ್ನೆಗೆ ಉತ್ತರವಿದೆ ! ಕಥೆಗಾರ ಅಂದಮೇಲೆ - ಕಥೆ ಹೇಗೆ ಹೇಳ್ತಾನೆ ಅನ್ನೋದಷ್ಟೇ ಮುಖ್ಯ !” ಎಂದೆ . ಕುತೂಹಲದಿಂದ ನನ್ನ ಮುಖವನ್ನೇ ನೋಡಿದಳು ! “ ನಿನಗೆ ದೇವರಬಗ್ಗೆ ನಂಬಿಕೆ ಇದೆಯಾ ?” ಎಂದು ಕೇಳಿದೆ . ಹೌದೆನ್ನುವಂತೆ ತಲೆಯಾಡಿಸಿದಳು ! “ ದೇವರೆಂದರೆ ಯಾರು ಅಂತ ಒಂದು ಕಥೆ ಹೇಳ್ತೇನೆ ಕೇಳು ....! ಆ ಕಥೆಯಲ್ಲಿ ನಡೆದದ್ದು ನೀನು ನಂಬ್ತೀಯೋ...

ಹಾರಿಣಿ

   ಹಾರಿಣಿ * ಅವಳ ಹೆಸರು ಹಾರಿಣಿ . ವಯಸ್ಸು ನಲವತ್ತು - ಗೊತ್ತು ಆದ್ದರಿಂದ ನಲವತ್ತು ! ಮೊದಲ ನೋಟಕ್ಕೆ ಮೂವತ್ತೈದಕ್ಕಿಂತ ಹೆಚ್ಚು ಅನ್ನಿಸುವುದಿಲ್ಲ - ಹಾಗಿದ್ದಾಳೆ ! ಬರಹೇಳಿದ್ದಾಳೆ . ಮನೆಯಲ್ಲಿ ಯಾವುದೋ ಪೂಜೆ . ತಲುಪಿ ಸಮಯವನ್ನು ನೋಡಿಕೊಂಡೆ . ಸಂಜೆ ಏಳು . ಏಳೂವರೆಯಿಂದ ಒಂಬತ್ತರವರೆಗೆ ಪೂಜೆ . ಪೂಜೆಯಿದೆ ಬಾ ಅಂದಿದ್ದಳು . ಅವಳಿಗೂ ಗೊತ್ತು ಯಾವ ಪೂಜೆಯೆಂದು ನಾನು ಕೇಳುವುದಿಲ್ಲವೆಂದು ! ಅವಳೂ ಹೇಳಲಿಲ್ಲ ! ಅಥವಾ ಹೇಳಿದ್ದಳ ? ಏನೋ ..., ಯಾವ ಪೂಜೆಯೆಂದು ನೆನಪಾಗಲಿಲ್ಲ - ಸೊ ಹೇಳಿಲ್ಲ ! ಗಜಿಬಿಜಿ . ತುಂಬಾ ಜನ ಸೇರಿದ್ದಾರೆ . ಬರೀ ನೆಂಟರೋ ಅಥವಾ ನನ್ನಂತಾ ಪರಿಚಯದವರು - ಆಸುಪಾಸಿನವರೂ ಇದ್ದಾರೋ ತಿಳಿಯಲಿಲ್ಲ . ಮನೆಯ ಒಳಕ್ಕೆ ಹೋಗಲೋ ಬೇಡವೋ ಅನ್ನುವ ಯೋಚನೆಯಲ್ಲಿ ನಿಂತಿದ್ದಾಗ ..., ಮನೆಯ ಪಕ್ಕದ ಬೇವಿನ ಮರ ಸೆಳೆಯಿತು . ಅದರ ಪಕ್ಕದಲ್ಲೇ ಸೀಬೇಮರ . ಮರದಲ್ಲಿ ಪೂರ್ತಿ ಹಣ್ಣುಗಳು ! ಪೂಜೆಗೆ ಇನ್ನೂ ಅರ್ಧಗಂಟೆಯಿದೆ . ಬಂದಿದ್ದೇನೆ ಅನ್ನಿಸಿ ಹೊರಬರೋಣವೆಂದು ಬಾಗಿಲಕಡೆ ನಡೆದರೆ ..., ಬಾಗಿಲ ಬಳಿ ನಿಂತು ನನ್ನನ್ನೇ ನೋಡುತ್ತಿದ್ದಾಳೆ - ಹಾರಿಣಿ ! ಬಿಳಿ ಹೂಗಳಿರುವ ಕಪ್ಪು ಸೀರೆ ! ಬೇಲೂರಿನಲ್ಲೋ ಹಳೆಬೀಡಿನಲ್ಲೋ ಸೋಮನಾಥಪುರದಲ್ಲೋ ನೋಡಿದ್ದೇನೆ - ಶಿಲ್ಪಿಗಳು ಕಡೆದು ನಿಲ್ಲಿಸಿರುವ ಹೆಣ್ಣು ಶಿಲ್ಪಗಳನ್ನು - ಅವರು ಇವಳನ್ನು ಕಂಡಿರುವುದಿಲ್ಲ ! ಸ್ವಲ್ಪವೂ ಅಳತೆ ಮೀರದ ಆಕಾರಬದ್ಧ ಶರೀರ ... ಅ...

ಲಕ್ಷ್ಮಿಯೆಂದರೇ...!

    * ನಮಸ್ತೇ ..., ನಾನು ಲಕ್ಷ್ಮಿ - ಶಂಭುವಿನ ಲಕ್ಷ್ಮಿ ! ನಿನ್ನೆ ಅವನಿಗೊಂದು ಪತ್ರ ಬರೆದಿದ್ದೆ ! ಅವನ ಹೊರತು ಯಾರಿಗೂ ಅರ್ಥವೇ ಆಗಲಿಲ್ಲವೆನ್ನುವುದು ಅವನ ತಕರಾರು ! ಅದರಲ್ಲೂ ಅವನ ಅಮ್ಮಂದಿರಿಗೆ - ಹೆತ್ತಮ್ಮನಿಗೂ ಹೆತ್ತಮ್ಮನಷ್ಟೇ ಅವ ಪ್ರೀತಿಸುವ ಇನ್ನೊಬ್ಬರು ಅಮ್ಮನಿಗೂ ...! ಸೋ ..., ವಿವರಿಸಿ ಹೇಳಬೇಕಂತೆ - ನಾನೇ ...! ಪತ್ರವನ್ನು ಹಾಗೆಯೇ ಉಳಿಸಿ ವಿವರಣೆ ಬೇಕೆನ್ನಿಸಿದಲ್ಲಿ ಬ್ರಾಕೆಟ್‌ನಲ್ಲಿ ವಿವರಣೆ ಕೊಟ್ಟಿದ್ದೇನೆ ! * * ಹೇಗಿದ್ದೀಯ ಶಂಭು ? ನಿನಗೇನು ? ಪ್ರತಿ ಕ್ಷಣ ಸಂತೋಷದಿಂದ ಇರುವವನು ! ಏನೇ ಘಟನೆಗಳು ನಡೆದರೂ ..., ಮಾನಸಿಕ ಸಂಘರ್ಷಗಳು ಏನೇ ಇದ್ದರೂ - ನೀ ನೆಮ್ಮದಿಯಾಗಿರುತ್ತಿ ! ಆ ಘಟನೆಗಳನ್ನೂ - ಸಂಘರ್ಷವನ್ನೂ ಎಂಜಾಯ್ ಮಾಡುತ್ತಿ ! ಸೈಕಲಾಜಿಕಲ್ ಅನಾಲಿಸಿಸ್ ಮಾಡ್ತಿ ! ಈಗಲೂ ಸಂತೋಷದಿಂದ ಇದ್ದೀಯ ಅನ್ನೋದು ಗೊತ್ತು ...! ಆದರೂ ಕೆಲವೊಂದು ವಿಷಯಗಳನ್ನು ನಿನಗೆ ಹೇಳಬೇಕು ಅನ್ನಿಸುತ್ತಿದೆ ! ಹೇಳಿಬಿಡುತ್ತೇನೆ ! ನಿನ್ನದೇ ಮಜವಾದ ಲೆಕ್ಕಾಚಾರವಿದೆಯಲ್ಲಾ ...? ಆ ಲೆಕ್ಕಾಚಾರದ ಪ್ರಕಾರ ..., ನಿನ್ನ ಪ್ರಿಯಾರಿಟಿ ಬದಲಾಗಬೇಕಾದ ಸಮಯವಾಯಿತು !!! ಎಷ್ಟು ನಗು ಬಂತು ಗೊತ್ತಾ ಆ ಲೆಕ್ಕಾಚಾರ ನೋಡಿ ..., * ಬದುಕುವುದು ಅರವತ್ತು ವರ್ಷವಂತೆ ! ಮೊದಲ ಇಪ್ಪತ್ತು ವರ್ಷ ವಿದ್ಯಾಲಕ್ಷ್ಮಿಯಂತೆ ..., ಎರಡನೇ ಇಪ್ಪತ್ತು ವರ್ಷ ಧೈರ್ಯಲಕ್ಷ್ಮಿಯಂತೆ ..., ಮೂರನೇ ಇಪ್ಪತ್ತು ವರ್ಷ ಧನಲಕ್ಷ್...