Posts

Showing posts from December, 2021

ಮನಸ್ಸೊಂದು ಮಹಾಸಮುದ್ರ!

ಮನಸ್ಸೊಂದು ಮಹಾಸಮುದ್ರ ! * ಮಳೆಗಾಲದ ಒಂದು ರಾತ್ರಿ . ಸಮುದ್ರವನ್ನೇ ನೋಡುತ್ತಾ ಕುಳಿತಿದ್ದೆ . ಮಳೆ . ಎಷ್ಟು ಸುರಿದರೂ ಸಮುದ್ರ ಮಟ್ಟವೇನೂ ಅಧಿಕವಾಗುತ್ತಿಲ್ಲ ! ಅಲೆಗಳು ಉರುಳುರುಳಿ ಬಂದು ನನ್ನ ಕಾಲನ್ನು ತೋಯಿಸಿ ಮರಳುತ್ತಿತ್ತು ! ಒಂದು ಕಾಲು ನೀಡಿ - ಮತ್ತೊಂದು ಕಾಲು ಮಡಚಿ - ಹಿಂದಕ್ಕೆ ಕೈಯೂರಿ ಕುಳಿತಿದ್ದೆ . ಸಮುದ್ರದಮೇಲೆ ಬೀಳುತ್ತಿರುವ ಮಳೆಯನ್ನು ವರ್ಣಿಸುವುದು ಹೇಗೆ ? ಅದೂ ಮಧ್ಯ ರಾತ್ರಿ ? ಕತ್ತಲಾದರೂ ನೈಸರ್ಗಿಕ ಬೆಳಕಿನಲ್ಲಿ ? ಕಂಡೇ ಅನುಭವಿಸಬೇಕು - ಅನುಭವಿಸಿಯೇ ಅರಿಯಬೇಕು ! ನಾನೂ ತೊಯ್ದು ತೊಪ್ಪೆಯಾಗಿದ್ದೆ ! ಯಾರೋ ಮಹಾನುಭಾವ - ಜೀವನವೊಂದು ಮಹಾಸಮುದ್ರ - ಎಂದು ಹೇಳಿದ್ದು ನೆನಪಾಗಿ ನಗು ಬಂತು ! ಸಮುದ್ರವೆಲ್ಲಿ - ಹುಲುಮಾನವನೆಲ್ಲಿ ! ಒಂದು ಕ್ಷಣ ... ಜೀವನವೋ ಮನುಷ್ಯ ಮನಸ್ಸೋ ? ಮನಸ್ಸೊಂದು ಮಹಾಸಮುದ್ರ !! ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನು ಸುತ್ತಿಬರುವ ಮನಸ್ಸೆಲ್ಲಿ - ಬ್ರಹ್ಮಾಂಡಕ್ಕೆ ಹೋಲಿಸಿದರೆ ಬೊಗಸೆಯಲ್ಲೂ ತುಂಬದ ಸಮುದ್ರವೆಲ್ಲಿ ? ಏನೋ ....! ಸಮುದ್ರದ ಅಂಚಿನಲ್ಲೊಂದು ಮಿಂಚು - ಕಣ್ಣು ಕೋರೈಸಿತು . ಮಿಂಚಿನ ಬೆಳಕಿನಲ್ಲಿ ಪಕ್ಕದಲ್ಲಿ ಯಾರೋ ಇದ್ದಂತೆ ! ಮತ್ತೊಂದು ಮಿಂಚು ! ನಿಜ ! ಯಾರೋ ಇದ್ದಾರೆ . ಹೆದರಿಕೆ ಮಾನವ ಸಹಜ ! ಆದರೆ ಆ ಹೆದರಿಕೆ ಎಷ್ಟು ಹೊತ್ತು ಇರುತ್ತದೆ ಅನ್ನುವುದರಮೇಲೆ - ನಮ್ಮ ಮನೋಸ್ಥೈರ್ಯ ನಿಂತಿದೆ ! ನಿಜಕ್ಕೂ ಅದು ಹೆದರಿಕೆಗೆ ಕಾ...

ಸಮಸಮಾಜ

ಸಮಸಮಾಜ ! * “ ಒಬ್ಬ ಕೋಟ್ಯಾಧೀಶ್ವರನಿದ್ದ !” ಎಂದೆ . “ ಅದಕ್ಕೆ ?” ಎಂದ ಮಗ ! ನನ್ನ ಮಗನೇ ! ನನಗಿಂತ ತಲೆಹರಟೆ ! ಅವನನ್ನು ನೊಡಿ ನಕ್ಕು ಹೇಳಿದೆ , “ ಹತ್ತು ಜನ ಗೆಳೆಯರಲ್ಲಿ ಒಬ್ಬ ಕೋಟ್ಯಾಧೀಶ್ವರನಿದ್ದ !” ಈಗ ಅವನ ಕಣ್ಣಿನಲ್ಲಿ ಕುತೂಹಲ ! ದಾರಿಗೆ ಬಾ ಮಗನೆ ! ಯಾರೊಂದಿಗೆ ತಲೆಹರಟೆ !? ನಾನೇನಾದರೂ ಹೇಳುತ್ತೇನೆಯೇ ಎಂದು ನನ್ನ ಮುಖವನ್ನೇ ನೋಡಿದ ! ಹೇಳುವ ಸೂಚನೆ ಸಿಗದಿದ್ದಾಗ ... “ ಹೇಳಿ !” ಎಂದ . “ ಏನು ?” “ ಕೋಟ್ಯಾಧೀಶ್ವರನ ಬಗ್ಗೆ !” ಎಂದ . “ ಅದರಲ್ಲೇನಿದೆ ? ಸಮಸಮಾಜದ ಬಗ್ಗೆ ಕನಸುಕಂಡ ಹತ್ತು ಜನ ಗೆಳೆಯರು ಅವರು - ಅಷ್ಟೆ !” ಮತ್ತೆ ನನ್ನ ಮೌನವನ್ನು ಕಂಡು ಅಸಹನೆಗೊಂಡ ! ಮುಗುಳುನಕ್ಕು ಮುಂದುವರೆಸಿದೆ , “ ಹತ್ತು ಜನರೂ ಬಡವರು . ಬಡತನ ಕೆಟ್ಟದ್ದು ! ಎರಡು ಹೊತ್ತಿನ ಊಟಕ್ಕೆ - ದಿನಪೂರ್ತಿ ಕಷ್ಟಪಡಬೇಕಾಗಿತ್ತು ! ಕಷ್ಟ ಪಡುತ್ತಿದ್ದರು ಕೂಡ . ಆ ಹತ್ತು ಜನರಲ್ಲಿ - ಈ ಜೀವನ ಜಂಜಾಟದಲ್ಲಿ - ಒಬ್ಬ ಮಾತ್ರ ಭವಿಷ್ಯದ ಯೋಜನೆಯೊಂದನ್ನು ಸ್ಪಷ್ಟವಾಗಿ ರೂಪಿಸಿಕೊಂಡಿದ್ದ ! ಎರಡು ಹೊತ್ತಿನ ಊಟ ಅನ್ನುವ ಚಿಂತೆ ಬಿಟ್ಟು ಒಂದು ಹೊತ್ತಿನ ಊಟವನ್ನು ಮಾತ್ರ ಮಾಡುತ್ತಿದ್ದ !” ಮಧ್ಯೆ ತಲೆ ಹಾಕಿದ ಮಗ ! ನನ್ನ ಮಗನಲ್ಲವೇ ...., “ ಇದು ನಿಮಗೇ ಸ್ವಲ್ಪ ಉತ್ಪ್ರೇಕ್ಷೆ ಅನ್ನಿಸುತ್ತಿಲ್ಲವೇ ? ಒಂದು ಹೊತ್ತಿನ ಊಟ ....?” “ ಅದನ್ನು ಸೂಚ್ಯವಾಗಿ ತೆಗೆದುಕೋ .... ಹಲವಾರು ಖರ್ಚುವೆಚ್ಚಗಳನ್ನು ಕಡಿತಗ...

ಎಡವಿದ ಕಥೆ!

ಎಡವಿದ ಕಥೆ ! * “ ಕಥೆ ಕೇಳು ಹುಡುಗಿ ! ನೀನಿದುವರೆಗೆ ಕೇಳದಿರುವ ಕಥೆ !” “ ನೀ ಏನೇ ಹೇಳಿದರೂ ನಾ ಮುಂಚೆ ಕೇಳಿರುವುದಿಲ್ಲ !” “ ಒಂದು ಊರು ! ಅಲ್ಲೊಬ್ಬ ಹುಡುಗ !” “ ಒಂದೇ ಊರು - ಒಬ್ಬನೇ ಹುಡುಗನ ?” “ ಈ ಕಥೆಗೆ ಸಂಬಂಧಪಟ್ಟ ....!” “ ಹು !” “ ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ಎಡವಿ ಬಿದ್ದ !” “ ಹು !” “ ಎದ್ದ !” “ ಹು !” “ ಹಿಂದಕ್ಕೆ ನಡೆಯದೆ ಮುಂದಕ್ಕೇ ಹೋದ !” “ ಹು !” “ ದಾರಿ ತಲುಪಿದ್ದು ಮಹಾ ಸಮುದ್ರಕ್ಕೆ !” “ ಹು !” “ ಹಿಂತಿರುಗಿ ನಡೆಯಲು ತಿರುಗಿದ !” “ ಹು !” “ ಹೆಬ್ಬುಲಿ !” “ ಹು !” “ ಬಲ ಪಕ್ಕಕ್ಕೆ ಹೋಗೋಣವೆಂದರೆ - ಕಾಡಾನೆ !” “ ಹು !” “ ಎಡಪಕ್ಕ ಕಾಳಿಂಗ ಸರ್ಪ !” “ ಹು !” “ ಅವನು ಸಮುದ್ರಕ್ಕೇ ಬಿದ್ದ !” “ ಹು !” “ ಅಷ್ಟೇ ಕಥೆ !!!” “ ನಿನ್ನ ತಲೆ ! ಇದೆಂತ ಕಥೆ ?” “ ಯೋಚಿಸಿ ನೋಡು !” “ ಏನು ?” “ ಎಡವಿ ಬಿದ್ದಾಗಲೇ ಎದ್ದು ತಿರುಗಿ ನಡೆದಿದ್ದರೆ ?” “ ಎಂತ ಸಾವ ! ತತ್ತ್ವ ಹೇಳು !” “ ಪ್ರೇಮ ನೈರಾಶ್ಯದಲ್ಲಿ ಮದುವಯೇ ಆಗುವುದಿಲ್ಲವೆಂದು ಶಪಥ ಮಾಡಿದವ - ಇನ್ನೊಬ್ಬಳೊಂದಿಗೆ ಮದುವೆಯ ತಯಾರಿಯಲ್ಲಿದ್ದಾನೆ !!”