Posts

Showing posts from September, 2021

ಕಥೆಗಾರನ ಆತ್ಮ ವಿಶ್ಲೇಷಣೆ!

ಕಥೆಗಾರನ ಆತ್ಮ ವಿಶ್ಲೇಷಣೆ ! “ ನನ್ನ ಪ್ರಾಮಾಣಿಕ ಅಭಿಪ್ರಾಯ : ಕಥೆ ಇಷ್ಟವಾಗಲಿಲ್ಲ !” ಎಂದು ಕಮೆಂಟ್ ಮಾಡಿದರು . ಯೋಚನೆಗಿಟ್ಟುಕೊಂಡಿತು ! ಏನು ಮಾಡಲಿ ? ಬೇರೆಯವರ ಅಭಿಪ್ರಾಯವೂ ನೊಡೋಣವೆಂದು ಕಾದೆ ! ಒಳ್ಳೆಯ ಅಭಿಪ್ರಾಯಗಳೇ ಬಂದವು ! ಆದರೂ ..., “ ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ನನ್ನ ತೆರೆದ ಮನದ ಧನ್ಯವಾದಳು ಸರ್ ... ಇನ್ನೂ ಎಷ್ಟು ದಿನಬೇಕೋ ಪಕ್ವವಾದ ಚಂದದ ಕಥೆ ಬರೆಯಲು .... ಯಾಕೆ ಇಷ್ಟವಾಗಲಿಲ್ಲವೋ ಹೇಳಿದ್ದರೆ ಉಪಕಾರವಾಗುತ್ತಿತ್ತು ...! ಕಥಾವಸ್ತುವೇ ? ಬರೆದ ಶೈಲಿಯೇ ?” ಎಂದು ರೀಕಮೆಂಟ್ ಮಾಡಿದೆ . “ ಕಥಾ ಹಂದರ ಶಿಥಿಲ , ಪಾತ್ರ ಪೋಷಣೆ ಅಷ್ಟಕ್ಕಷ್ಟೆ , ಬರವಣಿಗೆಯ ಶೈಲಿ ಅನಾಕರ್ಷಕ ....! ಇವಿಷ್ಟೂ ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ !” ಎಂದು ಉತ್ತರಿಸಿದರು . ವಿಶ್ಲೇಷಣೆ ಶುರವಾಯಿತು ! ಕಥೆಯನ್ನು ಮತ್ತೊಮ್ಮೆ ಓದಿನೋಡಿದೆ . ಅಷ್ಟು ಬೇಗ ಅರ್ಥವಾಗುವುದಿಲ್ಲ ! ಹಾಗೆಂದು ಕಥೆಯಲ್ಲಿ ಏನೂ ಇಲ್ಲವೆಂದಲ್ಲ - ಕಠಿಣ ! ನಿಜ .... ಕಥೆಯಿಂದ ಕಥೆಗೆ ನನ್ನ ಶೈಲಿ ಕಠಿಣವಾಗುತ್ತಿದೆ ! ಹಾಗೆಂದು ಅದನ್ನು ಬದಲಿಸಲು ನಾನೂ ತಯಾರಿಲ್ಲ ! ಇದನ್ನು ಹೇಗೆ ತೆಗೆದುಕೊಳ್ಳಲಿ ....? ಅವರು ಕಮೆಂಟ್ ಮಾಡಿರುವುದು ನಾನು ಬರೆದ ಅರವತ್ತೇಳನೇ ಕಥೆಗೆ ! ಬರೆದ ಕಥೆಗಳೆಲ್ಲಾ ಎಲ್ಲರಿಗೂ ಇಷ್ಟವಾಗಬೇಕೆಂದಿಲ್ಲ ! ಅರವತ್ತೇಳು ಕಥೆಗಳಲ್ಲಿ ಇದೇ ನನ್ನ ಕೆಟ್ಟ ಕಥೆಯಾಗಿರಲೂ ಬಹುದು ... ನಿಜ ..., ಅರಗಿಸಿಕೊ...

ಅನೂಹ್ಯ

ಅನೂಹ್ಯ ! ೧ “ ಅನೂಹ್ಯವಾಗಿರಬೇಕು !” “ ಏನು ? ಕಥೆಯೋ ? ಜೀವನವೋ ?” “ ಜೀವನ ಬಿಡು - ಯಾವಾಗಲೂ ಅನೂಹ್ಯವೇ ...! ಕಥೆ - ಕಥೆಯ ಕ್ಲೈಮಾಕ್ಸ್ !” “ ನನ್ನ ಯಾವ ಕಥೆಯಲ್ಲಿನ ಕ್ಲೈಮಾಕ್ಸ್ ನೀನು ಊಹಿಸಿದ್ದೆ ?” “ ಎಲ್ಲಾ ಸಂಭಾಷಣೆ - ತತ್ತ್ವ ! ಬೋರು !” “ ಈಗೇನು ಮಾಡಲಿ ?” “ ವ್ಯತ್ಯಸ್ತವಾದ ಕಥೆಯೊಂದನ್ನು ಬರಿ !” “ ಹಾಗಿದ್ದರೆ ನಾನು ಬರೆದ ಕಥೆಗಳಲ್ಲಿ ವ್ಯತ್ಯಸ್ತತೆ ಇರಲಿಲ್ಲವೇ ?” “ ಅದು ಬಿಡು ! ಅಸ್ತಿರವಾದ ಜೀವನದ ಬಗ್ಗೆ ಬರಿ ...! ಅವತ್ತು ಹೇಳಿದಂತೆ .... ಭಾವಗಳಿಗೆ ಒತ್ತು ಕೊಡದೆ - ಘಟನೆಗಳಿಗೆ ಒತ್ತು ಕೊಟ್ಟು ಬರಿ - ಓದುಗರು ಖುಷಿಯಾಗುತ್ತಾರೆ ! ಜೊತೆಗೆ - ಪುಸ್ತಕ ಮಾತ್ರವಲ್ಲ ನಮ್ಮ ಉದ್ದೇಶ - ಸಿನೆಮಾ ಕೂಡ ! “ ಅಂದರೆ ?” “ ನಿನ್ನ ಸೈಕಾಲಜಿಯನ್ನು ಪಕ್ಕಕ್ಕೆ ಇಟ್ಟು ನೇರವಾಗಿ ಘಟನೆಗಳನ್ನು ಹೇಳು !” “ ಸರಿ .... ನಾಳೆ ಬೆಳಗ್ಗೆ ಹನ್ನೊಂದು ಗಂಟೆಗೆ ಸಿಗೋಣ - ವಿತ್ ಕಥೆ !” ೨ ಅವನಿಗೇನು ? ಹೇಳೋದು ಹೇಳುತ್ತಾನೆ ! ಸೈಕಾಲಜಿ ಇಲ್ಲದ ಕಥೆಯಂತೆ ! ಅದರಲ್ಲೂ ಅನೂಹ್ಯವಾದ ಕ್ಲೈಮಾಕ್ಸ್ ಬೇಕಂತೆ ! ಬರೆಯುವವನು ನಾನು - ಹೇಳೋದೆಷ್ಟು ಸುಲಭ ! ಅವನಿಂದ ಬೀಳ್ಕೊಟ್ಟು ಮನೆಗೆ ಹೊರಟೆ ! ತಲೆತುಂಬಾ ಯೋಚನೆ ! ಏನು ಬರೆಯಲಿ ? ಅವನು ಹೇಳಿದ್ದು - ಘಟನೆಗಳನ್ನು ಬರಿ , ಭಾವ ಬೇಡ - ಎಂದು . “ ರೇಪ್ ನಡೆಯಿತು - ಎಂದು ಬರೆದರೆ ಘಟನೆ !” “ ಅವಳನ್ನು ನೋಡಿದಾಗ ಅವನ ಮನಸ್ಸಿನಲ್ಲೊಂದು ಮಿಂಚ...

ಶಾಂತಿ

ಶಾಂತಿ ! “ ತಮ್ಮನ ಹೆಂಡತಿಗೆ ಬೈದರು ಅಮ್ಮ !” ಎಂದ ರಾಂ . “ ತಮ್ಮ ಏನಂದ ?” “ ಹೆಂಡತಿ ಬಂದ ಮೇಲೆ ಮುಂಚಿನ ಹಾಗೆ ಇಲ್ಲ !” ಎಂದ . “ ಅದು ಮಾಮೂಲಿ ಬಿಡು ! ಹೆಂಡತಿ ಬಂದಮೇಲೆ ಅಪ್ಪ ಅಮ್ಮ ಹೊಸ ರೀತಿಯಲ್ಲಿ ಕಾಣಿಸತೊಡಗುತ್ತಾರೆ ! ಅದುವರೆಗೆ ಇಲ್ಲದ ಕುಂದು ಕೊರತೆ ಎಲ್ಲಾ ಪ್ರಕಟವಾಗುತ್ತದೆ ! ನಾನೂ ಉದಾಹರಣೆಯೇ !” ಎಂದೆ . “ ಇದೆಲ್ಲಾ ನೋಡ್ತಾ ಇದ್ರೆ ಯಾಕಪ್ಪಾ ಮದುವೆ ಅನ್ನಿಸಿಬಿಡುತ್ತೆ !” ಎಂದ . “ ನಿಜಾ ರಾಂ ! ಹೆಂಡತಿ ಬಂದಮೇಲೆ ನಾವೊಂದು ಭ್ರಮಾ ಪ್ರಪಂಚಕ್ಕೆ ಜಾರುತ್ತೇವೆ ! ಅದನ್ನೇ ಋಷಿ ಮುನಿಗಳು ಮಾಯೆ ಎಂದರೇನೋ ...! ಅದರೊಳಗಿರುವಷ್ಟು ದಿನವೂ ನಮಗೆ ಹಿಂಸೆಯೇ .... ಅದುವರೆಗಿನ ನಮ್ಮ ಸರಿಗಳು ಮದುವೆಯ ನಂತರ ತಪ್ಪು ತಪ್ಪಾಗಿ ಕಾಣತೊಡಗುತ್ತದೆ !” “ ಸುಮ್ಮನೆ ಹೆದರಿಸಬೇಡ !” ಎಂದ ರಾಂ . “ ಎಷ್ಟು ಬೇಗ ನಾವು ಆ ಮಾಯೆಯಿಂದ ಹೊರಬರುತ್ತೇವೆ ಅನ್ನುವುದರ ಮೇಲೆ ನಮ್ಮ ನೆಮ್ಮದಿ ಅಡಗಿದೆ !” ಎಂದೆ . “ ಅದಕ್ಕೇ ಹೆಂಡತಿ ಬಿಟ್ಟು ಹೋದಾಗ ಇಷ್ಟು ಖುಷಿಯಾಗಿದ್ದೀಯ ?” “ ಹೂ ! ಇಲ್ಲಿ ಸಮಸ್ಯೆ ಏನು ಗೊತ್ತಾ ? ನಮ್ಮ ಮಧ್ಯೆ ಇಬ್ಬರೂ ಕಾಂಪ್ರಮೈಸ್‌ಗೆ ರೆಡಿಯಿಲ್ಲ !” ಅವನು ನನ್ನ ಮುಖವನ್ನೇ ನೋಡಿದ . ಮುಂದುವರೆಸಿದೆ . “ ಅವಳಿಗೆ ಗಂಡ ಅವಳ ಗುಲಾಮನಾಗಿರಬೇಕು ! ಅಂದರೆ ಅವಳು ನನ್ನೊಂದಿಗೆ ಇರಬೇಕೆಂದರೆ - ಅವಳು ಹೇಳಿದಂತೆ ಗಲ್ಫ್‌ಗೆ ಹೋಗಬೇಕು ! ಹಣ ಮಾಡಬೇಕು ! ಚಿನ್ನ , ಕಾರು , ಬಂಗ್ಲೋ ತಗೋಬೇಕು ! ...

ಕಂಡುಕೊಂಡ-ಸತ್ಯ

ಕಂಡುಕೊಂಡ - ಸತ್ಯ “ ಸತ್ಯದ ಅರಿವು ಆದಮೇಲೂ ಏನನ್ನು ತಿಳಿಸಲು ಹೊರಟಿದ್ದೀಯ ಮನು ? ಹೀಗೆ ಇದ್ದೆ - ಹೀಗೆ ಆದೆ ಎಂದೋ ಅಥವಾ ...?” ಎಂದರು . “ ಸತ್ಯದ ಅರಿವು ಆಯಿತು ಅಂದುಕೊಳ್ಳುವುದು ಕೂಡ ಮಾಯೆಯೇ ...!” ಎಂದೆ . “ ಮತ್ತೆ ...? ಎಲ್ಲರೂ ಬುದ್ಧನಾಗಲು ಸಾಧ್ಯವಿಲ್ಲ ! ನೂರುವರ್ಷ ಆರೋಗ್ಯವಾಗಿ ಬದುಕಿ ಇಹಲೋಕ ತ್ಯಜಿಸಿದ ನನ್ನ ತಾತ ಬದುಕಿದ್ದಾಗ ಹೇಳುತ್ತಿದ್ದರು .... ಬದುಕಿನ ಜಂಜಾಟದಲ್ಲಿ ಬಿದ್ದ ಮನುಷ್ಯ ಮನೆ , ಆಸ್ತಿ , ಮಡದಿ , ಮಕ್ಕಳು , ಮರ್ಯಾದೆ ಎಂದು ಜೀವನದುದ್ದಕ್ಕೂ ಹೋರಾಡಿ , ಕೊನೆಗೆ ಇದ್ಯಾವುದೂ ನನ್ನದಲ್ಲ ಎಂದು ತಿಳಿದುಕೊಳ್ಳುವಷ್ಟರಲ್ಲಿ ಸಾವು ಸಮೀಪಿಸಿರುತ್ತದೆ ....! ಆದರೆ ಬುದ್ಧ ಯುವಕನಾಗಿದ್ದಾಗಲೇ ಆ ಅರಿವನ್ನು ಗಳಿಸಿಕೊಂಡ - ದೇವರಾದ - ಎಂದು !” ಎಂದರು . ಸ್ವಲ್ಪ ಸಮಯ ಮೌನವಾಗಿದ್ದೆ . ಅವರ ಪ್ರಶ್ನೆಗೆ ಪೂರ್ತಿಯಾಗಿ ಉತ್ತರಿಸಬೇಕೆಂದರೆ - ಸಾವಿರ ಪುಟಗಳ ಗ್ರಂಥವೂ ಸಾಲದು . ಆದರೂ ಉತ್ತರಿಸಬೇಕಾದ್ದು ನನ್ನ ಕರ್ತವ್ಯವಾದ್ದರಿಂದ ...., “ ನಿಮಗೆ ಜನಕ ಮಹಾರಾಜ ಗೊತ್ತೆ ?” ಎಂದೆ . “ ಸೀತೆಯ ತಂದೆ ...!” “ ಹಾ .... ಜನಕ ಮಹಾರಾಜನನ್ನು ರಾಜರ್ಷಿ ಅನ್ನುತ್ತಾರೆ ! ಹೇಗೆ ಸನಾತನ ಧರ್ಮದ ಸಾವಿರಾರು ಮಹರ್ಷಿಗಳಲ್ಲಿ ವಸಿಷ್ಠ ಮಹರ್ಷಿ ಶ್ರೇಷ್ಠರೋ .... ಹಾಗೆ ಸಾವಿರಾರು ರಾಜರ್ಷಿಗಳಲ್ಲಿ ಜನಕಮಹಾರಾಜ ಶ್ರೇಷ್ಠರು !” “ ಗೊಂದಲ ಹುಟ್ಟಿಸದೆ ನೇರವಾಗಿ ವಿಷಯವನ್ನು ಹೇಳು ಮನು !” ಅವರನ್ನ...

ನೆರಳು

ನೆರಳು * ದಿನವೂ ಬೆಳಗೆದ್ದು ಚಾಮುಂಡಿ ಬೆಟ್ಟಕ್ಕೆ ಹೋಗುವ ಹವ್ಯಾಸ .... ನಾಲಕ್ಕೂವರೆಗೆ ಮನೆಯಿಂದ ಹೊರಟು ಐದಕ್ಕೆ ಮೆಟ್ಟಿಲು ಹತ್ತುವುದು ಶುರು ಮಾಡುತ್ತೇನೆ ... ಒಂದುದಿನ , ನಿರ್ಜನ ಪ್ರದೇಶದಲ್ಲಿ ಗಾಡಿ ಓಡಿಸುವಾಗ ನನ್ನದೇ ಗಾಡಿಯ ಹಾರನ್ ಶಬ್ದ ಕೇಳಿಸಿತು .... ಗೊಂದಲ ! ನನ್ನ ಕೈಬೆರಳೇ ನನ್ನರಿವಿಲ್ಲದೆ ಹಾರನ್ ಮಾಡಿತ್ತು !! ಯಾರೋ ಬಲವಂತವಾಗಿ ಮಾಡಿಸುವಂತೆ .... ಒಂದುಸಾರಿ ಆದಾಗ ತಲೆ ಕೆಡಿಸಿಕೊಳ್ಳಲಿಲ್ಲ ... ಎರಡನೆಯಬಾರಿಯೂ ಹಾಗೇ ಆದಾಗ ಸ್ವಲ್ಪ ಗೊಂದಲವಾಯಿತು ! ಮೂರನೆಯ ಬಾರಿ ಆಗುತ್ತದೇನೋ ಕಾದೆ - ಆಗಲಿಲ್ಲ ! ಆದರೆ ನನ್ನ ಹೆಗಲಮೇಲೆ ಕೈಯ್ಯಿಟ್ಟು ಹಿಂದೆ ಯಾರೋ ಕುಳಿತ ಫೀಲ್ ! ತಪ್ಪಲು ತಲುಪಿ ಗಾಡಿ ನಿಲ್ಲಿಸಿದಾಗ , ಹಿಂದೆ ಕುಳಿತಿದ್ದವರು ಇಳಿದಂತೆ ಭ್ರಮೆ - ಇಳಿಯುವಾಗ ಹೆಗಲನ್ನು ಅದುಮಿದಂತೆ ! ಗಾಡಿಯಿಂದ ಇಳಿದು , ಹೆಲ್ಮೆಟ್ ಗಾಡಿಗೆ ಸಿಕ್ಕಿಸಿ ನಡೆಯತೊಡಗಿದಾಗ ನನ್ನ ಮುಂದೆ - ಇಪ್ಪತ್ತು ಹೆಜ್ಜೆ ಅಂತರದಲ್ಲಿ ಯಾರೋ ನಡೆಯುತ್ತಿರುವಂತೆ ಒಂದು ನೆರಳು .... ಎಷ್ಟು ವೇಗವಾಗಿ ನಡೆದರೂ ಕೊನೆಗೆ ಜಾಗಿಂಗ್‌ನಂತೆ ಓಡಿದರೂ ಅದರ ಹತ್ತಿರ ತಲುಪಲಾಗಲಿಲ್ಲ - ಅದೇ ಅಂತರ ! ಒಂದು ಕ್ಷಣ - ಇಂದು ಸ್ಟೆಪ್ ಹತ್ತಬೇಕಾ ?- ಅನ್ನಿಸಿತು ! ಆದರೂ ಏನೋ ಧೈರ್ಯ .... ಹತ್ತೋ ಎಂದಿತು ಮನಸ್ಸು .... ಇನ್ನೂ ಯಾರೆಂದರೆ ಯಾರೂ ಬಂದಿರಲಿಲ್ಲ .... ಶುರುಮಾಡಿದೆ .... ಅದೇ ಅಂತರದಲ್ಲಿ ಮುಂದೆ ನೆರಳು !! ನೂರು - ಇನ್ನೂರು - ಮುನ್ನೂ...