Posts

Showing posts from November, 2020

ತತ್ವ- ಕಥೆ

ತತ್ತ್ವ ! ನಷ್ಟ ಯಾರಿಗೆ ಅನ್ನುವ ಚಿಂತೆ ! ಲಾಭ ನಷ್ಟಗಳ ಲೆಕ್ಕವೇಕೆ - ಸಂಬಂಧಗಳಲ್ಲಿ ? ನನ್ನ ವಿಚಾರಧಾರೆಗಳು ನನ್ನದು ! ಅದನ್ನು ಒಪ್ಪದವರನ್ನು ನಾನೆಂದೂ ವಿರೋಧಿಸಲಾರೆ - ಹಾಗೆಯೇ ಅದನ್ನು ಇನ್ನೊಬ್ಬರಮೇಲೆ ಹೇರಲಾರೆ ಕೂಡ ! ಹಾಗಿರುವಾಗ - ನನ್ನ ತತ್ತ್ವಗಳಿಂದಾಗಿ ಒಬ್ಬರು ನನ್ನನ್ನು ವಿರೋಧಿಸಿದರೆ ನಾನೇನು ಮಾಡಲಿ ? ೧ “ ನಿನ್ನನ್ನು ನಾನು ಬ್ಲಾಕ್ ಮಾಡುತ್ತಿದ್ದೇನೆ !” ಎಂದಳು . “ ಯಾಕೆ ?” ಎಂದೆ . “ ಇನ್ನೊಬ್ಬರ ವೀರ್ಯ ಮೂಸುವ ನಿನ್ನಂಥ ಅಲ್ಪ ಮನಸ್ಸಿನವನನ್ನು ನನ್ನಿಂದ ಒಪ್ಪಲಾಗುವುದಿಲ್ಲ !” ಎಂದಳು . “ ಸರಿ !” ಎಂದೆ . “ ಅಷ್ಟೆ ಹೊರತು ನಿನ್ನ ಅಭಿಪ್ರಾಯವನ್ನು ಬದಲಿಸುವುದಿಲ್ಲವೇ ?” ಎಂದಳು . “ ಯಾರೊಬ್ಬರ ವೈಯುಕ್ತಿಕ ಬದುಕಿಗೆ ನಾನು ತಲೆಹಾಕಿದವನಲ್ಲ !” ಎಂದೆ . “ ಮತ್ತೆ ರಾಹುಲನ ವಿಷಯ ?” ಎಂದಳು . “ ಕಣ್ಮಣಿ ... ಹಲವು ಸಾರಿ ಹೇಳಿರುವುದೇ ... ವೈಯುಕ್ತಿಕ ರಹಸ್ಯಗಳಿರುವವನು ನಾಯಕ ಹೇಗಾಗುತ್ತಾನೆ ? ಸೇವಕ ಹೇಗಾಗುತ್ತಾನೆ ?” ಎಂದೆ . ಅಸಹನೆಯಿಂದ ನೋಡಿದಳು . “ ವಾಸ್ತವವನ್ನು ಒಪ್ಪಿಕೊಳ್ಳದಿರುವುದು ಗುಲಾಮತೆಯ ಸಂಕೇತ !” ಎಂದೆ . “ ಯಾಕೆ ಒಪ್ಪಿಕೊಳ್ಳಬೇಕು ?” “ ನನ್ನನ್ನು ನಿಮ್ಮ ನಾಯಕನನ್ನಾಗಿ ಆರಿಸಿ ಎಂದು ಅವನೇ ಹೇಳಿಕೊಳ್ಳುತ್ತಿದ್ದಾನೆ - ಅದಕ್ಕೆ !” ಎಂದೆ . “ ಅದಕ್ಕೆ ಪಿತೃತ್ವವೇ ಯಾಕೆ ?” “ ಯಾಕೆಂದರೆ .......

ಬೀಜ- ಕಥೆ

ಬೀಜ ! ೧ “ ನಿಮಗಾಗಿ ಏನು ಮಾಡಲಿ ?” ಎಂದೆ . ತಲೆಯೆತ್ತಿ ನೋಡಿದರು . ಸಂಶಯ - ಯಾರೆಂದು . “ ನನ್ನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ... ಹೇಳಿ , ನಿಮಗಾಗಿ ಏನು ಮಾಡಲಿ ?” ಎಂದೆ . “ ನನಗಾಗಿ ಏನನ್ನಾದರೂ ನಾನೇ ಮಾಡಿಕೊಳ್ಳಬಲ್ಲೆ ! ಇವರಿಗಾಗಿ ಏನಾದರೂ ಮಾಡಲು ಸಾಧ್ಯವೇ ನೋಡಿ !” ಎಂದರು . “ ಖಂಡಿತ ಸಾಧ್ಯ ! ಏನು ಮಾಡಲಿ ಹೇಳಿ ...” ಎಂದೆ . “ ಇವರೆಲ್ಲರ ಖರ್ಚು ವೆಚ್ಚಗಳನ್ನು ನಾನೊಬ್ಬನೇ ಭರಿಸಲಾರೆ !” ಎಂದರು . “ ನಾನು ಭರಿಸಬಲ್ಲೆ !” ಎಂದೆ . ಮುಗುಳುನಕ್ಕು , “ ಏನೂ ಸಮಸ್ಯೆಯಿಲ್ಲಮ್ಮ ! ಮಗ ಹುಷಾರಾಗಿದ್ದಾನೆ ! ನಾಳೆ ಡಿಸ್ಚಾರ್ಜ್‌ಮಾಡೋಣ !” ಎಂದು ರೋಗಿಯ ತಾಯಿಗೆ ಹೇಳಿ ನನ್ನೊಂದಿಗೆ ಹೆಜ್ಜೆ ಹಾಕಿದರು . ೨ ನನಗಾಗ ಹನ್ನೆರಡು ವರ್ಷ ವಯಸ್ಸು ! ವಾರ ಕಳೆದರೂ ವಾಸಿಯಾಗದ ಜ್ವರ - ಅಮ್ಮನಿಗೆ . ದಿನದಿಂದ ದಿನಕ್ಕೆ ನಿಶ್ಶಕ್ತಿ ! ಅವರನ್ನು ಕಾಪಾಡಿಕೊಳ್ಳಲಾರದ ನಿಸ್ಸಹಾಯಕತೆಯೊಂದಿಗೆ - ಆಸ್ಪತ್ರೆಯ ಮುಂದೆ ನಿಂತಿದ್ದೆ ! ಅಮ್ಮ ಉಳಿಯಬೇಕೆಂದರೆ ಡಾಕ್ಟರ್ ಮನೆಗೆ ಬರಬೇಕು ! ಮೂರು ದಿನದಿಂದ ಕಾಯುತ್ತಿದ್ದೇನೆ . ಡಾಕ್ಟರ್ ಕಣ್ಣಿಗೆ ನಾನು ಬಿದ್ದಿಲ್ಲ ! ಒಳಹೋಗಲಾರೆ - ಹೆದರಿಕೆ ! ನಾಲ್ಕನೆಯ ದಿನ - ಹೆದರಿ ನಿಂತರೆ ಇಂದೇ ಅಮ್ಮನ ಕೊನೆಯೇನೋ ಅನ್ನಿಸಿ ಒಳನುಗ್ಗಿದೆ . ಸಂಶಯದಿಂದ ನೋಡಿದರು ಡಾಕ್ಟರ್ . “ ಅ .... ಅಮ್ಮ ಜ್ವರಹಿಡಿದು ಮಲಗಿದ್ದಾರೆ ...!” ಎಂದೆ . “ ಎಲ್...