ಶಾಂತಿಪ್ರಿಯರು!
“ಭಾರತ- ಪಾಕೀಸ್ಥಾನ ಕ್ರಿಕೆಟ್ನಲ್ಲಿ ಯಾರು ಗೆದ್ದರು ಯಾರು ಸೋತರು ಅನ್ನುವುದು ನನಗೆ ಮುಖ್ಯವಲ್ಲ! ಅದೊಂದು ಗೇಂ- ಅಷ್ಟೆ! ಆದರೆ ಪಂದ್ಯ ಮುಗಿಸಿದ ನಂತರ ಅವರಿಗೆ ಶೇಖ್ಹ್ಯಾಂಡ್ ಕೊಡದಿರುವುದು ತಪ್ಪು!” ಎಂದಳು ಗೆಳತಿ. “ಎಂತದೇ...! ಅಮಾಯಕ ಪ್ರವಾಸಿಗಳ ಪ್ಯಾಂಟ್ ಬಿಚ್ಚಿಸಿ ಅವರ ಮತವನ್ನು ಗುರುತಿಸಿ ಗುಂಡಿಟ್ಟು ಕೊಂದವರಬಗ್ಗೆ ಹೀಗೆ ಹೇಳಬಹುದೇ? ರೇಪ್ ಮಾಡಿದವನಿಗೆ ಶೇಖ್ಹ್ಯಾಂಡ್ ಕೊಡುವುದು ದೊಡ್ಡತನ ಅನ್ನುತ್ತಿದ್ದೀಯ?” ಎಂದು ಕೇಳಿದೆ. “ಯಾರೋ ಒಬ್ಬರು ಹಾಗೆ ಮಾಡಿದರೆಂದು ಎಲ್ಲರನ್ನೂ ಹಾಗೆ ಹೇಳಬಹುದೇ?” ಎಂದು ಕೇಳಿದಳು. * ಪ್ರತ್ಯಕ್ಷವಾಗಿ ಕಂಡ..., ಅನುಭವಕ್ಕೆ ಬಂದ..., ವರ್ತಮಾನದ ವಾಸ್ತವಗಳಿಂದಲೇ ಕಲಿಯದ ನಾವು ಇತಿಹಾಸದಿಂದ ಕಲಿಯುತ್ತೇವೆಯೇ? ಭ್ರಮೆ!! ಆದ್ದರಿಂದ..., ಒಂದು ಕಥೆ ಹೇಳಬೇಕು ಅಂದುಕೊಂಡಿದ್ದೇನೆ! ವಿವರಿಸಿದರೆ ಸಾವಿರ ಪುಟಗಳನ್ನು ಮೀರಬಹುದಾದ ಕಥೆಯನ್ನು ಮೂರುನಾಲ್ಕು ಪುಟಗಳು ಮೀರದಂತೆ ಹೇಳಲೊಂದು ಶ್ರಮ! ಈ ಕಥೆಯಿಂದ ಕಲಿತವರು ಕಲಿತರು ಕಲಿಯದವರು ಮುಂದೆ ಕಲಿಯುತ್ತಾರೆ! ಕಥೆ ಶುರುವಾಗುವುದು ಸುಮಾರು ಏಳನೇ ಶತಮಾನದಲ್ಲಿ ವ್ಯಕ್ತಿಯೊಬ್ಬ ಬರೆದ ಒಂದು ನಿಯಮ ಪುಸ್ತಕದೊಂದಿಗೆ. ಆತನೊಬ್ಬ ಶಾಂತಿಪ್ರಿಯ ಮತಾಚಾರ್ಯ- ಅಂತೆ! ತನ್ನ ನಂಬಿಕೆಯ ಹೊರತು ಉಳಿದದ್ದೆಲ್ಲವೂ ಸುಳ್ಳು ಅನ್ನುವ..., ಆ ನಂಬಿಕೆಗಳಿಗೆ ಅನುಗುಣವಾಗಿದ್ದರೆ ಏನು ಫಲ..., ವಿರುದ್ಧವಾದರೆ ಏನು ಫಲ ಎಂದು ವಿವರಿಸಿರುವ ಆ ಪುಸ್ತಕ ಈ ಆಧುನಿಕ ಯುಗದಲ್ಲೂ ...