Posts

ಕಡಲು ಬೆಟ್ಟ ಮತ್ತು ನಾನು!

ಕಡಲು ಬೆಟ್ಟ ಮತ್ತು ನಾನು! * ಇದು ಕಥೆಯ? ಗೊತ್ತಿಲ್ಲ. ಬರೆಯಬೇಕು ಅನ್ನಿಸುತ್ತಿದೆ- ಬರೆಯುತ್ತಿದ್ದೇನೆ! ಯಾಕೆ ಅನ್ನಿಸುತ್ತಿದೆ? ಗೊತ್ತಿಲ್ಲ! ಕಡಲನ್ನು ಕಂಡಾಗ, ಬೆಟ್ಟವನ್ನು ಹತ್ತಿದಾಗ…, ಆಗಾಗ…, ಬರೆಯಬೇಕು ಅನ್ನಿಸುತ್ತದೆ! ಪ್ರಸ್ತುತಾ ಹೇಳಬೇಕು ಅಂದುಕೊಂಡಿರುವ ವಿಷಯವನ್ನು ವಿವರಿಸುವುದು ಸ್ವಲ್ಪ ಕಷ್ಟ! ಆದ್ದರಿಂದ…, ಅವಳ ಸಹಾಯವನ್ನು ಪಡೆದುಕೊಳ್ಳುತ್ತೇನೆ. ಶಾರದೆ! ಯಾರವಳು? ವಾಗ್ದೇವಿ ಅಂದುಕೊಳ್ಳೋಣ! ಪ್ರತೀ ಅವಳೂ…, ಶಾರದೆಯೇ! ಪ್ರತೀ ಶಾರದೆಯೂ…, ಅವಳೇ! ಇಷ್ಟಕ್ಕೂ ವಿಷಯವೇನು? ಎಷ್ಟು ಬರೆದರೂ ಮುಗಿಯದ…, ವಿವರಿಸಲಾಗದ…, ಎಷ್ಟು ದಕ್ಕಿದರೂ ಸಾಲದ…, ಅರ್ಥಕ್ಕೆ ಎಟುಕದ…, ಅನುಭವಿಸಿ ಮಾತ್ರ ಅರಿತುಕೊಳ್ಳಬಹುದಾದ…, ಅದ್ಭುತ ಆನಂದಾನುಭೂತಿಗೆ ಕಾರಣವಾದ…,  ಪ್ರೇಮ! * ಮತ್ತೆ ಬರಬೇಡವೆಂದು ಎಷ್ಟೇ ಹೇಳಿದರೂ…, ಮತ್ತೆ ಮತ್ತೆ ಉರುಳುರುಳಿಬಂದು ಮುತ್ತಿಕ್ಕಿ ಹೋಗುತ್ತಿದೆ…, ಅಲೆಗಳು! ಅಲೆಗಳಿಂದ ಆಚೆಗೆ ದೃಷ್ಟಿ ಹಾಯಿಸಿದರೆ…, ಶಾಂತಗಂಭೀರವಾಗಿ ಹರಡಿಕೊಂಡಿದೆ…, ಕಡಲು! ಕಡಲಿನಂಚಿನಲ್ಲಿ…, ಎಷ್ಟು ಅದ್ಭುತವಾದ ದೃಶ್ಯ! ಆಕಾಶದಿಂದ ಜಾರಿ…,  ಕಡಲನ್ನು ಚುಂಬಿಸಿ…, ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ…, ಸೂರ್ಯ! ಕತ್ತಲು ಬೆಳಕಿನ ಆಟ! ಅಲೆಗಳಂತೆ ಪ್ರಕ್ಷುಬ್ಧವಾಗಿದ್ದ ನನ್ನ ಮನಸ್ಸು…, ಅದೇ ಅಲೆಗಳ ಒಡೆಯನಾದ ಕಡಲಿನಂತೆ ಶಾಂತವಾದ ಭಾವ! ಹೌದು…, ನಾನು ನಿರಾಳವಾಗಿದ್ದೇನೆ…, ನೆಮ್ಮದಿಯಾಗಿದ್ದೇನೆ…, ಇದುವರೆಗಿನ ನನ್ನ ಜೀವನದ...

ಆಕ್ಷೇಪಣಾ ಪತ್ರ!

ಹೇಗಿದ್ದೀಯೆ? ಬ್ಯುಸಿ- ಅಲಾ? ಗೊತ್ತು…, ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸಮಯ ಸಾಲದ ಪಾಪದ ಹೆಣ್ಣು ನೀನು! ವಿಷಯ ನ್ತ ಗೊತ್ತ? ನೀ ಎಷ್ಟೇ ಬ್ಯುಸಿಯಾಗಿದ್ರೂ, ಫ್ರೀಯಾಗಿದ್ರೂ, ನೆನಪಿಸಿಕೊಂಡರೂ- ಕೊಳ್ಳದಿದ್ದರೂ ಐ ಲವ್‌ಯು! ಬದುಕು ಎಷ್ಟು ಚಂದ! ಪಾಪ ನನ್ನ ಅಮ್ಮ…, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಿದ್ದರೆ ನಾನಿಂದು ಎಲ್ಲಿರುತ್ತಿದ್ದೆನೋ ಏನೋ! ಅದು ಹಾಗೆಯೇ ನೋಡು…, ಹಲ್ಲಿದ್ದವನಿಗೆ ಕಡಲೆಯಿಲ್ಲ ಕಡಲೆಯಿದ್ದವನಿಗೆ ಹಲ್ಲಿಲ್ಲ ಅನ್ನುವಂತೆ ನನ್ನ ಜೀವನ. ಅತಿ ಸಮರ್ಥ ನಾನು! ನದಿಯ ಹರಿವಿಗೆ ನನ್ನನ್ನು ಒಡ್ಡಿಕೊಂಡಿದ್ದರೂ ಸಾಕಿತ್ತು- ಕುಟುಂಬದ, ಗೆಳೆಯರ, “ಇತರರ" ದೃಷ್ಟಿಕೋನದ ಗೆಲುವನ್ನು ಅತಿ ಸುಲಭದಲ್ಲಿ ಸಾಧಿಸುತ್ತಿದ್ದೆ. ಆದರೇನು ಮಾಡುವುದು…? ಇದು- ನಾನು ಅಲಾ? ನನಗೆ ಸಹಜವಾಗಿ ಒಲಿದಿದ್ದ ಸಾಮರ್ಥ್ಯಕ್ಕೆ, ಅವಕಾಶಗಳಿಗೆ ವಿರುದ್ಧವಾಗಿ…, ಪ್ರವಾಹಕ್ಕೆ ಇದಿರಾಗಿಯೇ ಈಜಬೇಕೆಂದು ತೀರ್ಮಾನಿಸಿದವ! ತೀರ್ಮಾನ ನನ್ನದು! ಪ್ರವಾಹವೆಂದರೇನೆಂಬ ಅರಿವೇ ಇಲ್ಲದೆ- ಅದಕ್ಕೆ ಇದಿರಾಗಿ! ಅದೆಷ್ಟುಸಾರಿ ಶುರುಮಾಡಿದ ಸ್ಥಳವನ್ನೇ ಸೇರಿದೆ! ಇಲ್ಲದ ದಾರಿಯನ್ನು ಸೃಷ್ಟಿಸಿ ಅದೆಷ್ಟುಸಾರಿ ಗಮ್ಯದ ಹತ್ತಿರಕ್ಕೆ ತಲುಪಿದೆ! ನನಗೆ ಸಂಬಂಧವೇ ಇಲ್ಲದ ಅಡತಡೆಗಳು…, ಅನೂಹ್ಯ ತಿರುವುಗಳು…, ಪೆಟ್ಟುಗಳು! ಇದೋ…, ಪುನಃ ಅದೇ ಶುರುವಿನ ಹಂತಕ್ಕೆ ಬಂದು ನಿಂತಿದ್ದೇನೆ. ಪ್ರವಾಹದ ಸಂಪೂರ್ಣ ಅರಿವು ದೊರಕಿದ ತೃಪ್ತಿಯೇನೋ ಇದೆ…, ಆದರೆ ಆದರೆ…, ಮತ್ತೊಮ್ಮೆ ಈಜು ಶು...

ಸಾವು!

ಅದೊಂದು ಸಾವು. ಅಗೋಚರ ಸಾವು. ನಿಗೂಢ ಸಾವು. ಹಾಗೊಂದು ಸಾವು ನಡೆದಿರುವ ವಿಷಯ ಯಾರೆಂದರೆ ಯಾರೊಬ್ಬರಿಗೂ ತಿಳಿಯದು! ಸ್ವಲ್ಪ ದಿನಗಳ ಮುಂಚೆ ಕಥೆಯೊಂದು ಓದಿದೆ. ಓದಿ…, ಬರೆದವನನ್ನು ಮನಸ್ಸಿನಲ್ಲಿಯೇ ವಾಚಾಮಗೋಚರ ಬೈದಿದ್ದೆ. ಇಷ್ಟು ಕೆಟ್ಟದ್ದಾಗಿ ಯಾಕೆ ಕಥೆ ಬರೆಯುತ್ತಾರೋ ಎಂದು. ಮನಸ್ಸಿನಾಳದಲ್ಲೆಲ್ಲೋ ಕದಲಿಕೆ! ಭೂತಕಾಲಕ್ಕೆ ಚಲಿಸಿದೆ…, ನಾನು ಮೊದಲ ಪುಸ್ತಕ ಬರೆದ ಕಾಲಕ್ಕೆ! ಆ ಪುಸ್ತಕ ಬರೆಯುವ ಮುಂಚೆ ಸಾವಿರ ಪುಸ್ತಕಗಳನ್ನು ಓದಿದ್ದೆ. ನಂತರ ಬರಹದ ಹುಚ್ಚು ತಲೆಗೆ ಹಿಡಿದು ಒಂದರ ಹಿಂದೆ ಒಂದರಂತೆ ಕಥೆಗಳು…, ಒಂದು ಹಂತದಲ್ಲಿ…, ಏನು ಬರೆಯಬೇಕೆಂದು ತೋಚದಿದ್ದರೂ ಬಲವಂತವಾಗಿ ಬರೆದೆ. ಹೀಗೆಯೇ ಎಷ್ಟು ಕಾಲ? ನಿಜ! ಬರೆಯತೊಡಗಿದಮೇಲೆ ಓದು ನಿಂತಿದ್ದು ಅರಿವಿಗೆ ಬರಲೇ ಇಲ್ಲ! ಬರಹ ಮುಕ್ಕರಿಸಿದಾಗ ಅರಿವಿಗೆ ಬಂದದ್ದು ಏನು? ಇದುವರೆಗಿನ ನನ್ನ ಕಥೆಗಳು- ಅದುವರೆಗಿನ ನನ್ನ ಓದಿನ ಫಲ! ಹಾಗೆ…, ಪುನಃ ಓದು ಶುರುಮಾಡಿದಾಗ ಓದಿದ ಮೊದಲ ಕಥೆ- ಕಥೆಗಾರ ಬೈಯ್ಯಿಸಿಕೊಂಡ ಕಥೆ- ಓದಿನಮೇಲೆ ತಾತ್ಸರ ಹುಟ್ಟುವಷ್ಟು ಕಳಪೆಯಾಗಿತ್ತು. ಕಥೆಗಾರನ ಹೆಸರು ನೋಡಿದೆ. ಓದು ಎಷ್ಟು ದೂರವಾಗಿತ್ತೆಂದರೆ..., ಬರೆದು ಬರೆದು ತುಂಬಿಸುತ್ತಿದ್ದ ನನ್ನದೇ ಕಥೆಗಳನ್ನು ಓದಿದರೂ ಗುರುತಿಸಲಾರದಷ್ಟು! ಹಾಗೆ…, ಆ ಸಾವು ಸಂಭವಿಸಿತು…, ನನ್ನೊಳಗಿನ ಕಥೆಗಾರನ ಸಾವು!!!

ವಿಕ್ಟಿಂ

 "ಎಲ್ಲಾ‌ ಕಥೆಗಳಲ್ಲಿ ಹೆಣ್ಣುಮಕ್ಕಳನ್ನೇ ಯಾಕೆ ವಿಕ್ಟಿಂ ಮಾಡ್ತೀರ?!" ಎಂದಳು. "ಹೆಣ್ಣುಮಕ್ಕಳಿಗಿರುವ ಬೆಲೆ ಗಂಡುಮಕ್ಕಳಿಗೆಲ್ಲಿದೆ?!" ಎಂದೆ. "ನಿಮ್ತಲೆ! ನಾನೇನ್ ಕೇಳ್ತಿದೀನಿ ನೀವೇನ್ ಹೇಳ್ತಿದೀರ?!" ಎಂದಳು. "ಹೂಂನೆ... ಹೆಣ್ಣುಮಕ್ಕಳನ್ನಾದರೆ ರೇಪ್ ಮಾಡಬಹುದು, ಮಾರಬಹುದು, ಅವರನ್ನಿಟ್ಟುಕೊಂಡು ಹಣ ಮಾಡಬಹುದು! ಗಂಡುಮಕ್ಕಳೂ ಇದ್ದಾರೆ ಯೂಸ್‌ಲೆಸ್ ವೇಸ್ಟ್‌ಗಳು!'" ಎಂದೆ. ಮುಖ ಊದಿಸಿ ಮಾತುಬಿಟ್ಟು ಹೊರಟು ಹೋದಳು! 😁

ಇತ್ತೀಚಿನ- ಮುಗಿದ ಜಿಜ್ಞಾಸೆಗಳು!

 ಇತ್ತೀಚಿನ- ಮುಗಿದ ಜಿಜ್ಞಾಸೆಗಳು! * ಜಿಜ್ಞಾಸೆ ಒಂದು:- “ನೀವು ದೇವಸ್ಥಾನಕ್ಕೇ ಹೋಗಲ್ವಾ?” ಎಂದು ಕೇಳಿದರು…, ಹೊಸದಾಗಿ ಪರಿಚಯವಾದ ಗೆಳೆಯರೊಬ್ಬರು- ಆಶ್ಚರ್ಯದಿಂದ. “ಒಬ್ಬನೇ ಹೋಗುವುದಿಲ್ಲ!” ಎಂದೆ. “ಕಾರಣ?” ಎಂದರು. “ಅಷ್ಟುದ್ದ ಕ್ಯೂ…! ಹೇಗೋ ಹತ್ತಿರ ತಲುಪಿ ಒಂದು ಸೆಕೆಂಡ್ ಕೂಡ ದರ್ಶನ ಮಾಡಿರುವುದಿಲ್ಲ…, ಮುಂದಕ್ಕೆ ಹೋಗಿ ಎಂದು ತಳ್ಳುತ್ತಾರೆ! ಅದು ಪಿರಿಪಿರಿ ಆಗುತ್ತದೆ. ನಾವು ದೇವಸ್ಥಾನಕ್ಕೆ ಹೋಗುವುದೇ ನೆಮ್ಮದಿಗಾಗಿ ತಾನೆ? ನೆಮ್ಮದಿ ಭಂಗ ಆಗೋಕೆ ಅಲ್ಲವಲ್ಲಾ? ನನಗೋ ಮನಃಸ್ತೃಪ್ತಿ ಆಗುವವರೆಗೂ ನೋಡಬೇಕು!” ಎಂದೆ. “ನೀವು ಹಾಗೆ ಹೇಳ್ತೀರ? ನನಗೆ ಹೇಗೆ ಗೊತ್ತಾ? ಅಷ್ಟುದ್ದ ಕ್ಯೂ…, ಹೇಗೋ ಹತ್ತಿರ ತಲುಪಿ ದರ್ಶನ ಆಗುತ್ತದೆ. ಅಬ್ಬಾ…, ಇಷ್ಟು ಹೊತ್ತು ಕ್ಯೂ ನಿಂತದ್ದು ಸಾರ್ಥಕವಾಯಿತು- ಕೊನೆಗೂ ದರ್ಶನವಾಯಿತು ಅನ್ನೋ ತೃಪ್ತಿ!” ಎಂದರು. ಅಲ್ಲವಾ…! ಮನಸ್ಸು ಜಿಜ್ಞಾಸೆಗೆ ತೊಡಗಿತು…, ನಾನು ದೇವಸ್ಥಾನಗಳಿಗೆ ಹೋಗದಿರಲು ಇದೊಂದೇ ಕಾರಣವಾ? ದೇವರೆಂದರೆ ಯಾರು? ಯಾಕೆ ದೇವಸ್ಥಾನಕ್ಕೆ ಹೋಗಬೇಕು? ಗೆಳೆಯರೊಂದಿಗೆ ಅಥವಾ ಇತರರೊಂದಿಗಾದರೆ ಹೋಗುತ್ತೇನಲ್ಲ? ಒಬ್ಬನೇ ಹೋಗುವುದಿಲ್ಲ ಅನ್ನುವುದಷ್ಟೇ ವಿಷಯ…, ಯಾಕೆ? ಚಾಮುಂಡಿ ಬೆಟ್ಟ…, ನನ್ನ ಇಮೋಷನ್ ಅದು! ಹತ್ತು-ಹದಿನೈದು ವರ್ಷಗಳಿಂಂದ ನಿರಂತರವಾಗಿ ಮೆಟ್ಟಿಲಮೂಲಕ ಹತ್ತುವುದು- ಇಳಿಯುವುದು- ಮಧ್ಯೆ ವ್ಯಾಯಾಮ ಮಾಡುವುದು…, ನನ್ನ ದೈಹಿಕ ಮತ್ತು ಮಾನಸಿಕ ದೃಢತೆಗೆ ಅತಿಮುಖ್ಯ ಕಾರಣ- ಚಾಮು...

ಚುಟುಕು ಕಥೆಗಳು

೧ ನಾಳೆ ಬರುತ್ತೇನೆಂದೆ! "ನಾಳೆ" ಬರಲೇ ಇಲ್ಲ! ೨ ಕಥೆ! ಅವಳ ಮೇಲಿನ ನನ್ನ ಅತಿಶಯವಾದ ಪ್ರೇಮ..., ಅವಳ ಬದುಕಿನ ಅತಿದೊಡ್ಡ ಸಮಸ್ಯೆ! 😁 ೩ "ಯಾವಾಗ ನೋಡು ನೆಗೆಟಿವ್ ಕಥೆಗಳು!" ಎಂದಳು. "ಅದನ್ನು ಓದಿ- ಬಿ ಪಾಸಿಟಿವ್!" ಎಂದೆ. 😁 ೪ "ಎಷ್ಟು ಚಂದ‌‌ ಅಲಾ ಈ ನೆಮ್ಮದಿಯ ಜೀವನ" ಎಂದೆ. "ಐ ಲವ್‌ಯು" ಎಂದಳು 😁 ೫ "ನೀ ಯಾಕೆ ನನ್ನಜೊತೆ ಮಾತ್ರ ಸಿಟ್ಟು ಮಾಡ್ಕೋಳೋದು?" ಎಂದಳು. "ಸಿಟ್ಟು ಮಾತ್ರವಲ್ಲ ನನ್ನ ದುಃಖ ದುಮ್ಮಾನ ಸೆಡವುಗಳೂ ಗೊತ್ತಿರುವುದು ನಿನಗೆ ಮಾತ್ರ ಅನ್ನುವಲ್ಲಿ ಉತ್ತರವಿದೆ!" ಎಂದೆ. ೬ ಕಥೆ ನಂ:- ೧೯೬ ನೂರಾ ತೊಂಬತ್ತಾರು ಕಥೆ ಬರೆದ ನಾನು, ನೂರಾ ತೊಂಬತ್ತಾರು ಕಥೆ! ಇನ್ನೂ ಮುಗಿಯದ ಕಥೆ! ಮುಗಿಯುವವರೆಗಿನ ಕಥೆ!😁

ಪ್ರೇರಣೆ!

ಪ್ರೇರಣೆ! * ಕರ್ತವ್ಯ ವಿಮುಖನಾಗಿ, ಜವಾಬ್ದಾರಿಯನ್ನು ತಿರಸ್ಕರಿಸಿ, ಯಾರನ್ನೂ ಉಳಿಸಿಕೊಳ್ಳಲು ಶ್ರಮಿಸದೆ, ಬಂಧನ ಇಷ್ಟವಿಲ್ಲವೆನ್ನುವ ನೆಪದಲ್ಲಿ ಅಲೆಮಾರಿಯಂತೆ ನನ್ನ ಜೀವನ ನಾನು ಬದುಕಲು ತೀರ್ಮಾನಿಸಿದ್ದರ ಹಿಂದಿನ ಪ್ರೇರಣೆ... ಸಿದ್ಧಾರ್ಥ! ಇದನ್ನೇ ಮಾಡಿ ಬುದ್ಧನೆನ್ನಿಸಿಕೊಂಡ ಸಿದ್ಧಾರ್ಥ 😁

ಲಕ್ಷ್ಮಿ

 ಲಕ್ಷ್ಮಿ * “ಬೇಗ ಇನ್ನೂರು ತಲುಪಿಸು!” ಎಂದಳು. “ನ್ತದೆ…, ಇನ್ನೂರು ಚಪಾತಿ ಮಾಡಬೇಕು ಅನ್ನುವಂತೆ ಹೇಳ್ತಿದೀಯ! ಕಥೆಯೇ…!” ಎಂದೆ. “ಓ ಭಾರಿ ಕಥೆ! ಎಷ್ಟೋಜನ ಇನ್ನೂರು ಪುಸ್ತಕವೇ ಬರೆಯುತ್ತಿದ್ದಾರೆ…, ಇವನೊಬ್ಬ!” ಎಂದಳು. “ನನ್ನೊಳಗೆ ಇನ್ನೇನೂ ಇಲ್ಲ- ಬರೆಯಲು!” ಎಂದೆ. “ಅದನ್ನೇ ಬರಿ- ಯಾಕಿಲ್ಲ- ಅಂತ!” ಎಂದಳು. ಇವಳು ಹೀಗೆಯೇ…! ನನ್ನ ಲಕ್ಷ್ಮಿ! ಎಲ್ಲರೂ ಬೆಣ್ಣೆಯನ್ನು ನವನೀತ ಎಂದರೆ ಇವಳು ನವನೀತನನ್ನೇ ಬೆಣ್ಣೆ ಅನ್ನುತ್ತಾಳೆ! “ಇನ್ನುಮುಂದೆ ಕಥೆ ಬರೆಯುವುದಿಲ್ಲ!” ಅಂದಿದ್ದೆ. “ಇನ್ನೂರು ತಲುಪಿಸಿಬಿಡು- ಆಮೇಲೆ ಬರೆಯಬೇಡ!” ಎಂದಳು. “ಇನ್ನೂರು ತಲುಪಿದ ತಕ್ಷಣ ನಾನು ಸತ್ತು ಹೋದರೆ ಏನು ಮಾಡ್ತಿ?” ಎಂದೆ. ಅದೊಂದು ದೊಡ್ಡ ಕಥೆಯಾಯ್ತು! “ನೀ ಯಾಕೆ ಹೀಗೆ?” ಎಂದಳು. “ಹೌದು ನಾನು ಹೀಗೇ!” ಎಂದೆ. “ಅದೇ ಯಾಕೆ?” “ಯಾಕೆ ಅಂದರೆ? ನಾನಿರುವುದೇ ಹೀಗೆ!” ಎಂದೆ. “ನನ್ನನ್ನು ನೋಯಿಸುವುದೇ ನಿನ್ನ ಕೆಲಸ!” ಎಂದಳು. “ನಾನೇನು ಮಾಡಿದೆ?” “ಕಥೆ ಬರಿ ಅಂದ್ರೆ ಸಾಯೋ ಮಾತು ಯಾಕೆ ಹೇಳ್ತಿ?” “ಒಳ್ಳೆ ಕಥೆ! ಇನ್ನೂರು ಕಥೆ ಬರೆದ ನಂತರ ಬರೆಯಬೇಡ ಅಂದರೆ ಏನರ್ಥ?” “ನೀನು ಸಾಯಬೇಕು ಅಂತಾನ? ನಿನಗೆ ಗೊತ್ತಿಲ್ವ ಲಕ್ಷ್ಮೀನ?” “ಗೊತ್ತು…! ಆಮೇಲೆ ಮುನ್ನೂರು ಅನ್ತಿ!” “ಕಥೆ ಬರೆಯಲು ಹೇಳಿದ್ದೇ ನಾನು ಮಾಡಿದ ತಪ್ಪು ಅಲಾ?” ಎಂದಳು. “ಹೋಗಲಿ ಬಿಡು…! ಕಾಂಪ್ರಮೈಸ್ ಆಗೋಣ! ಆಗಾಗ, ಮದ್ಮದ್ಯೆ ಒಂದೊಂದು ಕಥೆ ಬರೆಯುತ್ತಾ ನೂರಾ ತೊಂಬತ್ತೊಂಬತ್ತು ತಲುಪಿಸೋಣ...

ಬೆಕ್ಕಿನ ಮರಿ!

ಬೆಕ್ಕಿನ ಮರಿ! * ಅವಳನ್ನೇ ನೋಡುತ್ತಿದ್ದೆ. ಅವಳ ಕೂದಲು…, ನನ್ನ ಇಮೋಷನ್ ಅದು! ನನ್ನ ಮುಖವನ್ನು ನೋಡಲಾಗದ ನಾಚಿಕೆಯೋ, ಹೆದರಿಕೆಯೋ, ಗೌರವವೋ…, ಯಾವ ಭಾವ ಅದು? ನನ್ನ ನೋಟವನ್ನು ಎದುರಿಸಲಾಗದೆ ಬೆಕ್ಕಿನ ಮರಿಯಂತೆ ಹಿಂದಕ್ಕೆ ಸರಿದಳು! ನಾನು ತಿರುಗುವುದಕ್ಕೆ ಅನುಸಾರವಾಗಿ ನನ್ನ ಬೆನ್ನ ಹಿಂದಕ್ಕೆ ಸರಿಯುತ್ತಿದ್ದಳು…! “ಬಾ ಈಚೆ!” ಎಂದು ಹೇಳಿ ಅವಳನ್ನು ಹಿಡಿದು ಮುಂದಕ್ಕೆ ಎಳೆದೆ. ಇಲ್ಲ…, ತಲೆ ಎತ್ತುತ್ತಲೇ ಇಲ್ಲ! ಬೊಗಸೆಯಲ್ಲಿ ಮುಖವನ್ನು ತೆಗೆದುಕೊಂಡು ನೋಡಿದೆ. ಆ ಚಂಚಲತೆ- ಅಧೀರತೆ…, ಕೊನೆಗೂ ನೋಡಿದಳು! ನೋಡಬೇಡ ಅನ್ನುವಂತೆ ಕಣ್ಣುಗಳಿಗೆ ಒಂದೊಂದು ಮುತ್ತು ಕೊಟ್ಟೆ! ಪಬ್ಲಿಕ್ ಆಗಿ!! ಇಬ್ಬರಿಗೂ ಅದರ ಅರಿವೇ ಇರಲಿಲ್ಲ! “ಹೋ…!” ಅನ್ನುವ ಸುತ್ತಲಿನವರ ಗೇಲಿ ನಮ್ಮನ್ನು ಎಚ್ಚರಿಸಿತು! ಮತ್ತಷ್ಟು ಮುದುಡಿ ಹಿಂದಕ್ಕೆ ಸರಿದಳು. ನನಗೋ ಅವಳ ಮುಖವನ್ನು ನೋಡುತ್ತಲೇ ಇರಬೇಕೆನ್ನುವ ಆಸೆ! ಬೆಕ್ಕಿನ ಮರಿ! ಬೀದಿಬದಿಯ ಟೀ ಅಂಗಡಿ. ಆರ್ಡರ್ ಕೊಟ್ಟಾಗಿದೆ. ಕುದಿಸುತ್ತಿದ್ದಾರೆ. ಹೊರಡುವ ಹಾಗಿಲ್ಲ. ಅವಳೋ ಮುಂದಕ್ಕೆ ಬರುತ್ತಿಲ್ಲ! ನನ್ನ ಅವಸ್ಥೆಯನ್ನು ಏನೆಂದು ಹೇಳುವುದು? “ಸರಿ…, ಬಾ…, ನಾನೇನೂ ಮಾಡುವುದಿಲ್ಲ!” ಎಂದೆ. ಹಿಂಜರಿಕೆಯಿಂದ ನಿಧಾನಕ್ಕೆ ಮುಂದಕ್ಕೆ ಬಂದಳು. ನೀಳವಾದ ಕೂದಲು…, ಚಂಚಲ ಕಣ್ಣುಗಳು, ಮೂಗಿನ ಕೆಳಗೆ ಎದ್ದುಕಾಣುವ ರೋಮವಿರುವ ತುಟಿ! ಮನಸ್ಸು! ಎಷ್ಟು ಕಷ್ಟ! “ಟೀ!” ಎಂದ ಅಂಗಡಿಯವ. ಅವಳಿಗೊಂದು ಕೊಟ್ಟು ನಾನೊಂದು ತೆಗೆದುಕೊಂಡು ...

ಕವಿತೆ- ಅವಳೆಂದಳು

* ಅವಳೆಂದಳು..., ನಿನ್ನ ಕತೆಗಳಲ್ಲಿ ನಾನಿಲ್ಲವೋ! ಕವಿತೆ ಬರಿ! ಕಥೆ ಎದೆಯಾದರೆ ಕವಿತೆ ಮಡಿಲು! ಕಥೆಯಲ್ಲಿ ಅದೆಷ್ಟು ಜನವೋ ಕವಿತೆಗೆ ನಾನೇ ಸಾರ್ವಭೌಮಳು!

ಪಿಹೆಚ್‌ಡಿ!

 ಪಿಹೆಚ್‌ಡಿ! * ನಾವಿಬ್ಬರೂ ಒಂದು ಪ್ರಯಾಣ ಹೊರಟಿದ್ದೆವು. ಶಾಶ್ವತವಾಗಿ ಬೇರ್ಪಡುವುದಕ್ಕಿಂತ ಮುಂಚೆ ಒಟ್ಟಿಗೆ…, ಕೊನೆಯ ಪ್ರಯಾಣ. ದುಃಖವೇನೂ ಇಲ್ಲ. ಸಂತೋಷವೇ. ಕೆಲವೊಂದು ತೀರ್ಮಾನಗಳು ಅನಿವಾರ್ಯ. ಆ ತೀರ್ಮಾನಕ್ಕೆ ಬದ್ಧರಾದಮೇಲೆ- ಭಾವನೆಗಳಿಗೆ ಅರ್ಥವಿಲ್ಲ!  ಅದು ಯಾವ ಜಾಗವೆಂದು ನಮಗೆ ತಿಳಿಯದು. ಅಲ್ಲಿಗೆ ಹೋಗಬಾರದೆಂದು ನಮ್ಮನ್ನು ತಡೆಯುವವರು ಯಾರೂ ಇರಲಿಲ್ಲ. ಜುಳುಜುಳು ಹರಿಯುತ್ತಿರುವ ನದಿ. ನಾವಿರುವ ದಡದಮೇಲೆ ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳು. ನದಿಯ ಆಚೆ- ಬಯಲು. ದಡದಲ್ಲಿ…, ನೀರಿಗೆ ಕಾಲು ಇಳಿಬಿಟ್ಟು ಕುಳಿತೆವು. ಅವಳು ನನ್ನ ತೋಳಿಗೆ ಒರಗಿಕೊಂಡಿದ್ದಳು. “ನಮ್ಮ ತೀರ್ಮಾನ ಸರಿ ಇದೆ ಅಲ್ವಾ?” ಎಂದಳು. “ಇದಕ್ಕಿಂತ ಪಕ್ವವಾದ ತೀರ್ಮಾನ ಬೇರೆ ಯಾವುದಿದೆ?” ಕೇಳಿದೆ. “ಅಂದು ನೀನು ನನಗೆ ಸಿಗದಿದ್ದರೆ ಬದುಕು ಏನಾಗಿರುತ್ತಿತ್ತು?” ಎಂದು ಕೇಳಿದಳು. “ಮುಂಚೆ ಆಗಿದ್ದರೆ ಮತ್ತು ಮುಂದೆ ಆದರೆ ಅನ್ನುವುದು ಬಿಡು. ಅದು ನಮ್ಮ ಪರಿಪೂರ್ಣವಾದ ಭ್ರಮೆ. ಆಗಿದೆ ಅನ್ನುವುದಷ್ಟೇ ನಿಜ! ಆಗದ ವಿಷಯಗಳಬಗ್ಗೆ ಊಹೆಯ ಸಂಭಾಷಣೆ ಯಾಕೆ? ಆದ ಅನುಭವವನ್ನಿಟ್ಟು ಆಗಬೇಕಾದ ವಿಷಯಗಳಬಗ್ಗೆ ಯೋಚನೆ ಮಾಡೋಣ!” ಎಂದೆ. “ತೀರ್ಮಾನ ತೆಗೆದುಕೊಂಡು ಆಗಿದೆಯಲ್ಲಾ? ಆದ್ದರಿಂದ…, ನಮಗೆ ಸಂಬಂಧಪಡದ ವಿಷಯವೇನಾದರೂ ಹೇಳು! ಏನಿದ್ದರೂ ಕಥೆಗಾರ ನೀನು!” ಎಂದಳು. ಹೌದು…, ಕಥೆಗಾರ ನಾನು! ಪ್ರತಿಯೊಂದರಲ್ಲಿಯೂ ಕಥೆಗಳನ್ನು ಹುಡುಕುವವ! ಕಥೆಗಳಂತೆ ಹೇಳಲಾಗದ್ದನ್ನ...

ಸೈಕಲಾಜಿಕಲ್ ಮಿಸ್‌ಲೀಡಿಂಗ್

 ಇಲ್ಲಿರುವ ೭೦% ಬರಹ ಡಾ:- Ruupa Rao ಅವರದ್ದು! ನನ್ನ ಮತ್ತು ಅವರ ಕಮೆಂಟ್‌ಗಳನ್ನು ಅವರೊಂದು ಪೋಸ್ಟ್‌ ಆಗಿ ಹಾಕಿದ್ದಾರಾದ್ದರಿಂದ ನಾನೂ ಹಾಕುತ್ತಿದ್ದೇನೆ! ಮಾಮೂಲಿನಂತೆ ನಾನೇನೇ ಬರೆದರೂ ಕಥೆಯಂತೆ ಇರಬೇಕೆನ್ನುವ ಹಠದಿಂದಾಗಿ ಅವರಿಲ್ಲದ ಮೊದಲ ಮತ್ತು ಕೊನೆಯ ಸಂಭಾಷಣೆಗಳನ್ನು ಸೇರಿಸಿದ್ದೇನೆ! * ಸೈಕಲಾಜಿಕಲ್ ಮಿಸ್ ಲೀಡಿಂಗ್! * “ನ್ತದ ನೀನು ಸುಮ್ಮನೆ ಕಾಲು ಕೆರೆದು ಜಗಳಕ್ಕೆ ಹೋಗುವುದು!” ಎಂದಳು. “ಕಾಲು ಕೆರೆಯುವುದಷ್ಟೆ! ಜಗಳದ ಉದ್ದೇಶವೇನೂ ಇರುವುದಿಲ್ಲ! ಆದರೂ ಆ ಜಗಳ ಮಜವಾಗಿರುತ್ತದೆ! ಆರೋಗ್ಯಪೂರ್ಣವಾಗಿರುತ್ತದೆ!” ಎಂದೆ. “ಈಗೆನ್ತ? ಅವರು ಹೇಳಿದ್ದನ್ನು ನೀನು ಒಪ್ಪುತ್ತೀಯೋ ಇಲ್ಲವೋ?” “ಇಲ್ಲಿ ಒಪ್ಪುವುದು ಬಿಡುವುದು ಅನ್ನುವುದು ಇಲ್ಲವೇ… ಅವರೊಬ್ಬರು ಸೈಕಾಲಜಿಸ್ಟ್… ಡಾಕ್ಟರ್… ಅವರು ಹೇಳಿದ ವಿಷಯದಲ್ಲಿ ನನಗೆ ಗೊಂದಲವಾದರೆ ನಾನು ಕೇಳುವವನೇ! ಯಾಕೆಂದರೆ ಅವರು ಹೇಳಿದ ವಿಷಯ ನನ್ನ ಅನುಭವದಲ್ಲಿ ಅವರು ಹೇಳಿದ್ದಕ್ಕೆ ವಿರುದ್ಧವಾಗಿದೆ! ಅದನ್ನು ಕಾಲು ಕೆರೆಯುವುದು, ಜಗಳ ಅನ್ನುವುದು ತಪ್ಪು! ಇನ್ನೂ ಹೇಳಬೇಕೆಂದರೆ…, ಅವರು ಶ್ರೀಕೃಷ್ಣನಂತೆ- ನಾನು ಅರ್ಜುನ! ಎಲ್ಲವೂ ಗೊತ್ತಿರುವವರೊಂದಿಗೆ ಏನೂ ಗೊತ್ತಿಲ್ಲದವ ಹೇಗೆ ಜಗಳ ಮಾಡುವುದು?” ಎಂದೆ. “ಆಹಾ…! ಆದರೆ ಅವರನ್ನು ನೀನು ಅಧ್ಯಯನ ಮಾಡಿದ್ದೀಯ ಅಂದರೆ ಏನರ್ಥ? ಅವರನ್ನು ವೈಯಕ್ತಿಕ ಧಾಳಿ ಮಾಡಿದರೆ ಹೇಗೆ?” “ವೈಯಕ್ತಿಕ ಧಾಳಿ- ವೈಯಕ್ತಿಕ ಜಡ್ಜ್‌ಮೆಂಟ್ ಅನ್ನುವುದು…, ನಾನು ವ...

ಭೇಟಿ!

೧ ಎಷ್ಟು ದೂರ ಹೋಗಿರಬಹುದು ನಾನು ? ರಸ್ತೆ ಬದಿಯಲ್ಲಿ ಯಾರೋ ಕೈ ತೋರಿಸಿದರು , ಡ್ರಾಪ್ ಬೇಕು ಅನ್ನುವಂತೆ . ಸಮೀಪ ತಲುಪಿದಾಗಲೇ ತಿಳಿದದ್ದು… , ಹೆಣ್ಣು - ಕಣ್ಣು ಮಾತ್ರ ಕಾಣಿಸುವಂತಾ ಬುರ್ಖಾಧಾರಿ - ಹೆಣ್ಣು ! ಗಾಡಿ ಸ್ಲೋ ಮಾಡಿದೆನಾದರೂ ನಿಲ್ಲಿಸಲೋ ಬೇಡವೋ ಅನ್ನುವ ಗೊಂದಲ . ನನ್ನ ಗೊಂದಲ ಅರಿತವಳಂತೆ… , “ ತಲೆ ಕೆಡಿಸಿಕೊಳ್ಳಬೇಡಿ… , ನಿಲ್ಲಿಸಿ !” ಎಂದಳು . ನಿಲ್ಲಿಸಿದೆ . ಯಾವುದೇ ಮುಜುಗರವಿಲ್ಲದೆ ಬುರ್ಖಾವನ್ನು ಮೊಣಕಾಲಿಗಿಂತ ಮೇಲೆತ್ತಿ - ಜೀನ್ಸ್‌ಪ್ಯಾಂಟ್ ಧರಿಸಿದ್ದಳು - ಆಚೆ ಈಚೆ ಕಾಲು ಹಾಕಿ ಕಂಫರ್ಟ್ ಆಗಿ ಕುಳಿತು… , “ ರೈಟ್ !” ಎಂದಳು . ಮುಂದಕ್ಕೆ ಚಲಿಸಿದೆ . “ ಎಲ್ಲಿಗೆ ಹೋಗಬೇಕು ?” ಎಂದು ಕೇಳಿದೆ . “ ನೀವು ಎಲ್ಲಿಗೆ ಹೋಗುತ್ತಿದ್ದೀರೋ ಅಲ್ಲಿಗೆ !” ಎಂದಳು . ಗೊಂದಲಗೊಂಡೆ . ಚಂಚಲಗೊಂಡೆ . ದುಗುಡಗೊಂಡೆ ! “ ನಾನೆಲ್ಲಿಗೆ ಹೋಗುತ್ತಿದ್ದೇನೋ ನನಗೂ ತಿಳಿಯದು… , ಗುರಿಯಿಲ್ಲದ ಪ್ರಯಾಣ !” ಎಂದೆ . “ ಇನ್ನೂ ಒಳ್ಳೆಯದೇ ಆಯಿತು ! ನಾನೇನೂ ನಿಮಗೆ ಹೊರೆಯಾಗುವುದಿಲ್ಲ - ನಿಮ್ಮೊಂದಿಗೆ ಬಂದರೆ !” ಎಂದಳು . “ ಒಬ್ಬನೇ ಹೋಗಬೇಕೆಂದುಕೊಂಡವನಿಗೆ ನೀವೊಂದು ಹೊರೆಯೇ… !” ಎಂದೆ . “ ಸರಿ ಗಾಡಿ ನಿಲ್ಲಿಸಿ !” ಎಂದಳು . ನಿಲ್ಲಿಸಿದೆ . ಗಾಡಿಯಿಂದ ಇಳಿದು ನನ್ನ ಮುಖವನ್ನೊಮ್ಮೆ ನೋಡಿ… , “ ಹೆದರಿಕೆಯಾ ?” ಎಂದಳು . ಮುಗುಳುನಕ್ಕೆ . ಅವಳಿಗದೇನು ಅರ್ಥವಾಯಿತೋ ಏನೋ… , ಮತ್ತೆ ಗಾಡಿ ಹತ್...