Posts

Showing posts from August, 2024

ಓಂ!

 ಓಂ! * ಯಾರೂ ಹೇಳದ ಕಥೆಯೊಂದನ್ನು ಹೇಳುತ್ತೇನೆ. ಇದು ನಡೆದಿರುವುದು ದೇವರ ಕಾಡಿನಲ್ಲಿ. ದೇವರಲ್ಲಿ ಕಾಡೋ ಕಾಡಿನಲ್ಲಿ ದೇವರೋ…, ಒಟ್ಟು ಕಥೆ ನಡೆದದ್ದು ದೇವರ ಕಾಡಿನಲ್ಲಿ. ಸುಮಾರು ನೂರು ವರ್ಷ ಮುಂಚೆ ನಡೆದ ಘಟನೆ- ಈಗ ಕಥೆಯಾಗಿದೆ. ಆಗ ನನಗೆ ಹತ್ತು ವರ್ಷ ವಯಸ್ಸು. ಓಣಂ ಹಬ್ಬಕ್ಕೆ ಹೂ ಕೀಳಲು ಹೋಗಿದ್ದೆ. ಒಬ್ಬನೇ. ಅಷ್ಟೊಂದು ಧೈರ್ಯವಂತನೇನೂ ಅಲ್ಲ. ಆದರೂ ಹೆದರಿಕೆಯ ನೆನಪಿಲ್ಲದೆ ಹೂ ಕೀಳುತ್ತಿದ್ದೆ. ಹೆದರಿಕೆ ಅನ್ನುವುದು ಸುಮ್ಮನೆ ಬರುವುದಿಲ್ಲ. ಅದಕ್ಕೊಂದು ಕಾರಣವೋ ಏನಾದರೂ ನೆನಪೋ ಉಂಟಾಗಬೇಕು! ಅದೆರಡೂ ಇಲ್ಲದೆ ಹೂ ಕೀಳುತ್ತಿದ್ದವನಿಗೆ ಆಕಸ್ಮಿಕವಾಗಿ ಆಕಳಿಕೆ ಬಂತು. ನನ್ನರಿವಿಲ್ಲದೆ ಕಣ್ಣು ಮುಚ್ಚಿಕೊಂಡವನಿಗೆ ಗಾಢ ನಿದ್ರೆ. ನಿದ್ರೆಯಲ್ಲೇನು ಕನಸು ಗೊತ್ತೇ…? ಅನಂತಶಯನ- ವಿಷ್ಣು. ನಿದ್ದೆ ಗಾಢವೇ ಆದರೂ ಕಾಣುತ್ತಿರುವುದು ಕನಸು ಅನ್ನುವ ಅರಿವು! ಪ್ರಶ್ನೆ…! ಛೇ…, ನನಗೇಕೆ ವಿಷ್ಣು ಕನಸಿನಲ್ಲಿ ಬರಬೇಕು? ನಾನು ಶಿವಭಕ್ತನಲ್ಲವಾ? ನಿಜವೇ…, ನಾನು ಹೇಗೆ ಶಿವಭಕ್ತನಾದೆ? ಅಂಡಬ್ರಹ್ಮಾಂಡ ಕೋಟಿ ಅಖಿಲ ಪರಿಪಾಲನ ಅನ್ನುವುದು ಒಂದುಕಡೆ, ಅಖಿಲಾಂಡಕೋಟಿ ಬ್ರಹ್ಮಾಂಡ ನಾಯಕ ಅನ್ನುವುದು ಮತ್ತೊಂದುಕಡೆ! ಮತ್ತೆ ವ್ಯತ್ಯಾಸವೇನು? ಹೇಗೆ? ಆ ವಯಸ್ಸಿನಲ್ಲೇ ರಾಮಾಯಣ ಮಹಾಭಾರತ ಮಹಾಕಾವ್ಯಗಳನ್ನೂ, ದೇವೀಭಾಗವತವನ್ನೂ ಓದಿದವನಿಗೊಂದು ಭಯಂಕರ ಗೊಂದಲವಿತ್ತು. ಕೋಪ ಬರುವ ಹಾಗಿದ್ದರೆ ದೇವರೇಕೆ ದೇವರು? ಪಾರ್ವತಿದೇವಿಗೆ ಅಸೂಯೆಯಾಗುತ್ತದೆ, ಲಕ್ಷ್ಮಿದ...

ಬೆಟ್ಟದಲ್ಲಿ ಸಿಕ್ಕವ!

 ಬೆಟ್ಟದಲ್ಲಿ ಸಿಕ್ಕವ! * ಕೆಲವೊಂದು ಪರಿಚಯಗಳು ತೀರಾ ಆಕಸ್ಮಿಕ ಮತ್ತು ತುಂಬಾ ಕುತೂಹಲಕಾರಿಯಾಗಿರುತ್ತದೆ. ಅಷ್ಟು ವರ್ಷದಿಂದ ಬೆಟ್ಟ ಹತ್ತುತ್ತಿದ್ದೇನೆ. ಕೆಲವರು ಪರಿಚಯವೇ ಆಗುವುದಿಲ್ಲ. ಪರಸ್ಪರ ನೋಡಿದರೂ ಪ್ರತಿದಿನ ಅಪರಿಚಿತರಂತೆಯೇ ಇರುತ್ತೇವೆ. ಕೆಲವರು ಮುಗುಳುನಗುವಿಗೆ ಸೀಮಿತ. ಕೆಲವರು ಹಾಯ್ ಹೇಳಿ ಸುಮ್ಮನಾಗುತ್ತಾರೆ. ಕೆಲವೇ ಕೆಲವರು ಮಾತ್ರ…, ಎಲ್ಲಿ ಎರಡುಮೂರು ದಿನದಿಂದ ಕಾಣಿಸಲಿಲ್ಲ ಅಂತಾನೋ…, ಎಷ್ಟು ದಿನದಿಂದ ಹತ್ತುತ್ತಿದ್ದೀರಿ ಅಂತಾನೋ…, ಪ್ರತಿದಿನ ನೋಡ್ತೀನಿ ನೀವು ತುಂಬಾ ಸ್ಪೀಡ್ ಆದ್ದರಿಂದ ಮಾತನಾಡಿಸಲು ಸಾಧ್ಯವಾಗಿರಲಿಲ್ಲ ಅಂತಾನೋ ಮಾತಿಗೆ ಶುರುವಿಡುತ್ತಾರೆ. ನಾನಾಗಿ ನಾನಂತೂ ಯಾರೊಬ್ಬರನ್ನೂ ಮಾತನಾಡಿಸಿದವನಲ್ಲ. ನಿಜ ಹೇಳಬೇಕೆಂದರೆ ಯಾರನ್ನಾದರೂ ಗಮನಿಸುವ ಸ್ಥಿತಿಯಲ್ಲಿ ನಾನಿರುವುದಿಲ್ಲ. ಟಕಟಕನೆ ಹತ್ತಿ ಟುಪುಟುಪು ಇಳಿದು ಹೋಗುವುದಷ್ಟೆ! ಆದರೆ ಸ್ವಲ್ಪ ದಿನದಿಂದ ಆ ಇಬ್ಬರು ಹುಡುಗರು ನನ್ನ ಗಮನವನ್ನು ಸೆಳೆದಿದ್ದಾರೆ. ನಾನು ಆಶ್ರಮದಬಳಿ ಗಾಡಿನಿಲ್ಲಿಸಿ ಹತ್ತು ನಿಮಿಷದ ವಾರ್ಮಪ್ ಶುರುಮಾಡುವ ಸಮಯಕ್ಕೆ ಸರಿಯಾಗಿ ನನ್ನನ್ನು ದಾಟಿ ಹೋಗುತ್ತಾರೆ- ಗಾಡಿಯಲ್ಲಿ. ಅವರು ಗಾಡಿಯನ್ನು ನಿಲ್ಲಿಸುವುದು ಮೆಟ್ಟಿಲು ಶುರುವಾಗುವ ಜಾಗದಲ್ಲಿ. ನಾನು ಗಾಡಿ ನಿಲ್ಲಿಸುವ ಜಾಗದಿಂದ ಇನ್ನೂರು ಮುನ್ನೂರು ಮೀಟರ್ ದೂರದಲ್ಲಿ- ಬೆಟ್ಟಕ್ಕೆ ಹತ್ತಿರವಾಗಿ. ಅದರಲ್ಲಿ ಹಿಂದೆ ಕುಳಿತಿರುವವನ ರೀತಿ ನೋಡಿದರೆ ಅವರಿಬ್ಬರು ಗಂಡು ಜೋಡಿಗಳೇನೋ...

ತಣ್ಣನೆಯ ಕ್ರೌರ್ಯ!

  ತಣ್ಣನೆಯ ಕ್ರೌರ್ಯ ! * ಅವಳೊಂದು ನೆರಳು . ನನ್ನರಿವಿಲ್ಲದೆಯೇ ನನ್ನೊಂದಿಗಿರುವ ನೆರಳು . ಪ್ರತಿಕ್ಷಣದ ಅವಳ ಪ್ರಾರ್ಥನೆಯೇ ನನ್ನ ಸಂರಕ್ಷಣೆ . ಅವಳ ಪ್ರೇಮವಿಲ್ಲದಿದ್ದರೆ ನಾನಿಲ್ಲ ! ಬದಲಾಗಿ ಅವಳಿಗೆ ನಾನು ಕೊಡುತ್ತಿರುವುದು ಏನು ? ನೋವು… ! ಅದೊಂದು ವಿಚಿತ್ರ ಅನುಭೂತಿ ನನಗೆ ! ಆ ಅನುಭೂತಿಯಿಂದ ನಾನು ಹೊರಬರಬೇಕಿತ್ತು… , ನನಗಾಗಿ ತಪಿಸುವ ..., ನನ್ನ ಕಥೆಗಳಿಗಾಗಿ ತಪಿಸುವ… , ಅವಳೆಂಬ ಅನುಭೂತಿಯಿಂದ ನಾನು ಹೊರಬರಬೇಕಿತ್ತು ! ನಿಜವೇ… , ನಾನು ಬರೆಯದಿದ್ದರೆ ತಪಿಸುವುದು ಅವಳು ಮಾತ್ರ . ನನ್ನಿಂದ ಒಂದು ಕಥೆ ಬರೆಸಲು ಏನೆಲ್ಲಾ ಕಸರತ್ತು ಮಾಡುತ್ತಾಳೆ… , ಪಾಪ ! ಸದ್ಯಕ್ಕೆ… , ಪೀಠಿಕೆಯೊಂದನ್ನು ಹಾಕಿದ್ದಾಳೆ . ಆ ಪೀಠಿಕೆಯಲ್ಲಿ… , ನನ್ನೆಡೆಗಿನ ಅವಳ ಪ್ರೇಮವೂ ಅವಳೆಡೆಗಿನ ನನ್ನ ತಾತ್ಸರವೂ ಇದೆ ! ಆದರದು ಉದ್ದೇಶಪೂರ್ವಕ ಹೇಳಿದ್ದಲ್ಲ ! ಅವಳರಿವಿಲ್ಲದೆ ಅವಳೊಳಗಿನ ನೋವು ಹೊರಬಂದಿದೆ . ಆ ನೋವಿಗೆ ಕಾರಣ ನಾನೇ - ಗೊತ್ತು ! ಕೆಲವೊಮ್ಮೆ ಹಾಗೆಯೇ… , ಯಾವ ಪ್ರಯತ್ನವೂ ಇಲ್ಲದೆ ನಮಗೆ ದೊರಕುವ ಪ್ರೇಮ , ವಾತ್ಸಲ್ಯ , ಕಾಳಜಿಗಳ ಮಹತ್ವ… , ನಮಗೆ ಅರಿವಾಗುವುದೇ ಇಲ್ಲ . ಅರಿತರೂ… , ತಾತ್ಸರ ! ಅದನ್ನು ಮರಳಿ ಕೊಡಲಾಗದಿದ್ದರೂ… , ನಮ್ಮಬಗ್ಗೆ ಅವರ ಮನಸ್ಸಿನಲ್ಲಿರುವ ಭಾವಕ್ಕೆ ಗೌರವವನ್ನಾದರೂ ಕೊಡಲು ಕಲಿಯಬೇಕು ! ನನಗದು ಆಗುವುದಿಲ್ಲ ! * “ ಓಯ್ !” ಎಂದೆ . “ ನ್ತ ?” ಎಂದ . ...