ಕಥೆಗಾರ- ಕಥೆ
೧
ನಮಸ್ತೇ....
ನಾನು ಪಾರೀವಾಳ.
ನನ್ನ ಮೂಲಕ ಮಾತನಾಡುತ್ತಿರುವವನು ಒಬ್ಬ ಕತೆಗಾರ!
ಪಾಪ! ಬರೆಯಲು ವಿಷಯವೇನೂ ಇಲ್ಲವಂತೆ! ಸಹಾಯಮಾಡಲು ಸಾದ್ಯವೇ- ಎಂದು ಕೇಳುತ್ತಿದ್ದಾನೆ.
“ನಾನು ಹೇಳಲು ಪ್ರಾರಂಭಿಸಿದರೆ ಮುಗಿಯಲು ವರ್ಷಗಳು ಬೇಕು " ಎಂದೆ.
“ಯಾಕೆ?” ಎಂದ.
“ಯಾಕಾ? ಸಾವಿರಾರು ವರ್ಷಗಳ ಹಿಂದೆ ಪ್ರೇಮ ಸಂದೇಶಕರಾಗಿ ನಮ್ಮನ್ನು ಕಳಿಸುತ್ತಿದ್ದ ದಿನಗಳಿಂದ ಹಿಡಿದು- ಸಾರು ಮಾಡಿ ತಿನ್ನುತ್ತಿರುವ ಈ ದಿನಗಳವರೆಗೆ ಹೇಳಬೇಡವೇ? ವರ್ಷಗಳು ಸಾಕೆ? ಶತಮಾನಗಳು ಬೇಕು" ಎಂದೆ.
ನಕ್ಕ ಕಥೆಗಾರ.
“ಅದೆಲ್ಲಾ ಪುರಾಣಗಳು ಬೇಡ. ಇತ್ತೀಚಿನ ಯಾವುದಾದರೂ ಒಳ್ಳೆಯ ಘಟನೆಗಳಿದ್ದರೆ ಹೇಳು- ನಾನದನ್ನು ಕಥೆ ಮಾಡುತ್ತೇನೆ!” ಎಂದ.
“ಕಥೆ ಮಾಡುತ್ತೇನೆ ಎಂದರೆ? ತಿಳಿಸಾರು ಮಾಡುವಷ್ಟು ಸುಲಭವೇ?” ಎಂದೆ.
“ಈಗ ಹೇಳುತ್ತೀಯೋ ಇಲ್ಲವೋ?” ಎಂದ ಅಸಹನೆಯಿಂದ.
“ನಿನಗೆ ಹೇಳಬಹುದಾದ ಯಾವ ಘಟನೆಗಳಿವೆ?” ಎಂದು ಯೋಚಿಸಿದೆ.
“ಸರಿ, ಪ್ರಪಂಚದಲ್ಲಿ ನಡೆಯುತ್ತಿರುವ ಕೆಲವೊಂದು ಕೆಡುಕುಗಳನ್ನು ಹೇಳುತ್ತೇನೆ. ಒಂದೇ ವಿಷಯಕ್ಕೆ ಸಂಬಂಧಪಟ್ಟ ಘಟನೆಗಳು. ಅದನ್ನು ಹೇಗೆ ಕಥೆ ಮಾಡುತ್ತೀಯೋ ನಿನಗೆ ಬಿಟ್ಟದ್ದು" ಎಂದೆ.
“ಇಲ್ಲ, ಮನುಷ್ಯ, ನಾನು ಹೇಳಿದರೆ ಜನತೆಯ ಮನಸ್ಸಿಗೆ ನಾಟುವುದಿಲ್ಲ. ನೀನೇ ಹೇಳು" ಎಂದ.
೨
ಪಾರೀವಾಳ ನಾನು. ಹಾರಾಡುವುದು, ತಿನ್ನುವುದು, ಭೂಮಿಯನ್ನು ಗಮನಿಸುವುದು, ಗೂಡು ಸೇರುವುದು- ಇದೇ ನನ್ನ ಹವ್ಯಾಸ. ಕಾಣುವ ಎಲ್ಲಾ ಘಟನೆಗಳೂ ನನ್ನನ್ನು ಸೆಳೆಯುವುದಿಲ್ಲ. ಆದರೆ ಕೆಲವು ಸಣ್ಣಪುಟ್ಟ ಘಟನೆಗಳು ಕೆಣಕುತ್ತವೆ. ಯಾಕೆ ಹೀಗೆ? ಅದರಲ್ಲೇನಿದೆ? ಅದಕ್ಕಾಗಿ ಮನುಷ್ಯ ಯಾಕೆ ಹೀಗೆ ತಪಿಸುತ್ತಾನೆ ಎಂದು ಯೋಚಿಸುವಂತೆ ಮಾಡುತ್ತದೆ. ಉತ್ತರ ಸಿಗುವುದಿಲ್ಲ!
ಆ ರೀತಿಯಾಗಿ ನನ್ನನ್ನು ಕೆಣಕಿದ ಒಂದು ಘಟನೆ... ತೀರಾ ಸಣ್ಣ ಘಟನೆ... ಆದರೆ ಒಂದು ಮಗುವಿನ ಭವಿಷ್ಯವನ್ನು ಹಾಳುಮಾಡುವಲ್ಲಿ ಪ್ರಮುಖ ಕಾರಣವಾದ ಘಟನೆ.
೩
ಒಂದು ಮುಂಜಾವು. ಎಂದಿನಂತೆ ಆಕಾಶದಲ್ಲಿ ಹಾರುತ್ತಿದ್ದೆ. ನಗರಕ್ಕೆ ದೂರವಲ್ಲದಿದ್ದರೂ ನಗರದಿಂದ ಬೇರೆಯಾದ ಒಂದು ಸುಂದರ ಪ್ರದೇಶ. ಅಲ್ಲಲ್ಲಿ ಹರಡಿರುವ ಗಿಡಮರಗಳು. ಮದ್ಯೆ ಒಂದೊಂದು ಮನೆ. ಅದರಲ್ಲಿ ಒಂದು ಮನೆ ನನ್ನ ಗಮನವನ್ನು ಸೆಳೆಯಿತು.
ಮನೆಯ ಮುಂದೆ ಮಗುವೊಂದು ಗೊಂಬೆಯೊಂದಿಗೆ ಆಟವಾಡುತ್ತಿದೆ . ಅದೇ ಸಮಯಕ್ಕೆ ರಾತ್ರಿ ಪಾಳಿಯ ಕೆಲಸ ಮುಗಿಸಿ ವ್ಯಕ್ತಿಯೊಬ್ಬ ಬಂದ. ನಗುತ್ತಾ ಮಗುವನ್ನು ಎತ್ತಿಕೊಂಡು ಮನೆಯೊಳಕ್ಕೆ ಹೋದ. ಪಾಪು ತಕರಾರೇನೂ ಮಾಡಲಿಲ್ಲ. ತಂದೆಯೇನೋ ಅಂದುಕೊಂಡೆ. ಆದರೆ ಮನೆಯ ಒಳಗೆ ಆಫೀಸಿಗೆ ಹೋಗಲು ತಯಾರಾಗುತ್ತಿದ್ದ ಗಂಡ, ಅವನಿಗೆ ಸಹಾಯ ಮಾಡುತ್ತಿರುವ ಹೆಂಡತಿ ಕಂಡರು. ಈತನನ್ನು ಕಂಡು,
“ಗುಡ್ ಮಾರ್ನಿಂಗ್ ಚಂದ್ರು" ಎಂದ ಗಂಡ.
“ಮಾರ್ನಿಂಗ್! ಇಂದೂ ಕೂಡ ಅರ್ಜೆಂಟ್ ಅನ್ನಿಸುತ್ತೆ?” ಎಂದ ಚಂದ್ರು.
“ಏನು ಮಾಡೋದೋ? ಆಫೀಸೂ...” ಎಂದು ರಾಗ ಎಳೆದ ಗಂಡ.
“ಸರಿ ಸರಿ... ಸಂಜೆ ಸ್ವಲ್ಪ ಬೇಗ ಬಾ... ಮಾತನಾಡೋಣ. ನಂತರ ಊರಿಗೆ ಹೋಗಬೇಕು, ಹೆಣ್ಣು ನೋಡುವ ಶಾಸ್ತ್ರವಿದೆ" ಎಂದ ಚಂದ್ರು.
“ಟ್ರೈ ಮಾಡುತ್ತೇನೆ"
“ಟ್ರೈ ಮಾಡೋದಲ್ಲ. ಬಾ, ಪೇಯಿಂಗೆಸ್ಟಾಗಿರು ಎಂದು ಹೇಳಿ ದುಡ್ಡೇ ತೆಗೆದುಕೊಳ್ಳುತ್ತಿಲ್ಲ. ಹೀಗಾದರೆ ಬೇರೆ ಮನೆ ಮಾಡಬೇಕಾಗುತ್ತದೆ".
“ಸರಿ ಬಿಡಪ್ಪಾ..... ಸಂಜೆ ಮಾತನಾಡೋಣ" ಎಂದು ಹೇಳಿ ಹೊರಟು ಹೋದ ಗಂಡ.
ಮಗುವಿಗೆ ಚಾಕೋಲೇಟ್ ಒಂದನ್ನು ಕೊಡುತ್ತಾ ತಾಯಿಯನ್ನುದ್ದೇಶಿಸಿ,
“ಏನು ತಿಂಡಿ ಮಾಡಿದ್ದೀಯ ಪದ್ಮ?” ಎಂದು ಕೇಳಿದ.
“ಚಪಾತಿ- ಆಲೂಗೆಡ್ಡೆ ಪಲ್ಯ!” ಎಂದಳು.
“ಸರಿ, ಫ್ರೆಶ್ಶಾಗಿ ಬರುತ್ತೇನೆ" ಎಂದು ಹೇಳಿ ಮಗುವಿನೊಂದಿಗೆ ತನ್ನ ಕೋಣೆಗೆ ಹೋದ. ನಗುತ್ತಿರುವ ಮಗುವಿನ ಕೆನ್ನೆಗೊಂದು ಮುತ್ತು ಕೊಟ್ಟ. ನಂತರ ತುಟಿಗೆ. ಇದೆಲ್ಲಾ ಮಗುವಿಗೆ ಸಾಮಾನ್ಯವೇ ಅನ್ನಿಸುತ್ತದೆ, ತಕರಾರೇನೂ ಮಾಡಲಿಲ್ಲ! ನಂತರ ಅವನಿಗೆ ಅದೇನನ್ನಿಸಿತೋ ಏನೋ ಮಗುವಿನ ತುಟಿಯನ್ನು ಕಚ್ಚಿದ! ನೋವಿನಿಂದ ಮಗು ಜೋರಾಗಿ ಅಳಲಾರಂಭಿಸಿತು. ಅಳುವನ್ನು ಕೇಳಿ ತಾಯಿ ಓಡಿ ಬಂದರು.
“ಸಾರೀ... ಕಚ್ಚಿಬಿಟ್ಟೆ" ಎಂದು ಕಣ್ಣು ಮಿಟುಕಿಸಿದ.
“ಪರವಾಗಿಲ್ಲ" ಎಂದು ಅದೊಂದು ರೀತಿಯಾಗಿ ನೋಡಿ ನಕ್ಕು ಮಗುವಿನೊಂದಿಗೆ ಹೊರಟು ಹೋದಳು.
ಅಳು ನಿಲ್ಲಿಸದ ಮಗುವಿಗೆ ಹಾಲು ಕೊಟ್ಟು ಮಲಗಿಸಿದಳು.
ಸಮಯ ತನ್ನ ಪಾಡಿಗೆ ತಾನು ಕ-ಳೆ-ದು ಹೋಗುತ್ತಿತ್ತು.
ಯಾವುದೋ ಕನಸುಕಂಡ ಮಗು ಎಚ್ಚರಗೊಂಡಿತು. ಪಕ್ಕದಲ್ಲಿ ಅಮ್ಮ ಇಲ್ಲ! ಗಾಬರಿಯಿಂದ ಸುತ್ತಲೂ ನೋಡಿತು.
ಪಕ್ಕದ ಕೋಣೆಯಿಂದ ಏದುಸಿರು, ಮುಲುಕುಗಳು, ನಿಟ್ಟುಸಿರುಗಳು ಕೇಳಿಸುತ್ತಿದ್ದವು. ಮಂಚದಿಂದ ಕೆಳಗಿಳಿದು ಪಕ್ಕದ ಕೋಣೆಗೆ ಬಂದಿತು. ಬಾಗಿಲು ತೆಗೆದಿತ್ತು.
ಒಳಗೆ, ಅಂಕಲ್ ಅಮ್ಮನನ್ನು ಏನು ಮಾಡುತ್ತಿದ್ದಾರೋ ತಿಳಿಯಲಿಲ್ಲ. ಅವರು ಈ ಪ್ರಪಂಚದಲ್ಲಿಯೇ ಇರಲಿಲ್ಲ.
“ಕಾಲೇಜು ದಿನಗಳಲ್ಲಿಯೇ ನೀನು ನನ್ನ ಹುಚ್ಚು! ನೀನೇಕೆ ಅವನನ್ನು ಮದುವೆಯಾದೆ?” ಎಂದ.
“ಅದರಿಂದ ನಿನಗೇನು ನಷ್ಟವಾಯಿತು?” ಎಂದಳು.
ಬಾಚಿ ತಬ್ಬಿಕೊಂಡ.
“ಅದೇನೋ- ಊರು, ಮದುವೆ ಅನ್ನುತ್ತಿದ್ದೆ?” ಎಂದಳು. ನಕ್ಕ.
“ಅದೆಲ್ಲಾ ನಾಟಕ ಇದ್ದಿದ್ದೇ... ನೀನೇನೂ ಹೆದರಬೇಡ"ಎಂದ.
“ಈ ಮನೆ ಬಿಟ್ಟು ಹೋಗುವುದು?” ಕೇಳಿದಳು.
“ಅನ್ನಿಸುತ್ತಿದೆಯೇ?” ಎಂದ.
ಮಗು ತಮ್ಮನ್ನು ಗಮನಿಸುತ್ತಿರುವುದು ಅವರಿಗೆ ತಿಳಿಯಲೇ ಇಲ್ಲ. ಸ್ವಲ್ಪ ಸಮಯದಲ್ಲೇ ಬಳಲಿ ಮಲಗಿದರು.
ಶಬ್ದಮಾಡದೆ ಮಗು ಮರಳಿ ಬಂದು ತನ್ನ ಮಂಚದಲ್ಲಿ ಮಲಗಿತು.
ಅಂದಿನಿಂದ ಪ್ರತಿ ದಿನ ಮಗು ಅದನ್ನು ನೋಡುತ್ತಿದೆ.
ಆ ಮಗುವಿನ ಭವಿಷ್ಯವೇನು?
ಏಕೆ ಹೀಗೆ ನಡೆಯುತ್ತಿದೆ?
ಮನುಷ್ಯರಿಗೇ ತಿಳಿಯದ ವಿಷಯ! ಇನ್ನು.......
೪
ಹೇಳಿದೆನಲ್ಲಾ? ಹಾರಾಡುವುದು ನನ್ನ ಆ ಜನ್ಮ ಸಿದ್ಧ ಹಕ್ಕು! ಕಲಿತ ಮೇಲೆ ನಾನು ಹಾರದ ದಿನವಿಲ್ಲ. ಈ ಹಾರಾಟ ನನ್ನನ್ನು ಹಲವು ಘಟನೆಗಳಿಗೆ ಸಾಕ್ಷಿಯನ್ನಾಗಿ ಮಾಡಿದೆ. ಆ ರೀತಿಯ ಘಟನೆಗಳಲ್ಲಿ ಮತ್ತೊಂದು....
ಹುಚ್ಚು ವರವಾಗಿ ಲಭಿಸಿದ ಮಗುವಿನ ಕಥೆಯಿದು.
ಹೆಣ್ಣುಮಗು.
ಹತ್ತು ವರುಷದ ಹುಡುಗಿ.
ಪ್ರಪಂಚದ ಸಂತೋಷವೆಲ್ಲಾ ತನ್ನದು ಎನ್ನುವ ಅಹಂ ಅವಳಿಗೆ.
ವಾರ್ಷಿಕ ಪರೀಕ್ಷೆಯೆಲ್ಲಾ ಮುಗಿದು ರಜೆ ಸಿಕ್ಕಿದ ಸಮಯ.
ಗೆಳತಿಯ ಮನೆಗೆ ಬಂದಳು.
ಮಕ್ಕಳಿಗಾಗಿ ಹೊಸ ರುಚಿಗಳ ತಯಾರಿ ಮಾಡುತ್ತಿದ್ದರು ಗೆಳತಿಯ ಅಪ್ಪ -ಅಮ್ಮ. ಇವಳನ್ನು ಕಂಡು,
“ಒಹೋ.. ಬಂದೆಯಾ? ಬಾ... ರಮ್ಯ ಕಥೆ ಪುಸ್ತಕಗಳೊಂದಿಗೆ ತೋಟಕ್ಕೆ ಹೋಗಿದ್ದಾಳೆ. ನೀನು ಬಂದರೆ ಕಳಿಸು ಎಂದಳು!” ಎಂದರು.
ಹಾಡೊಂದನ್ನು ಗುನುಗುತ್ತಾ ತೋಟಕ್ಕೆ ಹೋದಳು.
ಸಾಮಾನ್ಯವಾಗಿ ತಾವು ಕುಳಿತುಕೊಳ್ಳುವ ಸ್ಥಳಕ್ಕೆ ಬಂದಳು.
ಪುಸ್ತಕಗಳೆಲ್ಲಾ ಹರಡಿದೆ- ರಮ್ಯ ಇಲ್ಲ.
“ರಮ್ಯಾ" ಎನ್ನುತ್ತಾ ತೋಟದಲ್ಲೆಲ್ಲಾ ಸುತ್ತಾಡಿದಳು. ಕಾಣಿಸಲಿಲ್ಲ. ಎಲ್ಲಿ ಹೋದಳು ಎನ್ನುವ ಸಂಶಯದಿಂದ ಮರಳುವಾಗ, ದೂರದಲ್ಲೇನೋ ಶಬ್ದ. ಎಲೆಗಳು ನಲುಗಿದಂತೆ...
ಶಬ್ದ ಬಂದ ದಿಕ್ಕಿಗೆ ಹೋದಳು.
ತೋಟದ ಮೂಲೆಯಲ್ಲಿ ವ್ಯಕ್ತಿಯೊಬ್ಬ ಕುಳಿತಿದ್ದ!
ಸಮೀಪಕ್ಕೆ ಹೋದಾಗ ವ್ಯಕ್ತಿಯ ಕೆಳಗೆ ಹುಡುಗಿಯೊಬ್ಬಳಿರುವುದು ಕಾಣಿಸಿತು.
ಮತ್ತಷ್ಟು ಸಮೀಪಕ್ಕೆ ಹೋದಾಗ... ಶಬ್ದ ಹೊರಡದಂತೆ ಬಾಯನ್ನು ಅದುಮಿ ರಮ್ಯಾಳಮೇಲೆ ಕುಳಿತಿದ್ದಾನೆ - ತನ್ನ ತಂದೆ.
“ಅಪ್ಪಾ....” ಎಂದು ಕರೆದಳು.
ನಡುಗಿದ ತಂದೆ ತಿರುಗಿ ನೋಡಿದ.
ಇಬ್ಬರೂ ಅವರವರ ಆಘಾತದಲ್ಲಿದ್ದಾಗ ರಮ್ಯಾಳಲ್ಲಿನ ಚಲನೆ ನಿಂತಿತು.
ಮಗಳನ್ನೊಮ್ಮೆ- ರಮ್ಯಾಳನ್ನೊಮ್ಮೆ ನೋಡಿದ ತಂದೆ ಎದ್ದು ಬಂದ.
ಹೆದರಿ ನಡುಗಿದಳು ಬಾಲಕಿ.
ಆ ಹೆದರಿಕೆ ಅವಳಿಗೆ ಅದ್ಭುತವಾದ ಅಂದವನ್ನು ನೀಡಿತು.
ಒಂದು ಕ್ಷಣ....
ಅದು ತನ್ನ ಮಗಳೆಂಬುವುದನ್ನು ಮರೆತ ತಂದೆ. ಮಗಳಲ್ಲಿನ ಸೌoದರ್ಯವನ್ನು ನೋಡಿದ.
ರಮ್ಯಾಳಿಂದ ಸಿಗದಿರುವುದು ಮಗಳಿಂದ......?
ಮಗಳ ತುಂಬಾ ಸಮೀಪಕ್ಕೆ ಬಂದ.
ಮತ್ತಷ್ಟು ಮುದುಡಿದಳು ಹುಡುಗಿ.
ಮುಂದಕ್ಕೆ ನುಗ್ಗಿ, ಮಗಳನ್ನು ತಬ್ಬಿದ ರಭಸಕ್ಕೆ ಮಗಳೊಂದಿಗೆ ಕೆಳಕ್ಕುರುಳಿದ.
ತಂದೆ ಏನು ಮಾಡುತ್ತಿದ್ದಾನೋ ತಿಳಿಯಲಿಲ್ಲ. ತಂದೆಯ ಭಾರದೊಂದಿಗೆ ಬಿದ್ದ ಅವಳ ತಲೆ ಕಲ್ಲೊಂದಕ್ಕೆ ಬಡಿದು ಕಣ್ಣು ಕತ್ತಲಿಟ್ಟಿತು. ಆ ಕತ್ತಲೆಯ ಮೂಲಕ ಹುಚ್ಚು ಅವಳನ್ನು ಪ್ರವೇಶಿಸಿತು! ಮುಂದೆ ಏನು ನಡೆಯಿತೋ ತಿಳಿಯಲಿಲ್ಲ. ಹಿಂದೆ ನಡೆದದ್ದನ್ನು ಮರೆತಳು. ಹುಚ್ಚು ವರವಾಗಿ ಬಂದಾಗ ದುಃಖವೇನೋ ತಿಳಿಯದಂತಾಯಿತು.
ಈಗ ಅವಳಿಗೆ ಕೇವಲ ಸಂತೋಷ ಮಾತ್ರ. ಯವಾಗಲೂ ತಲೆ ಕೆರೆದುಕೊಳ್ಳುತ್ತಾ ನಗುತ್ತಿರುತ್ತಾಳೆ......
ಯಾಕೆ ಹೀಗೆ?
ತಿಳಿಯದು........
೫
ಸಂದ್ಯಾ ಸಮಯ.
ಕತ್ತಲಾಗುವುದಕ್ಕೆ ಮುಂಚೆ ಗೂಡುಸೇರಲು ವೇಗವಾಗಿ ಹಾರುತ್ತಿದ್ದೆ.
ಮಹಾನಗರ. ಜೋಡಿಸಿಟ್ಟ ಬೆಂಕಿ ಪೊಟ್ಟಣಗಳಂತೆ ಮನೆಗಳು.
ನನ್ನ ಪಾಡಿಗೆ ನಾನು ಹಾರುತ್ತಿದ್ದಾಗ ಮನೆಯೊಂದರಮೇಲೆ ಕೆಲವು ಕಾಳುಗಳು ಬಿದ್ದಿರುವುದು ಕಾಣಿಸಿತು. ಆಸೆಯಾಗಿ ಇಳಿದುಬಂದೆ. ಕಾಳುಗಳನ್ನು ಹೆಕ್ಕುತ್ತಿದ್ದಾಗ ಯಾರೋ ರಹಸ್ಯವಾಗಿ ಮಾತನಾಡುತ್ತಿರುವುದು ಕೇಳಿಸಿತು. ಕುತೂಹಲಗೊಂಡು ಇಣುಕಿ ನೊಡಿದೆ. ಪಕ್ಕದ ಸಂದಿಯಲ್ಲಿ ಇಬ್ಬರು ಮಕ್ಕಳು! ಸುಮಾರು ಏಳೋ ಎಂಟೋ ವರ್ಷ ಪ್ರಾಯದ ಒಂದು ಗಂಡು ಒಂದು ಹೆಣ್ಣು ಮಗು.
“ನನ್ನ ಅಪ್ಪ ಅಮ್ಮನಿಗೆ ಹೀಗೇ ಮಾಡೋದು, ಎಲ್ಲಿ ತೆಗಿ" ಎನ್ನುತ್ತಿದ್ದ ಹುಡುಗ, ಹುಡುಗಿಯ ಬಟ್ಟೆ ಕಳಚುತ್ತಾ!
ಅಲ್ಲಿರಬೇಕು ಅನ್ನಿಸದೆ ಗೂಡಿನತ್ತ ಹಾರಿದೆ!
ಯಾಕೆ ಹೀಗೆ?
ಒಂದೇ ಕೋಣೆಯಲ್ಲಿ ಬದುಕಬೇಕಾಗಿ ಬರುವ ಬಡಕುಟುಂಬಗಳಲ್ಲಿ ಇದು ಸಾಮಾನ್ಯವೇ.... ಪಡುವ ಕಷ್ಟಗಳನಡುವೆ ಸಿಗುವ ಸುಖ- ಮಕ್ಕಳ ಕಣ್ಣು ತಪ್ಪಿಸಬೇಕೆಂದು ಎಷ್ಟೇ ಅಂದುಕೊಂಡರೂ ಸಾದ್ಯವಾಗದೇ ಹೋಗಬಹುದು.
ಪುಟ್ಟ ಮನಸ್ಸುಗಳಿಗೆ ಇದರಲ್ಲಿ ಕುತೂಹಲವೂ ಹೆಚ್ಚು.
೬
ಇದನ್ನೆಲ್ಲಾ ಕಥೆಗಾರನಿಗೆ ಹೇಳಿದೆ.
ಕಥೆಗಾರರು ಭಾವುಕ ಜೀವಿಗಳು- ಇದನ್ನು ಎಲ್ಲರ ಮನಮುಟ್ಟುವಂತೆ ವರ್ಣಿಸಿದರೆ ಕೆಲವರಾದರೂ ಚಿಂತಿಸಬಹುದು, ಬದಲಾಗಬಹುದು ಎನ್ನುವುದು ನನ್ನ ನಂಬಿಕೆ. ಆದರೆ ಕಥೆಗಾರ ಹೇಳಿದ,
“ಇಲ್ಲ ಪಾರೀವಾಳವೇ.... ಈ ಪ್ರಪಂಚದಲ್ಲಿ ಯಾರೂ ಬದಲಾಗುವುದಿಲ್ಲ. ತಮಗೆ ಕೆಡುಕಾದಾಗ ಆವೇಶಗೊಳ್ಳುತ್ತಾರೆಯೇ ಹೊರತು ಇತರರಿಗಾಗಿ ಮರುಗುವುದಿಲ್ಲ. ಎಲ್ಲರಿಗೂ ಅವರವರ ಸುಖವೇ ಮುಖ್ಯ. ಇದರಲ್ಲಿ, ಸಾಮಾನ್ಯ- ಹಣವಂತ- ಬುದ್ದಿವಂತ- ಚಿಂತಕ- ಲೇಖಕ- ಓದುಗ ಎಂದೇನೂ ಇಲ್ಲ. ಎಲ್ಲರಿಗೂ 'ನಾನು ಮತ್ತು ನನ್ನ'ವೇ ಮುಖ್ಯ! ಪಾರೀವಾಳವಾದ ನಿನಗಿರುವ ದಯೆ- ಕರುಣೆ ಮನುಷ್ಯನಿಗಿಲ್ಲ! ಮನುಷ್ಯನೆಂದಮೇಲೆ ಅದರಲ್ಲಿ ನಾನೂ ಸೇರುತ್ತೇನೆ. ನಿನಗೆ ಗೊತ್ತೆ? ನಿನ್ನೆ ಹೆಂಗಸೊಬ್ಬಳು ಬಂದಿದ್ದಳು. “ಮಗುವಿಗೆ ಊಟ ಹಾಕಿ ಎರಡು ದಿನವಾಯಿತು" ಎಂದಳು. ಕಥೆಗಾರನಲ್ಲವೇ? ಏನಾದರೂ ಸಹಾಯ ಮಾಡಬಹುದೆಂಬ ನಂಬಿಕೆ. ನಾನೇನು ಮಾಡಿದೆ ಗೊತ್ತೇ? ನೂರು ರೂಪಾಯಿಗೆ ಅವಳನ್ನು ಒಪ್ಪಿಸಿ....”
ಆ ದರಿದ್ರ ಕಥೆಗಾರನ ಮಾತು ಮುಗಿಯುವ ಮುಂಚೆ ಪುರ್ರನೆ ಹಾರಿಬಂದೆ!
ಇನ್ನು ಮಾತನಾಡಲು ಏನೂ ಇಲ್ಲ!
ವಂದನೆಗಳು....!!
Comments
Post a Comment