Posts

ಬೆಟ್ಟದಲ್ಲಿನ ಗೊಂದಲ!

ಬೆಟ್ಟದಲ್ಲಿನ ಗೊಂದಲ * ಇಂದೇಕೆ ಹೀಗೆ ? ಎಚ್ಚರವಾದಾಗಿನಿಂದ ಏನೋ ಗೊಂದಲ ! ಸೋಮಾರಿತನ ! ಬೆಟ್ಟಕ್ಕೆ ಹೋಗಬೇಕೋ ಬೇಡವೋ… ? ಇಂದು ಹೋಗದಿದ್ದರೆ ಈ ವಾರ ಪೂರ್ತಿ ಹಾಳು ! ಹನ್ನೆರಡು ವರ್ಷದಿಂದ ಸ್ಟೆಪ್ ಹತ್ತುತ್ತಿದ್ದೇನೆ ! ನನ್ನ ದೈಹಿಕ - ಮಾನಸಿಕ ದೃಢತೆಗೆ ಬೆಟ್ಟದ ಪಾತ್ರ ಅಷ್ಟಿಷ್ಟಲ್ಲ ! ಎಂದಿರುವಾಗ ಸೋಮಾರಿಯಾಗಬಹುದೇ ? ಎದ್ದೆ . ತಯಾರಾದೆ . ಬೆಟ್ಟದ ತಪ್ಪಲು ತಲುಪಿದಾಗ… ಗೊಂದಲಕ್ಕೆ ಪುಷ್ಟಿ ಕೊಡುವಂತೆ… ಪ್ರತಿ ದಿನವೂ ಜೊತೆಗೆ ಹತ್ತುತ್ತಿದ್ದ ಐದಾರು ನಾಯಿಗಳಲ್ಲಿ ಒಂದೇ ಒಂದು ನಾಯಿ ನನಗಾಗಿ ಕಾಯುತ್ತಿದೆ ..! “ ಉಳಿದವರು ಎಲ್ಲೋ ?” ಎಂದೆ . “ ಭೌ !” ಎಂದಿತು . ಯಾರಿಗ್ಗೊತ್ತು ಎಂದಿರಬಹುದು ! ಅಥವಾ… , ಬೆಟ್ಟ ಹತ್ತಬೇಡ ಎಂದೇನಾದರೂ ಸೂಚನೆ ಕೊಡುತ್ತಿದೆಯೋ ? ಏಳುವಾಗಿನ ಸೋಮಾರಿತನಕ್ಕೆ ಪುಷ್ಟಿಕೊಡುತ್ತಿದ್ದೇನೆ ಅನ್ನಿಸಿತು… ಅಲ್ಲದೆ… , ಹೆಜ್ಜೆ ಮುಂದಿಟ್ಟಾಗಿದೆ ! ಹತ್ತಲು ಶುರು ಮಾಡಿದಾಗಲೂ ಎರಡುಮೂರುಬಾರಿ .., “ ಭೌ , ಭೌ , ಭೌ !” ಎಂದಿತು . ಯಾಕೋ ಇಂದು ಮಹಾಪ್ರಾಣದಲ್ಲಿ ಬೊಗಳುತ್ತಿದೆ ಅನ್ನಿಸಿ ನಗುಬಂತು ! ಇವ ನಿಲ್ಲುವುದಿಲ್ಲ - ನನ್ನ ಮಾತು ಕೇಳುವುದಿಲ್ಲ - ಅನ್ನಿಸಿತೋ ಏನೋ… ಎಂದಿನಂತೆ ಹಿಂದೆ ಮುಂದೆ ಅಕ್ಕ ಪಕ್ಕ ಸುಳಿಯುತ್ತಾ ಕಾವಲುಗಾರನಂತೆ ಜೊತೆಬಿಡದೆ ನಡೆಯಿತು ! ನನ್ನ ಗೊಂದಲಕ್ಕೆ ಚಿಗುರುಗಳು ಮೊಳೆಯಲಾರಂಭಿಸಿತು ! ಅಲ್ಲಾ… , ಹಾರರ್ ಕಥೆಗಳನ್ನು ಬರೆದೂ ಬರೆದೂ… ಎಷ್ಟು ಮಟ್...

ಹಾರರ್ ಥೀಂ

  ಹಾರರ್ ಥೀಂ ! “ ದೆವ್ವ ಭೂತಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು ?” ಎಂದು ಕೇಳಿದೆ . ಗೊಂದಲದಿಂದ ನೋಡಿದ ! ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಹೀಗೆ ಪ್ರಶ್ನಿಸಿದರೆ ಯಾರಿಗಾದರೂ ಗೊಂದಲವುಂಟಾಗುತ್ತದೆ ! ಅದರಲ್ಲೂ ಯಾವ ಪೀಠಿಕೆಯೂ ಇಲ್ಲದೆ… ! “ ಕ್ಷಮಿಸಿ… ನಿಮ್ಮ ಬಸ್ಸಿನಲ್ಲೇ ಇದ್ದೆ - ನಿಮ್ಮ ಹಿಂದಿನ ಸೀಟ್ ! ನೀವು ಪಕ್ಕದ ಸೀಟಿನವರೊಂದಿಗೆ ಏನೋ ಹೇಳುತ್ತಿದ್ದದ್ದು ಕೇಳಿಸಿತು… ರಾಜರಾಜ ಚೋಳನೆಂದೋ ಏನೋ… ! ಏಳುನೂರು ವರ್ಷದಷ್ಟು ಹಳೆಯ ಮರದಬಗ್ಗೆ… !” ಎಂದೆ . ಆತ ರಿಲಾಕ್ಸ್ ಆಗಿ ಮುಗುಳುನಕ್ಕು… , “ ಇಂಗ್ಲೀಷ್ ಹಾರರ್ ಮೂವಿಗಳನ್ನು ನೋಡಿದ ಪ್ರಭಾವ ಗುರುವೆ ! ಕನ್ನಡದಲ್ಲೂ ಹಾಗೊಂದು ಮೂವಿ ಮಾಡುವ ಯೋಚನೆ !” ಎಂದ . ಈಬಾರಿ ನಾನು ಗೊಂದಲದಿಂದ ನೋಡಿದೆ ! “ ನಾನೊಬ್ಬ ರೈಟರ್ ! ಪ್ರೊಡ್ಯೂಸರೊಬ್ಬರು ಹಾರರ್ ಥೀಂ ಕಥೆ ಬೇಕು ಅಂದರು ! ಅದೇ ಮಾಮೂಲಿ ಬಿಳಿಸೀರೆ , ರಕ್ತ ಹೀರುವ ದೆವ್ವಗಳನ್ನು ಬಿಟ್ಟು ಬೇರೆ ಬರೆಯೋಣ ಅನ್ನಿಸಿತು !” ಎಂದ . ನನ್ನ ಮುಖದಲ್ಲಿ ಕುತೂಹಲವನ್ನು ಕಂಡನೋ ಏನೋ… , “ ಆದರೂ ಸುಮ್ಮಸುಮ್ಮನೆ ಏನೋ ಬರೆದರೆ ಆಗದಲ್ಲಾ… ? ನಿಜಕ್ಕೆ ಹತ್ತಿರವಾಗಿರುವ ಹಾಗೆ ಬರೆಯಬೇಕು ! ನಿಜವೇ ಎಂದು ನಂಬುವಂತಿರಬೇಕು !” ಎಂದು ಹೇಳಿ ಕೈಯ್ಯಲ್ಲಿದ್ದ ಟೀ ಕಪ್ಪನ್ನು ಸಿಪ್ ಮಾಡಿ ನನ್ನ ಮುಖ ನೋಡಿ .., “ ಸಾರಿ ! ಒಬ್ಬನೇ ಕುಡಿಯುತ್ತಿದ್ದೇನೆ… ! ನಿಮಗೆ ಟೀ ?” ಎಂದ . “ ಅಯ್ಯೋ ಬೇಡ ! ನೀವು ಮಾತನಾಡುತ್ತಿದ್...

ಕುಟ್ಟಿಚ್ಚಾತ್ತನ್‌

ಕುಟ್ಟಿಚ್ಚಾತನ್ ! “ ಹಾಗೆ… ಕೊನೆಗೂ ದಾರಿಗೆ ಬಂದೆ ಅನ್ನು !” “ ನಾನೇಕೆ ದಾರಿಗೆ ಬರಲಿ ? ನೀನು ನನ್ನ - ನಾನು ನಿನ್ನ - ಕರ್ತವ್ಯ ! ಕಾಲಾಯ ತಸ್ಮೈ ನಮಃ !” ಎಂದೆ . “ ಹೂಂ… ಇಷ್ಟು ಅಹಂಕಾರ ಇಲ್ಲದಿದ್ದರೆ ನಾವೇಕೆ ಒಂದು ! ಕಾಲ… ಕಾಲವೂ ನಿಯಮಕ್ಕೆ ಬದ್ಧ ! ಈಗ… ಕಾಲವಾಗಿದೆ ! ಹೇಳು… ಏನುಮಾಡಲಿ ? ಅದಕ್ಕೆ ಬದಲಾಗಿ ಏನು ಮಾಡುತ್ತೀಯ ? ನನ್ನಿಂದ ಏನು ಬೇಕೋ ತೆಗೆದುಕೋ ಅನ್ನಬೇಡ ! ಹಾಗೆ ಹೇಳಿದ್ದರಿಂದ - ನನ್ನನ್ನು ನಂಬಿದ್ದರಿಂದ - ಇಂದಿನವರೆಗೆ ನಿನ್ನನ್ನು ಸಂರಕ್ಷಿಸಿದ್ದೇನೆ ! ಈಗ ನೀ ಪ್ರಾಪ್ತನಾಗಿದ್ದೀಯ ! ಲೆಕ್ಕ ಲೆಕ್ಕವೇ ..! ಹೇಳು - ಏನು ಕೊಡುತ್ತೀಯ ?” “ ನೀನು ನನ್ನನ್ನು ಅಧಿಗಮಿಸಿ ಮಾತನಾಡಬೇಡ ! ನೀ ಹೇಳಿದಂತೆ ಲೆಕ್ಕ ಲೆಕ್ಕವೇ ! ನನ್ನ ಗುರಿ ನಾನು ಸಾಧಿಸುವಂತಾದರೆ ನಿನ್ನ ಕೀರ್ತಿಯನ್ನು ಪ್ರಪಂಚಕ್ಕೆ ಹರಡುತ್ತೇನೆ ! ಅದಕ್ಕಾಗಿ ನನ್ನ ಆದಾಯದ ನಾಲಕ್ಕರಲ್ಲಿ ಒಂದುಭಾಗ ನಿನಗಾಗಿ ಮೀಸಲಿಡುತ್ತೇನೆ !” ಎಂದೆ . * ಕುಟುಂಬ ಕ್ಷೇತ್ರ ! ಭಗವತಿ ಮತ್ತು ವಿಷ್ಣುಮಾಯ - ಪ್ರಧಾನ ಮೂರ್ತಿಗಳು . ಅವರ ಗಣಗಳಾಗಿ - ದೊಡ್ಡ ಮುತ್ತಪ್ಪ , ಚಿಕ್ಕ ಮುತ್ತಪ್ಪ , ವೀರಭದ್ರ , ಬ್ರಹ್ಮರಕ್ಸಸ್ಸ್ ... ಕುಟುಂಬದಲ್ಲಿ ಯಾರೇ ಮರಣಿಸಿದರೂ - ಅವರು ಈ ಗಣಗಳಲ್ಲಿ ಐಕ್ಯರಾಗುತ್ತಾರೆ… ಕ್ಷಣದಿಂದ ಕ್ಷಣಕ್ಕೆ ಮೂರ್ತಿಗಳ ಶಕ್ತಿ ವರ್ಧಿಸುತ್ತ ಹೋಗುತ್ತದೆ… ಹನ್ನೆರಡು ವರ್ಷಗಳಿಗೊಮ್ಮೆ - ಪ್ರೇತಾಹ್ವಾನ ಅನ್ನುವ ಕರ್ಮವೊಂದು ನೆರವ...

ವಾಲ್ಮೀಕೀವೇದಾಂತ!

ವಾಲ್ಮೀಕೀ ವೇದಾಂತ ! * ಶೃಂಗಾರದಲ್ಲಿದ್ದ ಕ್ರೌಂಚ ಪಕ್ಷಿಗಳಲ್ಲಿ ಒಂದನ್ನು ಹೊಡೆದುರುಳಿಸಿದ ವ್ಯಾಧ ! ಅವನಿಗೆ ಮುಖ್ಯ - ಬೇಟೆ ! ಬೇಟೆ ಅವನ - ಧರ್ಮ ! ಪಕ್ಷಿಗಳ ಆನಂದವನ್ನು ತನ್ನದೇ ಆನಂದವೆಂಬಂತೆ ಅನುಭಾವಿಸುತ್ತಿದ್ದ ಕವಿ ಹೃದಯ ಮರುಗಿತು - ಅಯ್ಯೋ ಎಂದಿತು . ಸತ್ತ ಪಕ್ಷಿಯನ್ನು ಸುಟ್ಟು ತಿನ್ನಲು ತೆಗೆದುಕೊಂಡು ಹೋದ ವ್ಯಾಧ ! ಕ್ರೋಧಗೊಂಡ ಕವಿ ವ್ಯಾಧನನ್ನು ಶಪಿಸಿದ - ಎಂದು ಯಾರೋ ಭಾವುಕ ಜೀವಿ ಹೇಳಿದ್ದಾನೆ ! ಅದು ಆ ಹೇಳಿದವನ ಭಾವವೇ ಹೊರತು - ಕವಿ ಶಪಿಸಲಾರ ! ಪಕ್ಷಿಯ ಸಾವಿಗೆ ದುಃಖವಿದೆ ! ಸತ್ತ ಪಕ್ಷಿಯ ಸಂಗಾತಿಯ ದುಃಖಕ್ಕೆ ವಿಷಾದವಿದೆ ! ಹಾಗೆಂದು ತನ್ನ ಧರ್ಮವನ್ನು ತಾನು ನೆರವೇರಿಸಿದ ವ್ಯಾಧನನ್ನು ಶಪಿಸುವಷ್ಟು ಅವಿವೇಕಿಯೋ ಕಠಿಣ ಹೃದಯನೋ ಅಲ್ಲ - ಕವಿ ! ಸಂಗಾತಿಯನ್ನು ಕಳೆದುಕೊಂಡ ಕ್ರೌಂಚದ ದುಃಖ… ಕವಿ ಹೃದಯದಲ್ಲಿ ಮಹಾಕಾವ್ಯವನ್ನೇ ಹುಟ್ಟಿಸಿತು ! ಮಹಾಕಾವ್ಯ ! ಕರುಣರಸ ಪ್ರೇರಿತವಾದರೂ… ಕರುಣರಸವೇ ಪ್ರಧಾನವಾದರೂ… ನವರಸಗಳಲ್ಲಿ ಯಾವೊಂದಕ್ಕೂ ಕೊರತೆಯಾಗದೆ - ಪ್ರತಿ ರಸದ ಪರಾಕಾಷ್ಠೆಯನ್ನು ತಲುಪಿದ - ಮಹಾಕಾವ್ಯ ! ಅಲ್ಲವೇ… ? ಒಂದು ವಿಷಾದಮೂಲ ಘಟನೆಯೇ ಕಾರಣವಾಗಿ ಮಹಾಕಾವ್ಯವೊಂದು ಸೃಷ್ಟಿಯಾಯಿತು ! ಅಂದಮೇಲೆ… , ದುಃಖ - ಕೆಟ್ಟದ್ದೇ ? * “ ನಾನೂ ನಿಮ್ಮ ಮಗಳೇ ! ಸ್ವಲ್ಪದಿನ ನನ್ನೊಂದಿಗೆ ಬಂದು ಇರಲಾಗದೆ ?” ಎಂದರು ಅಕ್ಕ . “ ವಾಲ್ಮೀಕಿ ಒಬ್ಬನೇ ಆಗುತ್ತಾನಲ್ಲ ?” ಎಂದರು ಅಮ್ಮ ! “ ...