Posts

ಆತ್ಮಾವಲೋಕನ!

ಕೆಲವೊಮ್ಮೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ! ಈ ಮನುಷ್ಯರು ಯಾಕೆ ಇಷ್ಟೊಂದು ದುಃಖಿತರಾಗಿದ್ದಾರೆ…, ಯಾವಾಗಲೂ ಏನೋ ಕಳೆದುಕೊಂಡವರಂತೆ…, ಪ್ರಪಂಚದಲ್ಲಿರುವ ಅಷ್ಟೂ ದುಃಖ- ವಿಷಾದ ತಮಗೇ ಬಂದಂತೆ…! ಸಂತೋಷದ ಕ್ಷಣಗಳೇ ಹೆಚ್ಚಾಗಿದ್ದರೂ ಅದನ್ನು ಮರೆಮಾಚಿ, 'ವಿಷಾದಿತ' ಅನ್ನಿಸಿಕೊಳ್ಳುವುದು ಏನೋ ದೊಡ್ಡಸ್ತಿಕೆ ಅನ್ನುವಂತೆ…! ಯಾಕೆ? ಹಾಗೆಯೇ…,  ಈ ಪ್ರಪಂಚಕ್ಕೇ ಸಂಬಂಧಪಡದವನಂತೆ ನಾನು ಹೇಗೆ ಇಷ್ಟು ಖುಷಿಯಾಗಿ- ನೆಮ್ಮದಿಯಾಗಿ ಬದುಕಿದ್ದೇನೆ? ತೀರಾ ಆಕಸ್ಮಿಕವಾಗಿ ಇದರಬಗ್ಗೆ ಯೋಚಿಸುವ ಸಂದರ್ಭ ಒದಗಿತು! ಬೆಳಿಗ್ಗೆ ಮತ್ತು ಸಂಜೆ…, ಅಮ್ಮ ಮಗ ಒಟ್ಟಿಗೆ ಕುಳಿತು ಟಿ ಕುಡಿಯುತ್ತೇವೆ. ಆ ಸಮಯ ನಮ್ಮದು…, ಪ್ರಪಂಚದ ಅಷ್ಟೂ ಆಗುಹೋಗುಗಳ ಬಗ್ಗೆ ಮಾತುಕತೆಯಾಗುತ್ತದೆ. ಕೆಲವೊಮ್ಮೆ ಎರಡುಮೂರು ನಿಮಿಷಕ್ಕೆ ನಮ್ಮ ಮಾತುಗಳು ಮುಗಿದು ಇನ್ನು ಮಾತನಾಡಲು ಏನೆಂದರೆ ಏನೂ ಉಳಿದೇ ಇಲ್ಲವೇನೋ ಅನ್ನಿಸುತ್ತದೆ! ಮತ್ತೆ ಕೆಲವೊಮ್ಮೆ…, ಮಾತನಾಡಿದಷ್ಟೂ ಮುಗಿಯುವುದೇ ಇಲ್ಲ! ಹಾಗೇ ಮಾತುಕತೆಯಾಡುತ್ತಿದ್ದಾಗ…, ನನ್ನ ಬದುಕಿನ ನಷ್ಟಗಳ ಬಗ್ಗೆ ಮಾತು ಬಂತು! ಅದು…, ಹುಟ್ಟಿನಿಂದಲೇ ಶುರುವಾಗಿದ್ದು!!! ನಾನು ಹುಟ್ಟಿದ ವರ್ಷ…, ಜನಸಂಖ್ಯಾ ನಿಯಂತ್ರಣಕ್ಕೆ ಅನುಗುಣವಾಗಿ ನಿಯಮವೊಂದು ಚಾಲ್ತಿಗೆ ಬಂತು! ಎರಡಕ್ಕಿಂತ ಹೆಚ್ಚಿನ ಮಕ್ಕಳಾದರೆ…, ಅವರಿಗೆ ಸರಕಾರದ ಅನುಕೂಲತೆಗಳು ಸಿಕ್ಕುವುದಿಲ್ಲ!!! ಇಬ್ಬರು ಅಕ್ಕಂದಿರ ನಂತರ ನಾನು ಮೂರನೇಯವ! ನಿಯಮ ಚಾಲ್ತಿಗೆ ಬಂದಿದ್ದು ನಾನ...

ವಯಸ್ಸು!

ಕನ್ನಡಿಯ ಮುಂದೆ ನಿಂತು ನೋಡಿಕೊಳ್ಳುತ್ತಿದ್ದೆ. ನಲವತ್ತೊಂದು ವರ್ಷಕ್ಕೇ ಅರ್ಧ ಕೂದಲು ಬೆಳ್ಳಗಾಗಿದೆ. ಹಾಗೆಂದು ದೇಹಾರೋಗ್ಯವೋ…, ಕೂದಲಿಗೆ ಬಣ್ಣ ಹಚ್ಚಿದರೆ ವಯಸ್ಸು ಇಪ್ಪತ್ತೈದಕ್ಕೆ ಇಳಿಯುವಷ್ಟು! ಬಣ್ಣ ಹಚ್ಚಿಕೊಳ್ಳುವುದಿಲ್ಲ ಅನ್ನುವ ತೀರ್ಮಾನ! ಒಬ್ಬಂಟಿ ಅಲೆಮಾರಿಗೆ ಯಾಕೆ ವಯಸ್ಸನ್ನು ಇಳಿಸುವ ಇರಾದೆ? ಕನ್ಯಾಕುಮಾರಿಗೆ ಬಂದಿದ್ದೆ. ಪುಸ್ತಕವೊಂದನ್ನು ಬರೆಯಲು..., ಸ್ವಲ್ಪ ದಿನ ಇಲ್ಲಿಯೇ ಇದ್ದು ಇಲ್ಲಿಯ ಜನರಬಗ್ಗೆ, ಇತಿಹಾಸ- ಐತೀಹ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂಬ ಉದ್ದೇಶ. ಒಂದು ವರ್ಷಕ್ಕೆ ಅನ್ನುವ ಕರಾರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ತೆಗೆದುಕೊಂಡಿದ್ದೆ. ಮೂರುತಿಂಗಳ ಬಾಡಿಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ಬಂದು ತಿಂಗಳು ಕಳೆದಿದೆಯಷ್ಟೆ. ಇನ್ನು ಇಲ್ಲಿ…, ಈ ಮನೆಯಲ್ಲಿ ಇರಲಾಗುವುದಿಲ್ಲ. ಕಾರಣ ಪಕ್ಕದ ಮನೆ! ಎಷ್ಟು ವಯಸ್ಸಿರಬಹುದು ಆ ಹುಡುಗಿಗೆ? ಹದಿನಾರು? ಹದಿನೇಳು? ಹದಿನೆಂಟು? ಹತ್ತೊಂಬತ್ತು ದಾಟಿರುವುದಿಲ್ಲ ಅಂದುಕೊಳ್ಳುತ್ತೇನೆ. ಪಾಪ! ಯಾರು ಆ ವ್ಯಕ್ತಿ? ಕರುಣೆಯಿಲ್ಲದೆ ಅಷ್ಟೊಂದು ಹೊಡೆದು ಬಡಿದು ಮಾಡುತ್ತಾನಲ್ಲ? ವ್ಯಕ್ತಿಯನ್ನು ನೋಡಿಲ್ಲ. ಬಂದ ಎರಡನೆಯ ದಿನದಿಂದಲೇ ಕೇಳಿಸತೊಡಗಿತ್ತು…, ಬೆನ್ನಿಗೆ ಗುದ್ದುವ ಶಬ್ದ! ಕೆನ್ನೆಗೋ ಎಲ್ಲಿಗೋ ಹೊಡೆಯುವ ಶಬ್ದ! ಎಳೆದಾಡುವ ಶಬ್ದ! ಹುಡುಗಿ ಬಾಯಿಬಿಟ್ಟು ಅಳಲಾಗದೆ…, ಅಳು ತಡೆಯಲಾಗದೆ ಒದ್ದಾಡುವ ಅರಿವು ಮೂಡಿಸುವ ಶಬ್ದ! ಬೈಗುಳವೇನೂ ಇಲ್ಲ…, ಹೂಂ ಹಾಂ ಅನ್ನುವ ಹೂಂಕಾರಗಳು ಮಾತ...

ಮಾತೃ!

ನೀನು ಹಿಂದುವಲ್ಲ ಅಹಿಂದು, ನಿನ್ನನ್ನು ಅವರು ತುಳಿಯುತ್ತಿದ್ದಾರೆ, ಹಿಂದೂಗಳು ಧರ್ಮಾಂಧರು, ಬಹುಸಂಖ್ಯಾತರು ಅಲ್ಪಸಂಖ್ಯಾತರನ್ನು ನಾಶ ಮಾಡುತ್ತಿದ್ದಾರೆ- ಅನ್ನುವಂತಹ ಹೊಲಸು ರಾಜಕೀಯದ ಆಚೆ ಒಂದು ವೈಯುಕ್ತಿಕ ಜೀವನವಿದೆ. ಶಾಂತ ಗಂಭೀರವಾದ ಜೀವನವದು. ಆ ಜೀವನವನ್ನು ಪರಿಪೂರ್ಣವಾಗಿ ಅನುಭವಿಸಿದವನು ನಾನು. ಇತಿಹಾಸವಾದರೂ, ಮನಶ್ಶಾಸ್ತ್ರವಾದರೂ, ತತ್ತ್ವಚಿಂತನೆಯಾದರೂ ನನಗೆ ನನ್ನದೇ ಆದ ಅಧ್ಯಯನವಿದೆ- ದೃಷ್ಟಿಕೋನವಿದೆ. ಅದು ರೂಪುಗೊಂಡಿದ್ದು ಹೇಗೆ? “ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟದ್ದು ಗಾಂಧೀಜಿ!” ಎಂದು ಗಾಂಧಿಜಯಂತಿಯ ದಿನ ಮಾಡಬೇಕಾದ ಭಾಷಣವನ್ನು ಬಾಯಿಪಾಟ ಮಾಡುವಾಗ ಅಪ್ಪನ ಪ್ರಶ್ನೆ ತೂರಿಬಂತು…, “ಹಾಗಿದ್ದರೆ ಸಾವಿರಾರು ಸಂಖ್ಯೆಯಲ್ಲಿ ನೇಣುಗಂಬ ಏರಿದವರು, ಜೈಲುವಾಸ ಅನುಭವಿಸಿದವರು, ಪ್ರಾಣತ್ಯಾಗ ಮಾಡಿದವರು ಯಾರು?” ಪ್ರಶ್ನಾರ್ಥಕವಾಗಿ ಅಪ್ಪನನ್ನು ನೋಡಿದ್ದೆ. “ಇಷ್ಟುಮಾತ್ರ ನೆನಪಿರಲಿ…, ಬ್ರಿಟೀಷರನ್ನು ನಡುಗಿಸಿ, ಅಧಿಕಾರಯುತವಾಗಿ ಪಡೆಯಬಹುದಾಗಿದ್ದ ಸ್ವಾತಂತ್ರ್ಯಕ್ಕೂ, ಅವರು ಕೊಟ್ಟ ಭಿಕ್ಷೆ- ಅನ್ನುವಂತಿರುವ ಈ ಸ್ವಾತಂತ್ರ್ರಕ್ಕೂ ಅಜಗಜಾಂತರ ವ್ಯತ್ಯಾಸವಿದೆ! ಆ ವ್ಯತ್ಯಾಸವೇ ನಿಜವಾದ ಇತಿಹಾಸ!” ನನ್ನ ಕಣ್ಣಿನಲ್ಲಿನ ಕುತೂಹಲವನ್ನು ಕಂಡು ಹತ್ತಿರ ಕುಳಿತ ಅಪ್ಪ…, “ಒಂದೇ ದಿನದಲ್ಲಿ ತಿಳಿದುಕೊಳ್ಳುವಂತದ್ದಲ್ಲ ಇತಿಹಾಸ…, ಅದೊಂದು ಮಹಾಸಾಗರ…, ಮೊಘಲರು ಭಾರತಕ್ಕೆ ಬಂದರು ...

ಹೆಣ್ಣು!

“ಹೊಸ ಕಥೆ ಹಾಕಿದ್ದೆ ಓದಿದ್ಯ?” ಎಂದು ಕೇಳಿದೆ. “ಯಾರ್ ಓದ್ತಾರೆ ನಿನ್ ಕಥೆ!” ಎಂದಳು ಪ್ರಾಣದ ಗೆಳತಿ. ಎದೆ ಧಗ್ ಅಂದಿತು! “ಇದೇನೆ ಹೀಗ್‌ಹೇಳ್ತಿದೀಯ? ನನ್ನ ಕಥೆಗಳು ಅತಿ ಹೆಚ್ಚು ಜನರನ್ನ ತಲುಪಬೇಕು ಅನ್ತಿದ್ದವ್ಳು…?” ಎಂದೆ. “ಇನ್ನೇನ್ ಮತ್ತೆ? ಅವಳು ಅವಳು ಅಂತ ಅದೇ ಅವಳ ಕಥೆಗಳು!” ಎಂದಳು. “ಇದೂ ಅದೇ ಕಥೆ ಅನ್ತೀಯ?” ಎಂದೆ. “ಇನ್ನೇನ್‌ಬರ್ದಿರ್ತೀಯ? ಅದೇ ಆಗಿರುತ್ತೆ!” ಎಂದಳು. “ಅವಳು ಅವಳು ಅನ್ನೋ ಎಷ್ಟು ಕಥೆಗಳು ಓದಿದೀಯ?” ಎಂದೆ. “ಹೇ…, ಹೋಗೋ ಸುಮ್ನೆ! ತಲೆ ತಿನ್ಬೇಡ!” ಎಂದಳು. “ಸರಿಬಿಡು…, ಇನ್ಮೇಲೆ ಕಥೇನೆ ಬರೆಯಲ್ಲ!” ಎಂದೆ. “ಪಾಪ ನಿನ್ನ ಹೆಣ್ಣು ಅಭಿಮಾನಿಗಳಿಗೆ ಬೇಜಾರಾಗಲ್ವ? ಆ ಅವಳಿಗೆ ಬೇಜಾರಾಗಲ್ವ? ಓದಿ ಸಪೋರ್ಟ್‌ಮಾಡೋಕೆ ಅದೆಷ್ಟು ಜನ ಇದಾರೆ! ಬೇರೆಯವರ ಪ್ರತಿ ಕಮೆಂಟ್‌ಗೂ ನಿನ್ನ ಕಡೆಯಿಂದ ಉತ್ರ ಕೊಡೋಕೆ ಎಷ್ಟು ಜನ! ನಾನೊಬ್ಳು ಓದಿಲ್ಲ ಅಂದ್ರೆ ನಿನಗೇನೂ ಲಾಸಿಲ್ಲ ಬಿಡು!” ಎಂದಳು. “ಅಂದ್ರೆ…, ಕಥೆ, ಕಥೆಗೆ ಬಂದ ಅಷ್ಟೂ ಕಮೆಂಟ್ ಓದಿದೀಯ ಅಂತ ಆಯ್ತು?” ಎಂದೆ. ಮೂತಿ ತಿರುಗಿಸಿ ಹೋಗಿದ್ದಾಳೆ! ಇನ್ನು ಇವಳಿಗಾಗಿ ಅವಳ ಕಥೆಯನ್ನು ಸಾಕುಮಾಡಿ ಬೇರೊಬ್ಬಳ ಕಥೆ ಹುಡುಕಬೇಕಾಗಿದೆ!

ಕೋಲ್ಡ್ ಬ್ಲಡೆಡ್!

ಇಂದು ಅವಳಿಲ್ಲ. ಅದಕ್ಕೇ ಈ ಕಥೆ! ಅವಳ ಪರಿಚಯವೇ ನನ್ನ ಕಥೆಗಳ ಮೂಲಕ. “ನಿನ್ನ ಕಥೆಗಳನ್ನು ಓದಿ ನನಗನ್ನಿಸೋದು…, ನೀನೆಂತಾ ಕೋಲ್ಡ್‌ಬ್ಲಡೆಡ್ ಮನುಷ್ಯ ಅಂತ! ಯಪ್ಪ…, ಅದು ಹೇಗೆ ಬರೀತೀಯ ಅಷ್ಟು ರಿಯಲಿಸ್ಟಿಕ್ ಆಗಿ? ನೀನೇ ಕೊಲೆ ಮಾಡಿದಂತೆ?” ಎಂದಿದ್ದಳು. ನಕ್ಕೆ. ಒಬ್ಬ ಕಥೆಗಾರನಿಗೆ ಇದಕ್ಕಿಂತ ಯಾವ ಕಾಂಪ್ಲಿಮೆಂಟ್ ಬೇಕು? “ಇಷ್ಟವಾಯಿತ ಕಥೆ?” ಎಂದೆ. “ತುಂಬಾ…, ಕಣ್ಣಿಗೆ ಕಟ್ಟಿದಂತಿದೆ!” ಎಂದಳು. “ಆದರೆ ಎಲ್ಲರೂ ನನ್ನ ಕಥೆ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಅನ್ನುತ್ತಾರಲ್ಲ?” ಎಂದೆ. “ಅದು ನಿಜ! ನನಗೂ ಮೊದಮೊದು ಕಷ್ಟವಾಗುತ್ತಿತ್ತು! ಎರಡು ಮೂರು ಸಾರಿ ಓದಬೇಕಿತ್ತು. ಅಷ್ಟು ಸೂಕ್ಷ್ಮ ನಿನ್ನ ಕಥೆಗಳು! ಅದರಲ್ಲೂ ಕ್ರೈಂ ಕಥೆಗಳು! ಆ ಸಸ್ಪೆನ್ಸ್‌…, ಅದು ಹಾಗೇ ಇರಬೇಕು! ನಿನ್ನ ಶೈಲಿಯ ಪರಿಚಯವಾದಮೇಲೆ ಈಗ ಪರವಾಗಿಲ್ಲ.” ಎಂದಳು. ನಾನೇನೂ ಮಾತನಾಡಲಿಲ್ಲ. ಅವಳೇ…, “ಒಂದು ವಾಕ್ಯ ಇರಲಿ…, ಒಂದು ಪದ ಬಿಟ್ಟು ಹೋದರೆ, ಒಂದು ಕಾಮ, ಫುಲ್‌ಸ್ಟಾಪ್ ಬಿಟ್ಟುಹೋದರೆ ಪೂರ್ತಿ ಕಥೆಯೇ ಅರ್ಥವಾಗದಷ್ಟು ಕ್ಲಿಷ್ಟ! ಆತುರಾತುರವಾಗಿ ಓದುವ ಕಥೆಗಳಲ್ಲ ನಿನ್ನದು!” ಎಂದಳು. ನಾನೇನೂ ಮಾತನಾಡಲಿಲ್ಲ. ಕ್ಷಣಬಿಟ್ಟು ಅವಳೇ…, “ಆದರೂ ಹೇಗೋ….? ಆ ಇಂಟಿಮೇಟ್ ಸೀನ್‌ಗಳಿರುವ ಕಥೆಗಳು ಬರೆಯುತ್ತೀಯಲ್ಲಾ…? ಅದು ನಿನ್ನದೇ ಅನುಭವ ಅನ್ನಿಸೋದು! ಅದರಲ್ಲೂ ನೀನು ಬರೆಯೋದೋ…, ಒಬ್ಬನೇ ಎಲ್ಲಿಗಾದರೂ ಹೋಗಿ ಬಂದಮೇಲೆ!” ಎಂದಳು. ನಿಜಕ್ಕೂ ನಗು ಬಂತು. “ತಾಯಿ…, ನನಗೂ ಮದುವ...

ಅವಳೆಂಬ ವಾರಿಧಿ!

ಬಸ್ಸಿನಿಂದ ಇಳಿಯುತ್ತಿರುವ ಅವಳನ್ನೇ ನೋಡುತ್ತಿದ್ದೆ. ಇಳಿಯುವಾಗಲೇ ಒಮ್ಮೆ ನನ್ನನ್ನು ನೋಡಿದವಳ ಕಣ್ಣಿನ ಹೊಳಪು…, ಇಳಿದು ನನ್ನೆಡೆಗೆ ಹೆಜ್ಜೆ ಹಾಕಿದಳು. ಬೂದಿಬಣ್ಣದ ಸೀರೆ ಎಷ್ಟು ಚಂದಕ್ಕೆ ಉಟ್ಟಿದ್ದಾಳೆಂದರೆ.., ಸೀರೆ ಉಡುವುದರಲ್ಲಿ ಪಿಹೆಚ್‌ಡಿ ಮಾಡಿದ್ದಾಳೇನೋ ಅನ್ನಿಸುವಂತಿತ್ತು! ಹತ್ತಿರಕ್ಕೆ ತಲುಪುತ್ತಿದ್ದಂತೆ ಮುಗುಳುನಗು ಅರಳುನಗುವಾಗಿ…, ಪ್ರಪಂಚವನ್ನು ಮರೆತೆ! ಸುತ್ತಲಿನ ಪರಿಸರದ ಪರಿವೆಯೇನೂ ನಮಗಿರಲಿಲ್ಲ. ಎರಡೂ ಕೈಯಗಲಿಸಿದೆ- ಗಿಣಿಮರಿಯಂತೆ ತೆಕ್ಕೆಯೊಳಗೆ ಸೇರಿಕೊಂಡಳು. ಬಿಗಿದಪ್ಪಿ ತಲೆಯಮೇಲೊಂದು ಮುತ್ತು ಕೊಟ್ಟೆ. ಮಾತಿಲ್ಲ. ಮೌನದಷ್ಟು ಅರ್ಥವತ್ತಾದ ಸಂವಹನವಿದೆಯೇ? ಕೈಕೈಹಿಡಿದು ನಡೆಯತೊಡಗಿದೆವು. ದೂರದಲ್ಲಿ ಸಮುದ್ರದ ಮೊರೆತ ಕೇಳಿಸುತ್ತಿತ್ತು. ಇಬ್ಬರ ಮನೆಯಿಂದಲೂ ಸುಮಾರು ಮುನ್ನೂರು ಕಿಲೋಮೀಟರ್ ದೂರದ ಸಮುದ್ರತೀರ! ನಿಧಾನಕ್ಕೆ ನಡೆಯುವಾಗ…, ಮಧ್ಯೆ…, ಇಬ್ಬರೂ ಹೇಳಿಕೊಂಡಂತೆ, ಒಂದೇ ಸಮಯಕ್ಕೆ ಪರಸ್ಪರ ಮುಖ ನೋಡುವುದು, ಮುಗುಳುನಗುವುದು…. ಇಬ್ಬರ ನಾಡಿಮಿಡಿತ- ಇಬ್ಬರಿಗೂ ಗೊತ್ತು. ಸಮುದ್ರದ ಸಮೀಪಕ್ಕೆ ತಲುಪುತ್ತಿದ್ದಂತೆ…, ಬೋರ್ಗರೆಯುತ್ತಿರುವ ಅಲೆಗಳು ಅಬ್ಬರಿಸಿ ಬಂದು ಬಂಡೆಗಳಿಗೆ ಅಪ್ಪಳಿಸಿ ನೊರೆನೊರೆಯಾಗಿ ಮರಳುತ್ತಿದ್ದವು. ನಡು ಮಧ್ಯಾಹ್ನವಾದ್ದರಿಂದ ಅಷ್ಟೊಂದು ಜನಸಂದಣಿಯಿರಲಿಲ್ಲ. ಮರಳಿಗೆ ಕಾಲೂರಿದಾಗ ಕೆಂಡದ ಮೇಲೆ ಕಾಲಿಟ್ಟ ಅನುಭವ…, ಅದರ ಅರಿವು ನಮಗಿರಲಿಲ್ಲ. ಯಾರಾದರೂ ನಮ್ಮನ್ನೋ ನಾವು ಯಾರನ್ನೋ ಗಮನಿಸಲಿಲ್...

ದಾರಿಯಲ್ಲಿ ಸಿಕ್ಕವಳು!

ಬರೆಯುತ್ತಿರುವ ಕಥೆಗೂ ಅವಳಿಗೂ ಏನೂ ಸಂಬಂಧವಿಲ್ಲ! ಅವಳು ಹೇಳಿದ್ದರಿಂದ ಬರೆಯುತ್ತಿದ್ದೇನೆ ಅನ್ನುವುದಷ್ಟೇ ಈ ಪೀಠಿಕೆಯ ಉದ್ದೇಶ! ಅ-ವ-ಳು ಹೇ-ಳಿ-ದ್ದ-ರಿಂ-ದ ಬರೆದೆ ಅನ್ನುವಲ್ಲಿ ಅವಳಿಗೆ ನಾನು ಕೊಡುವ ಮಹತ್ವವಿದೆ. ಅಮ್ಮನ ಹೊರತು ಯಾರೊಬ್ಬರಿಗೂ- ಯಾರೊಬ್ಬರ ಮಾತಿಗೂ ಬೆಲೆ ಕೊಡದ ನಾನು 'ಅವಳು' ಹೇಳಿದ್ದರಿಂದ ಕಥೆ ಬರೆಯುತ್ತಿದ್ದೇನೆಂದರೆ…. ಅರ್ಥವಾಯಿತೇ? ಏನಾದರೂ ಬರೆಯಬೇಕು ಅನ್ನಿಸದಿರುವುದು, ಕಥೆಯೇ ಹೊಳೆಯದಿರುವುದು ಸೋಮಾರಿತನವಾ? ಅಲ್ಲ- ಕಥೆ ಹೊಳೆದು ಅದನ್ನು ಬರೆಯದೇ ಇರುವುದು ಸೋಮಾರಿತನ! ಆದ್ದರಿಂದ ಕಥೆ ಬರೆಯಲಿಲ್ಲ ಅನ್ನುವ ಕಾರಣಕ್ಕೆ ನಾನು ಸೋಮಾರಿಯಲ್ಲ! ಆದರೆ.., ಕಥೆ ಬರೆಯುವ ಯೋಚನೆಯೇ ಇಲ್ಲದವನಿಗೆ…, ಅವಳು ಹೇಳಿದ ಮಾತ್ರಕ್ಕೆ ಕಥೆ ಹೊಳೆಯುವುದೆಂದರೆ- ಅರ್ಥವೇನು? ವಿಚಿತ್ರ! ಅಥವಾ…, ನನ್ನೊಳಗೊಂದು ಕಥೆ ಮೊಳೆತ ಸಮಯದಲ್ಲೇ ಅವಳು ಬರೆಯಲು ಹೇಳಿರಬಹುದ? ಇನ್ನುಮುಂದೆ ಕಥೆಯೇ ಬರೆಯುವುದಿಲ್ಲ- ಅನ್ನುವಂತೆ ಇದ್ದವನಿಗೆ ಕಥೆ ಬರೆಯಲೊಂದು ನೆಪ…? ಹಾಗೆಂದು ಅವಳು ಹೇಳಿದಾಗಲೆಲ್ಲಾ ಕಥೆ ಬರೆಯುತ್ತೇನೆಯೇ- ಅನ್ನುವಲ್ಲಿ ಉತ್ತರವಿದೆ!! ಅದು ಅವಳು ಯೋಚಿಸಬೇಕಾದ ವಿಷಯ! ಅವಳಮೇಲಿನ ನನ್ನ "ಇದ"ನ್ನು ಪದೇ ಪದೇ ಪರೀಕ್ಷಿಸಬೇಕೋ ಬೇಡವೋ ಅನ್ನುವುದು! ಹಾಗೆಯೇ…, ಬರೆಯುತ್ತಿರುವ ಈ ಕಥೆ… ಪರಿಪೂರ್ಣವಾಗಿ- ಕಾಲ್ಪನಿಕ ಸತ್ಯ! ಇದುವರೆಗೂ ಯಾರೊಂದಿಗೂ ಹೇಳದೆ ಮುಚ್ಚಿಟ್ಟಿದ್ದ "ರಹಸ್ಯ!” * ಮೂರುನಾಲ್ಕು ದಿನದ ಸುತ್ತಾಟದ...

ಕಡಲು ಬೆಟ್ಟ ಮತ್ತು ನಾನು!

ಕಡಲು ಬೆಟ್ಟ ಮತ್ತು ನಾನು! * ಇದು ಕಥೆಯ? ಗೊತ್ತಿಲ್ಲ. ಬರೆಯಬೇಕು ಅನ್ನಿಸುತ್ತಿದೆ- ಬರೆಯುತ್ತಿದ್ದೇನೆ! ಯಾಕೆ ಅನ್ನಿಸುತ್ತಿದೆ? ಗೊತ್ತಿಲ್ಲ! ಕಡಲನ್ನು ಕಂಡಾಗ, ಬೆಟ್ಟವನ್ನು ಹತ್ತಿದಾಗ…, ಆಗಾಗ…, ಬರೆಯಬೇಕು ಅನ್ನಿಸುತ್ತದೆ! ಪ್ರಸ್ತುತಾ ಹೇಳಬೇಕು ಅಂದುಕೊಂಡಿರುವ ವಿಷಯವನ್ನು ವಿವರಿಸುವುದು ಸ್ವಲ್ಪ ಕಷ್ಟ! ಆದ್ದರಿಂದ…, ಅವಳ ಸಹಾಯವನ್ನು ಪಡೆದುಕೊಳ್ಳುತ್ತೇನೆ. ಶಾರದೆ! ಯಾರವಳು? ವಾಗ್ದೇವಿ ಅಂದುಕೊಳ್ಳೋಣ! ಪ್ರತೀ ಅವಳೂ…, ಶಾರದೆಯೇ! ಪ್ರತೀ ಶಾರದೆಯೂ…, ಅವಳೇ! ಇಷ್ಟಕ್ಕೂ ವಿಷಯವೇನು? ಎಷ್ಟು ಬರೆದರೂ ಮುಗಿಯದ…, ವಿವರಿಸಲಾಗದ…, ಎಷ್ಟು ದಕ್ಕಿದರೂ ಸಾಲದ…, ಅರ್ಥಕ್ಕೆ ಎಟುಕದ…, ಅನುಭವಿಸಿ ಮಾತ್ರ ಅರಿತುಕೊಳ್ಳಬಹುದಾದ…, ಅದ್ಭುತ ಆನಂದಾನುಭೂತಿಗೆ ಕಾರಣವಾದ…,  ಪ್ರೇಮ! * ಮತ್ತೆ ಬರಬೇಡವೆಂದು ಎಷ್ಟೇ ಹೇಳಿದರೂ…, ಮತ್ತೆ ಮತ್ತೆ ಉರುಳುರುಳಿಬಂದು ಮುತ್ತಿಕ್ಕಿ ಹೋಗುತ್ತಿದೆ…, ಅಲೆಗಳು! ಅಲೆಗಳಿಂದ ಆಚೆಗೆ ದೃಷ್ಟಿ ಹಾಯಿಸಿದರೆ…, ಶಾಂತಗಂಭೀರವಾಗಿ ಹರಡಿಕೊಂಡಿದೆ…, ಕಡಲು! ಕಡಲಿನಂಚಿನಲ್ಲಿ…, ಎಷ್ಟು ಅದ್ಭುತವಾದ ದೃಶ್ಯ! ಆಕಾಶದಿಂದ ಜಾರಿ…,  ಕಡಲನ್ನು ಚುಂಬಿಸಿ…, ತನ್ನನ್ನು ತಾನು ಕಳೆದುಕೊಳ್ಳುತ್ತಿದ್ದಾನೆ…, ಸೂರ್ಯ! ಕತ್ತಲು ಬೆಳಕಿನ ಆಟ! ಅಲೆಗಳಂತೆ ಪ್ರಕ್ಷುಬ್ಧವಾಗಿದ್ದ ನನ್ನ ಮನಸ್ಸು…, ಅದೇ ಅಲೆಗಳ ಒಡೆಯನಾದ ಕಡಲಿನಂತೆ ಶಾಂತವಾದ ಭಾವ! ಹೌದು…, ನಾನು ನಿರಾಳವಾಗಿದ್ದೇನೆ…, ನೆಮ್ಮದಿಯಾಗಿದ್ದೇನೆ…, ಇದುವರೆಗಿನ ನನ್ನ ಜೀವನದ...

ಆಕ್ಷೇಪಣಾ ಪತ್ರ!

ಹೇಗಿದ್ದೀಯೆ? ಬ್ಯುಸಿ- ಅಲಾ? ಗೊತ್ತು…, ದಿನಕ್ಕೆ ಇಪ್ಪತ್ತನಾಲ್ಕು ಗಂಟೆ ಸಮಯ ಸಾಲದ ಪಾಪದ ಹೆಣ್ಣು ನೀನು! ವಿಷಯ ನ್ತ ಗೊತ್ತ? ನೀ ಎಷ್ಟೇ ಬ್ಯುಸಿಯಾಗಿದ್ರೂ, ಫ್ರೀಯಾಗಿದ್ರೂ, ನೆನಪಿಸಿಕೊಂಡರೂ- ಕೊಳ್ಳದಿದ್ದರೂ ಐ ಲವ್‌ಯು! ಬದುಕು ಎಷ್ಟು ಚಂದ! ಪಾಪ ನನ್ನ ಅಮ್ಮ…, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದಿದ್ದರೆ ನಾನಿಂದು ಎಲ್ಲಿರುತ್ತಿದ್ದೆನೋ ಏನೋ! ಅದು ಹಾಗೆಯೇ ನೋಡು…, ಹಲ್ಲಿದ್ದವನಿಗೆ ಕಡಲೆಯಿಲ್ಲ ಕಡಲೆಯಿದ್ದವನಿಗೆ ಹಲ್ಲಿಲ್ಲ ಅನ್ನುವಂತೆ ನನ್ನ ಜೀವನ. ಅತಿ ಸಮರ್ಥ ನಾನು! ನದಿಯ ಹರಿವಿಗೆ ನನ್ನನ್ನು ಒಡ್ಡಿಕೊಂಡಿದ್ದರೂ ಸಾಕಿತ್ತು- ಕುಟುಂಬದ, ಗೆಳೆಯರ, “ಇತರರ" ದೃಷ್ಟಿಕೋನದ ಗೆಲುವನ್ನು ಅತಿ ಸುಲಭದಲ್ಲಿ ಸಾಧಿಸುತ್ತಿದ್ದೆ. ಆದರೇನು ಮಾಡುವುದು…? ಇದು- ನಾನು ಅಲಾ? ನನಗೆ ಸಹಜವಾಗಿ ಒಲಿದಿದ್ದ ಸಾಮರ್ಥ್ಯಕ್ಕೆ, ಅವಕಾಶಗಳಿಗೆ ವಿರುದ್ಧವಾಗಿ…, ಪ್ರವಾಹಕ್ಕೆ ಇದಿರಾಗಿಯೇ ಈಜಬೇಕೆಂದು ತೀರ್ಮಾನಿಸಿದವ! ತೀರ್ಮಾನ ನನ್ನದು! ಪ್ರವಾಹವೆಂದರೇನೆಂಬ ಅರಿವೇ ಇಲ್ಲದೆ- ಅದಕ್ಕೆ ಇದಿರಾಗಿ! ಅದೆಷ್ಟುಸಾರಿ ಶುರುಮಾಡಿದ ಸ್ಥಳವನ್ನೇ ಸೇರಿದೆ! ಇಲ್ಲದ ದಾರಿಯನ್ನು ಸೃಷ್ಟಿಸಿ ಅದೆಷ್ಟುಸಾರಿ ಗಮ್ಯದ ಹತ್ತಿರಕ್ಕೆ ತಲುಪಿದೆ! ನನಗೆ ಸಂಬಂಧವೇ ಇಲ್ಲದ ಅಡತಡೆಗಳು…, ಅನೂಹ್ಯ ತಿರುವುಗಳು…, ಪೆಟ್ಟುಗಳು! ಇದೋ…, ಪುನಃ ಅದೇ ಶುರುವಿನ ಹಂತಕ್ಕೆ ಬಂದು ನಿಂತಿದ್ದೇನೆ. ಪ್ರವಾಹದ ಸಂಪೂರ್ಣ ಅರಿವು ದೊರಕಿದ ತೃಪ್ತಿಯೇನೋ ಇದೆ…, ಆದರೆ ಆದರೆ…, ಮತ್ತೊಮ್ಮೆ ಈಜು ಶು...

ಸಾವು!

ಅದೊಂದು ಸಾವು. ಅಗೋಚರ ಸಾವು. ನಿಗೂಢ ಸಾವು. ಹಾಗೊಂದು ಸಾವು ನಡೆದಿರುವ ವಿಷಯ ಯಾರೆಂದರೆ ಯಾರೊಬ್ಬರಿಗೂ ತಿಳಿಯದು! ಸ್ವಲ್ಪ ದಿನಗಳ ಮುಂಚೆ ಕಥೆಯೊಂದು ಓದಿದೆ. ಓದಿ…, ಬರೆದವನನ್ನು ಮನಸ್ಸಿನಲ್ಲಿಯೇ ವಾಚಾಮಗೋಚರ ಬೈದಿದ್ದೆ. ಇಷ್ಟು ಕೆಟ್ಟದ್ದಾಗಿ ಯಾಕೆ ಕಥೆ ಬರೆಯುತ್ತಾರೋ ಎಂದು. ಮನಸ್ಸಿನಾಳದಲ್ಲೆಲ್ಲೋ ಕದಲಿಕೆ! ಭೂತಕಾಲಕ್ಕೆ ಚಲಿಸಿದೆ…, ನಾನು ಮೊದಲ ಪುಸ್ತಕ ಬರೆದ ಕಾಲಕ್ಕೆ! ಆ ಪುಸ್ತಕ ಬರೆಯುವ ಮುಂಚೆ ಸಾವಿರ ಪುಸ್ತಕಗಳನ್ನು ಓದಿದ್ದೆ. ನಂತರ ಬರಹದ ಹುಚ್ಚು ತಲೆಗೆ ಹಿಡಿದು ಒಂದರ ಹಿಂದೆ ಒಂದರಂತೆ ಕಥೆಗಳು…, ಒಂದು ಹಂತದಲ್ಲಿ…, ಏನು ಬರೆಯಬೇಕೆಂದು ತೋಚದಿದ್ದರೂ ಬಲವಂತವಾಗಿ ಬರೆದೆ. ಹೀಗೆಯೇ ಎಷ್ಟು ಕಾಲ? ನಿಜ! ಬರೆಯತೊಡಗಿದಮೇಲೆ ಓದು ನಿಂತಿದ್ದು ಅರಿವಿಗೆ ಬರಲೇ ಇಲ್ಲ! ಬರಹ ಮುಕ್ಕರಿಸಿದಾಗ ಅರಿವಿಗೆ ಬಂದದ್ದು ಏನು? ಇದುವರೆಗಿನ ನನ್ನ ಕಥೆಗಳು- ಅದುವರೆಗಿನ ನನ್ನ ಓದಿನ ಫಲ! ಹಾಗೆ…, ಪುನಃ ಓದು ಶುರುಮಾಡಿದಾಗ ಓದಿದ ಮೊದಲ ಕಥೆ- ಕಥೆಗಾರ ಬೈಯ್ಯಿಸಿಕೊಂಡ ಕಥೆ- ಓದಿನಮೇಲೆ ತಾತ್ಸರ ಹುಟ್ಟುವಷ್ಟು ಕಳಪೆಯಾಗಿತ್ತು. ಕಥೆಗಾರನ ಹೆಸರು ನೋಡಿದೆ. ಓದು ಎಷ್ಟು ದೂರವಾಗಿತ್ತೆಂದರೆ..., ಬರೆದು ಬರೆದು ತುಂಬಿಸುತ್ತಿದ್ದ ನನ್ನದೇ ಕಥೆಗಳನ್ನು ಓದಿದರೂ ಗುರುತಿಸಲಾರದಷ್ಟು! ಹಾಗೆ…, ಆ ಸಾವು ಸಂಭವಿಸಿತು…, ನನ್ನೊಳಗಿನ ಕಥೆಗಾರನ ಸಾವು!!!

ವಿಕ್ಟಿಂ

 "ಎಲ್ಲಾ‌ ಕಥೆಗಳಲ್ಲಿ ಹೆಣ್ಣುಮಕ್ಕಳನ್ನೇ ಯಾಕೆ ವಿಕ್ಟಿಂ ಮಾಡ್ತೀರ?!" ಎಂದಳು. "ಹೆಣ್ಣುಮಕ್ಕಳಿಗಿರುವ ಬೆಲೆ ಗಂಡುಮಕ್ಕಳಿಗೆಲ್ಲಿದೆ?!" ಎಂದೆ. "ನಿಮ್ತಲೆ! ನಾನೇನ್ ಕೇಳ್ತಿದೀನಿ ನೀವೇನ್ ಹೇಳ್ತಿದೀರ?!" ಎಂದಳು. "ಹೂಂನೆ... ಹೆಣ್ಣುಮಕ್ಕಳನ್ನಾದರೆ ರೇಪ್ ಮಾಡಬಹುದು, ಮಾರಬಹುದು, ಅವರನ್ನಿಟ್ಟುಕೊಂಡು ಹಣ ಮಾಡಬಹುದು! ಗಂಡುಮಕ್ಕಳೂ ಇದ್ದಾರೆ ಯೂಸ್‌ಲೆಸ್ ವೇಸ್ಟ್‌ಗಳು!'" ಎಂದೆ. ಮುಖ ಊದಿಸಿ ಮಾತುಬಿಟ್ಟು ಹೊರಟು ಹೋದಳು! 😁

ಇತ್ತೀಚಿನ- ಮುಗಿದ ಜಿಜ್ಞಾಸೆಗಳು!

 ಇತ್ತೀಚಿನ- ಮುಗಿದ ಜಿಜ್ಞಾಸೆಗಳು! * ಜಿಜ್ಞಾಸೆ ಒಂದು:- “ನೀವು ದೇವಸ್ಥಾನಕ್ಕೇ ಹೋಗಲ್ವಾ?” ಎಂದು ಕೇಳಿದರು…, ಹೊಸದಾಗಿ ಪರಿಚಯವಾದ ಗೆಳೆಯರೊಬ್ಬರು- ಆಶ್ಚರ್ಯದಿಂದ. “ಒಬ್ಬನೇ ಹೋಗುವುದಿಲ್ಲ!” ಎಂದೆ. “ಕಾರಣ?” ಎಂದರು. “ಅಷ್ಟುದ್ದ ಕ್ಯೂ…! ಹೇಗೋ ಹತ್ತಿರ ತಲುಪಿ ಒಂದು ಸೆಕೆಂಡ್ ಕೂಡ ದರ್ಶನ ಮಾಡಿರುವುದಿಲ್ಲ…, ಮುಂದಕ್ಕೆ ಹೋಗಿ ಎಂದು ತಳ್ಳುತ್ತಾರೆ! ಅದು ಪಿರಿಪಿರಿ ಆಗುತ್ತದೆ. ನಾವು ದೇವಸ್ಥಾನಕ್ಕೆ ಹೋಗುವುದೇ ನೆಮ್ಮದಿಗಾಗಿ ತಾನೆ? ನೆಮ್ಮದಿ ಭಂಗ ಆಗೋಕೆ ಅಲ್ಲವಲ್ಲಾ? ನನಗೋ ಮನಃಸ್ತೃಪ್ತಿ ಆಗುವವರೆಗೂ ನೋಡಬೇಕು!” ಎಂದೆ. “ನೀವು ಹಾಗೆ ಹೇಳ್ತೀರ? ನನಗೆ ಹೇಗೆ ಗೊತ್ತಾ? ಅಷ್ಟುದ್ದ ಕ್ಯೂ…, ಹೇಗೋ ಹತ್ತಿರ ತಲುಪಿ ದರ್ಶನ ಆಗುತ್ತದೆ. ಅಬ್ಬಾ…, ಇಷ್ಟು ಹೊತ್ತು ಕ್ಯೂ ನಿಂತದ್ದು ಸಾರ್ಥಕವಾಯಿತು- ಕೊನೆಗೂ ದರ್ಶನವಾಯಿತು ಅನ್ನೋ ತೃಪ್ತಿ!” ಎಂದರು. ಅಲ್ಲವಾ…! ಮನಸ್ಸು ಜಿಜ್ಞಾಸೆಗೆ ತೊಡಗಿತು…, ನಾನು ದೇವಸ್ಥಾನಗಳಿಗೆ ಹೋಗದಿರಲು ಇದೊಂದೇ ಕಾರಣವಾ? ದೇವರೆಂದರೆ ಯಾರು? ಯಾಕೆ ದೇವಸ್ಥಾನಕ್ಕೆ ಹೋಗಬೇಕು? ಗೆಳೆಯರೊಂದಿಗೆ ಅಥವಾ ಇತರರೊಂದಿಗಾದರೆ ಹೋಗುತ್ತೇನಲ್ಲ? ಒಬ್ಬನೇ ಹೋಗುವುದಿಲ್ಲ ಅನ್ನುವುದಷ್ಟೇ ವಿಷಯ…, ಯಾಕೆ? ಚಾಮುಂಡಿ ಬೆಟ್ಟ…, ನನ್ನ ಇಮೋಷನ್ ಅದು! ಹತ್ತು-ಹದಿನೈದು ವರ್ಷಗಳಿಂಂದ ನಿರಂತರವಾಗಿ ಮೆಟ್ಟಿಲಮೂಲಕ ಹತ್ತುವುದು- ಇಳಿಯುವುದು- ಮಧ್ಯೆ ವ್ಯಾಯಾಮ ಮಾಡುವುದು…, ನನ್ನ ದೈಹಿಕ ಮತ್ತು ಮಾನಸಿಕ ದೃಢತೆಗೆ ಅತಿಮುಖ್ಯ ಕಾರಣ- ಚಾಮು...

ಚುಟುಕು ಕಥೆಗಳು

೧ ನಾಳೆ ಬರುತ್ತೇನೆಂದೆ! "ನಾಳೆ" ಬರಲೇ ಇಲ್ಲ! ೨ ಕಥೆ! ಅವಳ ಮೇಲಿನ ನನ್ನ ಅತಿಶಯವಾದ ಪ್ರೇಮ..., ಅವಳ ಬದುಕಿನ ಅತಿದೊಡ್ಡ ಸಮಸ್ಯೆ! 😁 ೩ "ಯಾವಾಗ ನೋಡು ನೆಗೆಟಿವ್ ಕಥೆಗಳು!" ಎಂದಳು. "ಅದನ್ನು ಓದಿ- ಬಿ ಪಾಸಿಟಿವ್!" ಎಂದೆ. 😁 ೪ "ಎಷ್ಟು ಚಂದ‌‌ ಅಲಾ ಈ ನೆಮ್ಮದಿಯ ಜೀವನ" ಎಂದೆ. "ಐ ಲವ್‌ಯು" ಎಂದಳು 😁 ೫ "ನೀ ಯಾಕೆ ನನ್ನಜೊತೆ ಮಾತ್ರ ಸಿಟ್ಟು ಮಾಡ್ಕೋಳೋದು?" ಎಂದಳು. "ಸಿಟ್ಟು ಮಾತ್ರವಲ್ಲ ನನ್ನ ದುಃಖ ದುಮ್ಮಾನ ಸೆಡವುಗಳೂ ಗೊತ್ತಿರುವುದು ನಿನಗೆ ಮಾತ್ರ ಅನ್ನುವಲ್ಲಿ ಉತ್ತರವಿದೆ!" ಎಂದೆ. ೬ ಕಥೆ ನಂ:- ೧೯೬ ನೂರಾ ತೊಂಬತ್ತಾರು ಕಥೆ ಬರೆದ ನಾನು, ನೂರಾ ತೊಂಬತ್ತಾರು ಕಥೆ! ಇನ್ನೂ ಮುಗಿಯದ ಕಥೆ! ಮುಗಿಯುವವರೆಗಿನ ಕಥೆ!😁

ಪ್ರೇರಣೆ!

ಪ್ರೇರಣೆ! * ಕರ್ತವ್ಯ ವಿಮುಖನಾಗಿ, ಜವಾಬ್ದಾರಿಯನ್ನು ತಿರಸ್ಕರಿಸಿ, ಯಾರನ್ನೂ ಉಳಿಸಿಕೊಳ್ಳಲು ಶ್ರಮಿಸದೆ, ಬಂಧನ ಇಷ್ಟವಿಲ್ಲವೆನ್ನುವ ನೆಪದಲ್ಲಿ ಅಲೆಮಾರಿಯಂತೆ ನನ್ನ ಜೀವನ ನಾನು ಬದುಕಲು ತೀರ್ಮಾನಿಸಿದ್ದರ ಹಿಂದಿನ ಪ್ರೇರಣೆ... ಸಿದ್ಧಾರ್ಥ! ಇದನ್ನೇ ಮಾಡಿ ಬುದ್ಧನೆನ್ನಿಸಿಕೊಂಡ ಸಿದ್ಧಾರ್ಥ 😁

ಲಕ್ಷ್ಮಿ

 ಲಕ್ಷ್ಮಿ * “ಬೇಗ ಇನ್ನೂರು ತಲುಪಿಸು!” ಎಂದಳು. “ನ್ತದೆ…, ಇನ್ನೂರು ಚಪಾತಿ ಮಾಡಬೇಕು ಅನ್ನುವಂತೆ ಹೇಳ್ತಿದೀಯ! ಕಥೆಯೇ…!” ಎಂದೆ. “ಓ ಭಾರಿ ಕಥೆ! ಎಷ್ಟೋಜನ ಇನ್ನೂರು ಪುಸ್ತಕವೇ ಬರೆಯುತ್ತಿದ್ದಾರೆ…, ಇವನೊಬ್ಬ!” ಎಂದಳು. “ನನ್ನೊಳಗೆ ಇನ್ನೇನೂ ಇಲ್ಲ- ಬರೆಯಲು!” ಎಂದೆ. “ಅದನ್ನೇ ಬರಿ- ಯಾಕಿಲ್ಲ- ಅಂತ!” ಎಂದಳು. ಇವಳು ಹೀಗೆಯೇ…! ನನ್ನ ಲಕ್ಷ್ಮಿ! ಎಲ್ಲರೂ ಬೆಣ್ಣೆಯನ್ನು ನವನೀತ ಎಂದರೆ ಇವಳು ನವನೀತನನ್ನೇ ಬೆಣ್ಣೆ ಅನ್ನುತ್ತಾಳೆ! “ಇನ್ನುಮುಂದೆ ಕಥೆ ಬರೆಯುವುದಿಲ್ಲ!” ಅಂದಿದ್ದೆ. “ಇನ್ನೂರು ತಲುಪಿಸಿಬಿಡು- ಆಮೇಲೆ ಬರೆಯಬೇಡ!” ಎಂದಳು. “ಇನ್ನೂರು ತಲುಪಿದ ತಕ್ಷಣ ನಾನು ಸತ್ತು ಹೋದರೆ ಏನು ಮಾಡ್ತಿ?” ಎಂದೆ. ಅದೊಂದು ದೊಡ್ಡ ಕಥೆಯಾಯ್ತು! “ನೀ ಯಾಕೆ ಹೀಗೆ?” ಎಂದಳು. “ಹೌದು ನಾನು ಹೀಗೇ!” ಎಂದೆ. “ಅದೇ ಯಾಕೆ?” “ಯಾಕೆ ಅಂದರೆ? ನಾನಿರುವುದೇ ಹೀಗೆ!” ಎಂದೆ. “ನನ್ನನ್ನು ನೋಯಿಸುವುದೇ ನಿನ್ನ ಕೆಲಸ!” ಎಂದಳು. “ನಾನೇನು ಮಾಡಿದೆ?” “ಕಥೆ ಬರಿ ಅಂದ್ರೆ ಸಾಯೋ ಮಾತು ಯಾಕೆ ಹೇಳ್ತಿ?” “ಒಳ್ಳೆ ಕಥೆ! ಇನ್ನೂರು ಕಥೆ ಬರೆದ ನಂತರ ಬರೆಯಬೇಡ ಅಂದರೆ ಏನರ್ಥ?” “ನೀನು ಸಾಯಬೇಕು ಅಂತಾನ? ನಿನಗೆ ಗೊತ್ತಿಲ್ವ ಲಕ್ಷ್ಮೀನ?” “ಗೊತ್ತು…! ಆಮೇಲೆ ಮುನ್ನೂರು ಅನ್ತಿ!” “ಕಥೆ ಬರೆಯಲು ಹೇಳಿದ್ದೇ ನಾನು ಮಾಡಿದ ತಪ್ಪು ಅಲಾ?” ಎಂದಳು. “ಹೋಗಲಿ ಬಿಡು…! ಕಾಂಪ್ರಮೈಸ್ ಆಗೋಣ! ಆಗಾಗ, ಮದ್ಮದ್ಯೆ ಒಂದೊಂದು ಕಥೆ ಬರೆಯುತ್ತಾ ನೂರಾ ತೊಂಬತ್ತೊಂಬತ್ತು ತಲುಪಿಸೋಣ...

ಬೆಕ್ಕಿನ ಮರಿ!

ಬೆಕ್ಕಿನ ಮರಿ! * ಅವಳನ್ನೇ ನೋಡುತ್ತಿದ್ದೆ. ಅವಳ ಕೂದಲು…, ನನ್ನ ಇಮೋಷನ್ ಅದು! ನನ್ನ ಮುಖವನ್ನು ನೋಡಲಾಗದ ನಾಚಿಕೆಯೋ, ಹೆದರಿಕೆಯೋ, ಗೌರವವೋ…, ಯಾವ ಭಾವ ಅದು? ನನ್ನ ನೋಟವನ್ನು ಎದುರಿಸಲಾಗದೆ ಬೆಕ್ಕಿನ ಮರಿಯಂತೆ ಹಿಂದಕ್ಕೆ ಸರಿದಳು! ನಾನು ತಿರುಗುವುದಕ್ಕೆ ಅನುಸಾರವಾಗಿ ನನ್ನ ಬೆನ್ನ ಹಿಂದಕ್ಕೆ ಸರಿಯುತ್ತಿದ್ದಳು…! “ಬಾ ಈಚೆ!” ಎಂದು ಹೇಳಿ ಅವಳನ್ನು ಹಿಡಿದು ಮುಂದಕ್ಕೆ ಎಳೆದೆ. ಇಲ್ಲ…, ತಲೆ ಎತ್ತುತ್ತಲೇ ಇಲ್ಲ! ಬೊಗಸೆಯಲ್ಲಿ ಮುಖವನ್ನು ತೆಗೆದುಕೊಂಡು ನೋಡಿದೆ. ಆ ಚಂಚಲತೆ- ಅಧೀರತೆ…, ಕೊನೆಗೂ ನೋಡಿದಳು! ನೋಡಬೇಡ ಅನ್ನುವಂತೆ ಕಣ್ಣುಗಳಿಗೆ ಒಂದೊಂದು ಮುತ್ತು ಕೊಟ್ಟೆ! ಪಬ್ಲಿಕ್ ಆಗಿ!! ಇಬ್ಬರಿಗೂ ಅದರ ಅರಿವೇ ಇರಲಿಲ್ಲ! “ಹೋ…!” ಅನ್ನುವ ಸುತ್ತಲಿನವರ ಗೇಲಿ ನಮ್ಮನ್ನು ಎಚ್ಚರಿಸಿತು! ಮತ್ತಷ್ಟು ಮುದುಡಿ ಹಿಂದಕ್ಕೆ ಸರಿದಳು. ನನಗೋ ಅವಳ ಮುಖವನ್ನು ನೋಡುತ್ತಲೇ ಇರಬೇಕೆನ್ನುವ ಆಸೆ! ಬೆಕ್ಕಿನ ಮರಿ! ಬೀದಿಬದಿಯ ಟೀ ಅಂಗಡಿ. ಆರ್ಡರ್ ಕೊಟ್ಟಾಗಿದೆ. ಕುದಿಸುತ್ತಿದ್ದಾರೆ. ಹೊರಡುವ ಹಾಗಿಲ್ಲ. ಅವಳೋ ಮುಂದಕ್ಕೆ ಬರುತ್ತಿಲ್ಲ! ನನ್ನ ಅವಸ್ಥೆಯನ್ನು ಏನೆಂದು ಹೇಳುವುದು? “ಸರಿ…, ಬಾ…, ನಾನೇನೂ ಮಾಡುವುದಿಲ್ಲ!” ಎಂದೆ. ಹಿಂಜರಿಕೆಯಿಂದ ನಿಧಾನಕ್ಕೆ ಮುಂದಕ್ಕೆ ಬಂದಳು. ನೀಳವಾದ ಕೂದಲು…, ಚಂಚಲ ಕಣ್ಣುಗಳು, ಮೂಗಿನ ಕೆಳಗೆ ಎದ್ದುಕಾಣುವ ರೋಮವಿರುವ ತುಟಿ! ಮನಸ್ಸು! ಎಷ್ಟು ಕಷ್ಟ! “ಟೀ!” ಎಂದ ಅಂಗಡಿಯವ. ಅವಳಿಗೊಂದು ಕೊಟ್ಟು ನಾನೊಂದು ತೆಗೆದುಕೊಂಡು ...

ಕವಿತೆ- ಅವಳೆಂದಳು

* ಅವಳೆಂದಳು..., ನಿನ್ನ ಕತೆಗಳಲ್ಲಿ ನಾನಿಲ್ಲವೋ! ಕವಿತೆ ಬರಿ! ಕಥೆ ಎದೆಯಾದರೆ ಕವಿತೆ ಮಡಿಲು! ಕಥೆಯಲ್ಲಿ ಅದೆಷ್ಟು ಜನವೋ ಕವಿತೆಗೆ ನಾನೇ ಸಾರ್ವಭೌಮಳು!

ಪಿಹೆಚ್‌ಡಿ!

 ಪಿಹೆಚ್‌ಡಿ! * ನಾವಿಬ್ಬರೂ ಒಂದು ಪ್ರಯಾಣ ಹೊರಟಿದ್ದೆವು. ಶಾಶ್ವತವಾಗಿ ಬೇರ್ಪಡುವುದಕ್ಕಿಂತ ಮುಂಚೆ ಒಟ್ಟಿಗೆ…, ಕೊನೆಯ ಪ್ರಯಾಣ. ದುಃಖವೇನೂ ಇಲ್ಲ. ಸಂತೋಷವೇ. ಕೆಲವೊಂದು ತೀರ್ಮಾನಗಳು ಅನಿವಾರ್ಯ. ಆ ತೀರ್ಮಾನಕ್ಕೆ ಬದ್ಧರಾದಮೇಲೆ- ಭಾವನೆಗಳಿಗೆ ಅರ್ಥವಿಲ್ಲ!  ಅದು ಯಾವ ಜಾಗವೆಂದು ನಮಗೆ ತಿಳಿಯದು. ಅಲ್ಲಿಗೆ ಹೋಗಬಾರದೆಂದು ನಮ್ಮನ್ನು ತಡೆಯುವವರು ಯಾರೂ ಇರಲಿಲ್ಲ. ಜುಳುಜುಳು ಹರಿಯುತ್ತಿರುವ ನದಿ. ನಾವಿರುವ ದಡದಮೇಲೆ ಆಕಾಶದೆತ್ತರಕ್ಕೆ ಬೆಳೆದಿರುವ ಮರಗಳು. ನದಿಯ ಆಚೆ- ಬಯಲು. ದಡದಲ್ಲಿ…, ನೀರಿಗೆ ಕಾಲು ಇಳಿಬಿಟ್ಟು ಕುಳಿತೆವು. ಅವಳು ನನ್ನ ತೋಳಿಗೆ ಒರಗಿಕೊಂಡಿದ್ದಳು. “ನಮ್ಮ ತೀರ್ಮಾನ ಸರಿ ಇದೆ ಅಲ್ವಾ?” ಎಂದಳು. “ಇದಕ್ಕಿಂತ ಪಕ್ವವಾದ ತೀರ್ಮಾನ ಬೇರೆ ಯಾವುದಿದೆ?” ಕೇಳಿದೆ. “ಅಂದು ನೀನು ನನಗೆ ಸಿಗದಿದ್ದರೆ ಬದುಕು ಏನಾಗಿರುತ್ತಿತ್ತು?” ಎಂದು ಕೇಳಿದಳು. “ಮುಂಚೆ ಆಗಿದ್ದರೆ ಮತ್ತು ಮುಂದೆ ಆದರೆ ಅನ್ನುವುದು ಬಿಡು. ಅದು ನಮ್ಮ ಪರಿಪೂರ್ಣವಾದ ಭ್ರಮೆ. ಆಗಿದೆ ಅನ್ನುವುದಷ್ಟೇ ನಿಜ! ಆಗದ ವಿಷಯಗಳಬಗ್ಗೆ ಊಹೆಯ ಸಂಭಾಷಣೆ ಯಾಕೆ? ಆದ ಅನುಭವವನ್ನಿಟ್ಟು ಆಗಬೇಕಾದ ವಿಷಯಗಳಬಗ್ಗೆ ಯೋಚನೆ ಮಾಡೋಣ!” ಎಂದೆ. “ತೀರ್ಮಾನ ತೆಗೆದುಕೊಂಡು ಆಗಿದೆಯಲ್ಲಾ? ಆದ್ದರಿಂದ…, ನಮಗೆ ಸಂಬಂಧಪಡದ ವಿಷಯವೇನಾದರೂ ಹೇಳು! ಏನಿದ್ದರೂ ಕಥೆಗಾರ ನೀನು!” ಎಂದಳು. ಹೌದು…, ಕಥೆಗಾರ ನಾನು! ಪ್ರತಿಯೊಂದರಲ್ಲಿಯೂ ಕಥೆಗಳನ್ನು ಹುಡುಕುವವ! ಕಥೆಗಳಂತೆ ಹೇಳಲಾಗದ್ದನ್ನ...

ಸೈಕಲಾಜಿಕಲ್ ಮಿಸ್‌ಲೀಡಿಂಗ್

 ಇಲ್ಲಿರುವ ೭೦% ಬರಹ ಡಾ:- Ruupa Rao ಅವರದ್ದು! ನನ್ನ ಮತ್ತು ಅವರ ಕಮೆಂಟ್‌ಗಳನ್ನು ಅವರೊಂದು ಪೋಸ್ಟ್‌ ಆಗಿ ಹಾಕಿದ್ದಾರಾದ್ದರಿಂದ ನಾನೂ ಹಾಕುತ್ತಿದ್ದೇನೆ! ಮಾಮೂಲಿನಂತೆ ನಾನೇನೇ ಬರೆದರೂ ಕಥೆಯಂತೆ ಇರಬೇಕೆನ್ನುವ ಹಠದಿಂದಾಗಿ ಅವರಿಲ್ಲದ ಮೊದಲ ಮತ್ತು ಕೊನೆಯ ಸಂಭಾಷಣೆಗಳನ್ನು ಸೇರಿಸಿದ್ದೇನೆ! * ಸೈಕಲಾಜಿಕಲ್ ಮಿಸ್ ಲೀಡಿಂಗ್! * “ನ್ತದ ನೀನು ಸುಮ್ಮನೆ ಕಾಲು ಕೆರೆದು ಜಗಳಕ್ಕೆ ಹೋಗುವುದು!” ಎಂದಳು. “ಕಾಲು ಕೆರೆಯುವುದಷ್ಟೆ! ಜಗಳದ ಉದ್ದೇಶವೇನೂ ಇರುವುದಿಲ್ಲ! ಆದರೂ ಆ ಜಗಳ ಮಜವಾಗಿರುತ್ತದೆ! ಆರೋಗ್ಯಪೂರ್ಣವಾಗಿರುತ್ತದೆ!” ಎಂದೆ. “ಈಗೆನ್ತ? ಅವರು ಹೇಳಿದ್ದನ್ನು ನೀನು ಒಪ್ಪುತ್ತೀಯೋ ಇಲ್ಲವೋ?” “ಇಲ್ಲಿ ಒಪ್ಪುವುದು ಬಿಡುವುದು ಅನ್ನುವುದು ಇಲ್ಲವೇ… ಅವರೊಬ್ಬರು ಸೈಕಾಲಜಿಸ್ಟ್… ಡಾಕ್ಟರ್… ಅವರು ಹೇಳಿದ ವಿಷಯದಲ್ಲಿ ನನಗೆ ಗೊಂದಲವಾದರೆ ನಾನು ಕೇಳುವವನೇ! ಯಾಕೆಂದರೆ ಅವರು ಹೇಳಿದ ವಿಷಯ ನನ್ನ ಅನುಭವದಲ್ಲಿ ಅವರು ಹೇಳಿದ್ದಕ್ಕೆ ವಿರುದ್ಧವಾಗಿದೆ! ಅದನ್ನು ಕಾಲು ಕೆರೆಯುವುದು, ಜಗಳ ಅನ್ನುವುದು ತಪ್ಪು! ಇನ್ನೂ ಹೇಳಬೇಕೆಂದರೆ…, ಅವರು ಶ್ರೀಕೃಷ್ಣನಂತೆ- ನಾನು ಅರ್ಜುನ! ಎಲ್ಲವೂ ಗೊತ್ತಿರುವವರೊಂದಿಗೆ ಏನೂ ಗೊತ್ತಿಲ್ಲದವ ಹೇಗೆ ಜಗಳ ಮಾಡುವುದು?” ಎಂದೆ. “ಆಹಾ…! ಆದರೆ ಅವರನ್ನು ನೀನು ಅಧ್ಯಯನ ಮಾಡಿದ್ದೀಯ ಅಂದರೆ ಏನರ್ಥ? ಅವರನ್ನು ವೈಯಕ್ತಿಕ ಧಾಳಿ ಮಾಡಿದರೆ ಹೇಗೆ?” “ವೈಯಕ್ತಿಕ ಧಾಳಿ- ವೈಯಕ್ತಿಕ ಜಡ್ಜ್‌ಮೆಂಟ್ ಅನ್ನುವುದು…, ನಾನು ವ...