Posts

Showing posts from June, 2019

ನಿಮಿತ್ತ - ಕಥೆ

ಒಬ್ಬ ರಾಜನಿದ್ದನಂತೆ , ಗೌತಮ ...., ಒಂದು ಶವ - ಒಬ್ಬ ರೋಗಿ - ಒಬ್ಬ ವೃದ್ಧನನ್ನು ಕಂಡು ವೈರಾಗ್ಯ ಹೊಂದಿ ಬುದ್ಧನಾದನಂತೆ ! ಇಂದು ? ಶವಗಳರಾಶಿ , ರೋಗಿಗಳ ಗುಂಪು , ಅಸಂಖ್ಯಾತ ವೃದ್ಧರೇ ಕಂಡುಬರುತ್ತಿದ್ದಾರೆ ... ಯಾರಿಗೂ ಏನೂ ಅನ್ನಿಸುತ್ತಿಲ್ಲ – ಅನ್ನಿಸುವುದಿಲ್ಲ ! ಯಾಕೆ ? ಒಂದೇರೀತಿಯ ಘಟನೆ - ಒಂದೇ ರೀತಿಯಲ್ಲಿ - ಎಲ್ಲರಿಗೂ ಅನ್ವಯಿಸುವುದಿಲ್ಲ . ' ಧರ್ಮವು ನಶಿಸಿದಾಗಲೆಲ್ಲಾ ಅವತಾರವೆತ್ತುತ್ತೇನೆ ' ಎಂದಿದ್ದಾನೆ ಭಗವಂತ . ಭಗವಂತನಾದರೂ ಸರಿಯೇ .. ಭೂಮಿಯಮೇಲೆ ಮನುಷ್ಯನಾಗಿ ಅವತರಿಸಿದರೆ ತನ್ನ ಅವತಾರದ ಉದ್ದೇಶವನ್ನು ತಿಳಿಯಲು ನಿಮಿತ್ತವೊಂದು ನಡೆಯಬೇಕಂತೆ - ಗೌತಮನಿಗೆ ಶವ - ರೋಗಿ - ವೃದ್ಧರು ಕಂಡಂತೆ !! ಇಷ್ಟಕ್ಕೂ ಈ ನಿಮಿತ್ತಗಳೆಂದರೆ ಏನು ? ಮನುಷ್ಯನನ್ನು ಯೋಚಿಸುವಂತೆ ಮಾಡುವ ಸಣ್ಣ - ದೊಡ್ಡ ಘಟನೆಗಳು ! ನಡೆದ ಘಟನೆಯನ್ನು ನಾವು ಯಾವ ರೀತಿ ತೆಗೆದುಕೊಳ್ಳುತ್ತೇವೆ ಎನ್ನುವುದರಮೇಲೆ ನಮ್ಮ ಭವಿಷ್ಯ ನಿಂತಿರುತ್ತದೆ ! ಅದೇ ನಿಮಿತ್ತ ! ೧ ಚಿಕ್ಕಂದಿನಲ್ಲಿ , ನಾನೊಂದು ಚಿತ್ರವನ್ನು ಬಿಡಿಸಿದೆ . ಅಮ್ಮನಿಗೆ ತೋರಿಸಿದಾಗ , “ ನನ್ನ ಮಗ ಚಿತ್ರ ಬಿಡಿಸೋದನ್ನೂ ಕಲಿತನ ? ತುಂಬಾ ಚೆನ್ನಾಗಿದೆ " ಎಂದರು . ಖುಷಿಗೊಂಡೆ . ಆದರೂ ಏನೋ ಸಂಶಯ . ಅದಕ್ಕಿಂತಲೂ ಚೆನ್ನಾಗಿರುವ ಮತ್ತೊಂದು ಚಿತ್ರವನ್ನ...

ಗೆಳೆಯ- ಕಥೆ

೧ ಹಣವನ್ನು ಸಂಪಾದಿಸುವುದು ಹೇಗೆ ? ಗೆಳೆಯ ಮತ್ತು ನಾನು ಹಗಲೂ ರಾತ್ರಿ ಯೋಚಿಸುತ್ತಿದ್ದ ವಿಷಯ ! ಒಟ್ಟಿಗೆ ಕುಳಿತು ಯೋಚಿಸಿದಷ್ಟೂ ತಲೆ ಹುಣ್ಣಾಗುತ್ತಿತ್ತು . ಐಡಿಯ ಹೊಳೆಯುತ್ತಿರಲಿಲ್ಲ ! ಒಬ್ಬೊಬ್ಬರೇ ಯೋಚಿಸುವಾಗ ಏನೇನೋ ಐಡಿಯಾಗಳು . ಒಂದು ದಿನ , ತೀರಾ ಆಕಸ್ಮಿಕವಾಗಿ ಇಬ್ಬರ ತಲೆಗೂ ಒಂದೇ ಐಡಿಯ ಹೊಳೆಯಿತು ! ಇಬ್ಬರೂ ಅದರಬಗ್ಗೆ ಚರ್ಚಿಸಿದೆವು ! ಅದರ ಆಗು ಹೋಗುಗಳಬಗ್ಗೆ ದೀರ್ಘವಾಗಿ ವಿಶ್ಲೇಷಿಸಿದೆವು . ಕೊನೆಗೆ , ಅದನ್ನು ಪ್ರಯೋಗಕ್ಕೆ ತರಲು ತೀರ್ಮಾನಿಸಿದೆವು . ಅದರ ಆಚರಣೆಯಲ್ಲಿ , ಅಪಾಯಕಾರಿ ಭಾಗವನ್ನು ಗೆಳೆಯನೇ ಕೈಗೊಳ್ಳುವುದಾಗಿ ಹೇಳಿದ . ಏನಿದ್ದರೂ ನಾನು ಪರಿಸ್ಥಿತಿಯನ್ನು ನಿಯಂತ್ರಿಸುವುದರಲ್ಲಿ ಅವನಿಗಿಂತ ಸಮರ್ಥ ! ಇಷ್ಟಕ್ಕೂ ನಾಟಕವೆಂದು ಕರೆಯಬಹುದಾದ ಅದೊಂದು ಕುತಂತ್ರ ! ೨ ದೂರದಲ್ಲಿ ಬರುತ್ತಿತ್ತು ಒಂದು ಐಶಾರಾಮಿ ಕಾರು . ಗೆಳೆಯ ನನ್ನನ್ನು ನೋಡಿದ . ಇಬ್ಬರೂ ಕಣ್ಣಿನಲ್ಲೇ ಮಾತನಾಡಿಕೊಂಡೆವು . ಕಾರು ತುಂಬಾ ಸಮೀಪಕ್ಕೆ ಬಂದಾಗ ನನ್ನ ಗೆಳೆಯ ಅಡ್ಡವಾಗಿ ಓಡಿದ ! ಕಾರು ನಿಜವಾಗಿಯೂ ಗುದ್ದಿತೋ ... ಅವನೇ ಎಗರಿದನೋ .... ಕಾರಿಗಿಂತ ಸುಮಾರು ಹತ್ತು ಅಡಿ ದೂರದಲ್ಲಿ ಬಿದ್ದ ! ನಾನು ಓಡುವುದಕ್ಕಿಂತ ಮುಂಚೆ ಜನ ಸೇರಿದರು ! ಒಂದು ಕ್ಷಣ , ಏನು ಮಾಡಬೇಕೆಂದು ತಿಳಿಯದೆ ಬೆಪ್ಪನಂತೆ ನಿಂತೆ . ನಂತರ ಗೆಳೆಯನ ಬಳಿಗೆ ಓಡಿದೆ . ಎದೆಯಬಳಿ ಒಂದು ತರಚು ಗಾಯ ಬಿಟ್ಟರೆ ಅವನಿಗೇನೂ ಆದಂತೆ ಕಾಣಲಿ...

ಪ್ರಾಕ್ಟಿಕಲ್ ಜೋಕ್- ಆತ್ಮ ಹತ್ಯೆಗೆ ಯೋಗ್ಯವಾದದ್ದು!!!- ಕಥೆ

ಪ್ರಾಕ್ಟಿಕಲ್ ಜೋಕ್ * ಸಿನೇಮಾ ನಿರ್ದೇಶಕನಾಗಬೇಕೆನ್ನುವುದು ನನ್ನ ಕನಸು. ಕನಸು ಕಾಣ ತೊಡಗಿದಮೇಲೆ ಅದರ ಸಾಧನೆಗೆ ಶ್ರಮಿಸಲೇ ಬೇಕಲ್ಲ? ಶ್ರಮಿಸಲಾರಂಭಿಸಿದೆ. ಬೆಂಗಳೂರು, ಮೈಸೂರು, ಶಿವಮೊಗ್ಗ ಎಂದು ಎಲ್ಲಾಕಡೆ ಸುತ್ತಾಡಿದೆ. ಹಲವು ನಿರ್ದೇಶಕರನ್ನು ಕಂಡು ಅಸಿಸ್ಟಂಟ್ ಆಗಿ ಸೇರಿಸಿಕೊಳ್ಳಿ ಎಂದೆ. ಹೊಸಬನಾದ್ದರಿಂದಲೂ ಮತ್ತೇನೋ ಕಾರಣಗಳಿಂದಲೂ ಯಾರೂ ಸೇರಿಸಿಕೊಳ್ಳಲಿಲ್ಲ. ಎರಡುವರ್ಷದ ಅಲೆದಾಟದ ನಂತರ ನನ್ನ ಗೆಳೆಯನೊಂದಿಗೆ ಒಬ್ಬರು ನಿರ್ಮಾಪಕರನ್ನು ಕಂಡೆ. ಅವರು ನನಗೆ ಸಹಾಯ ಮಾಡುವುದಾಗಿ ಹೇಳಿದರು. ಹಲವು ನಿರ್ದೇಶಕರ ಪರಿಚಯವಿರುವುದಾಗಿಯೂ ಯಾರಾದರೊಬ್ಬರನ್ನು ಪರಿಚಯಿಸುವುದಾಗಿಯೂ ಹೇಳಿದರು. ವೃತ್ತಿಯಿಂದ ಅವರು ಸರ್ಕಾರಿ ಕಾಲೇಜೊಂದರಲ್ಲಿ ಪ್ರಾದ್ಯಾಪಕರು. ಸ್ವಂತ ಹೆಸರಿನಲ್ಲಿ ಸಿನೆಮಾ ನಿರ್ಮಿಸುವಂತಿಲ್ಲ. ಆದರೂ, ಸಿನೆಮಾ ನಿರ್ಮಿಸುತ್ತೇನೆ, ಯಾರಾದರೊಬ್ಬರನ್ನು ಪರಿಚಯಿಸುತ್ತೇನೆ ಎಂದು ಹೇಳುತ್ತಾ ಎರಡು ವರ್ಷ ಅಲೆಸಿದರು! ಪ್ರಾದ್ಯಾಪಕರಾದ್ದರಿಂದ ಒಂದುರೀತಿಯ ನಂಬಿಕೆ, ಕಾದೆವು. ಪಾಪ..! ನನ್ನೊಂದಿಗೆ ನನ್ನ ಗೆಳೆಯನೂ ಅಲೆದಾ... ಅಲೆದಾ... ಅಲೆದಾ... ಅಲೆದದ್ದೇ ಆಯಿತು! ಮನೆಯವರಿಂದ ಸಿಗುವ ಬೈಗುಳಕ್ಕೆ ಬಲಿಪಶು ಅವನೇ...!! ಅವನ ಕಾರಣದಿಂದ ನಾನು ಹೀಗೆ ದಾರಿ ತಪ್ಪಿ ನಡೆಯುತ್ತಿದ್ದೇನೆ ಎನ್ನುವುದು ಅವರ ನಂಬಿಕೆ..! ಗೆಳೆಯ ದೃತಿಗೆಡಲಿಲ್ಲ. ನನ್ನನ್ನು ಸಿನೆಮಾ ಪ್ರಪಂಚಕ್ಕೆ ತಲುಪಿಸಿಯೇ ತಲುಪಿಸುತ್ತೇನೆಂದ! ಕೊನೆಗೊಂದುದಿನ, ಅವನ ಶ್ರಮದ ಫಲವ...

ಆಮಿನ ಹೇಳಿದ- ನಿಜ- ಕಥೆ

ನಮಸ್ತೇ ... ನಾನು ಆಮಿನಾ ... ತಿಳಿದಿರಬೇಕು , ಹುಟ್ಟಿದ ಇಪ್ಪತ್ತನೆಯ ದಿನ ತಾಯಿಯಿಂದ ನಾಲೆಗೆ ಎಸೆಯಲ್ಪಟ್ಟ ಮಗುವಿನಬಗ್ಗೆ ? ಆ ಮಗು ನಾನೆ ! ನಾನು ನಿಮಗೊಂದು ವಿಷಯವನ್ನು ಹೇಳಬೇಕೆಂದಿದ್ದೇನೆ . ಕೋರಿಕೆಯಲ್ಲ , ಉಪದೇಶವೂ ಅಲ್ಲ . ಒಂದು ನಿಜ ಅಷ್ಟೆ . ಈ ನಿಜವನ್ನು ನೀವು ತಿಳಿದುಕೊಳ್ಳಲೇ ಬೇಕೆನ್ನುವ ನಿರ್ಬಂಧವೇನೂ ಇಲ್ಲ . ಆದರೂ , ತಿಳಿದುಕೊಂಡರೆ ನೀವು ನಿಮ್ಮ ಯೋಚನಾಪಥವನ್ನು ಸ್ವಲ್ಪವಾದರೂ ಬದಲಿಸಬಹುದೆಂಬ ಆಸೆ ನನಗೆ . * ನನ್ನಪ್ಪನ - ಅಮ್ಮನ ಗಂಡ ಅಲ್ಲ - ವೀರ್ಯ ಕಣಗಳಲ್ಲಿ ಎಲ್ಲರನ್ನೂ ಹಿಂದಿಕ್ಕಿ ಅಮ್ಮನ ಗರ್ಭಪಾತ್ರವನ್ನು ಸೇರಿಕೊಂಡೆ ! ಗೆದ್ದೆನೆಂಬ ಅಹಂಕಾರ ನನಗೆ ! ಆದರೆ , ಅಮ್ಮನನ್ನು ಸೇರಿದ ಮೊದಲ ದಿನ ನಾನು ಕೇಳಿಸಿಕೊಂಡ ಮೊದಲ ಮಾತುಗಳಿವು , ನನ್ನಪ್ಪ - ಅಮ್ಮನ ಗಂಡ ಹೇಳಿದ್ದು ! " ಒಂದು ದಿನ - ಅರ್ಧ ಘಂಟೆ ಬೇರೊಬ್ಬನೊಂದಿಗೆ ಮಲಗಿದ್ದಕ್ಕೆ ಹತ್ತು ಸಾವಿರ ರೂಪಾಯಿ ! ........( ಕೆಲವು ಕೆಟ್ಟ ಪದಗಳನ್ನು ಬಳಸಿ ) ನನ್ನ ಹೊಡೆತ ತಿನ್ನುವುದಕ್ಕಿಂತ ಮುಂಚೆ ಮಲಗಿದ್ದರೆ ? ಇನ್ನು ಮುಂದೆಯಾದರೂ ನೆನಪಿರಲಿ , ನಾನು ಹೇಳಿದಂತೆ ಕೇಳಬೇಕು ......( ಮತ್ತಷ್ಟು ಕೆಟ್ಟ ಪದಗಳು ) ತಿಳಿಯಿತೇ ?" ನನ್ನಮ್ಮನ ದುಃಖ ನನಗೆ ಅನುಭವವಾಗುತ್ತಿತ್ತು . ಬಿಕ್ಕಿ ಬಿಕ್ಕಿ ಅಳುತ್ತಿದ್ದರು . ಶಾರೀರಿಕ ನೋವ...