Posts

ಮನಸ್ಸೊಂದು ಮಹಾಸಮುದ್ರ!

ಮನಸ್ಸೊಂದು ಮಹಾಸಮುದ್ರ ! * ಮಳೆಗಾಲದ ಒಂದು ರಾತ್ರಿ . ಸಮುದ್ರವನ್ನೇ ನೋಡುತ್ತಾ ಕುಳಿತಿದ್ದೆ . ಮಳೆ . ಎಷ್ಟು ಸುರಿದರೂ ಸಮುದ್ರ ಮಟ್ಟವೇನೂ ಅಧಿಕವಾಗುತ್ತಿಲ್ಲ ! ಅಲೆಗಳು ಉರುಳುರುಳಿ ಬಂದು ನನ್ನ ಕಾಲನ್ನು ತೋಯಿಸಿ ಮರಳುತ್ತಿತ್ತು ! ಒಂದು ಕಾಲು ನೀಡಿ - ಮತ್ತೊಂದು ಕಾಲು ಮಡಚಿ - ಹಿಂದಕ್ಕೆ ಕೈಯೂರಿ ಕುಳಿತಿದ್ದೆ . ಸಮುದ್ರದಮೇಲೆ ಬೀಳುತ್ತಿರುವ ಮಳೆಯನ್ನು ವರ್ಣಿಸುವುದು ಹೇಗೆ ? ಅದೂ ಮಧ್ಯ ರಾತ್ರಿ ? ಕತ್ತಲಾದರೂ ನೈಸರ್ಗಿಕ ಬೆಳಕಿನಲ್ಲಿ ? ಕಂಡೇ ಅನುಭವಿಸಬೇಕು - ಅನುಭವಿಸಿಯೇ ಅರಿಯಬೇಕು ! ನಾನೂ ತೊಯ್ದು ತೊಪ್ಪೆಯಾಗಿದ್ದೆ ! ಯಾರೋ ಮಹಾನುಭಾವ - ಜೀವನವೊಂದು ಮಹಾಸಮುದ್ರ - ಎಂದು ಹೇಳಿದ್ದು ನೆನಪಾಗಿ ನಗು ಬಂತು ! ಸಮುದ್ರವೆಲ್ಲಿ - ಹುಲುಮಾನವನೆಲ್ಲಿ ! ಒಂದು ಕ್ಷಣ ... ಜೀವನವೋ ಮನುಷ್ಯ ಮನಸ್ಸೋ ? ಮನಸ್ಸೊಂದು ಮಹಾಸಮುದ್ರ !! ಕ್ಷಣಮಾತ್ರದಲ್ಲಿ ಬ್ರಹ್ಮಾಂಡವನ್ನು ಸುತ್ತಿಬರುವ ಮನಸ್ಸೆಲ್ಲಿ - ಬ್ರಹ್ಮಾಂಡಕ್ಕೆ ಹೋಲಿಸಿದರೆ ಬೊಗಸೆಯಲ್ಲೂ ತುಂಬದ ಸಮುದ್ರವೆಲ್ಲಿ ? ಏನೋ ....! ಸಮುದ್ರದ ಅಂಚಿನಲ್ಲೊಂದು ಮಿಂಚು - ಕಣ್ಣು ಕೋರೈಸಿತು . ಮಿಂಚಿನ ಬೆಳಕಿನಲ್ಲಿ ಪಕ್ಕದಲ್ಲಿ ಯಾರೋ ಇದ್ದಂತೆ ! ಮತ್ತೊಂದು ಮಿಂಚು ! ನಿಜ ! ಯಾರೋ ಇದ್ದಾರೆ . ಹೆದರಿಕೆ ಮಾನವ ಸಹಜ ! ಆದರೆ ಆ ಹೆದರಿಕೆ ಎಷ್ಟು ಹೊತ್ತು ಇರುತ್ತದೆ ಅನ್ನುವುದರಮೇಲೆ - ನಮ್ಮ ಮನೋಸ್ಥೈರ್ಯ ನಿಂತಿದೆ ! ನಿಜಕ್ಕೂ ಅದು ಹೆದರಿಕೆಗೆ ಕಾ...

ಸಮಸಮಾಜ

ಸಮಸಮಾಜ ! * “ ಒಬ್ಬ ಕೋಟ್ಯಾಧೀಶ್ವರನಿದ್ದ !” ಎಂದೆ . “ ಅದಕ್ಕೆ ?” ಎಂದ ಮಗ ! ನನ್ನ ಮಗನೇ ! ನನಗಿಂತ ತಲೆಹರಟೆ ! ಅವನನ್ನು ನೊಡಿ ನಕ್ಕು ಹೇಳಿದೆ , “ ಹತ್ತು ಜನ ಗೆಳೆಯರಲ್ಲಿ ಒಬ್ಬ ಕೋಟ್ಯಾಧೀಶ್ವರನಿದ್ದ !” ಈಗ ಅವನ ಕಣ್ಣಿನಲ್ಲಿ ಕುತೂಹಲ ! ದಾರಿಗೆ ಬಾ ಮಗನೆ ! ಯಾರೊಂದಿಗೆ ತಲೆಹರಟೆ !? ನಾನೇನಾದರೂ ಹೇಳುತ್ತೇನೆಯೇ ಎಂದು ನನ್ನ ಮುಖವನ್ನೇ ನೋಡಿದ ! ಹೇಳುವ ಸೂಚನೆ ಸಿಗದಿದ್ದಾಗ ... “ ಹೇಳಿ !” ಎಂದ . “ ಏನು ?” “ ಕೋಟ್ಯಾಧೀಶ್ವರನ ಬಗ್ಗೆ !” ಎಂದ . “ ಅದರಲ್ಲೇನಿದೆ ? ಸಮಸಮಾಜದ ಬಗ್ಗೆ ಕನಸುಕಂಡ ಹತ್ತು ಜನ ಗೆಳೆಯರು ಅವರು - ಅಷ್ಟೆ !” ಮತ್ತೆ ನನ್ನ ಮೌನವನ್ನು ಕಂಡು ಅಸಹನೆಗೊಂಡ ! ಮುಗುಳುನಕ್ಕು ಮುಂದುವರೆಸಿದೆ , “ ಹತ್ತು ಜನರೂ ಬಡವರು . ಬಡತನ ಕೆಟ್ಟದ್ದು ! ಎರಡು ಹೊತ್ತಿನ ಊಟಕ್ಕೆ - ದಿನಪೂರ್ತಿ ಕಷ್ಟಪಡಬೇಕಾಗಿತ್ತು ! ಕಷ್ಟ ಪಡುತ್ತಿದ್ದರು ಕೂಡ . ಆ ಹತ್ತು ಜನರಲ್ಲಿ - ಈ ಜೀವನ ಜಂಜಾಟದಲ್ಲಿ - ಒಬ್ಬ ಮಾತ್ರ ಭವಿಷ್ಯದ ಯೋಜನೆಯೊಂದನ್ನು ಸ್ಪಷ್ಟವಾಗಿ ರೂಪಿಸಿಕೊಂಡಿದ್ದ ! ಎರಡು ಹೊತ್ತಿನ ಊಟ ಅನ್ನುವ ಚಿಂತೆ ಬಿಟ್ಟು ಒಂದು ಹೊತ್ತಿನ ಊಟವನ್ನು ಮಾತ್ರ ಮಾಡುತ್ತಿದ್ದ !” ಮಧ್ಯೆ ತಲೆ ಹಾಕಿದ ಮಗ ! ನನ್ನ ಮಗನಲ್ಲವೇ ...., “ ಇದು ನಿಮಗೇ ಸ್ವಲ್ಪ ಉತ್ಪ್ರೇಕ್ಷೆ ಅನ್ನಿಸುತ್ತಿಲ್ಲವೇ ? ಒಂದು ಹೊತ್ತಿನ ಊಟ ....?” “ ಅದನ್ನು ಸೂಚ್ಯವಾಗಿ ತೆಗೆದುಕೋ .... ಹಲವಾರು ಖರ್ಚುವೆಚ್ಚಗಳನ್ನು ಕಡಿತಗ...

ಎಡವಿದ ಕಥೆ!

ಎಡವಿದ ಕಥೆ ! * “ ಕಥೆ ಕೇಳು ಹುಡುಗಿ ! ನೀನಿದುವರೆಗೆ ಕೇಳದಿರುವ ಕಥೆ !” “ ನೀ ಏನೇ ಹೇಳಿದರೂ ನಾ ಮುಂಚೆ ಕೇಳಿರುವುದಿಲ್ಲ !” “ ಒಂದು ಊರು ! ಅಲ್ಲೊಬ್ಬ ಹುಡುಗ !” “ ಒಂದೇ ಊರು - ಒಬ್ಬನೇ ಹುಡುಗನ ?” “ ಈ ಕಥೆಗೆ ಸಂಬಂಧಪಟ್ಟ ....!” “ ಹು !” “ ಒಮ್ಮೆ ದಾರಿಯಲ್ಲಿ ನಡೆದು ಹೋಗುವಾಗ ಎಡವಿ ಬಿದ್ದ !” “ ಹು !” “ ಎದ್ದ !” “ ಹು !” “ ಹಿಂದಕ್ಕೆ ನಡೆಯದೆ ಮುಂದಕ್ಕೇ ಹೋದ !” “ ಹು !” “ ದಾರಿ ತಲುಪಿದ್ದು ಮಹಾ ಸಮುದ್ರಕ್ಕೆ !” “ ಹು !” “ ಹಿಂತಿರುಗಿ ನಡೆಯಲು ತಿರುಗಿದ !” “ ಹು !” “ ಹೆಬ್ಬುಲಿ !” “ ಹು !” “ ಬಲ ಪಕ್ಕಕ್ಕೆ ಹೋಗೋಣವೆಂದರೆ - ಕಾಡಾನೆ !” “ ಹು !” “ ಎಡಪಕ್ಕ ಕಾಳಿಂಗ ಸರ್ಪ !” “ ಹು !” “ ಅವನು ಸಮುದ್ರಕ್ಕೇ ಬಿದ್ದ !” “ ಹು !” “ ಅಷ್ಟೇ ಕಥೆ !!!” “ ನಿನ್ನ ತಲೆ ! ಇದೆಂತ ಕಥೆ ?” “ ಯೋಚಿಸಿ ನೋಡು !” “ ಏನು ?” “ ಎಡವಿ ಬಿದ್ದಾಗಲೇ ಎದ್ದು ತಿರುಗಿ ನಡೆದಿದ್ದರೆ ?” “ ಎಂತ ಸಾವ ! ತತ್ತ್ವ ಹೇಳು !” “ ಪ್ರೇಮ ನೈರಾಶ್ಯದಲ್ಲಿ ಮದುವಯೇ ಆಗುವುದಿಲ್ಲವೆಂದು ಶಪಥ ಮಾಡಿದವ - ಇನ್ನೊಬ್ಬಳೊಂದಿಗೆ ಮದುವೆಯ ತಯಾರಿಯಲ್ಲಿದ್ದಾನೆ !!”

ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ!

ಅಣಿಮಾಂಡವ್ಯನ ಮಾಯೆಯೂ ನನ್ನ ಭ್ರಮೆಯೂ ! * ನನ್ನನ್ನು ನಾನು ಹುಡುಕಲು ತೊಡಗಿ ಸುಮಾರು ವರ್ಷಗಳಾಯಿತು ! ಇನ್ನೂ ಕಂಡುಕೊಳ್ಳಲಾಗಿಲ್ಲ ...! * ಅಣಿಮಾಂಡವ್ಯ ಅನ್ನುವ ಮಹಾ ಋಷಿಯೊಬ್ಬರಿದ್ದರಂತೆ . ಮಾಡದ ತಪ್ಪಿಗೆ ಶೂಲಕ್ಕೇರಿಸಲ್ಪಟ್ಟು ತಪಸ್ಸಿನ ಶಕ್ತಿಯಿಂದಾಗಿ , ಸಾಯಲೂ ಇಲ್ಲ - ಬದುಕೋ ನರಕ ಅನ್ನುವಂತಾಗಿತ್ತು ಪರಿಸ್ತಿತಿ ! ಮೂರು ದಿನವಾದರೂ ಆತ ಸಾಯದಿರುವುದನ್ನು ನೋಡಿ ಗಾಬರಿಯಾದ ಶೂಲಕ್ಕೇರಿಸಿದ ಮಹಾರಾಜ , ಈತನಾರೋ ಮಹಾನುಭಾವನೇ ಇರಬೇಕು , ತನಗೆ ತಪ್ಪಾಗಿದೆ ಅನ್ನುವುದನ್ನು ಅರಿತು , ತಾನೇ ಖುದ್ದಾಗಿ ಬಂದು , ಋಷಿಯನ್ನು ಶೂಲದಿಂದ ಇಳಿಸಿ , ಋಷಿ ಪಾದಕ್ಕೆ ಬಿದ್ದು ಉರುಳಾಡಿ ಕ್ಷಮೆ ಕೇಳಿದನಂತೆ ! ಪರಮ ಸಾಧು ಋಷಿ ಕ್ಷಮೆಯನ್ನು ನೀಡಿ ಮತ್ತೊಮ್ಮೆ ತಪಸ್ಸಿಗೆ ಹೊರಟ - ತನಗೇಕೆ ದೇವರು ಈ ಶಿಕ್ಷೆಯನ್ನು ನೀಡಿದ ಎಂದು ಕಂಡುಕೊಳ್ಳಬೇಕಿತ್ತು !! * ಅದೇ ಸಮಯದಲ್ಲಿ ನಾನೂ ತಪಸ್ಸಿಗೆ ತೊಡಗಿದ್ದೆ ! ಉದ್ದೇಶ - ದುಃಖದಿಂದ ಹೊರಬರುವುದು ! ನನ್ನೊಳಗೆ ನಾನು ಪರಮಾನಂದವನ್ನು ಕಂಡುಕೊಳ್ಳುವುದು ! ಪ್ರತ್ಯಕ್ಷರಾದ ದೇವರು ಹೇಳಿದ್ದು ...., “ ಅಣಿಮಾಂಡವ್ಯ ತಪಸ್ಸಿಗೆ ಹೊರಟ ಕಾರಣವನ್ನು ನೀನು ಹೇಳಿದೆ ! ನೀನು ಹೊರಟ ಕಾರಣವನ್ನು ಹೇಳಿಲ್ಲ - ಉದ್ದೇಶ ಮಾತ್ರ ಹೇಳಿದ್ದೀಯೆ ! ಕಾರಣವನ್ನು ಪ್ರಪಂಚದ ಮುಂದೆ ಹೇಳಿಕೋ .... ನಿಜದರಿವಾಗುತ್ತದೆ !” * ಅಣಿಮಾಂಡವ್ಯನ ತಪಸ್ಸು ಮುಗಿಯುವ ಸೂಚನೆಯೇ ಇಲ್ಲ ! ಮುಂಚೆಯೆಲ್ಲಾ ಅಷ್ಟು ಬೇಗ...

ಇಚ್ಛಾಶಕ್ತಿ

"ಆಸ್ತಿಯಿಲ್ಲ- ಸಂಪಾದನೆಯಿಲ್ಲ- ಹಿನ್ನೆಲೆಯಿಲ್ಲ! ಆದರೂ ಸಾಧಿಸಿಯೇ ಸಾಧಿಸುತ್ತೇನೆನ್ನುವ ನಿನ್ನ ಈ ನಿಶ್ಚಯದಾರ್ಢ್ಯಕ್ಕೆ- ನಂಬಿಕೆಗೆ ಕಾರಣವೇ ಗೊತ್ತಾಗುತ್ತಿಲ್ಲ!" "ಗುರಿ ಸ್ಪಷ್ಟವಾಗಿದೆ! ದಾರಿ ಸೃಷ್ಟಿಸಿಕೊಂಡಿದ್ದೇನೆ! ಪ್ರಯತ್ನ ಅದರಪಾಡಿಗೆ ನಡೆಯುತ್ತಿದೆ! ಬಿದ್ದ- ಬೀಳುತ್ತಿರುವ ಏಟುಗಳು ಹಠವನ್ನು- ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದೆ! ಇನ್ನು.... ಗುರು ಹಿರಿಯರ ಆಶೀರ್ವಾದವಿದೆ! ಕಿರಿಯರ ಪ್ರಾರ್ಥನೆ, ಸಮವಯಸ್ಕರ ಹಾರೈಕೆ- ಅದರಲ್ಲೂ ಹೆಣ್ಣು ಹೃದಯದ ತುಂಬು ವಾತ್ಸಲ್ಯ ಎಂದೂ ನನ್ನ ಜೊತೆಗಿದೆ! ಇನ್ನೇನುಬೇಕು?"

ಒಳಗಿನ ದೇವರು!

ಒಳಗಿನ ದೇವರು ! * ಎಷ್ಟು ವರ್ಷದ ತಪಸ್ಸೋ .... ದೇವರು ಪ್ರತ್ಯಕ್ಷರಾದರು ! “ ಏನು ವರ ಬೇಕು ?” “ ನಿಮ್ಮನ್ನು ನಾನು - ನನ್ನೊಳಗೆ ಕಾಣಬೇಕು !” “ ಅದು ಸ್ವಲ್ಪ ಕಷ್ಟ !” “ ಓ ..., ಇನ್ನೂ ಕಷ್ಟವೇ ? ಬಾಹ್ಯದಲ್ಲಿ ಕಾಣಲೇ ಇಷ್ಟು ಕಷ್ಟಪಟ್ಟೆ ! ಇನ್ನು ಒಳಗೆ ಕಾಣಲು ಅದೆಷ್ಟು ಕಷ್ಟಪಡಬೇಕೋ ... ಆದರೂ - ಪಡುತ್ತೇನೆ - ಹೇಳಿ , ಏನು ಮಾಡಲಿ ?!” “ ಹೆಣ್ಣನ್ನು ಪ್ರೇಮಿಸು !” ಎಂದು ಹೇಳಿ ಅಪ್ರತ್ಯಕ್ಷರಾದರು ! ಹೆಣ್ಣನ್ನು ಪ್ರೇಮಿಸು ಎಂದರು - ಯಾವ ಹೆಣ್ಣನ್ನು ಎಂದು ಹೇಳಲಿಲ್ಲ ! ನಾನು ಪ್ರತಿ ಹೆಣ್ಣನ್ನೂ ಪ್ರೇಮಿಸಿದೆ ! ಅದೇ ಕಾರಣವಾಗಿ ಯಾರೊಬ್ಬರೂ ಉಳಿಯಲಿಲ್ಲ ! ನಾನು ನನ್ನೊಳಗೆ ಹುದುಗಿಕೊಂಡೆ - ದೇವರನ್ನು ಕಂಡೆ !!

ಪ್ರೇಮ-ಬಂಧನ

ಪ್ರೇಮ ಬಂಧನ ! * " ಬಂಧಿಸಲ್ಪಟ್ಟ ಪ್ರೇಮ ಇಲ್ಲವಾಗುತ್ತದೆ !" ಎಂದೆ . " ಅರ್ಥವಾಗಲಿಲ್ಲ " ಎಂದರು . " ಪ್ರೇಮ ಸ್ವತಂತ್ರವಾಗಿರಬೇಕು - ಸಾಗರದಂತೆ " ಎಂದೆ . " ನಿನ್ನ ತಲೆ !" ಎಂದರು . " ಯಾಕಮ್ಮ ?" ಎಂದೆ . " ವಯಸ್ಸು ! ನಿನ್ನ ವಯಸ್ಸಿನವರಿಗೆ ಹಾಗೇ ಅನ್ನಿಸೋದು ! ಕಂಡ ಕಂಡವರನ್ನೆಲ್ಲಾ ಪ್ರೇಮಿಸಿ - ದೆನೆಂಬ ಭ್ರಮೆಯಲ್ಲಿ ನೀನೇನೋ ಭಾರಿ ಪ್ರೇಮಿ ಅನ್ನುವಂತೆ !" ಎಂದರು . " ಅಲ್ಲವಾ ಮತ್ತೆ ? ಬಂಧನವಿದ್ದರೆ ಇದೆಲ್ಲಾ ಹೇಗೆ ಸಾಧ್ಯ ?" ಎಂದೆ . " ಪ್ರಪಂಚದಲ್ಲಿರುವವರೆಲ್ಲಾ ಹೀಗೆ ಅಂದುಕೊಂಡರೆ ಮುಗೀತು ಕಥೆ !" ಎಂದರು . ಯೋಚನೆ ! ನಿಜ ಎಲ್ಲೋ ಏನೋ ಮಿಸ್‌ಹೊಡೀತಿದೆ !! " ಹಾಗಾದರೆ ಬಂಧನವೇ ಒಳ್ಳೆಯದು ಅನ್ನುತ್ತೀರ ?" ಎಂದೆ . " ಬಂಧನವೋ ಏನೋ .... ನನಗೆ ನಿಮ್ಮಪ್ಪನೇ ಪ್ರಪಂಚ - ನೀ ಹೇಳುವಂತೆ ಮಹಾಸಾಗರ ! ನಮ್ಮ ಪ್ರೇಮಬಂಧನದ ಸಾಫಲ್ಯ ನೀನು !" ನಾನೇನೂ ಮಾತನಾಡಲಿಲ್ಲ . ಅಮ್ಮನೇ ಹೇಳಿದರು - " ಇದೊಂದು ಬಂಧನ ಅಂದುಕೊಂಡು ಅದರಿಂದ ಹೊರಬರಲು ಇಬ್ಬರೂ ಶ್ರಮಿಸಿದ್ದರೆ ಏನಾಗುತ್ತಿತ್ತು ಹೇಳು ...." ಎಂದರು . ಏನು ಹೇಳಲಿ .... ಮೌನವಾದೆ !

ಪಾರ್ಕಿಂಗ್ ಸಮಸ್ಯೆ

ಪಾರ್ಕಿಂಗ್ ಸಮಸ್ಯೆ ತುಂಬಾ ಸೀರಿಯಸ್ ವಿಷಯ ಇದು ! ತಮಾಷೆ ಎಂದು ಹೇಳಿ ಬರೆದು ಆಮೇಲೆ ನಗು ಬರದೆ .... ಯಾಕೆ ಬೇಕು ...! ನಾವು ನಾಲ್ಕು ಜನ ಸ್ನೇಹಿತರು . ಪ್ರಾಣ ಸ್ನೇಹಿತರು ಎಂದು ಹೇಳಬಹುದು ... ಬಹದು ಅಲ್ಲ , ಪ್ರಾಣ ಸ್ನೇಹಿತರೇ ... ಇಬ್ಬರು ಗೃಹಸ್ಥರು - ನಾನೂ ತೇಜ ! ಇಬ್ಬರು ಬ್ರಹ್ಮಚಾರಿಗಳು - ಭಟ್ಟ , ಕೆಂಚ ಆಲಿಯಾಸ್ ರವಿಶಂಕರ್ ! ಗೃಹಸ್ಥರಿಬ್ಬರು ಆಚೆಗೂ ಇಲ್ಲ , ಈಚೆಗೂ ಇಲ್ಲ - ಒಂದೇ ಮೆಂಟಾಲಿಟಿ ! ಬ್ರಹ್ಮಚಾರಿಗಳಲ್ಲಿ ಕೆಂಚ ಶೇಖಡಾ ನೂರು - ಇರಿಟೇಟಿಂಗ್ ! ಇನ್ನೊಬ್ಬ - ಬಾಲ ಬ್ರಹ್ಮಚಾರಿ - ಭಟ್ಟ , ಪಕ್ಕಾ ಸೀರಿಯಸ್ - ಆದರೇನು ? ಅವನು ಏನು ಮಾಡಿದರೂ ಮಾತನಾಡಿದರೂ ನಮಗೆ ನಗು ಬರುತ್ತದೆ ! ಹಾಗೆಂದು ಅವ ಜೋಕರ್ ಅಲ್ಲ ! ಒಬ್ಬನ ಇರಿಟೇಷನ್ ಮತ್ತೊಬ್ಬನ ತಮಾಷೆಯಿಂದ ಕವರಪ್ ಆಗುವುದರಿಂದ ಒಂದು ರೀತಿಯ ಬ್ಯಾಲನ್ಸ್ - ನಮ್ಮ ಗೆಳೆತನದಲ್ಲಿ ! ಈ ಬ್ರಹ್ಮಚಾರಿಗಳಬಗ್ಗೆ ಹೇಳತೊಡಗಿದರೆ ಸಾವಿರಾರು ವಿಷಯಗಳಿದೆ .... ಅದರಲ್ಲಿ ನಮ್ಮ ನಾಲ್ವರಿಗೂ ಪ್ರಿಯವಾದ ಒಂದು ಸಣ್ಣ ಘಟನೆಯಿದೆ . ನಾವೊಂದು ಟೂರ್ ಹೋದೆವು . ಮೂರು ದಿನದ್ದು . ಮೈಸೂರಿನಿಂದ ಮೂಕಾಂಬಿಕಾಗೆ . ಬ್ರಹ್ಮಚಾರಿಗಳಿಬ್ಬರು ಒಂದುಗಾಡಿ , ನಾವಿಬ್ಬರು ಒಂದು . ಎಲೆಕ್ಷನ್ ಸಮಯ . ಭಾರೀ ಚೆಕಿಂಗ್ . ಟೂವೀಲರ್‌ಗಳಿಗೆ ಅಂಥಾ ಸಮಸ್ಯೆಯೇನೂ ಇರಲಿಲ್ಲ .... ಇನ್ನೇನು ಮೂಕಾಂಬಿಕಾಗೆ ಐದು ನಿಮಿಷದ ದೂರ ... ಜೀಪೊಂದು ಯೂಟರ್ನ್ ತೆಗೆದುಕೊಳ್ಳಲು ರಿವ...