ವ್ಯಾಸ- ವೇದವ್ಯಾಸ- ಕಥೆ
ವ್ಯಾಸ
೧
“ನೀನ್ಯಾಕೆ ಕಪ್ಪಾಗಿದ್ದೀಯ?”
“ಹಾ?”
“ಹಹ್ಹಾ.... ನೀನ್ಯಾಕೆ ಕಪ್ಪಾಗಿದ್ದೀಯೆ?”
“ನನ್ಗೇನ್ ಗೊತ್ತು! ಹೋಗಿ ನಮ್ಮಪ್ಪ ಅಮ್ಮನ್ನ ಕೇಳು!”
“ಛೆ! ಇಬ್ರೂ ಬೆಳ್ಳಗಿದ್ದಾರೆ... ಸುಮ್ನೆ ಅವರಿಬ್ಬರ ಮಧ್ಯೆ ಯಾಕೆ ಜಗಳ ತರೋಣ?”
“ಜಗಳಾನಾ...?”
“ಹೋಗ್ಲಿ ಬಿಡು.... ಏನಿದ್ರೂ ಅವರಿಗೆ ಥ್ಯಾಂಕ್ಸ್ ಅಂತೂ ಹೇಳ್ಬೇಕು!”
“ಯಾಕೆ?”
“ಕಪ್ಪಗಿರೋದ್ಕೆ ತಾನೆ ನಾನು ನಿನ್ನ ಇಷ್ಟ ಪಟ್ಟಿದ್ದು?”
“ಆಹಾ.... ನಾನೊಬ್ಳೇ ಅನ್ನೋಥರ ಹೇಳ್ತಿಯ ಮಗ್ನೆ... ನನ್ಗೆಲ್ಲಾ ಗೊತ್ತು!”
“ಏನು ಗೊತ್ತು?”
“ಭಾಮೆ ವಿಷ್ಯ!”
“ಹೇ... ಅವ್ಳು ಬಿಳಿ ಕಣೆ!”
“ಅಂದ್ರೆ? ಕಪ್ಪಗಿರೋಳು ನಾನೊಬ್ಳೆ ಅಂತ?”
“ಹು!”
“ನಿನ್ತಲೆ! ಅವ್ಳತ್ರ ಹೋಗಿ ಅವಳಿ ಮಕ್ಳು ಬೇಕು ಅಂದ್ಯಂತೆ?”
“ಹು!”
“ನನ್ಹತ್ರಾನೂ ಹೇಳ್ದೆ!”
“ಹು!”
“ಹು ಹು ಅಂದ್ರೆ?’
“ಹೌದು ಅಂತ! ನಿನ್ನಿಂದ ಎರಡು ಗಂಡ್ಮಕ್ಳು- ಅವ್ಳಿಂದ ಎರಡು ಹೆಣ್ಣು!”
“ಸಾಕ?”
“ಹಾಗೇನಿಲ್ಲ.... ನಿನ್ಗೆ ಇನ್ನೂ ಬೇಕು ಅಂದ್ರೆ ನಾನ್ ರೆಡಿ!”
“ಯಪ್ಪಾ! ಹೇಗೋ? ಹೌ? ನಮ್ಮಿಬ್ಬರ ಹೆಸರು ಹಿಡ್ಕೊಂಡು ಆಟ ಆಡ್ತೀಯ ಮಗ್ನೆ!”
“ನಾನಿಟ್ಟ ಹೆಸ್ರ ನಿಮ್ದು?”
“ಕರ್ಮ! ನೀನು ಹೀಗೆಲ್ಲಾ ಆಡ್ತಿದ್ರೂ ಸುಮ್ನೆ ಇದ್ದೀವಲ್ಲಾಂತ ಆಶ್ಚರ್ಯ ನನ್ಗೆ!”
“ಪ್ಯೂರ್ ಲವ್ವುಕಣೆ!”
“ಇಬ್ಬರ ಮೇಲೂ...?”
“ಹು!”
“ನಿನ್ತಲೆ!”
“ಹು!”
*
“ನೀನ್ಯಾಕೆ ಬಿಳಿಯಾಗಿದ್ದೀಯ?”
“ಹಾ?”
“ಹಹ್ಹಾ.... ನೀನ್ಯಾಕೆ ಬಿಳಿಯಾಗಿದ್ದೀಯೆ?”
“ನನ್ಗೇನ್ ಗೊತ್ತು! ಹೋಗಿ ನಮ್ಮಪ್ಪ ಅಮ್ಮನ್ನ ಕೇಳು!”
“ಛೆ! ಇಬ್ರೂ ಕಪ್ಪಗಿದ್ದಾರೆ... ಸುಮ್ನೆ ಅವರಿಬ್ಬರ ಮಧ್ಯೆ ಯಾಕೆ ಜಗಳ ತರೋಣ?”
“ಜಗಳಾನಾ...?”
“ಹೋಗ್ಲಿ ಬಿಡು.... ಏನಿದ್ರೂ ಅವರಿಗೆ ಥ್ಯಾಂಕ್ಸ್ ಅಂತೂ ಹೇಳ್ಬೇಕು!”
“ಯಾಕೆ?”
“ಬೆಳ್ಳಗಿರೋದ್ಕೆ ತಾನೆ ನಾನು ನಿನ್ನ ಇಷ್ಟ ಪಟ್ಟಿದ್ದು?”
“ಆಹಾ.... ನಾನೊಬ್ಳೇ ಅನ್ನೋಥರ ಹೇಳ್ತಿಯ ಮಗ್ನೆ... ನನ್ಗೆಲ್ಲಾ ಗೊತ್ತು!”
“ಏನು ಗೊತ್ತು?”
“ರುಕ್ಮಿಣಿ ವಿಷ್ಯ!”
“ಹೇ... ಅವ್ಳು ಕಪ್ಪು ಕಣೆ!”
“ಅಂದ್ರೆ? ಬೆಳ್ಳಗಿರೋಳು ನಾನೊಬ್ಳೆ ಅಂತ?”
“ಹು!”
“ನಿನ್ತಲೆ! ಅವ್ಳತ್ರ ಹೋಗಿ ಅವಳಿ ಮಕ್ಳು ಬೇಕು ಅಂದ್ಯಂತೆ?”
“ಹು!”
“ನನ್ಹತ್ರಾನೂ ಹೇಳ್ದೆ!”
“ಹು!”
“ಹು ಹು ಅಂದ್ರೆ?’
“ಹೌದು ಅಂತ! ನಿನ್ನಿಂದ ಎರಡು ಹೆಣ್ಮಕ್ಳು- ಅವ್ಳಿಂದ ಎರಡು ಗಂಡು!”
“ಸಾಕ?”
“ಹಾಗೇನಿಲ್ಲ.... ನಿನ್ಗೆ ಇನ್ನೂ ಬೇಕು ಅಂದ್ರೆ ನಾನ್ ರೆಡಿ!”
“ಯಪ್ಪಾ! ಹೇಗೋ? ಹೌ? ನಮ್ಮಿಬ್ಬರ ಹೆಸರು ಹಿಡ್ಕೊಂಡು ಆಟ ಆಡ್ತೀಯ ಮಗ್ನೆ!”
“ನಾನಿಟ್ಟ ಹೆಸ್ರ ನಿಮ್ದು?”
“ಕರ್ಮ! ನೀನು ಹೀಗೆಲ್ಲಾ ಆಡ್ತಿದ್ರೂ ಸುಮ್ನೆ ಇದ್ದೀವಲ್ಲಾಂತ ಆಶ್ಚರ್ಯ ನನ್ಗೆ!”
“ಪ್ಯೂರ್ ಲವ್ವುಕಣೆ!”
“ಇಬ್ಬರ ಮೇಲೂ...?”
“ಹು!”
“ನಿನ್ತಲೆ!”
“ಹು!”
*
“ಏನು ಮಾಡೋಣ್ವೆ? ದರಿದ್ರದವ್ನು- ಹೇಗ್ ಕೂತಿದಾನೆ ನೋಡು!”
“ಹುಂ ಕಣೆ.... ತಮಾಷೆಥರ ಶುರವಾಗಿದ್ದು... ಇಷ್ಟು ಸೀರಿಯಸ್ ಆಗುತ್ತೆ ಅನ್ಕೊಳ್ಲಿಲ್ಲ!!”
“ಸೀರಿಯಸ್ ನಮ್ಗೆ- ಸಾವು! ಅವ್ನ್ ನೋಡು- ರಪ್ ಅಂತ ಒಂದು ಕೊಡ್ಲ ಅನ್ಸುತ್ತೆ- ನಗೂನೂ ಬರುತ್ತೆ!”
“ನಿಜ ಅಲ್ವ? ಎಷ್ಟು ಸಿಂಪಲ್ ಆಗಿ ಬೆರೆತ! ಈಗ ಬಿಟ್ಟು ಹೋಗೋಕೆ ಆಗ್ತಿಲ್ಲ!”
“ಆದ್ರೂ... ಇಬ್ರೂ ಒಟ್ಗೆ.... ಗೊತ್ತಿದ್ದೇ.... ಹೇಗೇನೆ?”
“ತೀರ್ಮಾನ ಆಯ್ತೇನ್ರೆ?!”
“ನಿನ್ನಜ್ಜಿ! ನಾವಿಲ್ಲಿ ಹೊಟ್ಟೆ ಉರಿಯಿಂದ ಸಾಯ್ತಿದೀವಿ... ತೀರ್ಮಾನ ಬೇಕ ಮಗ್ನೆ!”
“ಪ್ರಾಣ ರಕ್ಷಣಾರ್ಥಂ ದೀರ್ಘದಂಡ ನಮಸ್ಕಾರಂ- ನಿಮ್ಮ ಪಾದಕ್ಕೆ!!”
“ಅಪ್ಪಾ... ಆಗಲ್ಲ ಕಣೆ... ಇವ್ನಿಂದಾನೇ ಸಾವು ನಮ್ಗೆ!”
*
“ಹತ್ತು ವರ್ಷದ ಹುಡುಗಿಯ ಮೇಲೆ ಅತ್ಯಾಚಾರ!” ಎಂದು ಓದತ್ತಾ ಬಂದಳು ಭಾಮೆ. ಮುಂದುವರೆಸಿ,
“ಇಲ್ಲೊಬ್ಬ ಇದ್ದಾನೆ... ಇಬ್ಬರು ಕನ್ಯೆಯರು ಇದ್ದರೂ ಇನ್ನೂ ಬ್ರಹ್ಮಚಾರಿಯಾಗಿ.....!”
“ನೀವು ಕನ್ಯೆಯರು...? ನಾನು ಬ್ರಹ್ಮಚಾರಿ....? ನಮ್ಮ ನಮ್ಮೊಳಗೇ ಈಥರ ಸುಳ್ಳ?”
ಅವರು ಪರಸ್ಪರ ಮುಖವನ್ನು ನೋಡಿ,
“ಇಬ್ಬರೂ ಒಟ್ಟಿಗೆ ಬಂದಮೇಲೆ!” ಎಂದಳು ಭಾಮೆ.
“ಈಗ ನಮ್ಮ ಒಪ್ಪಿಗೆಗೋಸ್ಕರ ಕಾಯ್ತಾ ಇದ್ದೀಯ....?” ಎಂದಳು ರುಕ್ಮಿಣಿ.
“ನಾನೇನೂ ನಿಮ್ಮ ಒಪ್ಪಿಗೆಗೋಸ್ಕರ ಕಾಯ್ತಿಲ್ಲ! ಇಬ್ಬರೂ ಒಟ್ಟಿಗೆ ಒಲಿದು ಬರುವುದಕ್ಕೋಸ್ಕರ ಕಾಯ್ತಿದೀನಿ!”
“ಎರಡಕ್ಕೂ ಅಂತ ವ್ಯತ್ಯಾಸವೇನೂ ಇಲ್ಲ ಬಿಡು.... ಆದ್ರೂ ಏನೂ ಮಾಡ್ದೆ ಇದ್ದೀಯಲ್ಲ?”
“ಏನೀಗ? ರೇಪ್ ಮಾಡ್ಬೇಕಿತ್ತ?”
“ಗಂಡಸಾಗಿ.....”
“ಅರ್ಥ ಆಯ್ತು ಬಿಡು.... ಗಂಡಸರೆಲ್ಲ ಆ ಪಾಪೂನ ರೇಪ್ ಮಾಡಿದವನ ಮನಸ್ತಿತಿಯವರು ಅಂತ ತಾನೆ?”
“ಅಲ್ವ ಮತ್ತೆ?”
“ಅಲ್ಲ.... ಹೆಂಗಸರಲ್ಲೂ ಅಂಥವರಿದ್ದಾರೆ... ಎರಡು ಮೂರು ಜನ ಸೇರಿ ಒಬ್ಬ ಗಂಡಸನ್ನು ಬಲವಂತವಾಗಿ ಬಳಸುವವರು, ಪುಟ್ಟ ಹುಡುಗರನ್ನು ಬಳಸಿಕೊಳ್ಳುವವರು, ತಾವಾಗಿ ಸೆಳೆದು ಒಪ್ಪಿಗೆಯಿಂದ ಸೇರಿ- ರೇಪ್ ಮಾಡಿದ ಅನ್ನುವವರು ಇದ್ದಾರೆ. ಎಲ್ಲಾ ಗಂಡಸರೂ ಕೆಟ್ಟವರಲ್ಲ... ಹಾಗೇಯೇ ಎಲ್ಲಾ ಹೆಂಗಸರೂ ಒಳ್ಳೆಯವರಲ್ಲ!”
“ಹಾಗಂತೀಯ?”
“ಹು!”
“ಶುರವಾಯ್ತು ಇವನ ಹು! ಲಟ್ಟಣಿಗೆ ತಗೊಂಡ್ಬಾರೆ ರುಕ್ಮಿಣಿ...!”
“ನಂಗೆ ಟೈಮಾಯ್ತು! ಇವತ್ತು ಸಾಗರ್ ಜೊತೆ ಡೇಟಿಂಗ್!”
“ನೋಡಪ್ಪಾ.... ಅದೆಷ್ಟನೆಯವನೋ ಪಾಪ....!”
“ನಿನ್ಥರ ಡೇಟಿಗೆ ಬಂದವರಜೊತೆಯೆಲ್ಲಾ ಸೆಕ್ಸ್ ಮಾಡಿಲ್ಲ ಬಿಡು ನಾವು!”
“ನಾ....ವು...!” ಎಂದು ನಿಲ್ಲಿಸಿ ಅವರ ಮುಖ ನೋಡಿ,
“ಅದು ಅವರ ಕೈಯ್ಯಲ್ಲಾಗದ ತನ! ಹಾಗಂತ ಸೆಕ್ಸ್ ಮಾಡದೇನೇ ಇರೋ ಪುಣ್ಯಾತಿಗಿತ್ತಿಯರೂ ಅಲ್ಲ ತಾನೆ?”
“ಇರು.... ಲಟ್ಟಣಿಗೆ ಕೊಟ್ಟೇ ಹೋಗ್ತೀನಿ....!”
“ಲೇ... ಹತ್ತು ಗಂಟೆ.... ನನಗೂ ಒಬ್ಬ ಸಿಕ್ತೀನಿ ಅಂದಿದ್ದ!” ಎಂದು ಓಡಿದಳು ಭಾಮೆ.
೨
ನಮಸ್ತೇ! ನಾನು ವ್ಯಾಸ- ಕೃಷ್ಣದ್ವೈಪಾಯನವ್ಯಾಸ! ವೇದವ್ಯಾಸನೆಂದೂ ಕರೆಯುತ್ತಾರೆ! ನನ್ನ ಹುಟ್ಟು ಯಾವಾಗ ಆಯಿತೆಂದೋ, ಸೃಷ್ಟಿಯ ಎಷ್ಟುಕಾಲಮಾನದ ನಂತರ ಹುಟ್ಟಿದೆನೆಂದೋ, ಎಷ್ಟುಕಾಲದ ನಂತರ ಇಲ್ಲವಾಗುತ್ತೇನೆಂದೋ ತಿಳಿಯದು- ಕಾಲ ಅನಂತ- ಹಿಂದಕ್ಕೂ ಮುಂದಕ್ಕೂ!
ಪುರಾಣಗಳು, ವೇದಗಳು, ವೇದಾಂತಗಳು, ಉಪನಿಷತ್ತುಗಳು, ಭಗವತ್ಗೀತೆ, ಬೈಬಲ್, ಖುರಾನ್... ಎಲ್ಲವನ್ನು ಬರೆದವನೂ ನಾನೇ- ಅಂತೆ! ಮತ್ತೆ ಈ ಬರೆಯುತ್ತಿರುವವನೂ ನಾನೇ ಆದರೆ ತಪ್ಪೇನು- ಅಥವಾ- ನಾನೇ ಯಾಕಾಗಬಾರದು?
ಆದ್ದರಿಂದ ಬರೆಯುತ್ತಿರುವವನು ನಾನೆ!
ಏನು ಬರೆಯುತ್ತಿದ್ದೇನೆ ಅನ್ನುವುದಕ್ಕಿಂತ ಇದುವರೆಗೆ ನಾನು ಬರೆದಿರುವುದನ್ನು ಯಾರಾದರೂ ಒಪ್ಪಿದ್ದಾರೆಯೇ ಅನ್ನುವುದು ಪ್ರಶ್ನೆ! ಇಲ್ಲ, ಒಪ್ಪಿಲ್ಲ- ಒಪ್ಪ ಬೇಕೆನ್ನುವ ನಿರ್ಬಂಧವೂ ಇಲ್ಲ! ಮತ್ತೆ ಯಾಕೆ ಬರೆಯುತ್ತಿದ್ದೇನೆ?
ಬರೆಯುವುದು ನನ್ನ ಧರ್ಮ!
*
ಧರ್ಮ- ಅಧರ್ಮ! ಮೇಲು- ಕೀಳು....!
ವಿಷಯವೇನು?
ಪ್ರೇಮ, ಕಾಮ!
ಕಾಮಕ್ಕೆ ಸೂತ್ರವಿದೆ, ಪ್ರೇಮಕ್ಕೆ ಸೂತ್ರವಿಲ್ಲ! ಆದರೂ ಪ್ರೇಮವಿಲ್ಲದೆ ಪ್ರಪಂಚದ ಅಸ್ತಿತ್ವವೇ ಇಲ್ಲ!
ನಿಜವಾಗಿಯೂ ಪ್ರೇಮವೆಂದರೆ ಏನು....?
ಅಲ್ಲೇ ಸಮಸ್ಯೆ....! ಮುಂದೆ ಹೇಳಲಿರುವ ವಿಷಯದಲ್ಲಿ ಧರ್ಮವಿದೆ! ಅಧರ್ಮವಿದೆ! ಮೇಲು- ಕೀಳುಗಳಿದೆ.... ಅದನ್ನು ಹೊರತುಪಡಿಸಿ ಏನನ್ನಾದರೂ ಹೇಳುವುದು ಸಾಧ್ಯವೇ?
ಸರಿ.... ವಿಷಯವನ್ನು ಜಟಿಲ ಮಾಡುವುದು ಬೇಡ....
ಧರ್ಮ ಎಂದರೆ ಮಾಡಬೇಕಾದ ಕರ್ಮ!
ಅಧರ್ಮ ಎಂದರೆ ಕರ್ಮಶೂನ್ಯತೆ ಅಥವಾ ಸೋಮಾರಿತನ!
ಮೇಲು ಎಂದರೆ ಗೆದ್ದವನು!
ಕೀಳು ಎಂದರೆ ಇನ್ನೊಬ್ಬನನ್ನು, ಗೆದ್ದವನನ್ನು ಹಳಿಯುವುದು....!
ಹೇಳಲಿವರು ವಿಷಯವೆಲ್ಲಾ ಇದರ ಸುತ್ತಾ ಸುತ್ತುತ್ತಿರುತ್ತದೆ! ಅದಕ್ಕಾಗಿ ಬಳಸಿಕೊಳ್ಳುತ್ತಿರುವ ದಾರಿ- ಮನುಷ್ಯನಲ್ಲಿ ಎರಡೇ ವರ್ಗ- ಒಂದು ಹೆಣ್ಣು, ಇನ್ನೊಂದು ಗಂಡು.... ಇದನ್ನೂ ಹೀಗೆ ತೆಗೆದುಕೊಳ್ಳಬಹುದು...
ಹೆಣ್ಣು- ಪ್ರಕೃತಿ
ಗಂಡು- ಪುರುಷ!
ಕಣ್ಣಿಗೆ ಕಾಣುತ್ತಿರುವುದೆಲ್ಲಾ ಪ್ರಕೃತಿಯಾದರೆ ಅದನ್ನು ನಡೆಸುತ್ತಿರುವ ಚೈತನ್ಯ ಪುರುಷ....!
ಇನ್ನು....
೩
ಕೆಲವೇ ವರ್ಷಗಳ ಹಿಂದೆ.... ಹಸಿವಿನಿಂದಾಗಿ ಕಂಗೆಟ್ಟು ಮರದ ನೆರಳಿನಲ್ಲಿ ಮಲಗಿದ್ದೆ. ಅಲೆಮಾರಿ ನಾನು!
“ಅವರ ಕಾರು ತೊಳೆದು ಕೊಟ್ಟೆ! ಒಂದು ರೂಪಾಯಿ ಕೊಟ್ಟರು!” ಎನ್ನುವ ಮಾತು ಕೇಳಿ ಕಣ್ಣು ತೆರೆದೆ.
ಇಬ್ಬರು ಹರಕು ಬಟ್ಟೆಯ ಹುಡುಗರು ನಡೆದು ಹೋಗುತ್ತಿದ್ದರು....
“ನಾನು ಹತ್ತು ಮರದಿಂದ ತೆಂಗಿನಕಾಯಿ ಹಾಕಿಕೊಟ್ಟೆ! ಐದು ರೂಪಾಯಿ ಕೊಟ್ಟರು!” ಎಂದ ಇನ್ನೊಬ್ಬ!
ಎದ್ದು ಕುಳಿತೆ. ತಲೆಯಲ್ಲಿ ಯೋಚನೆ! ನಾನೇಕೆ ಹಸಿದಿದ್ದೇನೆ? ಹಸಿವು ನೀಗಿಸಲು ಏನು ಮಾಡಿದ್ದೇನೆ? ಯಾರೋ ಬಂದು ನನಗೆ ಯಾಕೆ ಏನನ್ನಾದರೂ ಕೊಡಬೇಕು?
ಆ ಹುಡುಗರಿಗಿಂತ ನನಗೇನು ಕೊರತೆ- ದೇಹದಾರ್ಢ್ಯದಲ್ಲಿ?
ಸುತ್ತಲೂ ನೋಡಿದೆ. ಪ್ರಪಂಚ ವಿಶಾಲವಾಗಿದೆ!
ಅಮ್ಮ ಹೋದರು- ಅಲೆಮಾರಿಯಾದೆ!
ಏನಿದೆ ಕಳೆದುಕೊಳ್ಳಲು? ಪಡೆದುಕೊಳ್ಳಲಾದರೋ.....!
ನನ್ನ ಜೀವನಕ್ಕೆ ನಾನೇ ಹೊಣೆ ಅನ್ನುವ ಅರಿವು ಆಗಲೇ ಬಂದಿದ್ದು!
ಅಮ್ಮ ಕೆಲಸಕ್ಕೆ ಹೋಗುತ್ತಿದ್ದ ಮನೆಯವರ ನೆನಪಾಯಿತು. ಏನಾದರೂ ಸಹಾಯ ಮಾಡುವರೇನೋ ನೋಡಬೇಕು. ಅಲ್ಲಿಯ ಯಜಮಾನನಿಗೆ ನನ್ನಲ್ಲೇನೋ ಆಸಕ್ತಿ! ನನ್ನನ್ನು ಕಂಡಾಗಲೆಲ್ಲಾ ಅಕ್ಕರೆ ತೋರಿಸುತ್ತಿದ್ದರು- ಬುದ್ಧಿವಂತನೆಂದು!
ನಿಜ, ಅವರ ದಯೆಯಿಂದ ಶಾಲೆಗೆಹೋಗುತ್ತಿದ್ದವನು- ತರಗತಿಯಲ್ಲಿ ಮೊದಲಿಗನಾಗಿದ್ದೆ! ಓದುವುದೆಂದರೆ ಏನೋ ಖುಷಿ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿರುವ ಮಜ ಅನುಭವಿಸಿದವರಿಗಷ್ಟೇ ಗೊತ್ತು!
ಗೇಟು ದಾಟಿ ಒಳಕ್ಕೆ ನಡೆಯುವಾಗ ನನ್ನನ್ನೇ ನೋಡುತ್ತಿದ್ದ ಒಡತಿಯ ಕಣ್ಣುಗಳಲ್ಲಿ ಗೊಂದಲ! ಆ ಗೊಂದಲ ಕ್ಷಣದಿಂದ ಕ್ಷಣಕ್ಕೆ ಸಂಶಯವಾಗಿ ನಂತರ ಸಿಟ್ಟಾಗಿ ಮಾರ್ಪಡುತ್ತಿತ್ತು!
ಸುಮಾರು ದಿನವಾಗಿತ್ತು ಅವರನ್ನು ಕಂಡು. ಮರೆತು ಹೋದರೇನೋ ಅಂದುಕೊಂಡೆ. ಅಮಾಯಕವಾಗಿ ನಕ್ಕೆ.
“ಏನು ಬೇಕು?” ಎಂದರು.
“ಅಮ್ಮಾವ್ರೆ... ನಾನು ವೇದವತಿಯ ಮಗ!” ಎಂದೆ.
ನನ್ನನ್ನೇ ದುರುಗುಟ್ಟಿ ನೋಡುತ್ತಾ ಒಳಕ್ಕೆ ಹೋದರು.
ಎರಡುಮೂರು ನಿಮಿಷವಾಯಿತು. ಕಾಯಬೇಕೆ ಹೊರಡಲೇ ಎನ್ನುವ ಗೊಂದಲದಲ್ಲಿದ್ದಾಗ ಯಜಮಾನ ಹೊರಕ್ಕೆ ಬಂದರು. ಹಿಂದೆಯೇ ಒಡತಿ,
“ನಿಜಾ ಹೇಳಿ, ನಿಜಾ ಹೇಳಿ!” ಎನ್ನುತ್ತಿದ್ದರು.
ಯಜಮಾನನನ್ನು ಕಂಡಾಗ ನನ್ನ ಮನದಲ್ಲೂ ಸಣ್ಣ ಸಂಶಯ!
ಬೆಳೆಯುತ್ತಾ ಬೆಳೆಯುತ್ತಾ ನಾನು ಅವರನ್ನು ಹೋಲುತ್ತಿದ್ದೇನೆಯೇ....!?
*
ಆರುನೂರು ಕೋಟೀಗೂ ಅಧಿಕ ಜನಸಂಖ್ಯೆಯಿರುವ ಈ ಪ್ರಪಂಚದಲ್ಲಿ ಒಬ್ಬರ ಮನಸ್ಸಿನಂತೆ ಮತ್ತೊಬ್ಬರದ್ದಿಲ್ಲ!
ನಾನು ಹೀಗೆ ಯೋಚಿಸುತ್ತೇನೆ ನೀನೂ ಹೀಗೆಯೇ ಯೋಚಿಸು ಅಂದರೆ ಸಾಧ್ಯವೇ?
ನನ್ನ ಅಮ್ಮ ಅವರ ಮನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದರು... ಬಲವಂತದಿಂದ ಸೇರಿದರೇ? ಪರಸ್ಪರ ಒಪ್ಪಿಗೆಯಿಂದ ಸೇರಿದರೇ.... ನನಗೆ ತಿಳಿಯದು.... ನಾನು ಹುಟ್ಟಿದೆ.
ಒಪ್ಪಿಗೆಯಿಂದ ಸೇರಿದ್ದರೆ ಅದು ತಪ್ಪೇ???
ಒಪ್ಪಿಗೆಯಿಂದ ಸೇರಿ ಪ್ರಪಂಚದ ಮುಂದೆಯೂ ಒಪ್ಪಿದ್ದಿದ್ದರೇ..... ಬಿಡೋಣ!
ನನ್ನ ಹುಟ್ಟಿಗೆ ನಾನು ಹೊಣೆಯಲ್ಲ.... ನನ್ನ ಜೀವನಕ್ಕೆ ನಾನೇ ಹೊಣೆ!
ಆತ.... ನನ್ನ ತಂದೆ.... ನನಗೆ ಯಾವ ಕೊರತೆಯೂ ಬಾರದಂತೆ ಅದೃಶ್ಯವಾಗಿ ನಿಂತು ನನ್ನನ್ನು ಪಾಲಿಸಿದರು.
ಅವರಿಗೆ ನಾನು ಋಣಿ.... ಹುಟ್ಟಿಗೆ ಕಾರಣರಾಗಿದ್ದಕ್ಕೂ..... ಪಾಲಿಸಿದ್ದಕ್ಕೂ!
ಪ್ರಪಂಚದ ಮುಂದೆ ಒಪ್ಪಿಕೊಳ್ಳದಿರುವುದನ್ನು ನಾನು ಗಂಭೀರವಾಗಿ ಪರಿಗಣಿಸದಿದ್ದರಾಯಿತು...
ಅನಾಥನೆಂದೇ ಹೇಳಿಕೊಳ್ಳುತ್ತೇನೆ...!
ಅವರ ಋಣವನ್ನು ಹೆಚ್ಚಿಸಿಕೊಳ್ಳಲಾರದೆ ಸ್ವತಂತ್ರನಾದೆ!
೪
ಕತ್ತೆತ್ತಿ ನೋಡಿದೆ. ವಿಮಾನವೊಂದು ಬರ್ರನೆ ಹಾರಿ ಹೋಯಿತು! ಅದರಿಂದ ನನಗೇನು? ಏನೂ ಇಲ್ಲ! ನನ್ನ ಪಾಡಿಗೆ ಶೂ ಪಾಲೀಶ್ ಮಾಡುವುದನ್ನು ಮುಂದುವರೆಸಿದೆ. ಎದುರಿಗಿನ ವ್ಯಕ್ತಿ- ಯಾರ ಶೂವನ್ನು ಪಾಲಿಶ್ ಮಾಡುತ್ತಿದ್ದೆನೋ ಆತ- ನಕ್ಕ!
“ಐದು ಗಂಟೆಯ ವಿಮಾನದಲ್ಲಿ ನಾನೂ ಹಾರುತ್ತಿದ್ದೇನೆ!” ಎಂದ.
ಮುಗುಳುನಕ್ಕೆ. ಪಾಲೀಶ್ ಮಾಡಿ ಮುಗಿಸಿ ಶೂವನ್ನು ಆತನ ಎದುರಿಗಿಟ್ಟೆ. ಐವತ್ತು ರೂಪಾಯಿ ಕೊಟ್ಟ. ನಲವತ್ತು ರೂಪಾಯಿ ಮರಳಿಸುವಾಗ,
“ಇರಲಿ ಇಟ್ಟುಕೋ....” ಎಂದ.
“ಬೇಡ ದೊರೆಯೇ.... ನನಗಿಷ್ಟೇ ಸಾಕು!” ಎಂದೆ. ದುಡ್ಡು ಪಡೆದು ಹೊರಟು ಹೋದ.
ಇಂದಿನ ಕಲೆಕ್ಷನನ್ನು ಎಣಿಸಿ ನೋಡಿದೆ. ಟಾರ್ಗೆಟ್ ಮುಟ್ಟಿದೆ. ಎದ್ದು ಹೊರಟೆ.
*
ಅಪ್ಪನ ಸ್ಥಳದಿಂದ ಬಹುದೂರ ಬಂದಿದ್ದೆ! ಪಾಪ ಅವರ ಹೆಂಡತಿಗೆ ಮುಜುಗರವಾಗುವುದು ಬೇಡ!
ಹುಡುಗ ನಾನು..! ಪ್ರತ್ಯೇಕವಾಗಿ ಸ್ಥಳ ಬೇಕೆಂದೇನೂ ಇಲ್ಲ! ಎಲ್ಲೆಂದರಲ್ಲಿ ಮಲಗಬಹುದು! ಏನು ಬೇಕಿದ್ದರೂ ಮಾಡಬಹುದು! ಆದರೂ ಭಿಕ್ಷುಕಿಯೊಬ್ಬಳ ಆಶ್ರಯವನ್ನು ಪಡೆದೆ!
ತುಂಬಾ ಸಾಮಾನ್ಯವಾಗಿ ನಡೆದಿತ್ತು.....
ಒಂದು ದಿನ.... ಬೂಟ್ ಪಾಲಿಶ್ ಮುಗಿಸಿ ನೆರಳನ್ನು ಹುಡುಕಿ ನಡೆಯುವಾಗ...
“ಅಯ್ಯಾ.... ಅಯ್ಯಾ....” ಎಂದು ಭಿಕ್ಷುಕಿಯೊಬ್ಬರು ವ್ಯಕ್ತಿಯೊಬ್ಬನ ಕಾಲನ್ನು ಹಿಡಿದು ಬೇಡುತ್ತಿದ್ದಳು! ಆತ ಕಾಲನ್ನು ಜಾಡಿಸಿ ಹೊರಟು ಹೋದ! ಅಷ್ಟು ದೂರಕ್ಕೆ ಬಿದ್ದ ಆಕೆ ಏಳಲಾರದೆ ಆತನನ್ನೇ ನೋಡುತ್ತಾ ಆತ ಹೋದಕಡೆಗೆ ಹೋಗಲು ತುಡಿಯುತ್ತಾ ಕುಳಿತಳು!
ಮುಂಚೆಯೂ ಆಕೆಯನ್ನು ನೋಡಿದ್ದೇನೆ.... ಗರಿಗಳನ್ನು ಸೇರಿಸಿ ಮಾಡಿದ ಗುಡಿಸಲಿನಲ್ಲಿರುತ್ತಾಳೆ... ಬೆಳಗ್ಗೆ ಮಧ್ಯಾಹ್ನ ಸಂಜೆ.... ದೇವಸ್ಥಾನದ ಮೆಟ್ಟಿಲಮೇಲೆ ಕುಳಿತು ಬಿಕ್ಷೆ ಬೇಡುತ್ತಾಳೆ! ಸಿಕ್ಕಿದ ದುಡ್ಡಿಗೆ ಏನಾದರೂ ಕೊಂಡು ಗುಡಿಸಲಿಗೆ ತಂದು ಮುಕ್ಕುತ್ತಾಳೆ! ಇವತ್ತೇನಾಯಿತೋ....
ಬಿದ್ದ ಆಕೆಯ ಬಳಿಗೆ ಹೋದೆ. ಕಣ್ಣೀರು ಸುರಿಯುತ್ತಿದ್ದ ಆಕೆಯ ಕಣ್ಣಿನಲ್ಲಿನ ದುಃಖ...!
ಮೊದಲ ಬಾರಿ ದೇವರನ್ನು ಬೈದ ಕ್ಷಣ!!
ಆಕೆಯನ್ನು ಎಬ್ಬಿಸಿ ಅವರ ಗುಡಿಸಲಬಳಿ ಬಂದೆ.
“ಅವ್ನು.... ಅವ್ನು .... ನನ್ ಮಗ!” ಎಂದರು.
ನಿಜವೋ ಬ್ರಮೆಯೋ.... ತಿಳಿದವರಾರು?
“ಇಲ್ಲ ಅಮ್ಮ... ನೀವು ತಪ್ಪು ತಿಳಿದುಕೊಂಡಿದ್ದೀರ... ನಿಮ್ಮ ಮಗ ನಾನು!” ಎಂದೆ.
*
ಈಗ ಆಕೆ ಭಿಕ್ಷೆಗೆ ಹೋಗುವುದಿಲ್ಲ! ಅಡಿಗೆ ಮಾಡುತ್ತಾಳೆ- ಅದ್ಭುತವಾಗಿ!
ನಾನಂದುಕೊಂಡಂತೆ ಆಕೆ ಅರುಳುಮರುಳಲ್ಲ! ಅದ್ಭುತ ಜ್ಞಾನವಿದೆ!
ವಿದ್ಯೆಯನ್ನ ಅರಗಿಸಿಕೊಂಡು ಅನುಭವದೊಂದಿಗೆ ಬೆರೆಸಿ ರೂಪಿಸಿಕೊಂಡ ಜ್ಞಾನ!
ಯಾರ್ಯಾರ ಅದೃಷ್ಟ ಹೇಗೆ ಹೇಗೋ ಹೇಳುವವರಾರು? ನಾನೊಬ್ಬ ಪುಣ್ಯವಂತ!
ಹೇಗೆಂದೋ.....?
ಆಕೆಯ ಮಗನಾಗಿ.... ಒಂದು ವಾರದ ನಂತರ... ನಾನಿನ್ನು ಆಕೆಯನ್ನು ಬಿಟ್ಟು ಹೋಗುವುದಿಲ್ಲ ಎನ್ನುವ ನಂಬಿಕೆಯಿಂದಲೋ.... ಆಕೆಗಿನ್ನು ಬಿಕ್ಷೆ ಬೇಡುವ ಅಗತ್ಯವಿಲ್ಲ ಎನ್ನುವ ಅರಿವಿನಿಂದಲೋ....
ನಾನು ಎಂದಿನಂತೆ ಟಾರ್ಗೆಟ್ ಮುಗಿಸಿ ಹೊಸದೊಂದು ಪುಸ್ತಕವನ್ನೂ ಆಕೆಗೆ ಸ್ವಲ್ಪ ಫಲಹಾರವನ್ನೂ ಹಿಡಿದು ನಮ್ಮ ಅರಮನೆಗೆ ಬಂದೆ! ಎಂದಿನಂತಲ್ಲದೆ ಸ್ವಚ್ಛವಾಗಿದೆ! ನನ್ನನ್ನು ನೋಡಿ ಮುಗುಳುನಕ್ಕರು. ಸ್ನಾನ ಮಾಡಿದ್ದಾರೆ! ನನ್ನ ಕೈಯಿಂದ ಪುಸ್ತಕವನ್ನೂ, ಫಲಹಾರವನ್ನೂ ಪಡೆದು ಒಳಗಿಟ್ಟರು.
“ನೀನೂ ಸ್ನಾನ ಮಾಡಿ ಬಾ!” ಎಂದರು. ಮುಗುಳುನಕ್ಕು ಹೊರಟೆ.
*
“ಇನ್ನು ಮುಂದೆ ನಿನ್ನ ಹೆಸರು ವ್ಯಾಸ!” ಎಂದರು.
ಅವರ ಮುಖವನ್ನು ನೋಡಿ,
“ನೀವು?” ಎಂದೆ.
“ಮತ್ಸ್ಯಗಂಧಿ!” ಎಂದು ಹೇಳಿ ನಕ್ಕರು. ನಂತರ,
“ಪ್ರಪಂಚದ ಜ್ಞಾನವೆಲ್ಲಾ ನೀನಾಗಬೇಕು.... ಈಗಿನ ನಿನ್ನ ಜ್ಞಾನದ ಆಳ ನನಗೆ ತಿಳಿಯದು... ಅದು ಮತ್ತಷ್ಟು ವಿಸ್ತಾರವಾಗಬೇಕು! ನಿನಗೊಂದು ಕಥೆ ಹೇಳುತ್ತೇನೆ... ಧರ್ಮ ಅಂದರೆ ಏನು ಎಂದು ಹೇಳುವ ಕಥೆ ಅದು! ನಿನಗೆ ಗೊತ್ತಿದ್ದರೂ ಗೊತ್ತಿರಬಹುದು... ಆದರೂ ಹೇಳುತ್ತೇನೆ... ಗಮನವಿಟ್ಟು ಕೇಳು... ಹುಟ್ಟಿನಿಂದ ನೀನು ಏನಾದರೂ ಆಗಿರು... ಈಗ... ಇನ್ನುಮುಂದೆ.... ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿನ್ನ ಧರ್ಮವೇನು ಎಂದು ಅರಿತುಕೋ.... ಕಥೆ ಪುರಾಣದ್ದೇ... ಆದರೆ ವಾಸ್ತವ ಪ್ರಪಂಚಕ್ಕೂ ಅದರ ಅಗತ್ಯವಿದೆ....!” ಎಂದರು.
“ನನಗಾ ಪುರಾಣಕ್ಕಿಂತ ನಿಮ್ಮ ಕಥೆಯೇ ಸಾಕು....! ಹೇಳಿ... ಯಾರು ನೀವು?” ಎಂದೆ.
ನಕ್ಕರು.... ಅದ್ಭುತವಾಗಿ!
“ಸರಿ... ನಿನ್ನ- ವ್ಯಾಸನ- ಕಥೆಯನ್ನು ನೀನು ಹೇಳುವಂತೆ ನಾನು ಹೇಳುತ್ತೇನೆ!! ಆ ನಿನ್ನ ಕಥೆಯಲ್ಲಿ ನಾನೂ ಇರುತ್ತೇನೆ! ನಮ್ಮಬಗ್ಗೆ ನಿನಗೂ ನನಗೂ ತಿಳಿದರೆ ಸಾಕಲ್ಲವೇ?”
ಸಾಕೆನ್ನುವಂತೆ ನಕ್ಕೆ. ಅವರ ಮುಖ ನನಗೆ ಜ್ಞಾನದಂತೆ ಕಾಣಿಸಿತು!
೫
ವ್ಯಾಸ ಹೇಳುವಂತೆ ಮತ್ಸ್ಯಗಂಧಿ ಹೇಳಿದ ವ್ಯಾಸನ ಕಥೆ!
ಎಷ್ಟು ವರ್ಷದಿಂದ ತಪಸ್ಸು ಮಾಡುತ್ತಿದ್ದೇನೋ.... ಶಾಂತವಾಗಬೇಕಿದ್ದ ಮನಸ್ಸು ಪ್ರಕ್ಷುಬ್ದಗೊಂಡಿತು!! ಕಾಲಾನುಕಾಲಕ್ಕೆ ಹಲವು ಸಿದ್ಧಿಗಳು ದೊರಕಿದರೂ ದೊರಕಲೇಬೇಕಿದ್ದ ಶಾಂತಿ ದೊರಕಲಿಲ್ಲ! ಇನ್ನೂ ಸ್ವಲ್ಪ ಕಾಲ ಕುಳಿತಿದ್ದರೆ ದೊರಕುತ್ತಿತ್ತೋ ಏನೋ... ಅಡ್ಡಿಪಡಿಸಿದ ಗಿಳಿಗಳನ್ನು ರೂಕ್ಷವಾಗಿ ನೋಡಿದೆ- ಸುಟ್ಟು ಭಸ್ಮವಾದವು! ಇಷ್ಟುವರ್ಷದ ತಪಸ್ಸಿನಿಂದಾಗಿ ದೊರೆತ ಅಲ್ಪ ಸ್ವಲ್ಪ ಸಿದ್ಧಿ ನಷ್ಟವಾಗಿದ್ದು ಅರಿವಾಗಲಿಲ್ಲ!!
ಹೊಟ್ಟೆಯೊಳಗೆ ಏನೋ ಸಂಕಟ! ಹಸಿವೆಯೆಂದರಿತು ಹೊರಟೆ- ಭಿಕ್ಷೆಗೆ!
ಎಷ್ಟೇ ಮನಃಶ್ಶಕ್ತಿಯಿದೆ ಅಂದುಕೊಂಡರೂ ದೇಹಶಕ್ತಿಗೆ ಮಿತಿಯಿದೆ!
ನಡೆದೂನಡೆದು ಕಾಲುಗಳು ನಡುಗಲಾರಂಭಿಸಿದ ಸಮಯಕ್ಕೆಸರಿಯಾಗಿ ಮನೆಯೊಂದರ ಮುಂದೆ ತಲುಪಿದೆ!
“ಮನೆಯಲ್ಲಿ ಯಾರಿದ್ದೀರಿ? ಭಿಕ್ಷೆಗಾಗಿ ಬಂದಿದ್ದೇನೆ!” ಎಂದೆ.
“ಸ್ವಲ್ಪ ಸಮಯ ಕಾಯುವುದು!” ಎನ್ನುವ ಹೆಣ್ಣು ಧನಿಯ ಉತ್ತರ ಬಂತು!
ಭಿಕ್ಷುಕನನ್ನು ಕಾಯಿಸುವುದೇ...? ಅದರಲ್ಲೂ ನಾನು ವ್ಯಾಸ...!
ಕೋಪಗೊಂಡೆ! ಮುಂದಕ್ಕೆ ನಡೆಯೋಣವೆನ್ನಿಸಿದರೂ ಹೇಳಿದವರಾರೋ ನೋಡಿ ಹೋಗೋಣವೆಂದು ಕಾದೆ!
ಸ್ವಲ್ಪ ಸಮಯದ ನಂತರ ಹಣ್ಣೊಬ್ಬಳು ಹೊರಬಂದಳು! ನನ್ನ ಮುಖದಲ್ಲಿನ ಕೋಪವನ್ನು ಕಂಡು- ನಕ್ಕಳು!
“ಸುಟ್ಟು ಭಸ್ಮವಾಗಲು ನಾನು ಗಿಳಿಯಲ್ಲ- ನೀವು ನಿಮ್ಮ ತಪಃಶ್ಶಕ್ತಿಯನ್ನು ಕಳೆದುಕೊಂಡಿದ್ದೀರಿ!” ಎಂದಳು.
ಆಶ್ಚರ್ಯಗೊಂಡೆ! ಹೆದರಿದೆ! ಹೇಗೆ ಎನ್ನುವಂತೆ ನೊಡಿದೆ....!
“ಮೊದಲು ಹಸಿವನ್ನು ನೀಗಿಸಿಕೊಳ್ಳಿ!” ಎಂದು ಹೇಳಿ ಸತ್ಕರಿಸಿದಳು.
ಊಟವಾದ ನಂತರ ಪುನಃ ಆಕೆಯ ಮುಖವನ್ನು ನೋಡಿದೆ!
“ಇಲ್ಲಿಂದ ಅರ್ಧ ದಿನ ಮುಂದಕ್ಕೆ ಹೋದರೆ ಮಾಂಸವನ್ನು ಮಾರುತ್ತಿರುವ ವ್ಯಾಧನೊಬ್ಬನ ಮನೆ ಕಾಣಿಸುತ್ತದೆ.... ಆ ವ್ಯಾಧ ನಿಮ್ಮ ಸಂಶಯವನ್ನು ನಿವಾರಿಸಿಕೊಡುತ್ತಾನೆ!” ಎಂದರು.
ಉತ್ಸಾಹದಿಂದ ಹೊರಟೆ! ಉತ್ಸಾಹ.... ದೇಹ ದೌರ್ಬಲ್ಯವನ್ನು ಎಷ್ಟರಮಟ್ಟಿಗೆ ಮಾಯವಾಗಿಸುತ್ತದೆ ಅನ್ನುವ ಅರಿವಾಯಿತು... ಉತ್ಸಾಹದೊಂದಿಗೆ ಕಾತರವೂ....
ದೂರದಿಂದಲೇ ಕಾಣಿಸಿತು ಒಂದು ಮನೆ. ವ್ಯಾಧನೊಬ್ಬ ಕತ್ತಿ ಮತ್ತಿತರ ವಸ್ತುಗಳನ್ನು ಶುಚಿಗೊಳಿಸುತ್ತಿದ್ದ! ತಲೆಯೆತ್ತಿ ನನ್ನನ್ನು ನೋಡಿ ಮುಗುಳುನಕ್ಕ!
“ಬನ್ನಿ ಬನ್ನಿ... ನೀವು ಬರುತ್ತಿದ್ದೀರೆಂದು ತಿಳಿದು ಸ್ವಲ್ಪ ಬೇಗನೆ ಕೆಲಸವನ್ನು ಮುಗಿಸಿದೆ!” ಎಂದ.
ಆಶ್ಚರ್ಯದಿಂದ ನನ್ನ ಕಣ್ಣುಗಳು ಹೊರಕ್ಕೆ ನುಗ್ಗಿದವೇನೋ ಅನ್ನಿಸಿತು! ನಾನು ಬರುವುದು ಆತನಿಗೆ ಮುಂಚೆಯೇ ತಿಳಿಯಿತಂತೆ! ನನ್ನ ಮನಸ್ಸಿನಲ್ಲಿರುವುದನ್ನು ಅರಿತಂತೆ ಪುನಃ ನಕ್ಕ!
“ನಿಮ್ಮ ಎಲ್ಲಾ ಸಂಶಯಗಳನ್ನೂ ನಿವಾರಿಸುವವನಿದ್ದೇನೆ! ಸ್ವಲ್ಪ ಸಮಯ ಸುಧಾರಿಸಿ... ನಾನು ಶುಚಿಯಾಗಿ ನನ್ನ ವೃದ್ಧರಾದ ಅಪ್ಪ ಅಮ್ಮನಿಗೆ ಊಟವನ್ನು ಮಾಡಿಸಿ ಬರುತ್ತೇನೆ!” ಎಂದು ಹೇಳಿ ಒಳಕ್ಕೆ ಹೋದ!
ಚಡಪಡಿಕೆಯಿಂದಲೇ ಕಾದೆ. ಹೆಚ್ಚು ಸಮಯ ಕಾಯಿಸದೆ ನಗುನಗುತ್ತಾ ಹೊರಬಂದ!
“ನಿಮ್ಮನ್ನು ಇಲ್ಲಿಗೆ ಕಳಿಸಿದ ಹೆಣ್ಣು... ಮಹಾ ಸಾಧ್ವಿ!” ಎಂದು ಪೀಠಿಕೆ ಹಾಕಿದ. ನಂತರ,
“ಆಕೆ, ಗಂಡ ಮತ್ತು ಇಬ್ಬರು ಗಂಡು ಮಕ್ಕಳು...! ಗಂಡನಿಗೆ ಯಾವುದೋ ಖಾಯಿಲೆ! ಅದು ಅಂಟು ವ್ಯಾಧಿಯೆನ್ನುವ ಭಯ ಮಕ್ಕಳಿಗೆ! ಅಪ್ಪ ಅಮ್ಮನನ್ನು ಬಿಟ್ಟು ಹೊರಟು ಹೋದರು. ಮಲಮೂತ್ರ ವಿಸರ್ಜನೆಗಳೆಲ್ಲಾ ಮಲಗಿದ್ದಲ್ಲಿಯೇ ಆಗಿ ಹೋಗುತ್ತದೆ ಆತನಿಗೆ. ಆದರೂ ಆತನ ಸುಶ್ರೂಷೆಯೇ ಆಕೆಯ ಪರಮ ಧರ್ಮ! ಯಾವುದೇ ಅಳುಕಿಲ್ಲದೆ ಅದನ್ನು ಚಾಚು ತಪ್ಪದೆ ನಿರ್ವಹಿಸುತ್ತಾಳೆ. ಗಂಡನ ಸುಶ್ರೂಷೆ ಆಕೆಗೊಂದು ತಪಸ್ಸು! ಆ ತಪಸ್ಸೇ ಆಕೆಗೆ ಅದ್ಭುತವಾದ ಸಿದ್ಧಿಗಳನ್ನು ನೀಡಿದೆ! ಆ ಸಿದ್ಧಿಯಿಂದಲೇ ನಿಮ್ಮ ಬಗ್ಗೆ ಆಕೆಗೆ ತಿಳಿದದ್ದು!” ಎಂದು ನಿಲ್ಲಿಸಿ,
“ನೀವು ಅಲ್ಲಿಂದ ಹೊರಟ ಸ್ವಲ್ಪ ಸಮಯಕ್ಕೇ ಆಕೆಯ ಗಂಡ ಮರಣಿಸಿದರು! ಆಕೆಯ ಮಕ್ಕಳು ಬಂದು ಆಕೆಯನ್ನು ಹೊರದೂಡಿ ತಮ್ಮ ಹೆಂಡತಿಯರೊಂದಿಗೆ ಸಂಸಾರವನ್ನು ಪ್ರಾರಂಭಿಸಿದ್ದಾರೆ!”
ಆಶ್ಚರ್ಯದಿಂದಾಗಿ ನನಗೆ ಉಸಿರುಕಟ್ಟಿದಂತಾಯಿತು. ಬಿಟ್ಟ ಕಣ್ಣು ಬಿಟ್ಟಂತೆಯೇ ಆತನನ್ನು ನೋಡಿದೆ.
“ಮುಂದಿನ ಆಕೆಯನ್ನು ಆಮೇಲೆ ಹೇಳುತ್ತೇನೆ! ಈಗ ನನ್ನಬಗೆಗಿನ ನಿಮ್ಮ ಸಂಶಯವನ್ನು ನಿವಾರಿಸುತ್ತೇನೆ ಕೇಳಿ. ನಾನೊಬ್ಬ ವ್ಯಾಧ! ಪ್ರಾಣಿಗಳನ್ನು ಬೇಟೆಯಾಡುವುದು ನನ್ನ ಧರ್ಮ! ಎಷ್ಟು ಬೇಕೋ ಅಷ್ಟು ಮಾಂಸವನ್ನು ಇಟ್ಟುಕೊಂಡು... ಅಗತ್ಯವಾದಷ್ಟು ಹಣಕ್ಕಾಗಿ ಸ್ವಲ್ಪ ಮಾಂಸವನ್ನು ಮಾರಿ... ಉಳಿದುದನ್ನು ನನಗಿಂತಲೂ ಬಡವರಿಗೆ ದಾನವಾಗಿ ಕೊಟ್ಟು... ಅಪ್ಪ ಅಮ್ಮನ ಸುಶ್ರೂಷೆಯನ್ನು ಮಾಡಿ ಬದುಕುತ್ತಿದ್ದೇನೆ! ಈ ಧರ್ಮದಿಂದ ಒಂದಿಂಚು ಕೂಡ ಆಚೆ ಈಚೆ ಹೋಗಲಾರೆ! ಆದ್ಧರಿಂದಲೇ ನನಗೂ ಕೆಲವು ಸಿದ್ಧಿಗಳು ದೊರಕಿದೆ! ನಿಮ್ಮ ಬರುವಿನ ಅರಿವು ಹಾಗೆಯೇ ದೊರಕಿದ್ದು!” ಎಂದು ನಿಲ್ಲಿಸಿ....,
“ಇನ್ನು... ನಿಮ್ಮಬಗ್ಗೆ ಹೇಳುತ್ತೇನೆ ಕೇಳಿ.... ತಪಸ್ಸಿನಿಂದ ನಿಮಗೆ ಸಿದ್ಧಿಸಿದ ಅಲ್ಪ ಸ್ವಲ್ಪ ಸಿದ್ಧಿಯೂ ಇಲ್ಲವಾದ ಬಗೆ.... ಅಧ್ಯಯನವನ್ನು ನಡೆಸುವುದು, ಧರ್ಮಾಧರ್ಮವನ್ನು ತಿಳಿದುಕೊಳ್ಳುವುದು, ತಪಸ್ಸು ಮಾಡುವುದು.... ನಿಮ್ಮ ಜ್ಞಾನವನ್ನು ಯೋಗ್ಯರಾದವರಿಗೆ ವಿಸ್ತರಿಸುವುದು ನಿಮ್ಮ ಧರ್ಮ! ಕೊಲ್ಲುವುದಲ್ಲ!!” ಎಂದ.
ನನ್ನ ಮನಸ್ಸೇನೆಂದು ನನಗೇ ತಿಳಿಯಲಿಲ್ಲ. ಎಲ್ಲವೂ ಶೂನ್ಯವಾದಂತೆ. ಅವ್ಯಕ್ತವಾದ ಯಾವುದೋ ದುಗುಡ... ಅದನ್ನು ಅರಿತವನಂತೆ ವ್ಯಾಧ ಮುಂದುವರೆಸಿದ....,
“ಮುಂದಿನ ಯಾವುದೋ ಜನ್ಮದಲ್ಲಿ ನೀವು ಸಂಧಿಸುತ್ತೀರಿ- ನಿಮ್ಮನ್ನು ಇಲ್ಲಿಗೆ ಕಳಿಸಿದಾಕೆಯನ್ನು! ತನ್ನ ಜ್ಞಾನವನ್ನು ಆಕೆ ನಿಮಗೆ ವರ್ಗಾಯಿಸುತ್ತಾಳೆ.... ನಂತರ ಆಕೆಗೆ ಮುಕ್ತಿ! ಆಕೆಯಿಂದ ಕಲಿತದ್ದನ್ನು ಇನ್ನಿಬ್ಬರಿಗೆ ಬೋಧಿಸಿ ಆಯುಸ್ಸು ಮುಗಿಸಿ- ನಿಮಗೂ ಮುಕ್ತಿ! ಕಲಿಯುಗದ ನಿಯಮಗಳೇ ಬೇರೆ!” ಎಂದನಾತ.
೬
“ಇಷ್ಟೇ ಕಥೆ!” ಎಂದರು.
ಕಕ್ಕಾಬಿಕ್ಕಿಯಾದೆ. ಅವರ ಮುಖವನ್ನು ನೋಡಿದೆ. ಅದ್ಭುತವಾದ ಕಳೆ! ಕಣ್ಣುಗಳು ಆಕರ್ಷಕವಾಗಿ ಹೊಳೆಯುತ್ತಿದ್ದವು.
“ನಾನು ಹೇಳಬೇಕಾದ ತತ್ವಗಳೆಲ್ಲಾ ಈ ಕಥೆಯಲ್ಲಿದೆ! ಉಳಿದದ್ದು ನಿನ್ನ ತರ್ಕಕ್ಕೆ ಬಿಟ್ಟದ್ದು! ಕಾಲಾನು ಕಾಲದಲ್ಲಿ ಈ ಕಥೆಯ ಸಾರ ವ್ಯತ್ಯಾಸವಾಗುತ್ತಾ ಬಂತು! ಅದನ್ನು ನೀನೇ ಕಂಡು ಹಿಡಿದು ನಿನ್ನದೇ ವಯಸ್ಸು ಅಥವಾ ನಿನಗಿಂತ ಒಂದರಡು ವರ್ಷ ಚಿಕ್ಕವರಿರಬಹುದಾದ ನನ್ನ ಮೊಮ್ಮಕ್ಕಳಿಗೆ ಬೋಧಿಸಬೇಕು.... ಅವರು ಜೀವನ ಪೂರ್ತಿ ನಿನ್ನೊಂದಿಗೇ ಇರುತ್ತಾರೆ!”
ಹೃದಯಾಘಾತದಿಂದ ಸಾಯುತ್ತೇನೆ ಅನ್ನಿಸಿತು! ಏನೆಂದರೆ ಏನೂ ಅರ್ಥವಾಗದ ಸ್ಥಿತಿ!
ಮುಗುಳುನಕ್ಕರು ಮತ್ಸ್ಯಗಂಧಿ!
“ನನ್ನ ಇಬ್ಬರು ಮಕ್ಕಳನ್ನೂ ನೀನು ನೋಡಿದ್ದೀಯ! ಅವರ ಮಕ್ಕಳಿಂದಾಗಿ ಮತ್ತೊಮ್ಮೆ ನೀನವರನ್ನು ಭೇಟಿಯಾಗುತ್ತೀಯ! ಅವರ ಮಕ್ಕಳು ಅಂದರೆ ನನ್ನ ಮೊಮ್ಮಕ್ಕಳು ನಿರ್ವಾಹವಿಲ್ಲದೆ ನಿನ್ನೊಂದಿಗೆ ಬರುತ್ತಾರೆ! ಅವರ ಕೆಲವು ಸಂಶಯಗಳನ್ನು ನಿವಾರಿಸಿ ಈ ಕಾಲಕ್ಕೆ ತಕ್ಕಂತೆ ಬದುಕು ಮುಗಿಸಿ ಬನ್ನಿ!” ಎಂದು ಆಕೆ ಹಾಗೆಯೇ ಪಕ್ಕಕ್ಕೆ ವಾಲಿದರು!!!
೭
ಇತಿಹಾಸದ ಕಾಲ ಗರ್ಭದಲ್ಲಿ ಅದೇನೇನು ರಹಸ್ಯಗಳು ಹುದುಗಿದೆಯೋ....!
ಭರತಖಂಡವೆನ್ನುವ ಪುಣ್ಯಭೂಮಿ ಅದೆಷ್ಟು ಕಥೆ ಕಟ್ಟು ಕಥೆಗಳಿಂದ ತುಂಬಿ ತುಳುಕುತ್ತಿದೆಯೋ....!
ಮತ್ಸ್ಯಗಂಧಿಯ ಶರೀರವನ್ನು ಮಣ್ಣುಮಾಡಿ ಹೊರಟೆ! ಎಲ್ಲಿಗೆಂದಿಲ್ಲದ ಯಾತ್ರೆ!
ಮಾಡುತ್ತೇನೆಂದರೆ ಕೆಲಸಗಳಿಗೇನೂ ಕೊರತೆಯಿಲ್ಲ! ಕಲಿಯುತ್ತೇನೆಂದರೆ ವಿಷಯಗಳಿಗೇನೂ ಕೊರತೆಯಿಲ್ಲ!
ಓದಿದ ಗ್ರಂಥಗಳೆಷ್ಟೋ, ಮಾಡಿದ ಕೆಲಸಗಳೆಷ್ಟೋ, ಸುತ್ತಿದ ಪ್ರದೇಶಗಳೆಷ್ಟೋ.... ಕೊನೆಗೊಮ್ಮೆ ವ್ಯಾಸನ ಅಮ್ಮನ ಪ್ರದೇಶಕ್ಕೇ ಮರಳಿದೆ! ಕರ್ಮವಶಾತ್ ಅವರ ಮೊಮ್ಮಕ್ಕಳನ್ನು ಪರಿಚಯವಾದರೆ??
ಬಸ್ಸಿನಿಂದಿಳಿದು ನಡೆಯುವಾಗ, ಫುಟ್ಪಾತಿನ ಮೇಲೆ ಮೂರು ಜನ ಹುಡುಗರು ಹುಡುಗಿಯೊಬ್ಬಳ ಹಿಂದೆ ಪ್ರೇಮ ಭಿಕ್ಷೆಯನ್ನು ಬೇಡುತ್ತಾ ಸುತ್ತುತ್ತಿದ್ದರು. ಒಂದು ಕಡೆ ನಿಲ್ಲಲಾರದೆ ಹುಡುಗಿ ಆಚೆ ಈಚೆ ತಿರುಗುತ್ತಿದ್ದಳು... ಬಿಕ್ಷೆ ಬೇಡುತ್ತಿದ್ದವನು ಒಬ್ಬನೇ... ಉಳಿದಿಬ್ಬರು ಸಹಾಯಕರು!
“ಹೇ ಹೋಗೋ.... ನಾನು ಆಲ್ರೆಡಿ ಒಬ್ಬನ್ನ ಲವ್ ಮಾಡ್ತಿದೀನಿ!” ಎಂದಳು.
“ಇಲ್ಲ! ನೀನು ಸುಳ್ಳು ಹೇಳುತ್ತಿದ್ದೀಯ!” ಎಂದ.
“ನೋಡು ಬೇಕಿದ್ರೆ ಈಗ ಬರ್ತಾನೆ!” ಎಂದು ತಿರುಗಿದವಳು ಅವಳನ್ನೇ ನೋಡುತ್ತಿದ್ದ ನನ್ನನ್ನು ಕಂಡು ಓಡಿ ಬಂದಳು.! ಹುಡುಗರು ಏನು ಮಾಡಬೇಕೋ ತಿಳಿಯದೆ ಬೆಪ್ಪರಂತೆ ನಿಂತಾಗ, ಅವರಿಗೆ ಕೇಳಿಸದಂತೆ...,
“ಪ್ಲೀಸ್, ನಾನು ನಿಮ್ಮ ಲವರ್ ಅನ್ನುವ ಹಾಗೆ ನಡೆದುಕೊಳ್ಳಿ!” ಎಂದಳು.
ಅವಳು ಓಡಿ ಬಂದ ವೇಗವನ್ನು ಆವಾಹಿಸುವವನಂತೆ ಅವಳ ಮುಖವನ್ನು ಎರಡೂ ಕೈಗಳಲ್ಲಿ ತೆಗೆದುಕೊಂಡು ತುಟಿಯನ್ನು ಚುಂಬಿಸಿದೆ!
ತರಗೆಲೆಯಂತೆ ಕಂಪಿಸಿದಳು! ಅವಳ ನಡುಕ ನನ್ನ ಹೃದಯವನ್ನು ತಾಕಿತು! ಆ ನಡುಕದಲ್ಲಿ ಅನುರಾಗವಿತ್ತು!
ಕಣ್ಣುಮುಚ್ಚಿ ತಲ್ಲೀನಳಾದ ಅವಳನ್ನು ಬೇರ್ಪಡಿಸುವಾಗ ಇಲ್ಲ ಅನ್ನುವಂತೆ ತಲೆಯಾಡಿಸಿ ಮತ್ತೊಮ್ಮೆ ಅವಳೇ ಎಟುಕಿಸಿ ತುಟಿಗೆ ತುಟಿಯೊತ್ತಿದಳು!
ಕಲಿಗಾಲ!!
*
ಮತ್ಸ್ಯಗಂಧಿಯ ಮೊಮ್ಮಕ್ಕಳನ್ನು ನಾನಾಗಿಯೇ ಹುಡುಕಲೋ ಅವರಾಗಿಯೇ ತಾಕಿಕೊಳ್ಳುತ್ತಾರೋ ತಿಳಿಯದ ಅವಸ್ತೆ! ಅವರ ಮಾತನ್ನಾದರೂ ನಾನೇಕೆ ನಂಬಬೇಕು? ಹಾಗೆ ನಡೆಯಲು ಸಾಧ್ಯವೇ? ಇತ್ಯಾದಿಯಾಗಿ ಯೋಚಿಸುತ್ತಾ, ಎದೆಗೊರಗಿ ಮಲಗಿದ್ದ ಅವಳ ತಲೆಗೂದಲ ನಡುವೆ ಬೆರಳಾಡಿಸುತ್ತಾ ಕೇಳಿದೆ,
“ನಿನ್ನ ಹೆಸರೇನು?!!”
ಮುಖವೆತ್ತಿ ನನ್ನ ಕಣ್ಣುಗಳನ್ನು ನೊಡಿ ಮುಗುಳುನಕ್ಕು,
“ರುಕ್ಮಿಣಿ!” ಎಂದಳು.
ನಾನು ಬಾಗಿ ಅವಳ ತಲೆಯಮೇಲೊಂದು ಮುತ್ತುಕೊಟ್ಟು,
“ನಾನು ವ್ಯಾಸ!” ಎಂದೆ.
“ವಾಟ್?” ಎಂದಳು. ಅವಳ ಶಬ್ದದಲ್ಲಿ ಆಶ್ಚರ್ಯ ಸ್ಪಷ್ಟವಾಗಿತ್ತು!
“ನಾನು ವ್ಯಾಸ, ವೇದವ್ಯಾಸ, ಕೃಷ್ಣದ್ವೈಪಾಯನ ವ್ಯಾಸ!” ಎಂದೆ.
“ನಿನಗೆ ನೀನೇ ಇಟ್ಟುಕೊಂಡಿರಬೇಕು?” ಎಂದಳು.
ಮುಗುಳುನಕ್ಕೆ.
“ಸರಿ, ಟೈಮಾಯ್ತು! ಹೊರಡ್ತೀನಿ...! ಇನ್ಯಾವಾಗ ಸಿಕ್ತೀಯ?” ಎಂದಳು.
“ಅದೃಷ್ಟವಿದ್ದರೆ ಸಿಗೋಣ!” ಎಂದೆ.
ಬಟ್ಟೆಗಳನ್ನು ಧರಿಸಿ ಹತ್ತಿರಬಂದು ನನ್ನ ಮುಖವನ್ನು ತನ್ನ ಕೈಗೆ ತೆಗೆದುಕೊಂಡು ಕಣ್ಣುಗಳನ್ನೇ ನೋಡಿ,
“ನಿನ್ನಿಂದ ನನಗೆ ಸಿಕ್ಕಿದ ತೃಪ್ತಿ ಇನ್ಯಾರಿಂದಲೂ ಸಿಕ್ಕಿಲ್ಲ! ಥ್ಯಾಂಕ್ಯು!” ಎಂದು ಹೇಳಿ ಮತ್ತೊಮ್ಮೆ ತುಟಿಗೆ ತುಟಿಯೊತ್ತಿ ಹೊರಟು ಹೋದಳು!
೮
ಆದ್ಯಾತ್ಮದಬಗ್ಗೆ ಯೋಚಿಸುತ್ತಾ ಕುಳಿತಿದ್ದೆ! ಅಪ್ರಕೃತವೆಂಬಂತೆ ರಜನೀಶ್ ಮಹರ್ಷಿ ನೆನಪಾದರು! ಓಶೋ...! ಓಶೋವಿನಿಂದ ವಾತ್ಸ್ಯಾಯನ! ವಾತ್ಸ್ಯಾಯನನ ತತ್ವಗಳಿಗೂ ಓಶೋವಿನ ತತ್ವಗಳಿಗೂ ಆದ್ಯಾತ್ಮಕ್ಕೂ ಏನು ಸಂಬಂಧ? ಯೋಚನೆಯಲ್ಲಿರುವಾಗ,
“ಕೋರ್ಟೇ ಅನುಮತಿ ನೀಡಿದೆ!” ಎನ್ನುವ ಮಾತು ಕೇಳಿ ತಿರುಗಿ ನೋಡಿದೆ.
“ಏನಂತ?”
“ವಯಸ್ಸಿಗೆ ಬಂದ ಹುಡುಗ ಹುಡುಗಿ ಪರಸ್ಪರ ಒಪ್ಪಿಗೆಯಿಂದ ಸೇರಬಹುದು ಅಂತ!”
“ಎಷ್ಟು ಜನರ ಜೊತೆ ಬೇಕಿದ್ದರೂ?”
“ಹೂ! ಪಾಪ! ಎಷ್ಟೋ ಡಿವೋರ್ಸ್ ಕೇಸ್ಗಳು ವಜಾ ಆಗೋದ್ವು!”
“ನೀನು ಎಷ್ಟು ಜನರ ಜೊತೆ ಸೇರಿದ್ದೀಯ?”
“ಇನ್ನೂ ಶುರು ಮಾಡಿಲ್ಲ!”
“ಶುರು ಮಾಡುವಾಗ ಸೇಫ್ಟಿ ಉಪಯೋಗಿಸುವುದು ಮರೆಯಬೇಡಿ!” ಎಂದೆ.
ತಟ್ಟನೆ ತಿರುಗಿ ನೋಡಿದಳು. ಮುಗುಳುನಕ್ಕೆ. ಎದ್ದು ನನ್ನ ಹತ್ತಿರಕ್ಕೆ ಬಂದು,
“ನೀವೇನಂತೀರ?” ಎಂದಳು.
“ನನ್ನ ಒಬ್ಬನ ಜೊತೆ ಮಾತ್ರ ಸೇರುವುದಾದರೆ ಸೇಫ್ಟಿ ಬೇಡ!” ಎಂದೆ.
“ಆಹಾ! ನೀವು?”
“ಇಬ್ಬರಿಗಿಂತ ಹೆಚ್ಚು ಹುಡುಗಿಯರ ಜೊತೆ ಸೇರಬೇಕಾಗಿ ಬಂದರೆ ಉಪಯೋಗಿಸುತ್ತೇನೆ!” ಎಂದೆ.
“ನನ್ನೊಂದಿಗೆ ಸೇರಬೇಕಾಗಿ ಬಂದರೆ?”
“ಉಪಯೋಗಿಸುವುದಿಲ್ಲ!”
“ಓ ಹಾಗಿದ್ದರೆ ನಾನು ಮೊದಲನೆಯವಳು ಅಥವಾ ಎರಡನೆಯವಳು! ಆದ್ದರಿಂದ ನಿಮ್ಮೊಬ್ಬರೊಂದಿಗೆ ನಾನೂ ಉಪಯೋಗಿಸುವುದಿಲ್ಲ!” ಎಂದಳು.
ಮುಗುಳುನಕ್ಕೆ! ನನ್ನ ಕಣ್ಣುಗಳನ್ನೇ ನೋಡುತ್ತಾ....,
“ನೀವು ತುಂಬಾ ನಿಗೂಢವಾಗಿದ್ದೀರ!” ಎಂದಳು.
“ಇರಬಹುದು! ಕೆಲವೊಂದು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುತ್ತಿದ್ದೇನೆ! ಸಿಗುವವರೆಗೆ ನಿಗೂಢವೇ! ಯಾರಿಗೆ ಗೊತ್ತು.... ಉತ್ತರ ನಿಮ್ಮ ಮೂಲಕವೂ ದೊರಕಬಹುದು!” ಎಂದೆ.
ಅದ್ಭುತವಾಗಿ ನಕ್ಕಳು.
“ಸರಿ ನಡೆಯಿರಿ ಹೋಗೋಣ.... ಅದು ಯಾವ ಉತ್ತರ ಕಂಡುಕೊಳ್ಳುತ್ತೀರೋ ನೋಡೋಣ!”
*
ನನ್ನ ಎಡಗೈ ಅವಳ ಬಲಗೈ ಬೆರೆಳುಗಳು ಹೆಣೆದುಕೊಂಡಿದ್ದವು. ನನ್ನ ಬಲಗೈ ಅವಳ ಬಲಗೈಯ್ಯ ಕಂಕುಳಿನಿಂದ ಅವಳನ್ನು ಬಳಸಿತ್ತು! ಎದೆಯಮೇಲೆ ತಲೆಯೊರಗಿಸಿ ತನ್ಮಯಳಾಗಿ ಹೇಳುತ್ತಿದ್ದಳು....,
“ಈ ಕ್ಷಣದವರೆಗೆ ನನಗೇನೂ ಇದರಲ್ಲಿ ಆಸಕ್ತಿಯಿರಲಿಲ್ಲ! ಕೆಲವೊಂದು ಕ್ರಿಯೆಗಳು ಆಯಾಚಿತವಾಗಿ ನಡೆಯುತ್ತದೆ! ಅರ್ಥವೂ ಇರುವುದಿಲ್ಲ! ಇಂದು ಬೆಳಗ್ಗೆ ನನ್ನ ಅಪ್ಪನೊಂದಿಗೆ ಜಗಳವಾಯಿತು! ಅಪ್ಪನ ಹೆಸರು ಧರ್ಮರಾಯ! ಮಾಡುವುದು ಅಧರ್ಮ! ನನ್ನನ್ನು ಸೂಳೆಯನ್ನಾಗಿ ಮಾಡಬೇಕೆಂದಿದ್ದರು! ಒಪ್ಪಲಿಲ್ಲ! ಒಬ್ಬರೊಂದಿಗೇ ಮಲಗಬೇಕನ್ನುವ ನಿಯಮವಿಲ್ಲದಿದ್ದರೂ ದುಡ್ಡಿಗಾಗಿ ಮಲಗಲಾರೆ ಅಂದೆ!” ಎಂದು ನನ್ನ ಮುಖವನ್ನು ನೋಡಿದಳು. ನಾನು ಧರ್ಮದಬಗ್ಗೆ ಯೋಚಿಸುತ್ತಾ,
“ನಿನ್ನ ಹೆಸರೇನು?” ಎಂದೆ.
“ಭಾಮೆ! ಸತ್ಯಭಾಮೆ!” ಎಂದಳು.
“ಏನು?” ಎಂದೆ. ಮುಂಚೆ ರುಕ್ಮಿಣಿಯ ಹೆಸರು ಕೇಳಿದ್ದರಿಂದಲೇನೋ... ನಾನೂ ಆಶ್ಚರ್ಯಗೊಂಡೆ!
“ಏನಾಯ್ತು?” ಎಂದಳು.
“ಏನಿಲ್ಲ... ಹೇಳು... ನಿನ್ನ ಕುಟುಂಬದ ಬಗ್ಗೆ!” ಎಂದೆ.
“ಕುಟುಂಬ!” ಎಂದು ತಾತ್ಸರದಿಂದ ಹೇಳಿ ಮುಂದುವರೆಸಿದಳು,
“ಅಪ್ಪ ಧರ್ಮರಾಯ! ಅಪ್ಪನ ಅವಳಿ ಸಹೋದರನೊಬ್ಬನಿದ್ದಾನೆ- ಯುಧಿಷ್ಠಿರ!” ಎಂದು ಹೇಳಿ ನನ್ನ ಮುಖವನ್ನು ನೋಡಿ ನಕ್ಕು,
“ನಿನ್ನ ಹೆಸರೇನು?”
ನಾನೂ ಮುಗುಳುನಕ್ಕೆ!
“ವ್ಯಾಸ!” ಎಂದೆ.
“ಏನು?” ಎಂದಳು.
“ವ್ಯಾಸ, ವೇದವ್ಯಾಸ, ಕೃಷ್ಣದ್ವೈಪಾಯನ ವ್ಯಾಸ!” ಎಂದೆ.
“ನೀನೇ ಇಟ್ಟುಕೊಂಡಿರಬೇಕು!” ಎಂದು ಹೇಳಿ,
“ಸರಿ, ಇವತ್ತು ಹೊರಡುತ್ತೇನೆ...! ಇನ್ಯಾವಾಗ ಸಿಗ್ತೀಯ?” ಎಂದಳು.
“ಅದೃಷ್ಟವಿದ್ದರೆ ಸಿಗೋಣ!” ಎಂದೆ.
ಬಟ್ಟೆಗಳನ್ನು ಧರಿಸಿ ತಯಾರಾಗಿ ಬಂದು ನನ್ನ ಮುಖವನ್ನು ತನ್ನ ಕೈಗೆ ತೆಗೆದುಕೊಂಡು, ತಟಿಗೆ ತುಟಿಯೊತ್ತಿ,
“ಥ್ಯಾಂಕ್ಯು!” ಎಂದಳು.
೯
ಹೆಣ್ಣು- ಗಂಡು! ಹೆಣ್ಣಿಗೂ ಮೆದುಳಿದೆ- ಗಂಡಿಗೂ ಮೆದುಳಿದೆ! ದೈಹಿಕ ರಚನೆ ಸ್ವಲ್ಪ ಭಿನ್ನ! ಅದಕ್ಕನುಸಾರವಾಗಿ ಗಂಡೂ ಹೆಣ್ಣೂ ಎರಡು ವ್ಯಕ್ತಿತ್ವ! ಸೃಷ್ಟಿಕ್ರಿಯೆ ನಡೆಯಬೇಕೆಂದರೆ ಗಂಡು ಹೆಣ್ಣು ಸೇರಬೇಕೆ ವಿನಃ ಗಂಡು ಗಂಡು ಸೇರಿದರೆ ನಡೆಯುವುದಿಲ್ಲ- ಹೆಣ್ಣು ಹೆಣ್ಣು ಸೇರಿದರೂ ನಡೆಯುವುದಿಲ್ಲ!
ಮತ್ತೆ ಏಕೆ ಮನುಷ್ಯರ ನಡುವೆ ಭಿನ್ನತೆ??
ಹೆಣ್ಣು ಕೀಳು- ಭೋಗವಸ್ತು ಅನ್ನುವ ಬ್ರಮೆಯೇಕೆ?
ಯಾವ ಕಾಲದಲ್ಲಾದರೂ ಸರಿಯೇ ಪ್ರಪಂಚ ಒಂದು ನಿಯಮಕ್ಕೆ ಬದ್ಧವಾಗಿದೆ. ಕಾಲಕ್ಕನುಸಾರವಾಗಿ ಕೆಲವು ಬದಲಾವಣೆಗಳಾಗಿರಬಹುದಾದರೂ ನಿಯಮವಂತೂ ಇದ್ದೇ ಇದೆ...!
ಪ್ರದೇಶಗಳಿಗನುಸಾರವಾಗಿ ಬೇರೆ ಬೇರೆ ನಿಯಮ ಅನ್ನಿಸಿದರೂ ಒಂದು ನಿಯಮವಂತೂ ಇದೆ!
ಇದರ ಬಗ್ಗೆ ನನಗೂ ಒಂದು ಊಹೆ ಸಿಕ್ಕಿದ್ದು... ರುಕ್ಮಿಣಿ ಸತ್ಯಭಾಮೆಯರನ್ನು ಒಟ್ಟಿಗೆ ಭೇಟಿಯಾದಾಗ!!
ರುಕ್ಮಿಣಿಯನ್ನೂ ಭಾಮೆಯನ್ನೂ ಬೇರೆಬೇರೆಯಾಗಿ ಹಲವುಭಾರಿ ಭೇಟಿಯಾಗಿದ್ದೆ! ಅವರಿಬ್ಬರ ಹೊರತು ಯಾವೊಬ್ಬ ಹುಡುಗಿಯನ್ನೂ ಒಂದಕ್ಕಿಂತ ಹೆಚ್ಚುಭಾರಿ ಸೇರಲಿಲ್ಲ!! ಕೊನೆಗೆ ಅವರಿಬ್ಬರ ಹೊರತು ಯಾರನ್ನೂ ಸೇರಲಿಲ್ಲ! ಬರುಬರುತ್ತಾ ಅವರೂ ಕೂಡ ನನ್ನನ್ನು ಹೊರತು ಬೇರೆಯವರೊಂದಿಗೆ ಸೇರಲಿಲ್ಲ! ಅದೇ ಕಾರಣವಾಗಿ ಒಂದು ದಿನ ಇಬ್ಬರನ್ನೂ ಒಟ್ಟಿಗೆ ಭೇಟಿಯಾಗಬೇಕಾಗಿ ಬಂತು!!
*
ಪುಸ್ತಕವೊಂದನ್ನು ಓದುತ್ತಾ ಮಲಗಿದ್ದೆ! ಮಲಗಿದ್ದೆ ಅಂದರೆ ಮಂಚದಮೇಲೆ- ಗೋಡೆಗೆ ಒರಗಿ ಕುಳಿತಿದ್ದೆ. ಒಳ ಬಂದ ಇಬ್ಬರೂ ನಗುನಗುತ್ತಾ ನನ್ನ ಮೇಲಕ್ಕೆ ಎಗರಿದರು! ಕಕ್ಕಾಬಿಕ್ಕಿಗೊಂಡೆ!
“ನಾವು ಯಾರು ಗೊತ್ತ? ಧರ್ಮರಾಯ ಯುಧಿಷ್ಠಿರರ ಮಕ್ಕಳು!” ಎಂದರು.
ಅಂದು ಭಾಮೆಯನ್ನೊಮ್ಮೆ ಕುಟುಂಬದ ಬಗ್ಗೆ ಕೇಳಿದ್ದು ಬಿಟ್ಟರೆ ನಮ್ಮ ನಡುವೆ ಆರೀತಿಯ ಸಂಭಾಷಣೆಯೇ ನಡೆದಿರಲಿಲ್ಲ! ಒಬ್ಬೊಬ್ಬರಾಗಿ ಬರುತ್ತಿದ್ದರು, ಖುಷಿಯಿಂದಿರುತ್ತಿದ್ದರು, ಹೋಗುತ್ತಿದ್ದರು!
“ಒಟ್ಟಿಗೆ ಬರೋಕೆ ಇಷ್ಟು ದಿನ ಯಾಕಾಯ್ತು?”
“ಲೆಕ್ಕ.... ನಾವಿಬ್ಬರೂ ಒಂದೇ ಆತ್ಮದ ಎರಡು ದೇಹಗಳು! ಆದರೆ ಹುಡುಗರ ವಿಷಯವನ್ನು ಮಾತ್ರ ಓಪನ್ ಆಗಿ ಮಾತನಾಡಿಕೊಳ್ಳುತ್ತಿರಲಿಲ್ಲ- ಯಾರೊಂದಿಗೆ ಸೇರಿದೆವು ಅನ್ನವುದು! ಇವತ್ತು ಇಬ್ಬರೂ ನಮ್ಮ ನಮ್ಮ ಹುಡುಗನಬಳಿ ಬಂದದ್ದು!”
“ಸೂಪರ್!” ಎಂದೆ. ನಂತರ ಮನದಲ್ಲಿ ಸಂಶಯವೊಂದು ಮೂಡಿ ಕೇಳಿದೆ,
“ನಿಮ್ಮ ಅಪ್ಪ ಅಮ್ಮಂದಿರನ್ನು ನೋಡಬೇಕಲ್ಲ? ಅಜ್ಜಿ ತಾತ....?”
“ಅಜ್ಜಿ ತಾತಾ... ಅಜ್ಜನಿಗೆ ಯಾವುದೋ ರೋಗವಿತ್ತಂತೆ- ಅಂಟು ರೋಗ! ಅಜ್ಜಿ ಅಜ್ಜನನ್ನು ಸುಶ್ರೂಷೆ ಮಾಡುವುದರಲ್ಲೇ ಜೀವನವನ್ನು ಸವೆಸಿದರು!” ಎಂದಳು ಭಾಮೆ.
“ಅಷ್ಟು ವರ್ಷ ಬೇರೆ ಇದ್ದ ನಮ್ಮ ಅಪ್ಪಂದಿರು ಅಜ್ಜ ತೀರಿಕೊಂಡಮೇಲೆ ಅಜ್ಜಿಯನ್ನು ಮನೆಯಿಂದ ಓಡಿಸಿದರು! ನಾವು ತುಂಬಾ ಹುಡುಕಿದೆವು....! ಸಿಗಲಿಲ್ಲ!” ಎಂದಳು ರುಕ್ಮಿಣಿ.
“ಅಜ್ಜಿ ಹೆಸರೇನು?”
“ವೇದ!”
“ವೇದ? ಹೇಗಿದ್ರು ನೋಡೋಕೆ?”
“ಲಕ್ಷಣವಾಗಿದ್ರು.... ಅವರಿಗೆ ಭಾರೀ ಅರಿವಿತ್ತಂತೆ... ಪುರಾಣಗಳನ್ನೆಲ್ಲಾ ಓದ್ಕೊಂಡಿದ್ರು...!”
ಗೊಂದಲಗೊಂಡೆ! ಮೊಮ್ಮಕ್ಕಳು ಅಂದಾಗ ಹುಡುಗರು ಮನಸ್ಸಿಗೆ ಬಂದರೇ ಹೊರತು ಹುಡುಗಿಯರು ಬರಲಿಲ್ಲ! ಇವರೇ ಆಗಿರುತ್ತಾರೆಯೇ....?
“ನಿಮ್ಮ ಮನೆಯವರನ್ನು ನೋಡಬೇಕಲ್ಲಾ?”
ಇಬ್ಬರೂ ಪರಸ್ಪರ ಮುಖವನ್ನು ನೋಡಿ,
“ಸರಿ ಬಾ!” ಎಂದರು.
೧೦
“ನಿಮ್ಮಿಬ್ಬರನ್ನೂ ನಾನು ನೋಡಿದ್ದೇನೆ!” ಎಂದೆ.
ಅವರ ಮುಖದಲ್ಲಿ ಸಂಶಯ. ಯಧಿಷ್ಠಿರನಿಗೆ ಹೇಳಿದೆ,
“ಸುಮಾರು ವರ್ಷ ಮುಂಚೆ- ಕಳೆದ ಜನ್ಮದ ಹಾಗೆ ಇದೆ- ನಿಮ್ಮ ಶೂ ಪಾಲಿಶ್ ಮಾಡಿಕೊಟ್ಟಿದ್ದೆ!” ಎಂದೆ.
ಆತನಿಗೆ ನೆನಪಾಗಲಿಲ್ಲ!
“ವಿಮಾನವೊಂದು ಹಾರುವಾಗ ನಾನು ತಲೆಯೆತ್ತಿ ನೋಡುವುದನ್ನು ಕಂಡು ಮುಂದಿನ ವಿಮಾನದಲ್ಲಿ ನಾನೂ ಹಾರುತ್ತಿದ್ದೇನೆ ಎಂದು ಹೇಳಿದ್ದಿರಿ! ಐವತ್ತು ರೂಪಾಯಿ ಕೊಟ್ಟು ಚಿಲ್ಲರೆ ಇಟ್ಟುಕೋ ಅಂದಿದ್ದಿರಿ... ನಾನು ಇಟ್ಟುಕೊಳ್ಳಲಿಲ್ಲ- ನನ್ನದೇನೋ ನನಗಷ್ಟೇ ಸಾಕಿತ್ತು!”
ಅದನ್ನು ಹೇಳಿದಾಗ ಆತನಿಗೆ ನೆನಪಾಯಿತು....
“ನೀನಾ....!” ಎಂದರು. ಮುಗುಳುನಕ್ಕೆ. ಅವರು ಮುಂದುವರೆಸಿ,
“ಅಜಗಜಾಂತರ ವ್ಯತ್ಯಾಸ! ಇವರು ಹೇಗೆ ಪರಿಚಯವಾದರು?”
“ಅದನ್ನು ಹೇಳಬೇಕಿಲ್ಲ...” ಎಂದು ಹೇಳಿ ಧರ್ಮರಾಯನ ಮುಖ ನೋಡಿ,
“ನಿಮ್ಮ ತಾಯಿ ನಿಮ್ಮ ಕಾಲು ತಬ್ಬಿಹಿಡಿದು ಅಯ್ಯಾ ಅಯ್ಯಾ ಅನ್ನುವಾಗ ಅವರನ್ನು ಕೊಡವಿ ಹೋಗಿದ್ದು ನೆನೆಪಿದೆ ನನಗೆ!” ಎಂದೆ.
“ಇನ್ನೇನು ಮತ್ತೆ! ಎಷ್ಟು ಗಾಬರಿಯಾದೆ ಗೊತ್ತ ಅವರು ತಬ್ಬಿದಾಗ! ಅವರ ರೋಗ ನನಗೂ ಹರಡುತ್ತದೆಂದು!”
“ಅವರಿಗೆ ರೋಗವಿತ್ತೆಂದು ಹೇಗೆ ಹೇಳುತ್ತೀರಿ?”
“ರೋಗವಿತ್ತಾ.....? ಕೃತಯುಗವಂತೆ, ತ್ರೇತಾಯುಗವಂತೆ, ದ್ವಾಪರಯುಗವಂತೆ, ಕಲಿಯುಗವಂತೆ....! ಇದು ರೋಗವಲ್ಲದೆ ಇನ್ನೇನು?” ಎಂದರು ಧರ್ಮರಾಯ!
“ಧರ್ಮವಂತೆ, ಸಂಸ್ಕಾರವಂತೆ... ಥೂ!” ಎಂದರು ಯುಧಿಷ್ಠಿರ!
ರೋಗ! ಅಂಟು ರೋಗ!! ಅವರಿಂದ ನನಗೆ ಹರಡಿದ ರೋಗ!!!
ಸತ್ಯಯುಗ ಅಥವಾ ಕೃತಯುಗ! ತ್ರೇತಾಯುಗ! ದ್ವಾಪರಾಯುಗ, ಕಲಿಯುಗ!!
ಮಿಂಚೊಂದು ಮಿಂಚಿದಂತಾಗಿ ಅಲ್ಲಿಂದ ಹೊರಟೆ!
೧೧
“ಹೇಳು ವ್ಯಾಸ! ನಮಗೂ ಆ ಸಂಶಯವಿದೆ!”
“ಏನು ಸಂಶಯ?”
“ನಮ್ಮ ಅಜ್ಜಿಯ ಅಂಟುರೋಗದ ಬಗ್ಗೆ! ಅವರನ್ನು ನೀನು ನೋಡಿದ್ದೀಯೋ?”
“ನಿಮ್ಮ ಅಜ್ಜಿ ವೇದ ನನ್ನ ಅಮ್ಮ ಮತ್ಸ್ಯಗಂಧಿ!”
“ಅರ್ಥವಾಗಲಿಲ್ಲ!”
“ಅರ್ಥಮಾಡಿಸಿ ಕೊಡುತ್ತೇನೆ! ಅದಕ್ಕಿಂತ ಮುಂಚೆ ನೀವು ಹೇಳಿ, ನಿಮ್ಮ ನಿಜವಾದ ತಂದೆ ತಾಯಂದಿರಾರು!”
“ಅವರೇ...! ಯಾಕೆ ಸಂಶಯ?”
“ರುಕ್ಮಿಣಿ ಕಪ್ಪು! ಅವರ ಅಪ್ಪಅಮ್ಮ- ಯುಧಿಷ್ಠಿರ ದ್ರೌಪದಿಯರು ಬಿಳಿ! ಸತ್ಯಭಾಮೆ ಬಿಳಿ! ಅವಳ ಅಪ್ಪಅಮ್ಮ- ಧರ್ಮರಾಯ- ಪಾಂಚಾಲಿಯರು ಕಪ್ಪು! ಹೇಗೆ?”
“ಅದರಲ್ಲೇನಿದೆ?”
“ಒಂದೋ ನೀವು ಮಕ್ಕಳು ಅದಲುಬದಲಾಗಿರಬೇಕು! ಅಥವಾ, ಬೆರಕೆಯಿರಬೇಕು!”
“ಅಂದರೆ....?”
“ನಿಮ್ಮ ಅಪ್ಪ ಅಮ್ಮನಿಗೆ ಧರ್ಮ, ಸಂಸ್ಕಾರ, ಆಚಾರ ವಿಚಾರಗಳಲ್ಲಿ ನಂಬಿಕೆಯಿಲ್ಲ ಅಲ್ಲವೇ?”
“ಇಲ್ಲ!”
“ನಿಮಗೆ?”
“ನಿಜ ಹೇಳಬೇಕೆಂದರೆ ನಮಗೆ ಅದರಬಗ್ಗೆ ಏನೂ ತಿಳಿಯದು! ಧರ್ಮ ಅಂದರೆ ಏನು? ಸಂಸ್ಕಾರ, ಆಚಾರ-ವಿಚಾರ ಅಂದರೆ ಏನು? ನಮ್ಮಿಬ್ಬರಿಗೂ ಒಂದೊಂದು ಸಂಶಯವಿದೆ!”
“ಕೇಳಿ!”
“ಕೃತಯುಗದ ಧರ್ಮ ತ್ರೇತಾಯುಗದ ಧರ್ಮಗಳೆಲ್ಲಾ ಈ ಕಲಿಯುಗದಲ್ಲಿ ಸಾಧ್ಯವೇ? ಕೃತಯುಗದಿಂದ ಇಲ್ಲಿಯವರೆಗಿನ ಯುಗಗಳಿಗಿರುವ ವ್ಯತ್ಯಾಸವೇನು?” ಎಂದಳು ರುಕ್ಮಿಣಿ.
“ನಿನ್ನ ಸಂಶಯವೂ ಇದೇ ಏನು?” ಎಂದೆ.
“ಹೆಚ್ಚೂ ಕಮ್ಮಿ.... ಜೊತೆಗೆ ಐತಿಹಾಸಿಕ ವಿವರಣೆ ಬೇಕು! ನಾನು ಓದಿರುವ ಇತಿಹಾಸ- ಸಿಂಧೂ ನಾಗರೀಕತೆ, ಹರಪ್ಪ ಮೆಹೆಂಜೋದಾರೋ ನಾಗರೀಕತೆಗಳು, ಈಜಿಪ್ಟ್ ನಾಗರೀಕತೆ, ನೈಲ್ ನಾಗರೀಕತೆ.... ಇತ್ಯಾದಿ! ಇವುಗಳಲ್ಲಿ ಸಂಸ್ಕಾರ ಅಂದರೆ ಏನು? ಹೇಗಿತ್ತು? ವೇದಗಳ ಸಂಸ್ಕಾರಗಳು ವಾಸ್ತವವೆ?”
ಆಶ್ಚರ್ಯದಿಂದ ಇಬ್ಬರನ್ನೂ ನೋಡಿದೆ. ವಾತ್ಸ್ಯಾಯನಸೂತ್ರಗಳನ್ನು ಮಾತ್ರ ತಿಳಿದುಕೊಂಡಿರುವ ಮುಗ್ದೆಯರು ಅಂದುಕೊಂಡಿದ್ದೆ! ಅತಿ ಬುದ್ಧಿವಂತರು ಇಬ್ಬರೂ....! ವ್ಯಕ್ತಿತ್ವವಿರುವವರೆನ್ನುವುದು ಮುಂಚೆಯೇ ಅನುಭವಕ್ಕೆ ಬಂದಿತ್ತು... ಇವರು ಅಪ್ಪ ಅಮ್ಮಂದಿರಂತೆ ಅಲ್ಲ! ಅಜ್ಜ ಅಜ್ಜಿಯರಂತೆ ಅನ್ನಿಸಿತು...
ತಾಯಿ ಮತ್ಸ್ಯಗಂಧೀ..... ನೀವು ಧನ್ಯೆ!
“ನಿಮ್ಮ ಅಜ್ಜಿ ವೇದ ನಿಮಗೆ ಹೇಳಿಕೊಡಲು ಪಾಠವೊಂದನ್ನು ಬೋಧಿಸಿ ಹೋಗಿದ್ದಾರೆ!” ಎಂದೆ.
ಇಬ್ಬರೂ ಆಸಕ್ತಿಯಿಂದ ನನ್ನ ಮುಖವನ್ನು ನೋಡಿದರು.
ತಾಯಿ ಹೇಳಿಕೊಟ್ಟ ಕಥೆಯನ್ನು ಮನದಲ್ಲಿಟ್ಟು ನಾನು ಕಂಡುಕೊಂಡದ್ದನ್ನು ಹೇಳತೊಡಗಿದೆ.
೧೨
ಇಬ್ಬರ ಪ್ರಶ್ನೆಗೂ ಒಂದೇ ಉತ್ತರ! ನೈಲ್, ಈಜಿಪ್ಟ್ ನಾಗರೀಕತೆಗಳನ್ನು ಬಿಡೋಣ! ಅದು ನನಗೂ ಗೊತ್ತಿಲ್ಲ! ಭರತಖಂಡ ಅಥವಾ ಭಾರತದ ಸಂಸ್ಕಾರ ಅಥವಾ ನಾಗರೀಕತೆಗಳನ್ನು ತೆಗೆದುಕೊಳ್ಳೋಣ.
ಆರ್ಯರು ಯೂರೋಪು ಬಾಗದಿಂದ ಬಂದವರು ಎಂದು ಯೂರೋಪಿಯನ್ನರು ಹೇಳುತ್ತಾರೆ! ಅವರಿಗೆ ಅವರಿಗಿಂತಲೂ ಬುದ್ಧಿವಂತರು ಬೇರೆ ಕಡೆ ಇದ್ದಾರೆ ಅಂದರೆ ಸಹಿಸುವುದಿಲ್ಲ!
ಮೂಲ ಮನುಷ್ಯನಬಗ್ಗೆ ಸತ್ಯಸಂಧವಾದ ಸತ್ಯ ಯಾರಿಗೂ ತಿಳಿಯದು! ಕೆಲವರು ಹೇಳುತ್ತಾರೆ ಮನುಷ್ಯನ ಮೂಲ ಆಫ್ರಿಕಾ ಆಗಿದ್ದು ಅಲ್ಲಿಂದ ಇತರ ಭಾಗಗಳಿಗೆ ಚದುರಿದರೆಂದು! ನಂತರ ಅಲ್ಲಲ್ಲಿನ ವಾತಾವರಣಕ್ಕೆ ಅನುಸಾರವಾಗಿ ದೈಹಿಕ ವ್ಯತ್ಯಯಗಳಾದುವು ಎಂದು! ಕೆಲವರು ಹೇಳುತ್ತಾರೆ ಮಂಗನಿಂದ ಮಾನವ ಅನ್ನುವುದಾದರೆ ಯಾವ ಯಾವ ಪ್ರದೇಶದ ಜನ ಅಲ್ಲಲ್ಲೇ ರೂಪುಗೊಂಡರು ಎಂದು!
ಅಷ್ಟರ ಮಟ್ಟಿನ ಕೂಲಂಕುಷತೆಯನ್ನು ಬಿಡೋಣ!
ಭರತಖಂಡ ಅಥವಾ ಭಾರತ- ಈಗಿನ ಅಫ್ಘಾನೀಸ್ಥಾನದಿಂದ ಪಾಕೀಸ್ಥಾನ ಭಾರತ ಟಿಬೆಟ್ ನೇಪಾಳ ಭೂತಾನ್ ಬಾಂಗ್ಲಾದೇಶ ಬರ್ಮ ಅಥವಾ ಮೈಯನ್ಮಾರ್ ಮತ್ತು ಶ್ರೀಲಂಕವನ್ನು ಒಳಗೊಂಡ ವಿಸ್ತಾರವಾದ ಭೂಪ್ರದೇಶ!
ಯೂರೋಪಿಯನ್ನರು ಭರತಖಂಡಕ್ಕೆ ಬಂದು ಇಲ್ಲಿನ ಸಾಮಾಜಿಕ ವ್ಯವಸ್ಥೆ- ಗ್ರಂಥಗಳನ್ನು ಕಲಿಯುವವರೆಗೆ ಪಾಪ ಅವರಿಗೂ ತಿಳಿದಿರಲಿಲ್ಲ- ಆರ್ಯರ ಮೂಲ ಯೂರೋಪು ಎಂದು!! ಇಲ್ಲಿನ ಸಂಸ್ಕಾರ ಅಲ್ಲಿಗಿಂತಲೂ ಶ್ರೇಷ್ಟ ಎಂದು ಅರಿವಾದಾಗ, ಅದರ ಮೂಲ ಅವರದ್ದೇ ಆಗಬೇಕಾದ ಅನಿವಾರ್ಯತೆ- ಅಗತ್ಯ- ಅವರಿಗಿತ್ತು! ಅವರು ಏನು ಹೇಳಿದರೂ ನಂಬುವ ಕೆಲವು ಜನ ಇಲ್ಲಿಯೂ ಇದ್ದರು- ಇದ್ದಾರೆ!
ಅದನ್ನು ಬಿಡೋಣ! ಭರತಖಂಡದ ಮೂಲ ಭರತಖಂಡವೇ! ಆರ್ಯರು ದ್ರಾವಿಡರು ಎಲ್ಲರೂ ಭಾರತೀಯರೇ! ಭೂ ಪ್ರದೇಶದ ಆಧಾರದಲ್ಲಿ, ವಾತಾವರಣದ ಉಷ್ಣತೆಯ ಆಧಾರದಲ್ಲಿ ಬಣ್ಣಗಳಲ್ಲಿ, ಆಚಾರಗಳಲ್ಲಿ ವ್ಯತ್ಯಾಸವಿದ್ದರೂ.... ಇಬ್ಬರ ಅಧ್ಯಯನ ಗ್ರಂಥಗಳು- ನಂಬಿಕೆಗಳು- ದೇವರುಗಳು- ಎಲ್ಲಾ ಒಂದೇ- ಎಲ್ಲರೂ ಒಂದೇ ನಿಯಮಕ್ಕೆ ಬದ್ಧರಾದವರು!!!
ಇನ್ನು.... ಕೃತಯುಗ ಅಥವಾ ಸತ್ಯಯುಗ- ಆಗಿನ ಸಂವಿಧಾನ ಅಥವಾ ಕಾನೂನು ವ್ಯವಸ್ಥೆಯೇ ಮನು ಸ್ಮೃತಿ! ಅದೇ ಮನುಸ್ಮೃತಿಯನ್ನು ಈಗಲೂ ಕೆಲವರು ಈಗಿನ ವ್ಯವಸ್ತೆಗೆ ಹೋಲಿಸಿ ಹೀಯಾಳಿಸುವುದು- ಸುಡುವುದು ಮಾಡುತ್ತಾರೆ. ಆದರೆ ಮನು ಸ್ಮೃತಿಗೂ ಈಗಿನ ಕಾನೂನು ವ್ಯವಸ್ಥೆಗೂ ಸಂಬಂಧವಿಲ್ಲ!
ಈಗಿನ ಜನ ಇಷ್ಟು ನಿಕೃಷ್ಟವಾಗಿ ಕಾಣುವ ಮನು ಸ್ಮೃತಿಯೇ ಸಂವಿಧಾನವಾಗಿದ್ದ ಆ ಕಾಲವನ್ನು ಸತ್ಯಯುಗ ಎಂದು ಕರೆಯುವುದು ಏಕೆ?
ನಂ-ಬಿ-ಕೆ! ಸಂವಿಧಾನದ ಮೇಲಿನ ನಂಬಿಕೆ! ಅದನ್ನು ಯಾವುದೇ ಸಂಶಯವಿಲ್ಲದೆ ಆಚರಿಸುವುದು!
ಇಲ್ಲಿಯೇ ಮತ್ಸ್ಯಗಂಧಿ ಹೇಳಿದ ವ್ಯಾಸನ ಕಥೆ ಅನ್ವಯವಾಗುವುದು.... ಅವರವರ ಧರ್ಮವನ್ನು ಅರಿತು ಪ್ರವರ್ತಿಸುವುದು ಅನ್ನುವುದು!!
“ನೀನು ಹೇಳ ಹೊರಟಿರುವ ಧರ್ಮದ ಪ್ರಕಾರ ನಮ್ಮದು ವ್ಯಭಿಚಾರವಲ್ಲವೇ ವ್ಯಾಸ!?” ಎಂದಳು ಭಾಮೆ.
ಮುಗುಳುನಕ್ಕೆ! ಹೇಳಿದೆ,
“ಈಗಿನ ಕಾನೂನುವ್ಯವಸ್ತೆ ಅದನ್ನು ಒಪ್ಪಿದೆ!” ಎಂದು ಅವರ ಮುಖವನ್ನು ನೋಡಿ,
“ಧರ್ಮ ಅನ್ನುವುದು ಕೆಲಸ ಮಾಡುವುದು ಇಲ್ಲಿಯೇ! ಪ್ರೌಢಾವಸ್ತೆಯನ್ನು ತಲುಪಿದ ನಂತರ ಅವರವರ ಜೀವನ ಅವರವರದ್ದು! ನಾನು ನಿನ್ನೊಂದಿಗೆ ಸೇರಿದೆ... ಹಾಗೆಂದು ನೀನು ನನ್ನೊಬ್ಬನೊಂದಿಗೇ ಸೇರಬೇಕೆಂದು ಹೇಳುವ ಅಧಿಕಾರ ನನಗಿಲ್ಲ!! ಅದು ನಿನ್ನ ವಿವೇಚನೆಗೆ ಬಿಟ್ಟದ್ದು! ಹಾಗಿದ್ದರೆ ಇಲ್ಲಿ ಯಾವುದು ಧರ್ಮ? ಯಾವುದು ಅಧರ್ಮ?”
ಎಂದು ಅವರ ಮುಖವನ್ನು ನೋಡಿ,
“ನೀನು ನನ್ನಜೊತೆ ಸೇರಿದರೂ 'ನಾನು ಇನ್ನೊಬ್ಬನೊಂದಿಗೂ ಸೇರಿದ್ದೇನೆ' ಎಂದು ನಿಜ ಹೇಳುವುದು ಧರ್ಮ! ನಾನು ನಿನ್ನೊಂದಿಗೆ ಮಾತ್ರ ಸೇರುತ್ತಿರುವುದು- ನೀನೇ ನನಗೆ ಸರ್ವಸ್ವ- ಎಂದು ಹೇಳಿ ಬೇರೊಬ್ಬನೊಂದಿಗೂ ಸೇರುವುದು ಅಧರ್ಮ- ಅದು ವ್ಯಭಿಚಾರ!” ಎಂದೆ.
ಅರ್ಥವಾದಂತೆ ನಕ್ಕರು. ನಂತರ,
“ಅಜ್ಜಿ ಹೇಳಿದ್ದನ್ನು ಮುಂದುವರೆಸು ವ್ಯಾಸ!” ಎಂದಳು ರುಕ್ಮಿಣಿ.
ಕೃತಯುಗದಲ್ಲಿ ಧರ್ಮ!
೧
ಬ್ರಾಹ್ಮಣ ಅನ್ನುವವನ ಧರ್ಮ- ಅಧ್ಯಯನ, ತಪಸ್ಸು, ಬೋಧನ ಧರ್ಮ- ನಿಷ್ಠೆ!
ಇಲ್ಲಿ ನಿಷ್ಠೆ ಅನ್ನುವುದು ಪ್ರತಿಯೊಬ್ಬರಿಗೂ ಅನ್ವಯಿಸುತ್ತದೆ.
ಬ್ರಾಹ್ಮಣನಾದವನು ವೇದಗಳನ್ನು ಅಧ್ಯಯನ ಮಾಡುತ್ತಾನೆ- ಸಂವಿಧಾನವನ್ನು ಅರ್ಥ ಮಾಡಿಕೊಳ್ಳುತ್ತಾನೆ. ದೇವರ ಆರಾಧನೆ, ಪ್ರಕೃತಿ ಪೂಜೆ ಇದನ್ನೆಲ್ಲಾ ಮಾಡುವುದು ಬ್ರಾಹ್ಮಣ! ಬ್ರಾಹ್ಮಣನ ಧರ್ಮಯಾವುದು, ಕ್ಷತ್ರಿಯನ ಧರ್ಮ ಯಾವುದು, ವೈಶ್ಯನ ಧರ್ಮ ಯಾವುದು, ಶೂದ್ರನ ಧರ್ಮ ಯಾವುದು ಎಂದು ತಿಳಿದುಕೊಂಡು ಅದನ್ನು ಅವರವರಿಗೆ ತಿಳಿಸಿ ಹೇಳುವುದು ಅವನ ಕರ್ತವ್ಯ! ಅದರಿಂದ ಆಚೆ ಅವನ ಚಿಂತೆ ಹೋಗಬಾರದು! ಅವನು ಕ್ಷತ್ರಿಯನಂತೆಯೋ ಇತರರಂತೆಯೋ ವರ್ತಿಸಬಾರದು. ಯಾರೂ ತನಗಿಂತ ಕೀಳು ಎಂದು ಅವನು ಹೇಳಬಾರದು. ಪ್ರತಿಯೊಬ್ಬರಿಗೂ ಅವರ ಧರ್ಮವನ್ನು ಹೇಳಿ- ಅವರಿಗೆ ಅವರದ್ದೇ ಆದ ಮರ್ಯದೆ, ವ್ಯಾಲ್ಯೂ ಕೊಡುವುದು ಅವನ ಧರ್ಮ! ಬ್ರಾಹ್ಮಣನಿಗೆ ತಾನೇ ಹೆಚ್ಚು ಎನ್ನುವ ಗರ್ವ ಬಡಿದುಕೊಂಡದ್ದು ಕಾಲಾನು ಕಾಲದಲ್ಲಿ... ಅದನ್ನು ನಂತರ ನೋಡೋಣ!
ಕೃತಯುಗದಲ್ಲಿ ಬ್ರಾಹ್ಮಣ ತನ್ನ ಧರ್ಮವನ್ನು ಮಾತ್ರ ಮಾಡುತ್ತಿದ್ದ!
೨
ಕ್ಷತ್ರಿಯ ಅನ್ನುವವನ ಧರ್ಮ- ಆಡಳಿತ ಧರ್ಮ- ನಿಷ್ಠೆ!
ಶೂದ್ರನಿಂದ ಹಿಡಿದು ಬ್ರಾಹ್ಮಣನವರೆಗೆ ಎಲ್ಲರನ್ನೂ ಪಾಲಿಸುವ ಧರ್ಮ ಕ್ಷತ್ರಿಯನದು... ಈತ ಇತರರ ವಿಷಯದಲ್ಲಿ ತಲೆ ಹಾಕುತ್ತಿರಲಿಲ್ಲ!
ಕೃತ ಯುಗದಲ್ಲಿ ಕ್ಷತ್ರಿಯ ತನ್ನ ಧರ್ಮವನ್ನು ಮಾತ್ರ ಮಾಡುತ್ತಿದ್ದ!
೩
ವೈಶ್ಯ ಅನ್ನುವವನ ಧರ್ಮ- ವ್ಯಾಪಾರ ಧರ್ಮ- ನಿಷ್ಠೆ!
ವೈಶ್ಯನಾದವನು ವ್ಯಾಪಾರ ವಹಿವಾಟುಗಳನ್ನು ಮಾಡಿ ತನ್ನ ಮತ್ತು ದೇಶದ ಸಂಪತ್ತು ವರ್ಧಿಸುವಂತೆ ಮಾಡುತ್ತಿದ್ದ! ಅದರಿಂದ ಆಚೆ ಅವನ ಚಿಂತೆ ಹೋಗುತ್ತಿರಲಿಲ್ಲ!
ಕೃತ ಯುಗದಲ್ಲಿ ವೈಶ್ಯ ತನ್ನ ಧರ್ಮವನ್ನು ಮಾತ್ರ ಮಾಡುತ್ತಿದ್ದ!
೪
ಶೂದ್ರ ಅನ್ನುವವನ ಧರ್ಮ- ಸೇವಾ ಧರ್ಮ- ನಿಷ್ಠೆ!
ಶೂದ್ರನಾದವನು ಇತರರ ಸೇವೆಯನ್ನು ಮಾಡುವುದರಲ್ಲಿ ತನ್ನ ಸಾರ್ಥಕತೆಯನ್ನು ಕಂಡುಕೊಳ್ಳುತ್ತಿದ್ದ! ಅವನಿಗೆ ಅದು ಕೀಳು ಎಂದೇ ಅನ್ನಿಸಿರಲಿಲ್ಲ! ಅವನೂ ಇತರರಿಗೆ ಸಮಾನನಾಗಿದ್ದ!
ಕೃತ ಯುಗದಲ್ಲಿ ಶೂದ್ರ ತನ್ನ ಧರ್ಮವನ್ನು ಮಾತ್ರ ಮಾಡುತ್ತಿದ್ದ!
ಹೀಗೆ ಈ ನಾಲ್ಕು ಸ್ಥಂಬಗಳು ಕೃತಯುಗದಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಯಾರೊಬ್ಬರೂ ತಮ್ಮ ಹೆಜ್ಜೆಯನ್ನು ಅತ್ತಿತ್ತ ಚಲಿಸುತ್ತಿರಲಿಲ್ಲ! ಅವರ ಚಿಂತೆಗಳೂ ಕೂಡ ಆಚೀಚೆ ಹೋಗುತ್ತಿರಲಿಲ್ಲ!
ಈ ನಾಲ್ಕು ಧರ್ಮಗಳೊಂದಿಗೆ ಕಾಮನ್ ಆಗಿದ್ದ ಮತ್ತೊಂದು ಧರ್ಮ.... ಸ್ತ್ರೀ ಧರ್ಮ...!
ಚಿಕ್ಕವಳಿದ್ದಾಗ ಅಪ್ಪ ಅಮ್ಮನ ಲಾಲನೆ ಪೋಷಣೆಯಲ್ಲಿ ಬೆಳೆದು... ಮದುವೆಯಾದಮೇಲೆ ಗಂಡ ಮಕ್ಕಳು- ಅತ್ತೆ ಮಾವಂದಿರನ್ನು ಪೋಷಿಸುವುದು ಅವಳ ಧರ್ಮ!
ಇನ್ನು ಕಾಲಾನು ಕಾಲಕ್ಕೆ ಇದರಲ್ಲಿನ ಬದಲಾವಣೆಯನ್ನು ನೋಡೋಣ!
ತ್ರೇತಾಯುಗದಲ್ಲಿ ಧರ್ಮ!
ಕೇವಲ ರಾಮನ ಕಾಲ ಮಾತ್ರವಲ್ಲ ತ್ರೇತಾಯುಗ! ಅದಕ್ಕಿಂತ ಆಚೆಗೂ ಈಚೆಗೂ ವಿಸ್ತರಿಸಿದೆ!
ಈ ಕಾಲದಲ್ಲಿ ಕೆಲವು ವ್ಯತ್ಯಾಸಗಳಾದವು!
ಕೌಶಿಕನೆನ್ನುವ ಮಾಹಾ ಕ್ಷತ್ರಿಯ ವಿಶ್ವಾಮಿತ್ರನೆನ್ನುವ ಮಹಾ ಬ್ರಾಹ್ಮಣನಾದ!!
ಮಹಾ ಬ್ರಾಹ್ಮಣ ಪೌಲಸ್ತ್ಯನ ಮಕ್ಕಳಾದ ರಾವಣ ಕುಂಭಕರ್ಣ ವಿಭೀಷಣರು ಕ್ಷತ್ರಿಯರಾದರು!
ಅವರವರ ಧರ್ಮವನ್ನು ಮರೆತು ಇತರರ ಧರ್ಮವನ್ನು ಆಚರಿಸ ತೊಡಗಿದರು... ಶೂದ್ರನೂ ತಪಸ್ಸು ಮಾಡುವ ಮನಸ್ಸು ಮಾಡಿದ! ಅದು ಅಂದಿನ ಧರ್ಮಕ್ಕೆ ವಿರುದ್ಧವೆಂದು ರಾಮನಿಂದಲೇ ವಧಿಸಲ್ಪಟ್ಟ!
ಬದಲಾವಣೆಯ ಗಾಳಿ ಆಗಲೇ.... ಸಂವಿಧಾನವನ್ನು ವಿರೋಧಿಸುವ ಮನೋಭಾವ ಬೆಳೆಯಲಾರಂಭಿಸಿದಾಗ ಸಂವಿಧಾನದಲ್ಲಿಯೂ ಬದಲಾವಣೆಗಳಾಗತೊಡಗಿತು...!
ದ್ವಾಪರ ಯುಗದಲ್ಲಿ ಧರ್ಮ!
ದ್ವಾಪರ ಯುಗದಲ್ಲಿ ಚಾತುರ್ವರ್ಣ್ಯ ವ್ಯವಸ್ಥೆಯೇ ಇತ್ತೋ ಇಲ್ಲವೋ ಅನ್ನುವ ಸಂಶಯ ಬರುತ್ತದೆ! ಯಾರು ಏನು ಬೇಕಿದ್ದರೂ ಮಾಡುವ ಅವಸ್ಥೆ!
ಮಹಾ ಧಾರ್ಮಿಕರೆಂದುಕೊಂಡ ಭೀಷ್ಮ ದ್ರೋಣರ ಕಣ್ಣ ಮುಂದೆಯೇ ಅನ್ಯಾಯಗಳಾಗತೊಡಗಿತು! ಯಾವುದನ್ನು ಅಧರ್ಮ ಎಂದು ತೀರುಮಾನಿಸಲಾಯಿತೋ ಆ ಅಧರ್ಮದಪರವಾಗಿ ಯುದ್ಧ ಮಾಡಬೇಕಾಗಿ ಬಂತು!
ಶ್ರೀ ಕೃಷ್ಣನೇ ಧರ್ಮವನ್ನು ಗೆಲ್ಲಿಸುವ ನೆಪದಲ್ಲಿ ಅಧರ್ಮವನ್ನು ಮಾಡಬೇಕಾಯಿತು...!
ಈ ಬದಲಾವಣೆಯ ಪರಂಪರೆ ಕಲಿಯುಗದಲ್ಲಿಯೂ ಮುಂದುವರೆದಿದೆ.
ಇನ್ನು ಕಲಿಯುಗ- ನಾಗರೀಕತೆಗಳ ಇತಿಹಾಸವನ್ನು ನೋಡೋಣ!
ಸಿಂಧೂ- ಹರಪ್ಪಾ- ಮೆಹೆಂಜೋದಾರೋ ನಾಗರೀಕತೆಗಳು ಇತ್ತಂತೆ! ಜನ ಮೂರ್ತಿ ಪೂಜಕರು ಅಲಂಕಾರಪ್ರಿಯರೂ ಆಗಿದ್ದರು. ವರ್ಣಗಳನ್ನು ಗಮನಿಸದೆ ಕೃಷಿ ಕಸುಬುಗಳನ್ನು ಮಾಡಿ ಹೇಗೋ ಬದುಕುತ್ತಿದ್ದರು. ನಂತರ ಗುಂಪಿಗೆ ಒಬ್ಬ ನಾಯಕ ಬಂದ. ಗುಂಪುಗಳನ್ನು ತನ್ನ ಅಧೀನಕ್ಕೆ ತರಲು ಪ್ರಯತ್ನಿಸಿದ. ಭೂಮಿ ರಾಜ್ಯವಾಯಿತು- ಸಾಮ್ರಾಜ್ಯವಾಯಿತು. ಪುನಃ ಆಚಾರಗಳು ನಿಯಮಗಳು ರೂಪುಗೊಳ್ಳತೊಡಗಿದವು!
ಹಲವಾರು ಸಾಮ್ರಾಜ್ಯಗಳು ಆಗಿ ಹೋದವು, ಮೌರ್ಯ ಸಾಮ್ರಾಜ್ಯ, ಗುಪ್ತ ಸಾಮ್ರಾಜ್ಯ... ಇನ್ನೂ ಹಲವು ಹಲವು... ವಿಜಯನಗರ ಪಾಂಡ್ಯ ಯದು!!
ಗಮನವಿಟ್ಟು ಕೇಳಿ....!
ಎಷ್ಟೇ ರಾಜರು ಬಂದರೂ ಜನಪದಗಳಾಗಿ ವಿಂಗಡಿಸಲ್ಪಟ್ಟರೂ ಸಾಮಾನ್ಯ ಜನಜೀವನ ಅನ್ನುವುದೊಂದಿತ್ತು! ಅವರೆಲ್ಲರೂ ಒಂದು ನಿಯಮಕ್ಕೆ ಅಧೀನರಾಗಿದ್ದರು! ಆದರೂ... ಈಗ ಇರುವಂತೆಯೇ ಆಗಲೂ ಪುರೋಗಮನ ವಾದಿಗಳಿದ್ದರು! ಯಾಕೆ ಹಾಗೆ ಎಂದು ಪ್ರಶ್ನಿಸುವವರಿದ್ದರು! ಸಂಶಯಾಲುಗಳಿದ್ದರು!
ಇದೇ ಯಾಕೆ ನಿಯಮವಾಗಬೇಕು?
ಬ್ರಾಹ್ಮಣ ತನ್ನ ಧರ್ಮವನ್ನು ಮರೆತ! ಮರೆತ ಅನ್ನುವುದಕ್ಕಿಂತ ತಾನೇ ಎಲ್ಲವೂ ತಾನೇ ದೇವರು ಅನ್ನುವ ಮಟ್ಟಕ್ಕೆ ಹೋದ. ಶೂದ್ರ ಕೀಳರಿಮೆಯಿಂದ ಕೀಳರಿಮೆಗೆ ಇಳಿದು ಹೋದ!
ಶಂಕರ, ರಾಮಾನುಜ, ಚಾಣಕ್ಯ... ಮುಂತಾದವರು ಬಂದು ಪುನಃ ಅವರವರ ಧರ್ಮವನ್ನು ತಿಳಿಸಿಕೊಡಲು ಶ್ರಮಿಸಿದರೂ... ಯಾರೂ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ!
ಭರತಖಂಡದ ಒಳಗೆ ಎಷ್ಟೇ ಮತಗಳು ಹುಟ್ಟಿದರೂ ಎಷ್ಟೇ ಪಂಗಡಗಳಾದರೂ ಅದು ಸನಾತನಧರ್ಮದ ಕೂಸು! ಭರತಖಂಡದಲ್ಲಿ ಹುಟ್ಟಿದ ಯಾರೇ ಆದರೂ ಭಾರತೀಯನೇ! ಸನಾತನ ನೀತಿ ನಿಯಮಗಳಿಗೆ ಬದ್ಧನಾದವನೇ... ಜನ ಅದರಲ್ಲಿ ಅಪವಾದಗಳನ್ನು ಹುಡುಕಿದರು! ಅಷ್ಟೇ ಹೊರತು ಬೇರೆಯಲ್ಲ!! ಆ ಅಪವಾದಗಳಲ್ಲಿ ಮುಖ್ಯವಾದದ್ದು....
ಮಹಾವೀರ! ತಪಸ್ಸು ಮಾಡಿ ಜ್ಞಾನವನ್ನು ಪಡೆದು ಜಿನ ಅಥವಾ ಜೈನನಾದ! ಅವನ ತತ್ವಗಳನ್ನ ಜೈನ ಮತವೆಂದು ಕೀರ್ತಿಸಲಾಯಿತು!
ಸನಾತನ ಧರ್ಮದಲ್ಲಿ ಹುಟ್ಟಿ ಬೆಳೆದ ಸಿದ್ಧಾರ್ಥ ಬುದ್ಧನಾದ! ಅವನು ತನ್ನ ಅನುಭವಗಳಿಂದ ಕ್ರೋಢೀಕರಿಸಿದ ತತ್ವಗಳನ್ನು ಸುಲಭ ಭಾಷೆಯಲ್ಲಿ ಹೇಳಿದ! ಅದು ಬುದ್ಧ ತತ್ವಗಳಾಯಿತು- ಅವನದೇ ಮತವಾಯಿತು! ಅವನನ್ನು ಸನಾತನ ಧರ್ಮದಿಂದ ಬೇರ್ಪಡಿಸಲು ಸಾಧ್ಯವೇ?!!
ಇದೆಲ್ಲವೂ ಭರತಖಂಡದ ಒಳಗೆ ಸಂಭವಿಸಿದ್ದು! ಕಾಲಕ್ರಮೇಣ ಅದನ್ನು ಅರಿತ ಜನ ಕೆಲವರು ತಮ್ಮ ಸಂಸ್ಕಾರಗಳನ್ನು ಮರಳಿ ಪಡೆದರು... ಕೆಲವರು ಹೊಯ್ದಾಟದಲ್ಲಿದ್ದರು... ಕೆಲವರು ತಟಸ್ಥರಾದರು... ಕೆಲವರು ಎದುರು ವಾದ ಮಾಡಿದರು....!
ಈ ಸಮಯದಲ್ಲಿಯೇ... ಭರತಖಂಡದ್ದಲ್ಲದ ಸಂಸ್ಕಾರ ಭರತಖಂಡವನ್ನು ಪ್ರವೇಶಿಸಿತು!
“ಎಲ್ಲಿಗೆ ಹೋಗುತ್ತಿದ್ದೀಯ ಅನ್ನುವುದು ಅರ್ಥವಾಗುತ್ತಿದೆ ವ್ಯಾಸ! ಅದು ತಪ್ಪಲ್ಲವೇ?”
“ಎರಡು ಮೂರು ನ್ಯಾಯವನ್ನು ಹೇಳುತ್ತೇನೆ ಕೇಳಿ! ಒಂದು- ಇದು ನನ್ನ ಮನೆ! ಇದನ್ನು ನಾನು ಬಾಡಿಗೆಗೆ ಕೊಡುತ್ತೇನೆ! ಸ್ವಲ್ಪ ದಿನದ ನಂತರ ಬಾಡಿಗೆದಾರ ಇದು ಅವನ ಸ್ವಂತ ಮನೆ ಅಂದರೆ ಒಪ್ಪಿಕೊಳ್ಳಬಹುದೆ? ಎರಡು- ನನ್ನದೇ ಆದ ನಂಬಿಕೆಗಳಲ್ಲಿರುವಾಗ- ಅದರಲ್ಲಿ ಅಲ್ಪ ಸ್ವಲ್ಪ ಹುಳುಕುಗಳಿರಬಹುದು ಆದರೂ- ಮತ್ತೊಬ್ಬ ಬಂದು ನಿನ್ನ ನಂಬಿಕೆಗಳು ಕೀಳು! ನಾನೇ ಶ್ರೇಷ್ಟ ಎಂದರೆ ಒಪ್ಪಬಹುದೇ? ಮೂರು- ನನ್ನ ಅಪ್ಪ ಯಾವುದೋ ಒಂದು ಸಂಧರ್ಭದಲ್ಲಿ ಅರಿಯದೆ ಏನೋ ತಪ್ಪು ಮಾಡಿದರೆಂದು ಎಲ್ಲರ ಎದುರು ಅವರನ್ನು ಹೀಯಾಳಿಸಲೇ?- ನನ್ನ ಸ್ವಂತ ಧರ್ಮವನ್ನು ಬಿಟ್ಟುಕೊಡಲೇ?”
ಎಂದು ಅವರ ಮುಖವನ್ನು ನೊಡಿ,
“ಅರ್ಥವಾಯಿತು ಅಂದುಕೊಳ್ಳುತ್ತೇನೆ!” ಎಂದೆ.
ಮುಗುಳುನಕ್ಕು,
“ಮುಂದುವರೆಸು!” ಎಂದರು.
ಕಾಲವನ್ನು ತೆಗೆದುಕೊಂಡರೆ- ಐದು ಆರು ಸಾವಿರ ವರ್ಷಗಳನ್ನೂ ಮೀರಿ ಕಾಲಾತೀತವಾಗಿ ಹರಡಿರುವ ಭರತಖಂಡದ ಧರ್ಮ ಯಾವೊಬ್ಬ ವ್ಯಕ್ತಿಯಿಂದಾಗಲೀ ಯಾವೊಂದು ತತ್ವದಿಂದಾಗಲೀ ರೂಪುಗೊಂಡುದ್ದಲ್ಲ! ಭರತಖಂಡದ ಸಂಸ್ಕಾರ ರೂಪುಗೊಂಡಿದ್ದು ಹೇಗೇ ಎಂದೇ ಯಾರಿಗೂ ತಿಳಿಯದು! ಪರಂಪರೆ ಪರಂಪರೆಯಾಗಿ ಹರಿದು ಬಂದಿರುವ ಸಂಸ್ಕಾರ ಅದು!
ಒಂದು ಉದಾಹರಣೆ ಹೇಳುತ್ತೇನೆ ಕೇಳಿ.... ಯಾರೋ ಗೆಲಿಲಿಯೋ ಅಂತೆ! ಭೂಮಿ ದುಂಡಗಿದೆ ಎಂದು ಕಂಡುಹಿಡಿದ ಅನ್ನುತ್ತಾರೆ! ಪುರಾಣಗಳಲ್ಲಿ ವರಾಹ ಅನ್ನುವ ದೇವರ ಅವತಾರ ಪಾತಾಳದಿಂದ ದುಂಡಗಿನ ಭೂಮಿದೇವಿಯನ್ನು ತನ್ನ ಕೊಂಬಿನಲ್ಲಿ ಎತ್ತಿಕೊಂಡು ಬಂದು ಪುನಃ ಸ್ಥಾಪಿಸಿದ ಎಂದು ವಿವರಿಸಿದೆ!
ಅಂದರೆ ನಾವು ಭಾರತೀಯರಿಗೆ ಭೂಗಿ ದುಂಡಗಿಲ್ಲ ಅನ್ನುವ ಕಲ್ಪನೆಯೇ ಇರಲಿಲ್ಲ!!
ಇರಲಿ.. ವಿಷಯಕ್ಕೆ ಬರೋಣ... ಅಲ್ಲಿ ಇಲ್ಲಿ ಕೆಲವು ನಂಬಿಕೆಗಳು ಅಪನಂಬಿಕೆಗಳು ಇದ್ದರೂ ಭರತಖಂಡವನ್ನು ಒಟ್ಟುಗೂಡಿಸುವ ಒಂದು ವ್ಯವಸ್ಥೆ ಇತ್ತು! ಆ ವ್ಯವಸ್ಥೆಗೆ ಮೊದಲ ಪೆಟ್ಟು ಬಿದ್ದದ್ದು ಕ್ರಿಸ್ತಶಕ ಸಾವಿರದಲ್ಲಿ! ಆ ಪೆಟ್ಟಿನ ಹೆಸರು ಮಹಮ್ಮದ್ ಘಸ್ನಿ!
ಎಂದು ಹೇಳಿ ನಿಲ್ಲಿಸಿದೆ. ಅವರ ಮುಖವನ್ನು ನೊಡಿದೆ. ಯಾಕೆ ನಿಲ್ಲಿಸಿದೆ ಅನ್ನುವಂತೆ ನೋಡಿದರು.
“ಮೊದಲು ಈಗಿನ ಮನುಷ್ಯನ ಕೆಲವೊಂದು ಮಾನಸಿಕ ಸ್ತಿತಿಗಳಬಗ್ಗೆ ಹೇಳಬೇಕು- ನನಗಾದ ಅನುಭವಗಳು! ನನ್ನ ಸಮರ್ಥನೆ ಎಂದು ಬೇಕಿದ್ದರೂ ಹೇಳಬಹುದು!” ಎಂದೆ.
ಮುಗುಳುನಕ್ಕರು. ಅವರು ನನಗೊಂದು ಅದ್ಭುತ!
“ಹೇಳು...!” ಎಂದರು.
“ಮುಂಚೆ ಇದ್ದ ಚಾತುರ್ವರ್ಣ್ಯಗಳನ್ನು ಈಗ ಎರಡೆರಡು ವಿಧಗಳಾಗಿ ವಿಂಗಡಿಸಬಹದು!”
“ನಿನ್ನ ಅನುಭವವನ್ನು ಹೇಳುತ್ತೇನೆ ಅಂದೆ?” ಎಂದಳು ಭಾಮೆ.
“ಅದಕ್ಕೆ ಪೀಠಿಕೆ!”
“ಸರಿ ಹೇಳು!”
“ಬುದ್ಧಿವಂತ-ದಡ್ಡ! ಸಮರ್ಥ-ಅಸಮರ್ಥ! ಸಾಹಸಿ-ಹೇಡಿ! ಕೊನೆಯದಾಗಿ-ಅತಿಮುಖ್ಯವಾಗಿ, ಕೊಡುವವನು-ಪಡೆದುಕೊಳ್ಳುವವನು! ನಾನು ಕೊಡುವವನಾಗಬೇಕೋ ಪಡೆದುಕೊಳ್ಳುವವನಾಗಬೇಕೋ ತೀರ್ಮಾನ ನನ್ನದು!”
ಇಬ್ಬರೂ ನನ್ನ ಮುಖವನ್ನು ನೋಡಿದರು. ಅವರ ಕಣ್ಣಿನಲ್ಲಿ ಸಂಶಯವಿತ್ತು. ಏನು ಅನ್ನುವಂತೆ ಹುಬ್ಬು ಕುಣಿಸಿದೆ.
“ನೀನು ಶೂ ಪಾಲಿಶ್ ಮಾಡುತ್ತಿದ್ದೆಯಾ?” ಎಂದರು.
ನಕ್ಕೆ! ಹೌದು ಅನ್ನುವಂತೆ ತಲೆಯಾಡಿಸಿದೆ. ಆ ಅವಸ್ಥೆಯಿಂದ ಈಗಿನ ಅವಸ್ಥೆಗೆ ತಲುಪಿದ್ದು ನನ್ನನ್ನು ನಾನು ಅರಿತುಕೊಂಡು ಮೇಲೆ ಹೇಳಿರುವ ವಿಂಗಡಣೆಗಳಲ್ಲಿ ಮೊದಲನೆಯ ಲಕ್ಷಣಗಳನ್ನು ಅಳವಡಿಸಿಕೊಂಡಿದ್ದುದ್ದರಿಂದಾಗಿ!
“ಮುಂದುವರೆಸು!” ಎಂದರು.
“ಈ ಮೇಲು ಕೀಳು, ಉಚ್ಛ ನೀಚ ಭಾವನೆಗಳು ಹೇಗೆ ಮನುಷ್ಯನಲ್ಲಿ ಪ್ರವೇಶಿಸಿತೋ ನನಗೆ ತಿಳಿಯದು! ಕೀಳರಿಮೆ ಮೇಲರಿಮೆಗಳೂ ಕೂಡ!”
“ಎರಡಕ್ಕೂ ಏನು ವ್ಯತ್ಯಾಸ?” ಎಂದಳು ರುಕ್ಮಿಣಿ.
“ಮೇಲು ಕೀಳು ಅಥವಾ ಉಚ್ಚ ನೀಚ ಅಂದರೆ ಮತ್ತೊಬ್ಬರ ಬಗ್ಗೆ ನಾವು ಅಂದುಕೊಳ್ಳುವುದು! ಕೀಳರಿಮೆ ಮೇಲರಿಮೆ ಅಂದರೆ ತಮಗೆ ತಾವೇ ಅಂದುಕೊಳ್ಳುವುದು!”
“ಅರ್ಥವಾಯಿತು... ಮುಂದುವರೆಸು!”
“ನನಗೆ ನಾನೇ ರಾಜ! ನನಗೆ ನಾನೇ ಗುಲಾಮ!”
“ಇಲ್ಲ! ನೀನು ನಮಗೆ ಗುಲಾಮ! ನಾವು ನಿನಗೆ ಗುಲಾಮರು!” ನಕ್ಕು,
“ಅದು ಓಕೆ! ಅದೇ ಸಮಾನತೆ!” ಎಂದು ಹೇಳಿ ನಿಲ್ಲಿಸಿದೆ.
“ಮುಂದುವರೆಸು... ಯಾಕೆ ನಿಲ್ಲಿಸಿದೆ?”
ನಾನು ಬಗ್ಗಿ ನನ್ನ ದೇಹವನ್ನು ನೋಡಿಕೊಂಡೆ!
“ಓ, ನಾವೂ ಟಾಪ್ಲೆಸ್ಆಗಿ ಸಮಾನತೆಯನ್ನು ಸಾರಬೇಕೇನೋ?!” ಎಂದುಹೇಳಿ ಮೇಲಿನ ವಸ್ತ್ರವನ್ನು ತೆಗೆದರು.
ನಾನು ಮುಂದುವರೆಸಿದೆ- ಮತ್ಸ್ಯಗಂಧಿ ತೀರಿಕೊಂಡಮೇಲೆ ಅಲೆಮಾರಿಯಾಗಿ ಅಲೆಯುತ್ತಿದ್ದಾಗ ಸುಮಾರು ವಿಷಯಗಳು ಅರಿವಾದವು! ಆ ಅನುಭವಗಳನ್ನು ಉಪಮೆಯ ರೀತಿಯಲ್ಲಿ ಹೇಳಿದರೆ....,
ನಾನೂ ನನ್ನ ಗೆಳೆಯನೂ ಮೀನು ಹಿಡಿಯುತ್ತಿದ್ದೆವು! ಸ್ವಲ್ಪ ಸಮಯ ನೋಡಿ ಗೆಳೆಯ ಎದ್ದು ಹೋದ! “ಯಾಕೋ... ಒಂದು ಮೀನೂ ಸಿಕ್ಕಿಲ್ಲ ಆದರೂ ಹೋಗುತ್ತಿದ್ದೀಯ?” ಎಂದೆ.
“ನೀನು ಹಿಡಿಯುತ್ತೀಯಲ್ಲ? ಅದು ನನ್ನ ಬಾಯಿಗೆ ಬರುತ್ತದೆ!” ಎಂದ.
ಸಮಾನತೆಗಾಗಿ ಹೋರಾಟ ಮಾಡುವ ಹೋರಾಟಗಾರ ಅವನು!
ಮುಂದೊಮ್ಮೆ ಮತ್ತೊಬ್ಬ ಗೆಳೆಯನಿಗೆ,
“ಬಾರೋ... ಚೆನ್ನಾಗಿ ಓದಿ ಶೇಖಡಾ ತೊಂಬತ್ತಕ್ಕಿಂತ ಹೆಚ್ಚು ಅಂಕ ಪಡೆಯೋಣ- ಮುಂದೆ ಒಳ್ಳೆ ಉದ್ಯೋಗಕ್ಕೆ ಬೇಕಾಗುತ್ತದೆ!” ಎಂದೆ.
“ನನಗೆ ಶೇಖಡಾ ಮೂವತ್ತೈದು ಸಾಕು!” ಎಂದ.
ನಮ್ಮ ಬೆಳವಣಿಗೆ ನಮ್ಮಿಂದಲೇ ಪ್ರಾರಂಭವಾಗಬೇಕು! ನಮ್ಮ ಅದಃಪತನಕ್ಕೆ ಬೇರೆ ಯಾರೋ ಕಾರಣರೆಂದು ಹೇಳುವುದು ಸರಿಯಲ್ಲ!
ಅಯ್ಯೋ ಅವರು ನಮ್ಮನ್ನು ತುಳಿಯುತ್ತಾರೆ ಅಂದರೆ- ತುಳಿಯಲು ಅವರು ಯಾರು? ಅವಕಾಶಗಳು ಎಲ್ಲರಿಗು ಒಂದೇ ಇರುವಾಗ ಅದನ್ನು ಬಳಸಿಕೊಂಡು ಯಾರ ಹಂಗೂ ಇಲ್ಲದೆ ಬೆಳೆಯಬೇಕು!
ಸರಿ.. ಇನ್ನೊಂದು ಅನುಭವವನ್ನು ಹೇಳುತ್ತೇನೆ....
ಅಕಸ್ಮಾತ್ ನಾನೊಬ್ಬನನ್ನು ಮುಟ್ಟಿದೆ!
“ಅಯ್ಯೋ ಮೈಲಿಗೆ ಮೈಲಿಗೆ ಪುನಃ ಸ್ನಾನ ಮಾಡಬೇಕಲ್ಲಪ್ಪಾ!” ಎಂದ.
ನಾನೂ ಪಕ್ಕಕ್ಕೆ ಉಗಿದು,
“ಥೂ... ಇನ್ನೂ ಎಷ್ಟು ವರ್ಷ ತಪಸ್ಸು ಮಾಡಲಿ ಈ ಕಳಂಕ ಹೋಗಲು!” ಎಂದೆ.
ನನಗಿಂತ ಯಾರೂ ಕೀಳಲ್ಲ, ನನಗಿಂತ ಯಾರೂ ಮೇಲಲ್ಲ! ಅವನಿಗೆ ನಾನು ಕೀಳಾದರೆ ನನಗೂ ಅವನು ಕೀಳೆ! ಇನ್ನೊಬ್ಬ ನನ್ನನ್ನು ಮೇಲು ಎಂದುಕೊಂಡರೆ ಅವನು ನನಗಿಂತಲೂ ಮೇಲು!
ತುಳಿಸಿಕೊಳ್ಳುವವರು ಇರುವವರೆಗೂ ತುಳಿಯುವವರೂ ಇರುತ್ತಾರೆ. ಪ್ರಪಂಚದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ನಮ್ಮ ಬೆಳವಣಿಗೆ ನಮ್ಮ ಕೈಯ್ಯಲ್ಲೇ ಇದೆ!
ಒಂದು ತಿಂಗಳ ನಂತರ ನೂರು ಮೀಟರ್ ಓಟದ ಪಂದ್ಯ ನಡೆಯಲಿದೆ. ಯಾರು ಬೇಕಿದ್ದರೂ ಭಾಗವಹಿಸಬಹದು! ಬಹುಮಾನ ಒಂದು ಲಕ್ಷ!
ಹೇಗೆ? ಒಬ್ಬ ಮೂವತ್ತೈದು ಮೀಟರ್ ಓಡಿದರೆ ಸಾಕು, ಇನ್ನೊಬ್ಬ ಅರವತ್ತು ಮೀಟರ್ ಓಡಿದರೆ ಸಾಕು ಅನ್ನಬಹುದೇ! ಒಂದು ತಿಂಗಳು ಪ್ರತಿಯೊಬ್ಬರೂ ತಾಲೀಮು ನಡೆಸಿ ಪೂರ್ತಿಯಾಗಿ ಓಡಬೇಕು!
“ಉಪದೇಶ ಸಾಕು! ಬೇರೆ ಅನುಭವವಿದ್ದರೆ ಹೇಳು!” ಎಂದರು.
ಮೂತಿ ತಿರುಗಿಸಿ,
“ಇನ್ನು ಒಂದೇ ಒಂದು ಅನುಭವವಿದೆ! ನಂತರ ಹಿಸ್ಟರಿ ಅಥವಾ ಕಥೆ ಮುಂದುವರೆಸೋಣ!”
ಇಬ್ಬರೂ ಆಸಕ್ತಿಯಿಂದ ನೋಡಿದರು. ರುಕ್ಮಿಣಿ ಎಟುಕಿಸಿ ತುಟಿಗೊಂದು ಮುತ್ತು ಕೊಟ್ಟಳು... ಭಾಮೆ ಸುಮ್ಮನೆ ಇರುವವಳೇ? ವರ್ಗ ಹೆಣ್ಣಲ್ಲವೇ.... ಅವಳೂ ಕೊಟ್ಟಳು!
“ಹೆಣ್ಣು ಅಂದರೆ ತಾತ್ಸರ ಇರುವಂತಿದೆ!” ಎಂದರು. ನಕ್ಕು,
ಅದು ತಾತ್ಸರವಲ್ಲ! ಗಂಡು ಹೆಣ್ಣಿಗೆ ಕೆಲವೊಂದು ಪ್ರತ್ಯೇಕ ಗುಣಲಕ್ಷಣಗಳಿದೆ! ಅದು ಪರ್ಮನೆಂಟ್! ಅದನ್ನು ಆಕ್ಷೆಪ್ಟ್ ಮಾಡಲೇ ಬೇಕು... ಹೆಣ್ಣಿಗಾದರೂ ಗಂಡಿಗಾದರು ಕೆಲವೊಂದು ಲಿಮಿಟೇಷನ್ಸ್ ಇದೆ. ಮೂರು ಉದಾಹರಣೆಗಳನ್ನು ಕೊಡುತ್ತೇನೆ.... ನೆನಪಿರಲಿ- ಇದು ಉದಾಹರಣೆ ಮಾತ್ರ! ಹೆಣ್ಣು ಗಂಡಿನ ವ್ಯತ್ಯಾಸ ಬಂದಾಗ ಈ ಉದಾಹರಣೆಯನ್ನು ನೆನೆದುಕೊಂಡರೆ ಸಾಕು!!
ಒಂದು- ಮಾನವ ಗುಹೆಗಳಲ್ಲಿ ವಾಸಿಸುತ್ತಿದ್ದ ಸಮಯ! ಆಗ ಗಂಡು ಬೇಟೆಗೆ ಹೋಗುತ್ತಿದ್ದ! ಹೆಣ್ಣು ಮಕ್ಕಳನ್ನು ಜೋಪಾನ ಮಾಡುತ್ತಾ ಮನೆಗೆ ಕಾವಲು ಇರುತ್ತಿದ್ದಳು! ಬೇಟೆಯಾಡುವ ಗಂಡಿನ ಗಮನ ಬೇಟೆಯಾಡುತ್ತಿದ್ದ ಪ್ರಾಣಿಯಮೇಲೆ! ಆಯುಧವನ್ನು ಬೀಸುವಾಗ ಆ ಪ್ರಾಣಿಮಾತ್ರ ಕಾಣಬೇಕು! ಕಾವಲು ಕಾಯುವ ಹೆಣ್ಣಿನ ಗಮನವಾದರೋ... ಯಾವ ಕಡೆಯಿಂದ ಯಾವ ಪ್ರಾಣಿ ಬರುತ್ತಿದೆಯೋ... ಯಾರು ಆಕ್ರಮಿಸುತ್ತಾರೆಯೋ... ಇತ್ಯಾದಿಯಿಂದಾಗಿ ಸುತ್ತಲೂ ನೋಡುತ್ತಿರುತ್ತಾಳೆ. ಆದ್ಧರಿಂದಲೇ ಈಗಲೂ ಗಂಡಿಗೆ ಒಂದೇ ಸಮಯದಲ್ಲಿ ಹಲವುಕಡೆ ಗಮನಿಸಲು ಸಾಧ್ಯವಿಲ್ಲ! ಹೆಣ್ಣು ಕೇವಲ ಕಣ್ಣಿನಿಂದಲೇ ಸುತ್ತ ಮುತ್ತಲ ಪರಿಸರವನ್ನು ನಿರೀಕ್ಷಿಸಬಲ್ಲಳು! ಉದಾಹರಣೆಗೆ, ಅಲ್ಲಿ ನಿಂತಿರುವ ಹುಡುಗಿಯನ್ನು ನೋಡು ಎಂದು ಗಂಡಿಗೆ ಹೇಳಿದರೆ ಗಂಡು ಪೂರ್ತಿಯಾಗಿ ಮುಖ ತಿರುಗಿಸಿ ನೋಡುತ್ತಾನೆ. ಅಲ್ಲಿ ನಿಂತಿರುವ ಹುಡುಗನನ್ನು ನೋಡು ಎಂದು ಹೆಣ್ಣಿಗೆ ಹೇಳಿದರೆ ಅವಳು ಕೇವಲ ಕಣ್ಣುಗಳಿಂದಲೇ ತಿಳಿದುಕೊಳ್ಳಬಲ್ಲಳು!
ಎರಡು- ಎಂದು ಹೇಳಿ ಅವರಿಬ್ಬರ ಮುಖವನ್ನು ನೋಡಿದೆ. ಏನೋ ಅರಿವಾದಂತೆ ನಕ್ಕರು,
“ಪೋಲೀನ? ಹೇಳು ಪರವಾಗಿಲ್ಲ!” ಎಂದರು.
ಹೆಣ್ಣನ್ನು ಬಗ್ಗಿಸಿ ನಿಲ್ಲಿಸಿ ಸೆಕ್ಸ್ ಮಾಡಲು ಗಂಡಿನಿಂದ ಮಾತ್ರ ಸಾಧ್ಯ! ಹಾಗೆಯೇ ಗಂಡಿನ ಮೇಲೆ ಕುಳಿತು ಸೆಕ್ಸ್ ಮಾಡಲು ಹೆಣ್ಣಿನಿಂದ ಮಾತ್ರ ಸಾಧ್ಯ!
ಅವರ ಮುಖ ಕೆಂಪಾಯಿತು! ಆದರೂ,
“ಮೂರನೆಯದನ್ನೂ ಮುಗಿಸಿಬಿಡು!” ಎಂದರು.
“ಗರ್ಭವನ್ನು ಧರಿಸಿ ಮಕ್ಕಳನ್ನು ಹೆರಲು ಹೆಣ್ಣಿನಿಂದ ಮಾತ್ರ ಸಾಧ್ಯ!” ಎಂದೆ.
“ಸೋ... ಇಲ್ಲಿ ಹೋಲಿಕೆಯಿಲ್ಲ! ಗಂಡಿಗಿಂತ ಹೆಣ್ಣೇ ಶ್ರೇಷ್ಟ ಅನ್ನುವುದು ಅಲಿಖಿತ ಸತ್ಯ!” ಎಂದರು.
ಇಬ್ಬರ ಹಣೆಗೂ ಮುತ್ತೊಂದನ್ನು ಕೊಟ್ಟು ಬಾಗಿ ಅವರ ಪಾದವನ್ನು ಮುಟ್ಟಿ- ಮುಂದುವರೆಸಿದೆ...
ಒಂದು ದಿನ ಕೆಲವರು ಹುಡುಗರೊಂದಿಗೆ ಕ್ರಿಕೆಟ್ ಆಡುತ್ತಿದ್ದೆ. ಎರಡು ಪಂಗಡಗಳಿದ್ದವು. ಗಮನಿಸಿ ಎರಡು ಟೀಂ ಅಲ್ಲ! ಎರಡು ಪಂಗಡ!
ಆಟದ ಮಧ್ಯೆ ಮೊದಲ ಪಂಗಡದ ಹುಡುಗನೊಬ್ಬ ಸಿಟ್ಟಿನಿಂದ ಬ್ಯಾಟ್ ಮುರಿದು ಹಾಕಿದ! ಎರಡೂ ಪಂಗಡದ ಹುಡುಗರು ಸೇರಿ ಅವನನ್ನು ಹೊಡದರು! ಮುಂದೊಂದು ದಿನ ಎರಡನೆಯ ಪಂಗಡದ ಹುಡುಗ ಬ್ಯಾಟ್ ಮುರಿದ! ಮೊದಲ ಪಂಗಡದವರು ಹೊಡೆಯಲು ಹೋದಾಗ ಎರಡನೆಯ ಪಂಗಡದವರು ಅವನನ್ನು ಸುತ್ತುಗಟ್ಟಿದರು- ಕಾಪಾಡುವವರಂತೆ!!
“ಇದ್ಯಾಕ್ರೋ... ಅವತ್ತು ನಮ್ಮ ಪಂಗಡದವನನ್ನು ಹೊಡೆಯುವಾಗ ಎಲ್ಲಾ ಸೇರಿದ್ರಿ? ಇವತ್ತೇನಾಯ್ತು?”
“ಅದು ನಿಮ್ಮ ವಿಷಯ!”
ಅಷ್ಟೇ.. ನನ್ನ ಮತ್ತೊಂದು ಅನುಭವ! ಆ ಎರಡನೆಯ ಪಂಗಡದ ಆಚಾರ ವಿಚಾರಗಳು ಭರತಖಂಡದ್ದಲ್ಲ! ಹೊರಗಿನಿಂದ ಬಂದದ್ದು! ಅದು ಯಾವುದೆಂದು ಮುಂದೆ ತಿಳಿಯುತ್ತದೆ!
ಮಹಮ್ಮದ್ ಘಸ್ನಿಯ ನಂತರ ಮಹಮ್ಮದ್ ಘೋರಿ ಭರತಖಂಡವನ್ನು ಪ್ರವೇಶಿಸಿದ!
ಮೇಲು ಕೀಳು ಅನ್ನುವ ಭಾವ ಶುರುವಾಗಿದ್ದೇ ಆಗಿನಿಂದಿರಬೇಕು! ಪಾಪ! ಅವರನ್ನು ಹೇಳಿ ಪ್ರಯೋಜನವಿಲ್ಲ! ಅವರ ನಂಬಿಕೆ- ಆ ನಂಬಿಕೆಗೆ ಮೂಲವಾದ ಗ್ರಂಥ ಅದಕ್ಕೆ ಕಾರಣ- ಏಕ ವ್ಯಕ್ತೀಕೃತ ಗ್ರಂಥ! ಆದರೂ ಅವರ ಒಗ್ಗಟ್ಟನ್ನು ಮೆಚ್ಚಲೇಬೇಕು!
ಭರತಖಂಡದ ಸಂಸ್ಕೃತಿ ಅಲ್ಲೋಲ ಕಲ್ಲೋಲವಾದ ಮುಂದಿನ ಇತಿಹಾಸವನ್ನು ನಾನು ಹೇಳಬೇಕಾಗಿಲ್ಲ! ಸಂಪೂರ್ಣ ಭಾರತದ ಇತಿಹಾಸವೇ ಅಷ್ಟೇಯೇ ಏನೋ ಅನ್ನುವಷ್ಟರ ಮಟ್ಟಿಗೆ ಅದು ವರ್ಣಿತವಾಗಿದೆ!
ಆ ಇತಿಹಾಸದ- ಪಂಗಡದ ಮೂಲ ಕ್ರಿಸ್ತಶಕ ಏಳನೆಯ ಶತಮಾನ!
ಎಷ್ಟೇ ಕಡಿಮೆಯೆಂದರೂ ಐದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಹೋಗುವ ಭರತಖಂಡದ ಇತಿಹಾಸಕ್ಕೆ ಹೋಲಿಸಿದರೆ ಇದರ ಇತಿಹಾಸ.... ಮೂವತ್ತು ವರ್ಷದ ಹೆಣ್ಣಿನ ಮೊಲೆಹಾಲು ಕುಡಿಯುತ್ತಿರುವ ಮೂರು ತಿಂಗಳು ಮಗುವಿನಷ್ಟೇ ಚಿಕ್ದದು!
“ಒಂದು ಉಪ ಕಥೆಯನ್ನು ಹೇಳುತ್ತೇನೆ! ಗಮನವಿಟ್ಟು ಕೇಳಿ!” ಎಂದೆ.
“ಹ್ಹೊ! ಭಯಂಕರ ಶೆಖೆ!” ಎಂದರು.
“ಸರಿ ಸರಿ ಬೇಗ!” ಎಂದೆ.
ಇಬ್ಬರೂ ಉಳಿದ ತಮ್ಮ ಬಟ್ಟೆಗಳನ್ನು ಕಳಚಿದರು! ನನ್ನ ಮುಖ ನೋಡಿದರು! ತುಟಿಯುಬ್ಬಿಸಿ ಹೆಗಲು ಕುಣಿಸಿದೆ! ಅವರೇ ನನ್ನ ಬಟ್ಟೆಯನ್ನು ಎಳೆದು- ಹರಿದು- ಆಚೆಗೆ ಹಾಕಿದರು! ನಂತರ ನನ್ನ ತುಟಿ ಒದ್ದೆ ಮಾಡುವವರಂತೆ ತಮ್ಮ ನಾಲಗೆಯಿಂದ ನನ್ನ ತುಟಿಯನ್ನು ತೀಡಿ- ಎದೆಗೊರಗಿ,
“ಹುಂ!” ಎಂದರು. ಮುಂದುವರೆಸು ಅನ್ನುವಂತೆ!
ಸುಮಾರು ಸಾವಿರದ ಮುನ್ನೂರು ವರ್ಷಗಳ ಹಿಂದೆ! ಒಂದು ಮರುಭೂಮಿ! ಅಲ್ಲಿ ಯುದ್ಧಗಳು ಹಿಂಸೆ ಅತ್ಯಾಚಾರಗಳು ನಡೆಯುತ್ತಿದ್ದವು! ಯುದ್ಧದಿಂದಾಗಿ ಪುರುಷರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು! ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಗಿಂತಲೂ ನಾಲ್ಕರಷ್ಟಾಯಿತು!
ಮರುಭೂಮಿ ಎಂದಮೇಲೆ ಕೇಳಬೇಕೆ? ಅಲ್ಲಿ ಸಸ್ಯಹಾರಕ್ಕೆ ಎಡೆಯೇ ಇರಲಿಲ್ಲ! ಮಾಂಸಹಾರವೇ ಮುಖ್ಯ!
ಹೆಣ್ಣಿನ ಯಾವ ಭಾಗವನ್ನು ನಗ್ನವಾಗಿ ಕಂಡರೂ ಉತ್ತೇಜಿತರಾಗುತ್ತಿದ್ದ ಪುರುಷರು ತಮ್ಮ ಕಾಮ ವಾಂಛೆಗೆ ಹೆಣ್ಣನ್ನು ದೂರಿದರು! ಅವರನ್ನು ಯಾವೊಂದು ಬಾಗವೂ ಕಾಣದಂತೆ ಪರದೆಯಿಂದ ಮುಚ್ಚಿದರು! ಗಂಡಿಗಿಂತಲೂ ನಾಲ್ಕರಷ್ಟು ಹೆಣ್ಣು ಇದ್ದುದರಿಂದ ಒಬ್ಬೊಬ್ಬ ಗಂಡು ನಾಲ್ಕು ಐದು ಹೆಣ್ಣನ್ನು ಮದುವೆಯಾದರು!
ತಮ್ಮ ಆಸ್ತಿ ಪಾಸ್ತಿಗಳು ಕೈಬಿಟ್ಟು ಹೋಗದಿರಲು ತಂದೆಯೇ ಮಗಳನ್ನೂ ಅಣ್ಣನೇ ತಂಗಿಯನ್ನೂ ಮದುವೆಯಾಗುತ್ತಿದ್ದರು! ದುಡ್ಡಿನ ಆಸೆಗಾಗಿ ತಮಗೆ ಬೇಕಾದಂತೆ ನಿಯಮಗಳನ್ನು ರೂಪಿಸುತ್ತಿದ್ದರು....
ಗಂಡ ಹೆಂಡತಿ! ಹೆಂಡತಿ ಸುಂದರವಾಗಿದ್ದು ಧರ್ಮ ಗುರುವಿಗೆ ಅವಳಮೇಲೆ ಆಸೆಯಾದರೆ ಒಂದು ವಿಚಿತ್ರ ಏರ್ಪಾಡಿತ್ತು! ಗಂಡ ಅವಳನ್ನು ಬಿಟ್ಟುಬಿಡುವುದು! ಪುನಃ ಅವಳನ್ನು ಸ್ವೀಕರಿಸಬೇಕಾದರೆ ಬೇರೊಬ್ಬನೊಂದಿಗೆ ಅವಳು ಸೇರಬೇಕು- ಅಂದರೆ ಸೆಕ್ಸ್ ಮಾಡಬೇಕು! ಅದು ಧರ್ಮಗುರುವೇ ಆಗಿರುತ್ತಿದ್ದ!
ಈ ರೀತಿಯ ಆಚಾರ ವಿಚಾರಗಳಿಗೆ ಕಾರಣನಾದ ಒಬ್ಬ ಮೂಲ ಪುರುಷನಿದ್ದ! ಅವನನ್ನೂ ವ್ಯಾಸನೆಂದೇ ಕರೆಯೋಣ! ಅಂದರೆ ನಾನು....!
ನನಗಾಗ ಇಪ್ಪತ್ತೆಂಟು ವರ್ಷ ವಯಸ್ಸು! ಜನರೆಲ್ಲಾ ದಿಕ್ಕಾಪಾಲಾಗಿ ಓಡುತ್ತಿರುವುದು ನೋಡಿ ಗಾಬರಿಯಿಂದ ತಿರುಗಿದೆ! ಹಂದಿಯೊಂದು ರೋಷದಿಂದ ಎಲ್ಲರನ್ನೂ ಅಟ್ಟಿಸುತ್ತಿತ್ತು! ಏನು ಮಾಡಬೇಕೆಂದು ತಿಳಿಯದೆ ನಿಂತೆ! ಓಡಿಬಂದ ಹಂದಿ ನನ್ನನ್ನು ಗುದ್ದಿ ಬೀಳಿಸಿ ಓಡಿ ಹೋಯಿತು! ನೋಡಿದ ಜನರೆಲ್ಲಾ ನಕ್ಕರು! ಹಂದಿಯೆಂದರೆ ಒಂದು ರೀತಿಯ ಕೋಪ ಬಂತು! ಯಾವುದೇ ಕಾರಣಕ್ಕೂ ನಾನು ಬರೆಯುವ ಪುಸ್ತಕದಲ್ಲಿ ಇದಕ್ಕೆ ಸ್ಥಾನವನ್ನು ನೀಡಲಾರೆ ಅಂದುಕೊಂಡೆ!
ಮತ್ತೊಂದು ಘಟನೆ ನನ್ನನ್ನು ಊರುಬಿಟ್ಟು ಹೋಗುವಂತೆ ಮಾಡಿತು.
ಇಪ್ಪತ್ತೆಂಟು ವರ್ಷದ ಯುವಕ ನಾನು! ಆವೇಶದಿಂದ ಆ ಹೆಣ್ಣನ್ನು ಸಂಬೋಗಿಸುತ್ತಿದ್ದೆ! ಯಾಕೋ... ಅವಳು ನಕ್ಕಳು! ಅವಮಾನವಾದಂತಾಯಿತು! ನಾನು ಬರೆಯುವ ಪುಸ್ತಕದಲ್ಲಿ ಹೆಣ್ಣಿಗೂ ಸ್ಥಾನವನ್ನು ನೀಡುವುದಿಲ್ಲ ಎಂದು ತೀರುಮಾನಿಸಿದೆ! ಅದನ್ನು ಅವಳು ಇತರರಿಗೂ ಹೇಳಿದಳೆಂದೆನ್ನಿಸುತ್ತದೆ... ಎಲ್ಲರೂ ನನ್ನನ್ನು ಮರುಕದಿಂದ ನೋಡಿದರು! ನಾನು ಸಮರ್ಥ... ನೀವು ನನ್ನನ್ನು ನೋಡಿ ನಗಬೇಕಾಗಿಲ್ಲ ಎಂದು ಚೀರಿದೆ! ಯಾರೂ ನನ್ನನ್ನು ನಂಬಲಿಲ್ಲ! ತಾತ್ಸರದಿಂದ ನೋಡಿದರು... ತೀರುಮಾನಿಸಿದೆ!
ನಾನು ಬರೆಯುವ ಪುಸ್ತಕದಲ್ಲಿ ನನ್ನನ್ನು ಯಾರು ನಂಬುವುದಿಲ್ಲವೋ ಅವರಿಗೂ ಬೆಲೆ ಕೊಡುವುದಿಲ್ಲ! ಅವರಲ್ಲಿ ನರಕದ ಭೀತಿಯನ್ನು ಹುಟ್ಟಿಸುತ್ತೇನೆ! ಹಾಗೆ ನಾನು ಆ ದೇಶವನ್ನು ಬಿಟ್ಟು ಪಲಾಯನಗೈದೆ!
ಭರತ ಖಂಡಕ್ಕೆ!!!
“ಹಾಗಾದರೆ ನೀನು ಸುಳ್ಳು ಹೇಳಿದೆ ವ್ಯಾಸ!” ಎಂದಳು ರುಕ್ಮಿಣಿ.
“ಏನು?” ಎಂದೆ ಸಂಶಯದಿಂದ!
“ಭರತಖಂಡದ್ದಲ್ಲದ ಸಂಸ್ಕಾರ ಭರತಖಂಡವನ್ನು ಪ್ರವೇಶಿಸಿದ್ದು ಮಹಮ್ಮದ್ ಘಸ್ನಿಯ ಮೂಲಕ ಕ್ರಿಸ್ತಶಕ ಸಾವಿರದಲ್ಲಿ ಅಂದೆ ಅಲ್ಲವೇ?”
“ಹೇಗೆ ಹೇಳಲಿ....?” ಎಂದು ಯೋಚಿಸಿ,
“ಪೂರ್ತಿಯಾಗಿ ಕೇಳಿದ್ದಿದ್ದರೂ ತಿಳಿಯುತ್ತಿತ್ತು... ಇರಲಿ... ಯಾವುದೋ ದೂರದ ದೇಶದಿಂದ- ಮರುಭೂಮಿಯಿಂದ ಬಂದ ನನಗೆ ಭರತಖಂಡವನ್ನು ಪ್ರವೇಶಿಸುವಾಗ ಯಾವುದೇ ಸಂಸ್ಕಾರವಿರಲಿಲ್ಲ! ಇಲ್ಲಿ ನನಗೆ ಎದುರಾದ ಅಪಮಾನಗಳೇ ನನ್ನದೇ ಆದ ಸಂಸ್ಕಾರವನ್ನು ರೂಪೀಕರಿಸಲೂ ಗ್ರಂಥವನ್ನು ರಚಿಸಲೂ ಕಾರಣವಾಗಿದ್ದು!”
“ಹಾಗಿದ್ದರೆ ಆ ಸಂಸ್ಕಾರದ ಅಥವಾ ಪಂಗಡದ ಮೂಲ ಭರತಖಂಡವೇ?”
“ಅಲ್ಲ! ಆ ಸಂಸ್ಕಾರದ ಮೂಲ ನನ್ನ ಸ್ವಾರ್ಥ!” ಎಂದೆ.
“ಎಷ್ಟು ಕೆಟ್ಟವನಾಗುತ್ತಿದ್ದೀಯ! ನಿನಗೆ ನೀನೇ ಇಷ್ಟು ಕೆಟ್ಟವನಾಗಲು ನಿನಗೇನೂ ಅನ್ನಿಸುವುದಿಲ್ಲವೇ ವ್ಯಾಸ?”
“ಇಲ್ಲ! ಪ್ರಪಂಚದ ಅತೀ ಹೆಚ್ಚು ಜನ ನಂಬುವುದು ನನ್ನೊಬ್ಬನಿಂದ ವಿರಚಿತವಾದ ಆ ಸ್ವಾರ್ಥಪೂರಿತ ಗ್ರಂಥವನ್ನೇ ಅಂದಮೇಲೆ.... ಅದು ಅಭಿಮಾನವಲ್ಲವೇ?” ಎಂದು ಅವರನ್ನು ನೋಡಿ ನಕ್ಕೆ.
“ಸರಿ... ಮರುಭೂಮಿಯಿಂದ ಭರತಖಂಡಕ್ಕೆ ಬಂದಮೇಲೆ ಏನಾಯ್ತು?”
“ನಾನೊಬ್ಬ ರಾಜನಲ್ಲಿ ಆಶ್ರಯವನ್ನು ಬೇಡಿದೆ!”
“ಕೊಟ್ಟನೆ?”
“ಕೊಡದಿರುತ್ತಾನೆಯೇ? ಭರತಖಂಡದ ರಾಜನಲ್ಲವೇ...”
“ಮುಂದೆ ಹೇಳು...”
“ಆ ರಾಜನಿಗೆ ಮೂವರು ಹೆಣ್ಣುಮಕ್ಕಳು! ಸುಂದರಿಯರೆಂದು ಹೇಳಬೇಕೆ...?”
“ನಮಗಿಂತಲೂ?” ಎಂದಳು ಭಾಮೆ.
ಬಾಗಿ ಅವಳಿಗೆ ಮುತ್ತಿಟ್ಟೆ! ರುಕ್ಮಿಣಿ ನನಗೆ!
“ಹೇಗಾದರೂ ಆ ಮೂವರನ್ನೂ ಪಡೆದುಕೊಳ್ಳಬೇಕೆಂದು ತೀರುಮಾನಿಸಿದೆ. ಪಡೆದುಕೊಳ್ಳುವುದು ಅಂದರೆ- ನನಗೆ ಅವರನ್ನು ತೃಪ್ತಿಪಡಿಸಲಾಗದು ಅನ್ನುವ ಕೀಳರಿಮೆ ಮನವನ್ನು ತುಂಬಿತ್ತು- ಆದ್ಧರಿಂದ ಅವರನ್ನು ಅಪಹರಿಸಿ ಬೇರೆ ಯಾವುದಾದರೂ ರಾಜನಿಗೆ ಮಾರುವುದು! ಅರ್ಧ ರಾಜ್ಯವನ್ನೋ ಹಲವು ಗ್ರಾಮಗಳನ್ನೋ ಅದಕ್ಕೆ ಬದಲಾಗಿ ಪಡೆದುಕೊಳ್ಳುವುದು!”
“ದ್ರೋಹಿ!”
“ಅದು ನನ್ನ ರಕ್ತ!”
“ಹಾ... ಆ ನಿನ್ನ! ಪ್ರಪಂಚವೇ ಸ್ವೀಕರಿಸಿದ ಗ್ರಂಥವನ್ನು ಬರೆದ ನಿನ್ನ!”
“ಹೌದು!”
“ಸರಿ, ಮುಂದುವರೆಸು! ಅವರನ್ನು ಅಪಹರಿಸಿದೆಯೇ?”
“ಭರತಖಂಡದ ರಾಜಕುಮಾರಿಯರಲ್ಲವೇ? ಅವರು ಅತಿ ಸಮರ್ಥೆಯರು... ಅದಕ್ಕಾಗಿ ನಾನೊಂದು ಕುಟಿಲೋಪಾಯವನ್ನು ಮಾಡಿದೆ!”
“ಅಂದರೆ ದ್ರೋಹ? ಆಶ್ರಯ ದಾತನಿಗೆ ಎರಡು ಬಗೆಯುವುದು!”
“ಅದನ್ನು ಇತಿಹಾಸವೇ ಸಾಬೀತು ಪಡಿಸಿದೆ!”
“ಅದು ಯಾವ ಇತಿಹಾಸ?”
“ಎಷ್ಟೋ ಸಾವಿರವಿದೆ! ಉದಾಹರಣೆಗೆ.... ಮಹಿಷಾಸುರಪುರದ ಇತಿಹಾಸ! ಅನ್ನಕ್ಕಾಗಿ ಸಾಮಾನ್ಯ ಸೈನಿಕನಾಗಿ ಸೇರಿದ್ದವನು ಸಂಪೂರ್ಣ ಸಾಮ್ರಾಜ್ಯದ ಆಢಳಿತವನ್ನು ಕೈಗೆ ತೆಗೆದುಕೊಂಡದ್ದು ಹೇಗೆ?”
“ಅರ್ಥವಾಯಿತು... ಏಕ ಗ್ರಂಥವನ್ನು ಬರೆದ ವ್ಯಾಸನ ಕಥೆಯನ್ನು ಮುಂದುವರೆಸು!”
“ರಾಜಕುಮಾರಿಯರಿಗೆ ಅತಿಶಯೋಕ್ತಿಯಾದ ಕಥೆಗಳನ್ನು ಹೇಳಿದೆ!”
“ಯಾವ ಕಥೆ? ನಂಬಿದರೆ?”
“ಮರಳುಗಾಡಿನ ಕಥೆ! ಅಲ್ಲಾವುದ್ದೀನನ ಅದ್ಭುತ ದೀಪದ ಕಥೆ! ಖರ್ಜೂರದ ಕಥೆ!”
“ಇಷ್ಟೇಯೇ? ಇಷ್ಟನ್ನು ಕೇಳಿ ಅವರು ನಿನ್ನೊಂದಿಗೆ ಬಂದರೇ?”
“ಅವರಿಗಿಂತಲೂ ಸುಂದರಿಯರಾದ ತರುಣೀಮಣಿಗಳಿರುವುದಾಗಿ ಹೇಳಿದೆ!”
“ಅಸೂಯೆ... ಅಸೂಯೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡೆ? ದ್ರೋಹಿ!”
“ಅವರು ನಂಬಲಿಲ್ಲ! ಬಂದರೆ ತೋರಿಸಿಕೊಡುವುದಾಗಿ ಹೇಳಿದೆ!”
“ಮುಂದೆ ಹೇಳು!”
“ಅವರೊಂದಿಗೆ ನಾನು ಪರ್ಷಿಯಾ ದೇಶಕ್ಕೆ ಪಲಾಯನಗೈದೆ! ಅಲ್ಲಿನ ರಾಜನಿಗೆ ಅವರನ್ನು ಮಾರಿದೆ! ಅಲ್ಲಿ ಅವರಿಗೆ ನನ್ನ ಮೋಸದ ಅರಿವಾಯಿತು! ಹೆಣ್ಣು ಅಂದರೆ ಕ್ರೋಧ ಉಕ್ಕುವಂತೆ ಮಾಡಿದರು!”
“ಅರ್ಥವಾಗಲಿಲ್ಲ! ಅವರಿಗೆ ನೀನು ಮೋಸಮಾಡಿ ಅವರಿಂದ ನೀನೇ ಕ್ರೋಧಕ್ಕೆ ಒಳಗಾದೆಯಾ?”
“ಪರ್ಷಿಯಾದ ರಾಜನಿಗೆ ನಾವು ಕನ್ಯೆಯರಲ್ಲ! ಈ ವ್ಯಾಸ ನಮ್ಮನ್ನು ಅನುಭವಿಸಿದ್ದಾನೆ!” ಎಂದರು.
ಗಹಗಹಿಸಿ ನಕ್ಕರು ಇಬ್ಬರೂ.....
“ನಿನಗೆ ಹಾಗೇ ಆಗಬೇಕು! ಮುಂದೆ?” ಎಂದರು.
“ಆಗ ನನಗೆ ಮೂವತ್ತ ಎರಡು ವರ್ಷ ವಯಸ್ಸು.... ಅಲ್ಲಿಂದ ಮುಂದೆ ನಲವತ್ತೈದು ವರ್ಷದವರೆಗೆ ಅಜ್ಞಾತವಾಸವನ್ನು ಮಾಡಿದೆ!”
“ಓ... ಆಗಲೇ ಇರಬೇಕು ನಿನಗೆ ಜ್ಞಾನೋದಯವಾಗಿದ್ದು! ಹೇಳು... ನಂತರ ನೀನು ರಚಿಸಿದ ಗ್ರಂಥದ ಮುಖ್ಯಾಂಶಗಳು!”
“ಎಲ್ಲಾ ಹೇಳಿದ್ದೇ.... ಹಂದಿ ಒಂದು ಅಸಹ್ಯ! ಅದನ್ನು ಹತ್ತಿರ ಸೇರಿಸಿದರೆ ನರಕಕ್ಕೆ ಹೋಗಬೇಕಾಗುತ್ತದೆ... ಹೆಣ್ಣು ಒಂದು ಭೋಗವಸ್ತು... ಗಂಡಸಾದವನು ಎಷ್ಟು ಹೆಣ್ಣಿನೊಂದಿಗೆ ಬೇಕಿದ್ದರೂ ಸೇರಬಹುದು... ಆಕೆಯನ್ನು ಮಾರಬಹುದು... ಆಕೆಯೊಂದು ಯಂತ್ರ! ಹೆರುವ ಯಂತ್ರ! ಎಷ್ಟು ಹೆಚ್ಚು ಮಕ್ಕಳನ್ನು ಹೆರುತ್ತಾಳೋ.... ಹೆರುವಂತೆ ಮಾಡುತ್ತಾನೋ ಅವರೇ ಉತ್ತಮರು.... ನಾನೊಬ್ಬನೇ ದೇವರು- ನಾನೇ ದೇವರು! ನನ್ನನ್ನು ನಂಬದವರು ನರಕಕ್ಕೆ ಹೋಗುತ್ತಾರೆ! ನನ್ನನ್ನು ನಂಬದರವನ್ನು ಚಿತ್ರ ಹಿಂಸೆ ಕೊಟ್ಟು ಕೊಲ್ಲಬೇಕು! ಹಾಗೆ ಕೊಲ್ಲುವವರು ನನ್ನ ಕೃಪೆಗೆ ಒಳಗಾಗಿ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ನಾನೇ- ನಾನೋಬ್ಬನೇ ನಿಜ... ಎಲ್ಲರೂ ನನ್ನನ್ನು ಹೆದರಬೇಕು.... ನಾನು ಕೊಡುವ ಶಿಕ್ಷೆಗೆ ಹೆದರಿ ನನ್ನನ್ನು ನಂಬದವರನ್ನು ಕೊಲ್ಲಬೇಕು...”
“ಸಾಕು ಸಾಕು ಅದನ್ನೇ ಎಷ್ಟುಸಾರಿ ಹೇಳುತ್ತೀಯ?” ಎಂದಳು ರುಕ್ಮಿಣಿ.
“ಆದರೂ ವ್ಯಾಸ... ನೀನೇಕೆ ಇಲ್ಲಿ ಉಲ್ಟ ಹೇಳಿದೆ?” ಎಂದಳು ಭಾಮೆ.
ಸಂಶಯದಿಂದ ಅವಳನ್ನು ನೋಡಿದೆ.
“ಅದೇ... ಭರತಖಂಡದ ಉಪದೇಶ ಗ್ರಂಥದಲ್ಲಿ.... ನೀನು ಯಾವ ದೇವರನ್ನು ಅಥವಾ ಯಾವ ರೂಪದಲ್ಲಿ ಬೇಕಿದ್ದರೂ ದೇವರನ್ನು ಪೂಜಿಸು... ಅದು ನನ್ನಬಳಿಗೇ ಬರುತ್ತದೆ ಅಂದವನು.... ಇಲ್ಲಿ ನನ್ನನ್ನು ನಂಬದವನು ನರಕಕ್ಕೆ ಹೋಗುತ್ತಾನೆ. ನನ್ನನ್ನು ನಂಬದವನನ್ನು ಕೊಂದರೆ ಸ್ವರ್ಗ ಸಿಗುತ್ತದೆ ಎಂದು ಹೇಳಿದ್ದೀಯಲ್ಲ?”
“ಆ ವ್ಯಾಸನಲ್ಲ ಈ ವ್ಯಾಸ!”
“ಸರಿ! ಹೇಳು...”
“ನಾನು ಹೇಳಿದ್ದನ್ನು ನನ್ನ ಮಗ ನಂಬಲಿಲ್ಲ!”
“ಅಂದರೆ ನೀನು ಹೇಳಿದ ದೇವರನ್ನು ನಿನ್ನ ಮಗನೇ ನಂಬಲಿಲ್ಲ?”
“ಹೌದು... ದೇವರೇ ಹೇಳಿದಂತೆ ನಾನು ಬರೆದ ಉಪದೇಶವನ್ನು ನನ್ನ ಮಗನೇ ನಂಬಲಿಲ್ಲ! ನನ್ನನ್ನು ನಂಬದವರನ್ನು ಕೊಂದರೆ ಸ್ವರ್ಗ ಸಿಗುತ್ತದೆ ಎಂದು ಹೇಳಿದ್ದೆ!”
ಜೋರಾಗಿ ನಕ್ಕರು ಇಬ್ಬರೂ....,
“ಅಂದರೆ ನಿನ್ನ ದೇವರನ್ನು ನಂಬದ ನಿನ್ನ ಮಗನನ್ನು ನೀನು ಕೊಲ್ಲಲಿಲ್ಲ! ಮುಂದೆ?”
“ನನ್ನ ಮಾತಿಗೆ ನಾನೇ ತಪ್ಪಿದೆನೆಂದು ಜನರೆಲ್ಲರೂ ಸೇರಿ ನನ್ನನ್ನು ಹೊಡೆದು ಬಡಿದು ಕೊಂದರು!!”
ಹೊಟ್ಟೆ ಹಿಡಿದು ನಕ್ಕರು ಇಬ್ಬರೂ....!
“ಏಸುಕ್ರಿಸ್ತನ ವಾಲ್ಯು ಅರಿಯದೆ ಮೂರ್ಖ ಜನ ಅವನನ್ನು ಶಿಲುಬೆಗೆ ಏರಿಸಿದಂತೆ ನಿನ್ನನ್ನು ಅರಿಯದ ಮೂರ್ಖ ಜನ ನಿನ್ನನ್ನು ಹೊಡೆದು ಬಡಿದು ಕೊಂದರು...?”
“ಹು...!”
“ನಿನ್ನ ಹು ಇನ್ನೊಂದು ಬಾರಿ ಹೊರಬಂದರೆ ಕೈಗೆ ಸಿಕ್ಕಿರುವುದನ್ನು ಹಿಡಿದು ಕೊಲ್ಲುತ್ತೇನೆ! ಮುಂದೆ ಹೇಳು!”
“ಗ್ರಂಥ- ಪುರುಷರಿಗೆ ಅನುಗುಣವಾಗಿ ಇದ್ದುದ್ದರಿಂದಲೂ.... ತಮ್ಮ ತತ್ವವನ್ನು ನಂಬದೇ ಇರುವವರನ್ನು ಕೊಲೆ ಮಾಡಿದರೆ ಸ್ವರ್ಗ ಸಿಗುತ್ತದೆ ಅನ್ನುವ ಮೂಢ ನಂಬಿಕೆಯಿಂದಲೂ.... ಇದ್ದ ಕೆಲವೇ ಕೆಲವು ಅನುಯಾಯಿಗಳಿಂದಾಗಿ ಆ ಪಂಗಡ ಬೆಳೆಯಿತು... ಹಾಗೆ ಭರತಖಂಡವನ್ನು ಪ್ರವೇಶಿಸಿದ ಆ ಪಂಗಡದ ಮೊದಲ ಅನುಯಾಯಿಯೇ.... ಮಹಮ್ಮದ್ ಘಸ್ನಿ ಅಥವಾ ಘಸ್ನಿ ಮೆಹ್ಮೂದ್!!!”
“ವ್ಯಾಸಾ.... ಎಷ್ಟು ಧೈರ್ಯ ನಿನಗೆ? ಇಷ್ಟು ಓಪನ್ ಆಗಿ ಈ ಕಥೆಯನ್ನು ಬೇರೆ ಯಾರಿಗಾದರೂ ಹೇಳಿದೆಯೋ, ಕಾಂಟ್ರವರ್ಸಿಯಾಗುತ್ತದೆ!”
“ಕಣ್ಮಣಿ... ಇದು ಕಥೆ! ಅಂಥಾ ಮಹಾನ್ ಗ್ರಂಥಗಳಾದ ಭಗವದ್ಗೀತೆ, ಬೈಬಲ್, ಖುರ್ಆನ್ಗಳಿಗೇ ಸಿಗಬೇಕಾದ ಬೆಲೆ ಸಿಗದೇ ಇರುವಾಗ- ಪರ ವಿರೋಧಗಳಿರುವಾಗ... ಜುಜುಬಿ ಈ ಕಥೆಗೆ ಯಾರು ಬೆಲೆ ಕೊಡುತ್ತಾರೆ?”
“ಸರಿ.... ಮುಂದಕ್ಕೆ ಹೇಳು...!”
“ಮಹಮ್ಮದ್ ಘಸ್ನಿ ಪರಿಚಯಿಸಿದ ಭರತಖಂಡದ ಸಂಪದ್ಭರಿತತೆಯನ್ನು ಲೂಟಿಮಾಡಲು ಬಂದ ಮಹಮ್ಮದ್ ಘೋರಿ ಆ ಸಂಸ್ಕಾರ ಭರತಖಂಡದಲ್ಲಿ ನೆಲೆಯೂರುವಂತೆ ಮಾಡಿದ! ಅವನ ನಂತರ ಯಾವುದೋ ತುಘಲಕ್, ಖಿಲ್ಜಿ, ಮೊಘಲರಾದ ಬಾಬರ್ ಅಕ್ಬರನಿಂದ ಔರಂಗಜೇಬನವರೆಗೆ... ನಂತರ ದಕ್ಷಿಣದಲ್ಲಿ ಹೈದರ್ ಟಿಪ್ಪು ಹ್ಹೊ..... ಇವರೆಲ್ಲರ ಕೈಗೆ ಸಿಕ್ಕಿ ನಲುಗಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾಗ ಭಾರತೀಯರಿಗೆ ಮತ್ತೊಂದು ಹೊಡೆತ.... ಹದಿನಾಲ್ಕು ಹದಿನೈದನೇ ಶತಮಾನದಲ್ಲಿ ಪ್ರವೇಶಿಸಿದ ಪೋರ್ಚುಗೀಸರಿಂದ- ನಂತರ ಡಚ್ಚರಿಂದ- ನಂತರ ಬ್ರಿಟೀಷರಿಂದ....!”
“ಇಲ್ಲೂ ಒಂದು ಉಪ ಕತೆ ಇರಬೇಕಲ್ಲ?”
“ಅದಕ್ಕೂ ಮುಂಚೆ ಒಂದು ವಿಷಯವನ್ನು ಹೇಳಬೇಕು!”
“ಏನದು?”
“ಇವರೆಲ್ಲರಿಂದಾಗಿ ಸನಾತನ ಧರ್ಮಕ್ಕೆ,, ಭರತಖಂಡದ ಸಂಸ್ಕಾರಕ್ಕೆ, ಭರತ ಖಂಡದ ಮುಖಮುದ್ರೆಗೆ ಒಂದು ಹೆಸರು ಸಿಕ್ಕಿತು- ಹಿಂದೂ ಧರ್ಮ!!!”
“ಹೇ ವ್ಯಾಸಾ... ನಿನಗೆ ತಪ್ಪಿತು...! ಹಿಂದೂ ಧರ್ಮ ಎನ್ನುವುದು ಅಲೆಕ್ಸಾಂಡರನ ಆಕ್ರಮಣವಾದಾಗ ಸಿಕ್ಕಿದ ಹೆಸರಲ್ಲವೇ?”
“ಅಲ್ಲ! ಆಗ ನಂದರ ಆಳ್ವಿಕೆಯಿತ್ತು...! ಪ್ರಚಂಡ ವೀರ ಪುರೂರವನ ಆಳ್ವಿಕೆಯಿತ್ತು...! ಪುರೂರವನನ್ನು ಪೋರಸ್! ಎಂದು ಕರೆದರೇ ಹೊರತು... ಇಲ್ಲಿ ನೆಲೆನಿಂತುಕೊಳ್ಳಲಾಗದಿದ್ದುದ್ದರಿಂದ ಭರತಖಂಡ ಧರ್ಮಕ್ಕೆ ಒಂದು ಹೆಸರು ಕೊಡುವುದು ಅವರಿಂದಾಗಲಿಲ್ಲ! ಅಲ್ಲದೆ ಕಣ್ಮಣಿ... ಇದು ನಾನು ಹೇಳುತ್ತಿರುವ ಕಥೆ! ವ್ಯಾಸನ ಕಟ್ಟುಕಥೆ! ಧರ್ಮದ ಪರಿಚಯ ಮಾಡಿಸುವುದಕ್ಕೆ, ಅದರ- ಅಳಿವು- ಅಳಿವಿನಂಚಿನಿಂದ ಉಳಿವುಗಳನ್ನು ವಿವರಿಸುವುದಕ್ಕೆ ಅವನು ಹೇಳುತ್ತಿರುವ ವಾಸ್ತವ!”
“ಸರಿ ಸರಿ.... ಹಿಂದು ಎನ್ನುವುದು ಬ್ರಿಟೀಷರೇ ಕೊಟ್ಟ ಹೆಸರು... ಮುಂದಕ್ಕೆ ಹೇಳು!”
“ಅಲ್ಲ! ಹಿಂದೂ ಎನ್ನುವುದು ಪರ್ಷಿಯನ್ನರಿಂದ ಬಂದ ಹೆಸರು! ಅದು ಬಿಡಿ.., ನೀವು ಹೇಳಿದಂತೆ... ಮುಂದಕ್ಕೆ ಇರುವುದು ಒಂದು ಉಪ ಕಥೆ! ಆಗಲೆ ಹೇಳಿದ ಉಪಕಥೆ ಹಿಂಸೆಯಿಂದೊಡಗೂಡಿದ ವಂಚನೆಯ ಕಥೆಯಾದರೆ ಇದು.... ನಯ ನಾಜೂಕಿನಿಂದ ಕೂಡಿದ ವಂಚನೆಯ ಕಥೆ!”
“ವ್ಯಾಸಾ.... ನೀನೆಷ್ಟು ಸ್ವಾರ್ಥಿ! ನಮ್ಮ ಭರತಖಂಡದ ಧರ್ಮ ಮಾತ್ರ ಶ್ರೇಷ್ಠ ಅನ್ನುವಂತೆ ಹೇಳುತ್ತಿದ್ದೀಯೇ..!”
“ಅಲ್ಲವೇ ಮತ್ತೆ? ನನ್ನ ಧರ್ಮ ಯಾವೊಬ್ಬ ವ್ಯಕ್ತಿಯಿಂದ ಸೃಷ್ಟಿಸಲ್ಪಟ್ಟದ್ದಲ್ಲ! ಅದರ ಮೂಲ ಎಲ್ಲಿದೆಯೆಂದೇ ಅರಿವಿಗೆ ನಿಲುಕುವುದಿಲ್ಲ! ಯಾವ ಒಂದು ಗ್ರಂಥವನ್ನೂ ಅವಲಂಬಿಸಿದ್ದಲ್ಲ...! ಜನ ತಮ್ಮ ಮೂಢ ವರ್ತನೆಯಿಂದಾಗಿ ಅವರವರ ಕರ್ತವ್ಯವನ್ನು ನೆರವೇರಿಸಲಿಲ್ಲವೇ ಹೊರತು ಅರಿತುಕೊಂಡರೆ ನನ್ನ ಧರ್ಮದಷ್ಟು ಶ್ರೇಷ್ಠ ಧರ್ಮ ಇನ್ನೊಂದಿಲ್ಲ! ಇದನ್ನು ಈಗ ಹೇಳಲು ಮತ್ತೊಂದು ಕಾರಣವೂ ಇದೆ! ಅಫ್ಘಾನಿಸ್ಥಾನ ಪಾಕೀಸ್ಥಾನ ಬಾಂಗ್ಲಾದೇಶ ಮೈಯನ್ಮಾರ್ ಎನ್ನುವ ಭರತಖಂಡದ ಅರ್ಧದಷ್ಟು ಭೂ ಪ್ರದೇಶಗಳನ್ನು ಹೊರಗಿನಿಂದ ಬಂದ ಆ ಮತಗಳು ಕಬಳಿಸಿಕೊಂಡಿದೆ. ಉಳಿದಿರುವ ಭಾರತದಲ್ಲಿಯೂ ಆ ಮತ ನಮ್ಮ ಸಂಸ್ಕಾರಕ್ಕೆ ಸವಾಲೆಸೆಯುತ್ತಿದೆ. ನೆನಪಿದೆಯೇ....? ನಾನೇ ಹೇಳಿದ್ದೇನೆ....
ಯದಾಯದಾಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ! ಅಭ್ಯುತ್ಥಾನಮಧರ್ಮಸ್ಯ ತಾದಾತ್ಮಾನಂ ಸೃಜಾಮ್ಯಹಂ! ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ! ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ! ಅಂದರೆ...
ಧರ್ಮವು ಅವನತಿಯತ್ತ ಹೋಗುತ್ತಿದೆ ಅನ್ನಿಸಿದಾಗ, ಅಧರ್ಮವು ಹೆಚ್ಚಾಗುತ್ತಿದೆ ಅನ್ನಿಸಿದಾಗ ನಾನು ಅವತಾರವೆತ್ತುತ್ತೇನೆ! ಸಾಧುಗಳನ್ನು ಸಂರಕ್ಷಿಸಿ ದುಷ್ಟರನ್ನು ಶಿಕ್ಷಿಸಿ ಧರ್ಮವನ್ನು ಉಳಿಸಲು ನಾನು ಯುಗ ಯುಗಗಳಲ್ಲಿಯೂ ಕಾಣಿಸಿಕೊಳ್ಳುತ್ತೇನೆ ಎಂದು!
ಇದರ ಅರ್ಥ ಏನೆಂದು ತಿಳಿದಿರಿ? ಅವತಾರವೆತ್ತುವುದು ಅಂದರೆ ಮನುಷ್ಯ ರೂಪದಲ್ಲಿಯೇ ಅವತಾರವೆತ್ತುತ್ತೇನೆ ಎಂದಲ್ಲ.... ಅದು ಅರಿವಿನ ರೂಪದಲ್ಲಿಯಾದರೂ ಆಗಬಹುದು....
ಈಗ ಜನ ಎಚ್ಚೆತ್ತುಕೊಳ್ಳುತ್ತಿದ್ದಾರೆ- ಎಲ್ಲರ ಒಳಗೂ ನನ್ನ ಅವತಾರವಾಗುತ್ತಿದೆ!
ಇನ್ನು ಉಪಕತೆಗೆ ಹೋಗೋಣ....!
ಸುಮಾರು ಎರಡುಸಾವಿರ ವರ್ಷಗಳ ಹಿಂದೆ... ಯೂರೋಪು ಭಾಗದಲ್ಲಿ- ಅನ್ನುವಾಗ ಮೂವರೂ ನಕ್ಕೆವು- ಒಬ್ಬಳು ಹೆಣ್ಣು ಗರ್ಭಿಣಿಯಾದಳು!! ಪಾಪ! ಅವಳಿಗೂ ಗೊತ್ತಿರಲಿಲ್ಲ... ತನ್ನ ಗರ್ಭಕ್ಕೆ ಯಾರು ಕಾರಣರೆಂದು....!! ಆ ದೇವರೇ ನೇರವಾಗಿ ಗರ್ಭದೊಳಗೆ ಪ್ರವೇಶಿಸಿದ ಎಂದಳು- ಯಾವ ದೇವರು ಎಂದು ಕೇಳಬೇಡಿ- ಜನ ನಂಬಿದರು!
ಅವನೂ ಕೂಡ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಅನುಭವಿಸುತ್ತಾ ಬೆಳೆದ! ಸುಮಾರು ಇಪ್ಪತ್ತೆಂಟು ವರ್ಷ ಪ್ರಾಯದವನಾದಾಗ... ಎಂದಾಗ
“ವ್ಯಾಸಾ....” ಎಂದು ತಾಳಬದ್ದವಾಗಿ ಕರೆದಳು ಭಾಮೆ!
ನಕ್ಕು ಮುಂದುವರೆಸಿದೆ.
“ಇವನನ್ನೇನೂ ಹೆಣ್ಣು ಹಿಡುಕನನ್ನಾಗಿ ಮಾಡುವುದಿಲ್ಲವೇ... ಹೆದರಬೇಡ....! ಆ ಪ್ರಾಯವಾದಾಗ ಅವನು ರೋಂ ಅಥವಾ ಯೂರೋಪು ಬಾಗದಿಂದ ಅಪ್ರತ್ಯಕ್ಷನಾದ! ಅಂದರೆ ಊರು ಬಿಟ್ಟು ಹೊರಟು ಹೋದ. ಎಲ್ಲಿಗೆ ಹೋದನೆಂದು ಯಾರಿಗೂ ತಿಳಿಯಲಿಲ್ಲ!”
“ನಿನಗೆ ತಿಳಿದಿರಬೇಕಲ್ಲ? ಅವನೂ ನೀನೇ ತಾನೆ?”
“ನಿಜ! ನಾನು ಹಿಮಾಲಯಕ್ಕೆ ಬಂದೆ! ಇಲ್ಲಿನ ಋಷಿ ಮುನಿಗಳ ನೆರಳಿನಲ್ಲಿ ಅಧ್ಯಯನವನ್ನು ನಡೆಸಿದೆ! ಸುಮಾರು ಹದಿನಾಲಕ್ಕು ವರುಷ ಬೇಕಾಯಿತು ನನಗೆ ಜ್ಞಾನೋದಯವಾಗಲು! ಭರತಖಂಡಕ್ಕೆ ನನ್ನ ಅಗತ್ಯವಿರಲಿಲ್ಲವಾದ್ಧರಿಂದ ನನ್ನ ಸ್ವದೇಶಕ್ಕೆ ಮರಳಿದೆ!”
“ಅಲ್ಲಿ ನಿನ್ನನ್ನು ಯಾರೂ ನಂಬಲಿಲ್ಲ! ಶಿಲುಬೆಗೆ ಏರಿಸಿದರು!”
“ಹು ಆ... ಬಿಡು ಬಿಡು! ಹು ಅಲ್ಲ ಹೌದು! ನನ್ನನ್ನು ಶಿಲುಬೆಗೆ ಏರಿಸಿದರು. ಆದರೆ ನನ್ನನ್ನು ದೇವರೆಂದು ನಂಬಿದ್ದ ಕೆಲವರು ನನ್ನ ಕೈಬಿಡಲಿಲ್ಲ!”
ಜೋರಾಗಿ ನಕ್ಕರು ಇಬ್ಬರೂ... ನಾನೂ ನಕ್ಕು ಮುಂದುವರೆಸಿದೆ,
“ಅವರು ನಾನು ಪುನಃ ಹುಟ್ಟಿದ್ದಾಗಿ ನಂಬಿಸಿದರು! ಯಾರೋ ನನ್ನನ್ನು ನೋಡಿದಂತೆ ಬಿಂಬಿಸಿದರು! ಶಿಲುಬೆಗೆ ಏರಿಸುವ ಮುಂಚೆ ನಾನು ಬರೆದಿದ್ದ ಗ್ರಂಥವನ್ನು ಪವಿತ್ರ ಗ್ರಂಥವನ್ನಾಗಿ ಸ್ವೀಕರಿಸಿದರು....! ನನಗೇ ಆಶ್ಚರ್ಯವಾಗುತ್ತದೆ! ಅದರಲ್ಲಿರುವ ಎಷ್ಟೋ ವಿಷಯಗಳು ಸುಳ್ಳು ಎಂದು ಸಾಬೀತಾಗಿದ್ದರೂ ಜನ ಅದನ್ನು ನಂಬುವುದನ್ನು ಬಿಟ್ಟಿಲ್ಲವಲ್ಲ ಎಂದು!!”
“ಅಲ್ಲವೇ ವ್ಯಾಸ? ಈ ಗ್ರಂಥಕ್ಕೂ ನೀನು ಮುಂಚೆ ಹೇಳಿದ ಉಪಕಥೆಯ ಗ್ರಂಥಕ್ಕೂ ಇರುವ ವಾಲ್ಯೂ.. ಅದಕ್ಕಿಂತ ಸಾವಿರಾರು ವರ್ಷಗಳ ಮುಂಚೆ ಬರೆಯಲ್ಪಟ್ಟ ಸಾವಿರಾರು ಭರತಖಂಡದ ಗ್ರಂಥಗಳಿಗಿಲ್ಲ! ಯಾಕೆ?”
“ಯಾಕೆಂದರೆ... ನಮ್ಮವರಿಗೆ ನಮ್ಮಮೇಲೇ ನಂಬಿಕೆಯಿಲ್ಲ! ಅಲ್ಲದೇ ನಮ್ಮ ಗ್ರಂಥಗಳಲ್ಲಿ ಕರ್ತವ್ಯಗಳೇ ಅಧಿಕ! ಆಚರಣೆ ಕಷ್ಟ! ಮನಸ್ಸನ್ನು ನಿಯಂತ್ರಿಸಲು ಎಷ್ಟು ಕಷ್ಟ ಅನ್ನುವ ಸ್ಪಷ್ಟ ಪರಿಕಲ್ಪನೆ ನಮ್ಮ ಋಷಿಮುನಿಗಳಿಗಿತ್ತು... ಅದೂ ಅಲ್ಲದೆ... ನಮ್ಮ ಗ್ರಂಥಗಳನ್ನು- ಧರ್ಮವನ್ನು ಯಾರೂ ಪ್ರಚುರಪಡಿಸುವುದಿಲ್ಲ! ಅವರವರ ನಂಬಿಕೆಯಂತೆ ಬಾಳಿ ಎಂದು ಹೇಳುತ್ತಾರೆಯೇ ಹೊರತು... ನಾನೇ ಶ್ರೇಷ್ಠ ಎಂದು ಯಾರೂ ಇನ್ನೊಬ್ಬರಮೇಲೆ ಒತ್ತಡ ಏರುವುದಿಲ್ಲ! ಅವರಾಗಿ ಅರಿತುಕೊಂಡರೆ ಆಯಿತು.... ಈಗ ಅರಿತುಕೊಳ್ಳುತ್ತಿದ್ದಾರೆ...!- ಕೆಲವರು ತಾತ್ಸರದಿಂದ ಕಾಣುತ್ತಿದ್ದರೂ- ನಮ್ಮ ತನವನ್ನು ನಾವು ಅರಿತುಕೊಳ್ಳುವುದೇ ಹೆಚ್ಚಲ್ಲವೇ?”
“ಸರಿ... ಮುಂದುವರೆಸು...”
“ವ್ಯಾಪಾರಕ್ಕೆಂದು ಬಂದರೂ ಬ್ರಿಟೀಷರ ಆಕ್ರಮಣದಿಂದ ಭಾರತಕ್ಕೆ ಎರಡು ಉಪಯೋಗಗಳಾದವು! ಒಂದು- ಹಲವಾರು ಚೂರುಗಳಾಗಿ ಒಡೆದು ಆಳರಸರಲ್ಲಿ ಹರಿದು ಹಂಚಿ ಹೋಗಿದ್ದ ಭಾರತಕ್ಕೆ ಈಗಿನ ರೂಪ ಬಂತು! ಪಾಕೀಸ್ಥಾನ ಬೇರೆಯಾಯಿತು!”
“ನಿಲ್ಲಿಸು... ಇದೇನುವ್ಯಾಸನೇ... ಪಾಕೀಸ್ಥಾನ ಹೋಗಿದ್ದು ಹೊಡೆತವಲ್ಲವೇ...?”
“ಯೋಚಿಸಿ ನೋಡಿ... ಆ ಮತದವರ ಮುಖ್ಯ ಉದ್ದೇಶವೇ ಜನಸಂಖ್ಯೆಯನ್ನು ಹೆಚ್ಚಿಸುವುದು- ಆ ಮೂಲಕ- ತಮ್ಮ ಮತವನ್ನು ಪ್ರಪಂಚದಾದ್ಯಂತ ಹರಡುವುದು! ಸ್ವಾತಂತ್ರ್ಯ ಸಿಕ್ಕುವಾಗ ಭಾರತದಲ್ಲಿ ಉಳಿದುಕೊಂಡ ಆ ಮತದವರ ಸಂಖ್ಯೆ ಸುಮಾರು ಶೇಖಡಾ ಏಳು! ಈಗ ಎಷ್ಟೇ ಕಡಿಮೆಯೆಂದರೂ ಶೇಖಡಾ ಇಪ್ಪತ್ತು ದಾಟಿದೆ!! ಒಂದು ವೇಳೆ ಪಾಕಿಸ್ಥಾನವೂ ಭಾರತದಲ್ಲಿಯೇ ಲೀನವಾಗಿದ್ದರೆ....? ಯಾವುದೇ ಸಂಶಯವಿಲ್ಲ! ಇಷ್ಟರಲ್ಲಿ ಭಾರತ ಒಂದು ಇಸ್ಲಾಂ ಕಂಟ್ರಿಯಾಗುತ್ತಿತ್ತು!”
“ಸುಮ್ಮನೆ ಹೆದರಿಸುತ್ತಿದ್ದೀಯ ವ್ಯಾಸ... ಧರ್ಮವನ್ನು ಉಪದೇಶಿಸು ಎಂದರೇ....” ಎಂದಳು ಸತ್ಯಭಾಮೆ.
“ಕಲಿಯುಗದ ಧರ್ಮ! ಈಗ ನಾವು ಆಚರಿಸಬೇಕಾದ ಧರ್ಮ!” ಎಂದಳು ರುಕ್ಮಿಣಿ.
“ಮುಂಚೆ ಕೊಟ್ಟ ವಿವರಣೆಯನ್ನೇ ಕ್ರಮಬದ್ಧವಾಗಿ ಹೇಳಲು ಶ್ರಮಿಸುತ್ತೇನೆ....!”
“ಸರಿ!”
“ಈಗ... ಇಸ್ಲಾಂ ಮತದ, ಕ್ರಿಶ್ಚಿಯನ್ ಮತದ ಆಕ್ರಮಣದ ನಂತರ.... ನಮ್ಮಲ್ಲಿ ಯಾವುದೇ ಕಾರಣಕ್ಕೂ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎನ್ನುವ ಕ್ರಮದಲ್ಲಿ ಕರ್ತವ್ಯಗಳನ್ನು ಮಾಡಲಾಗುವುದಿಲ್ಲ! ಅವರವರಲ್ಲಿ ಮೇಲು ಕೀಳುಗಳು ಬಂದುಬಿಟ್ಟಿದೆ! ಅಲ್ಲದೆ... ಗಮನವಿಟ್ಟು ಕೇಳಿ.... ಈಗ ಭಾರತದಲ್ಲಿ ಉಳಿದಿರುವ ಮುಸ್ಲೀಂ ಕ್ರಿಶ್ಚಿಯನ್ ಮತದವರಲ್ಲಿ ತೊಂಬತ್ತೊಂಬತ್ತು ಭಾಗ ಭರತಖಂಡವೇ ಮೂಲ ನೆಲೆಯಾಗಿದ್ದವರು! ಯಾವ ಕಾರಣಕ್ಕೆ ನಮ್ಮದಲ್ಲದ ಆ ಮತಗಳನ್ನು ಆಚರಿಸುತ್ತಿದ್ದಾರೋ ನಾನು ಹೇಳಬಾರದು...”
ಇಬ್ಬರೂ ನಕ್ಕರು....,
“ಅರ್ಥವಾಗುತ್ತದೆ... ಮುಂದುವರೆಸು...”
“ಈಗ... ಅವರವರ ಯೋಗ್ಯತೆಗೆ ಅನುಸಾರವಾಗಿ ಬದುಕಬೇಕು!”
“ಅರ್ಥವಾಗಲಿಲ್ಲ!”
“ಈ ಕಲಿಯುಗದಲ್ಲಿ ಹುಟ್ಟಿನಿಂದ ಯಾರ ಯೋಗ್ಯತೆಯೂ ಅಳೆಯಲ್ಪಡುವುದಿಲ್ಲ! ಅವನವನ ಯೋಗ್ಯತೆಯನ್ನು ಅವನವನೇ ರೂಪಿಸಿಕೊಳ್ಳಬೇಕು. ನಮ್ಮ ಉನ್ನತಿ ನಮ್ಮ ಮನಸ್ಸಿನಿಂದ ಸಾಧ್ಯವೇ ಹೊರತು ಇನ್ನೊಬ್ಬರು ನಿರ್ಣಯಿಸುವುದರಿಂದಲ್ಲ! ಇಲ್ಲಿ ಯಾರೂ ಮೇಲಲ್ಲ- ಯಾರೂ ಕೀಳಲ್ಲ! ಯಾರಾದರೂ ನನ್ನನ್ನು ಕೀಳಾಗಿ ಕಂಡರೆ ನಾನೂ ಅವನ್ನು ಕೀಳಾಗಿ ಕಾಣುತ್ತೇನೆ... ನಿಮಗೆ ಗೊತ್ತೆ? ಹಿಂದಿನ ಕಾಲದಲ್ಲಿ ವಹಿವಾಟುಗಳು ಹೇಗೆ ನಡೆಯುತ್ತಿದ್ದವೆಂದು? ಬೇಳೆ ಹೆಚ್ಚಾಗಿ ಬೆಳೆಯುವವನು ರಾಗಿ ಹೆಚ್ಚಾಗಿ ಬೆಳೆಯುವವನಿಗೆ ಬೇಳೆಯನ್ನು ಕೊಟ್ಟು ರಾಗಿಯನ್ನು ಪಡೆಯುತ್ತಿದ್ದ!”
“ಇದೇಕೆ ಇಲ್ಲಿ?”
“ಈಗಿನ ಧರ್ಮವೇ ಅದು...! ಸೇಫ್ಟಿ ಟ್ಯಾಂಕ್ ಕ್ಲೀನ್ ಮಾಡುವವನೂ ಬೇಕು, ವ್ಯಾಪಾರ ವಹಿವಾಟು ಮಾಡುವವನೂ ಬೇಕು, ಜನರ ನಂಬಿಕೆಗನುಸಾರವಾಗಿ ಪೂಜೆ ಮಾಡುವವನೂ ಬೇಕು....! ಹಾಗೆಂದು ಯಾರೂ ಕೀಳಲ್ಲ! ಗಮನಿಸಿ... ಸೇಫ್ಟಿ ಟ್ಯಾಂಕ್ ಕ್ಲೀನ್ ಮಾಡುವುದನ್ನು ಕೀಳಾಗಿ ಕಾಣುತ್ತಾರೆ ಎಂದು ಹೇಳಿ ಅದನ್ನು ಮಾಡುವವವರು ತಮ್ಮ ಕೆಲಸ ಮಾಡದೇ ಹೋದರೆ ಹೇಗಿರುತ್ತದೆ? ಪ್ರತಿ ವಿಷಯದಲ್ಲಿಯೂ ಹೀಗೆಯೇ.... ಇದೊಂದು ಉದಾಹರಣೆ ಮಾತ್ರ! ನೀನು ನನಗೆ ಅಗತ್ಯವಾದ ವಸ್ತುಗಳನ್ನು ಕೊಡು... ನಾನು ನಿನಗೆ ಅಗತ್ಯವಾದಾಗ ನಿನ್ನ ಮನೆಯ ಸೇಫ್ಟಿ ಟ್ಯಾಂಕನ್ನು ಕ್ಲೀನ್ ಮಾಡಿ ಕೊಡುತ್ತೇನೆ.... ಒಂದು ವೇಳೆ ಪೂಜೆ ಮಾಡುವವನು "ಥೂ... ನೀವು ಸೇಫ್ಟಿ ಟ್ಯಾಂಕ್ ಕ್ಲೀನ್ ಮಾಡುವವರು ಕೀಳು ಜನ ಅಸಹ್ಯ!” ಅಂದರು ಅಂತ ಇಟ್ಟುಕೊಳ್ಳೋಣ.... ಅವರ ಮನೆಯ ಸೇಫ್ಟಿ ಟ್ಯಾಂಕ್ ಅವರೇ ಕ್ಲೀನ್ ಮಾಡುವ ಅವಸ್ಥೆ ತರಬೇಕು....! ಕೀಳು ಅನ್ನಿಸಿಕೊಂಡವರು ಯಾರೂ ಅವರನ್ನು ತಿರುಗಿಯೂ ನೋಡಬಾರದು! ಅದುಬಿಟ್ಟು ಅಯ್ಯೋ... ಅವನು ನನ್ನನ್ನು ಕೀಳು ಅಂದ ಎಂದು ಕೊರಗುತ್ತಾ ಕೂರಬಾರದು.... ಪ್ರತಿಯೊಬ್ಬರೂ ಸಮಾನರೇ...”
ಎಂದು ಅವರ ಮುಖವನ್ನು ನೋಡಿದೆ.
“ಈಗ ನಮ್ಮ ಧರ್ಮವನ್ನು ಹೇಳು ಗುರುವೇ!” ಎಂದರು.
“ನಮ್ಮ ಧರ್ಮಾ.... ನಮ್ಮ ಜೀವನ ನಮ್ಮದು! ನಮ್ಮ ಬದುಕಿನಿಂದ- ಬದುಕಿನ ರೀತಿಯಿಂದ ನಮಗೂ ಬೇರೆಯವರಿಗೂ ಯಾವುದೇ ರೀತಿಯ ತೊಂದರೆ- ದುಃಖ ಉಂಟಾಗಬಾರದು... ಸಾಧ್ಯವಾದರೆ ಇನ್ನೊಬ್ಬರಿಗೆ ಉಪಯೋಗವಾಗುವಂತೆ ಬದುಕೋಣ... ಸಾಧ್ಯವಾಗಲಿಲ್ಲವೇ ತೊಂದರೆ ಕೊಡುವುದು ಬೇಡ!”
“ಇಷ್ಟೇನೆ?”
“ಇನ್ನೇನಿದೆ!”
“ಈಗ ನಮಗೊಂದು ಸಮಸ್ಯೆ ಎದುರಾಗಿದೆ! ಏನು ಮಾಡಬೇಕು?”
“ಬುದ್ಧಿವಂತೆಯರು ನೀವು... ಸಮಸ್ಯೆ ಎದುರಾಗಿದೆ ಎಂದು ಹೇಳಿದಿರಿ- ಸಮಸ್ಯೆ ಏನು ಎಂದು ಹೇಳಲಿಲ್ಲ! ಇರಲಿ ಅದು ನನಗೊಂದು ಸಮಸ್ಯೆ ಅಲ್ಲ!”
ಎಂದು ಹೇಳಿ ಅವರ ಮುಖವನ್ನು ನೋಡಿ...
“ಒಂದು ಸಮಸ್ಯೆ ಎದುರಾದಾಗ ಅದನ್ನು ಎರಡು ರೀತಿಯಲ್ಲಿ ನಿವಾರಿಸಿಕೊಳ್ಳಬಹದು...!”
ಅವರು ಆಸಕ್ತಿಯಿಂದ ನನ್ನ ಮುಖವನ್ನು ನೋಡಿದರು!
“ಸಮಸ್ಯೆ ಇದೆ... ಆ ಸಮಸ್ಯೆಯನ್ನೇ ಯೋಚಿಸುತ್ತಾ ಕುಳಿತರೆ ಪ್ರಯೋಜನವಿಲ್ಲ! ಅದಕ್ಕೆ ಪರಿಹಾರವಿದೆಯೇ ಎಂದು ಯೋಚಿಸಬೇಕು! ಇದೆ ಅನ್ನುವುದಾದರೆ ಪರಿಹರಿಸಿ ಮುಂದಕ್ಕೆ ಹೋಗುವುದು!”
“ಇನ್ನೊಂದು?”
“ಪರಿಹಾರ ಇಲ್ಲ ಅನ್ನುವುದಾದರೆ ಸಮಸ್ಯೆಯನ್ನೇ ಬಿಟ್ಟು ಮುಂದಕ್ಕೆ ಹೋಗುವುದು!”
*
ಇಬ್ಬರೂ ಸಮಸ್ಯೆಯೊಂದಕ್ಕೆ ಪರಿಹಾರವನ್ನು ಹುಡುಕುತ್ತಾ ಕುಳಿತಿದ್ದಾರೆ. ನಾನು ಅವರನ್ನೇ ನೋಡುತ್ತಾ ಕುಳಿತಿದ್ದೇನೆ. ಅವರಿಗಾ ಸಮಸ್ಯೆಯನ್ನೊಡ್ಡಿದವನು ನಾನೇ! ಇಬ್ಬರೂ ಜೀವನ ಪೂರ್ತಿ ನನ್ನೊಂದಿಗೇ ಇರುತ್ತೀರ ಎಂದು!
“ಏನು ಮಾಡೋಣ್ವೆ? ದರಿದ್ರದವ್ನು- ಹೇಗ್ ಕೂತಿದಾನೆ ನೋಡು!”
“ಹುಂ ಕಣೆ.... ತಮಾಷೆಥರ ಶುರವಾಗಿದ್ದು... ಇಷ್ಟು ಸೀರಿಯಸ್ ಆಗುತ್ತೆ ಅನ್ಕೊಳ್ಲಿಲ್ಲ!!”
“ಸೀರಿಯಸ್ ನಮ್ಗೆ- ಸಾವು! ಅವ್ನ್ ನೋಡು- ರಪ್ ಅಂತ ಒಂದು ಕೊಡ್ಲ ಅನ್ಸುತ್ತೆ- ನಗೂನೂ ಬರುತ್ತೆ!”
“ನಿಜ ಅಲ್ವ? ಎಷ್ಟು ಸಿಂಪಲ್ ಆಗಿ ಬೆರೆತ! ಈಗ ಬಿಟ್ಟು ಹೋಗೋಕೆ ಆಗ್ತಿಲ್ಲ!”
“ಆದ್ರೂ... ಇಬ್ರೂ ಒಟ್ಗೆ.... ಗೊತ್ತಿದ್ದೇ.... ಹೇಗೇನೆ?”
“ತೀರ್ಮಾನ ಆಯ್ತೇನ್ರೆ?!”
“ನಿನ್ನಜ್ಜಿ! ನಾವಿಲ್ಲಿ ಹೊಟ್ಟೆ ಉರಿಯಿಂದ ಸಾಯ್ತಿದೀವಿ... ತೀರ್ಮಾನ ಬೇಕ ಮಗ್ನೆ!”
“ಪ್ರಾಣ ರಕ್ಷಣಾರ್ಥಂ ದೀರ್ಘದಂಡ ನಮಸ್ಕಾರಂ- ನಿಮ್ಮ ಪಾದಕ್ಕೆ!!”
“ಅಪ್ಪಾ... ಆಗಲ್ಲ ಕಣೆ... ಇವ್ನಿಂದಾನೇ ಸಾವು ನಮ್ಗೆ!”
“ಮತ್ತೆ ನಾನ್ ಸತ್ತಾಗ ಎದೆ ಬಡ್ಕೊಂಡು ಅಳೋರ್ಯಾರು?”
“ಆಹಾ... ಕಾಯ್ತಾ ಇರು!”
“ತೀರ್ಮಾನ ಹೇಳಿ ಸಾಯ್ರೆ!”
“ನಮ್ಮಜ್ಜಿ ನಾವು ನಿನ್ಜೊತೇನೇ ಇರ್ತೀವಿ ಅಂದಿದ್ರು ಅಲ್ವ?”
ಅವರನ್ನು ನೋಡಿ ಮುಗುಳುನಕ್ಕೆ.
“ಸರಿ ಹಾಗಿದ್ರೆ... ನೀನು ಮುಂಚೇನೇ ಹೇಳಿದಂತೆ ನನಗೆರಡು ಗಂಡ್ಮಕ್ಳು!” ಎಂದಳು ರುಕ್ಮಿಣಿ!
“ತಥಾಸ್ತು! ಅರ್ಣವ ಅನರ್ಘ!” ಎಂದೆ.
“ಇನ್ನೇನು?” ಎಂದು ನನ್ನ ಮುಖ ನೋಡಿದಳು ಸತ್ಯಭಾಮೆ!
“ತಥಾಸ್ತು! ಕ್ಷಮಾ ಧಾತ್ರಿ!” ಎಂದೆ.
“ಅಷ್ಟು ಬೇಗ ಹೆಸ್ರೂ ಕಂಡ್ಹಿಡಿದ್ಯ ಮಗ್ನೇ...” ಎಂದು ಹೇಳಿ ಇಬ್ಬರೂ ನನ್ನ ಮೇಲೆ ಮುಗಿಬಿದ್ದರು!
ಪ್ರಪಂಚದಲ್ಲಿ ಎರಡೇ ವರ್ಗ! ಒಂದು ಹೆಣ್ಣು ಇನ್ನೊಂದು ಗಂಡು! ಪ್ರಕೃತಿ- ಪುರುಷ! ಅದೆರಡೂ ಬೆರೆತಾಗ ಎಲ್ಲಾ ಒಂದೇ ವರ್ಗವೇ ಆದರೂ... ಗಂಡಿಗೆ ಹೆಣ್ಣು ಸಮಸ್ಯೆ ಹೆಣ್ಣಿಗೆ ಗಂಡು ಸಮಸ್ಯೆ! ಅದ್ವೈತಿಯಾಗಿದ್ದೂ ಪೂಜೆ ಪುರಸ್ಕಾರಗಳನ್ನು ಮಾಡುವ ದ್ವೈತಿಯಂತೆ....!!
ಪರಿಹಾರವಿಲ್ಲದ ಸಮಸ್ಯೆ- ಅವರಿಗೆ ನಾನು ನನಗೆ ಅವರು!
***
ಧರ್ಮ,ಲಿಂಗ ಮತ್ತು ಮೇಲು,ಕೀಳಿನ ಶತಮಾನದ ಚರ್ಚೆಗೆ ಅರಿವೆಂಬ ಪೂರ್ಣ ವಿರಾಮ ,ಈ ಬ್ಲಾಗ್ 😍😍
ReplyDeleteಮತ್ತೊಮ್ಮೆ ಓದಿ ಪೂರ್ತಿ ಅರಿತುಕೊಳ್ಳಬೇಕೆಂದೆನಿಸುತಿದೆ