Posts

Showing posts from November, 2024

ಇತ್ತೀಚಿನ- ಮುಗಿದ ಜಿಜ್ಞಾಸೆಗಳು!

 ಇತ್ತೀಚಿನ- ಮುಗಿದ ಜಿಜ್ಞಾಸೆಗಳು! * ಜಿಜ್ಞಾಸೆ ಒಂದು:- “ನೀವು ದೇವಸ್ಥಾನಕ್ಕೇ ಹೋಗಲ್ವಾ?” ಎಂದು ಕೇಳಿದರು…, ಹೊಸದಾಗಿ ಪರಿಚಯವಾದ ಗೆಳೆಯರೊಬ್ಬರು- ಆಶ್ಚರ್ಯದಿಂದ. “ಒಬ್ಬನೇ ಹೋಗುವುದಿಲ್ಲ!” ಎಂದೆ. “ಕಾರಣ?” ಎಂದರು. “ಅಷ್ಟುದ್ದ ಕ್ಯೂ…! ಹೇಗೋ ಹತ್ತಿರ ತಲುಪಿ ಒಂದು ಸೆಕೆಂಡ್ ಕೂಡ ದರ್ಶನ ಮಾಡಿರುವುದಿಲ್ಲ…, ಮುಂದಕ್ಕೆ ಹೋಗಿ ಎಂದು ತಳ್ಳುತ್ತಾರೆ! ಅದು ಪಿರಿಪಿರಿ ಆಗುತ್ತದೆ. ನಾವು ದೇವಸ್ಥಾನಕ್ಕೆ ಹೋಗುವುದೇ ನೆಮ್ಮದಿಗಾಗಿ ತಾನೆ? ನೆಮ್ಮದಿ ಭಂಗ ಆಗೋಕೆ ಅಲ್ಲವಲ್ಲಾ? ನನಗೋ ಮನಃಸ್ತೃಪ್ತಿ ಆಗುವವರೆಗೂ ನೋಡಬೇಕು!” ಎಂದೆ. “ನೀವು ಹಾಗೆ ಹೇಳ್ತೀರ? ನನಗೆ ಹೇಗೆ ಗೊತ್ತಾ? ಅಷ್ಟುದ್ದ ಕ್ಯೂ…, ಹೇಗೋ ಹತ್ತಿರ ತಲುಪಿ ದರ್ಶನ ಆಗುತ್ತದೆ. ಅಬ್ಬಾ…, ಇಷ್ಟು ಹೊತ್ತು ಕ್ಯೂ ನಿಂತದ್ದು ಸಾರ್ಥಕವಾಯಿತು- ಕೊನೆಗೂ ದರ್ಶನವಾಯಿತು ಅನ್ನೋ ತೃಪ್ತಿ!” ಎಂದರು. ಅಲ್ಲವಾ…! ಮನಸ್ಸು ಜಿಜ್ಞಾಸೆಗೆ ತೊಡಗಿತು…, ನಾನು ದೇವಸ್ಥಾನಗಳಿಗೆ ಹೋಗದಿರಲು ಇದೊಂದೇ ಕಾರಣವಾ? ದೇವರೆಂದರೆ ಯಾರು? ಯಾಕೆ ದೇವಸ್ಥಾನಕ್ಕೆ ಹೋಗಬೇಕು? ಗೆಳೆಯರೊಂದಿಗೆ ಅಥವಾ ಇತರರೊಂದಿಗಾದರೆ ಹೋಗುತ್ತೇನಲ್ಲ? ಒಬ್ಬನೇ ಹೋಗುವುದಿಲ್ಲ ಅನ್ನುವುದಷ್ಟೇ ವಿಷಯ…, ಯಾಕೆ? ಚಾಮುಂಡಿ ಬೆಟ್ಟ…, ನನ್ನ ಇಮೋಷನ್ ಅದು! ಹತ್ತು-ಹದಿನೈದು ವರ್ಷಗಳಿಂಂದ ನಿರಂತರವಾಗಿ ಮೆಟ್ಟಿಲಮೂಲಕ ಹತ್ತುವುದು- ಇಳಿಯುವುದು- ಮಧ್ಯೆ ವ್ಯಾಯಾಮ ಮಾಡುವುದು…, ನನ್ನ ದೈಹಿಕ ಮತ್ತು ಮಾನಸಿಕ ದೃಢತೆಗೆ ಅತಿಮುಖ್ಯ ಕಾರಣ- ಚಾಮು...

ಚುಟುಕು ಕಥೆಗಳು

೧ ನಾಳೆ ಬರುತ್ತೇನೆಂದೆ! "ನಾಳೆ" ಬರಲೇ ಇಲ್ಲ! ೨ ಕಥೆ! ಅವಳ ಮೇಲಿನ ನನ್ನ ಅತಿಶಯವಾದ ಪ್ರೇಮ..., ಅವಳ ಬದುಕಿನ ಅತಿದೊಡ್ಡ ಸಮಸ್ಯೆ! 😁 ೩ "ಯಾವಾಗ ನೋಡು ನೆಗೆಟಿವ್ ಕಥೆಗಳು!" ಎಂದಳು. "ಅದನ್ನು ಓದಿ- ಬಿ ಪಾಸಿಟಿವ್!" ಎಂದೆ. 😁 ೪ "ಎಷ್ಟು ಚಂದ‌‌ ಅಲಾ ಈ ನೆಮ್ಮದಿಯ ಜೀವನ" ಎಂದೆ. "ಐ ಲವ್‌ಯು" ಎಂದಳು 😁 ೫ "ನೀ ಯಾಕೆ ನನ್ನಜೊತೆ ಮಾತ್ರ ಸಿಟ್ಟು ಮಾಡ್ಕೋಳೋದು?" ಎಂದಳು. "ಸಿಟ್ಟು ಮಾತ್ರವಲ್ಲ ನನ್ನ ದುಃಖ ದುಮ್ಮಾನ ಸೆಡವುಗಳೂ ಗೊತ್ತಿರುವುದು ನಿನಗೆ ಮಾತ್ರ ಅನ್ನುವಲ್ಲಿ ಉತ್ತರವಿದೆ!" ಎಂದೆ. ೬ ಕಥೆ ನಂ:- ೧೯೬ ನೂರಾ ತೊಂಬತ್ತಾರು ಕಥೆ ಬರೆದ ನಾನು, ನೂರಾ ತೊಂಬತ್ತಾರು ಕಥೆ! ಇನ್ನೂ ಮುಗಿಯದ ಕಥೆ! ಮುಗಿಯುವವರೆಗಿನ ಕಥೆ!😁

ಪ್ರೇರಣೆ!

ಪ್ರೇರಣೆ! * ಕರ್ತವ್ಯ ವಿಮುಖನಾಗಿ, ಜವಾಬ್ದಾರಿಯನ್ನು ತಿರಸ್ಕರಿಸಿ, ಯಾರನ್ನೂ ಉಳಿಸಿಕೊಳ್ಳಲು ಶ್ರಮಿಸದೆ, ಬಂಧನ ಇಷ್ಟವಿಲ್ಲವೆನ್ನುವ ನೆಪದಲ್ಲಿ ಅಲೆಮಾರಿಯಂತೆ ನನ್ನ ಜೀವನ ನಾನು ಬದುಕಲು ತೀರ್ಮಾನಿಸಿದ್ದರ ಹಿಂದಿನ ಪ್ರೇರಣೆ... ಸಿದ್ಧಾರ್ಥ! ಇದನ್ನೇ ಮಾಡಿ ಬುದ್ಧನೆನ್ನಿಸಿಕೊಂಡ ಸಿದ್ಧಾರ್ಥ 😁

ಲಕ್ಷ್ಮಿ

 ಲಕ್ಷ್ಮಿ * “ಬೇಗ ಇನ್ನೂರು ತಲುಪಿಸು!” ಎಂದಳು. “ನ್ತದೆ…, ಇನ್ನೂರು ಚಪಾತಿ ಮಾಡಬೇಕು ಅನ್ನುವಂತೆ ಹೇಳ್ತಿದೀಯ! ಕಥೆಯೇ…!” ಎಂದೆ. “ಓ ಭಾರಿ ಕಥೆ! ಎಷ್ಟೋಜನ ಇನ್ನೂರು ಪುಸ್ತಕವೇ ಬರೆಯುತ್ತಿದ್ದಾರೆ…, ಇವನೊಬ್ಬ!” ಎಂದಳು. “ನನ್ನೊಳಗೆ ಇನ್ನೇನೂ ಇಲ್ಲ- ಬರೆಯಲು!” ಎಂದೆ. “ಅದನ್ನೇ ಬರಿ- ಯಾಕಿಲ್ಲ- ಅಂತ!” ಎಂದಳು. ಇವಳು ಹೀಗೆಯೇ…! ನನ್ನ ಲಕ್ಷ್ಮಿ! ಎಲ್ಲರೂ ಬೆಣ್ಣೆಯನ್ನು ನವನೀತ ಎಂದರೆ ಇವಳು ನವನೀತನನ್ನೇ ಬೆಣ್ಣೆ ಅನ್ನುತ್ತಾಳೆ! “ಇನ್ನುಮುಂದೆ ಕಥೆ ಬರೆಯುವುದಿಲ್ಲ!” ಅಂದಿದ್ದೆ. “ಇನ್ನೂರು ತಲುಪಿಸಿಬಿಡು- ಆಮೇಲೆ ಬರೆಯಬೇಡ!” ಎಂದಳು. “ಇನ್ನೂರು ತಲುಪಿದ ತಕ್ಷಣ ನಾನು ಸತ್ತು ಹೋದರೆ ಏನು ಮಾಡ್ತಿ?” ಎಂದೆ. ಅದೊಂದು ದೊಡ್ಡ ಕಥೆಯಾಯ್ತು! “ನೀ ಯಾಕೆ ಹೀಗೆ?” ಎಂದಳು. “ಹೌದು ನಾನು ಹೀಗೇ!” ಎಂದೆ. “ಅದೇ ಯಾಕೆ?” “ಯಾಕೆ ಅಂದರೆ? ನಾನಿರುವುದೇ ಹೀಗೆ!” ಎಂದೆ. “ನನ್ನನ್ನು ನೋಯಿಸುವುದೇ ನಿನ್ನ ಕೆಲಸ!” ಎಂದಳು. “ನಾನೇನು ಮಾಡಿದೆ?” “ಕಥೆ ಬರಿ ಅಂದ್ರೆ ಸಾಯೋ ಮಾತು ಯಾಕೆ ಹೇಳ್ತಿ?” “ಒಳ್ಳೆ ಕಥೆ! ಇನ್ನೂರು ಕಥೆ ಬರೆದ ನಂತರ ಬರೆಯಬೇಡ ಅಂದರೆ ಏನರ್ಥ?” “ನೀನು ಸಾಯಬೇಕು ಅಂತಾನ? ನಿನಗೆ ಗೊತ್ತಿಲ್ವ ಲಕ್ಷ್ಮೀನ?” “ಗೊತ್ತು…! ಆಮೇಲೆ ಮುನ್ನೂರು ಅನ್ತಿ!” “ಕಥೆ ಬರೆಯಲು ಹೇಳಿದ್ದೇ ನಾನು ಮಾಡಿದ ತಪ್ಪು ಅಲಾ?” ಎಂದಳು. “ಹೋಗಲಿ ಬಿಡು…! ಕಾಂಪ್ರಮೈಸ್ ಆಗೋಣ! ಆಗಾಗ, ಮದ್ಮದ್ಯೆ ಒಂದೊಂದು ಕಥೆ ಬರೆಯುತ್ತಾ ನೂರಾ ತೊಂಬತ್ತೊಂಬತ್ತು ತಲುಪಿಸೋಣ...