ಆತ್ಮಾವಲೋಕನ!
ಕೆಲವೊಮ್ಮೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ! ಈ ಮನುಷ್ಯರು ಯಾಕೆ ಇಷ್ಟೊಂದು ದುಃಖಿತರಾಗಿದ್ದಾರೆ…, ಯಾವಾಗಲೂ ಏನೋ ಕಳೆದುಕೊಂಡವರಂತೆ…, ಪ್ರಪಂಚದಲ್ಲಿರುವ ಅಷ್ಟೂ ದುಃಖ- ವಿಷಾದ ತಮಗೇ ಬಂದಂತೆ…! ಸಂತೋಷದ ಕ್ಷಣಗಳೇ ಹೆಚ್ಚಾಗಿದ್ದರೂ ಅದನ್ನು ಮರೆಮಾಚಿ, 'ವಿಷಾದಿತ' ಅನ್ನಿಸಿಕೊಳ್ಳುವುದು ಏನೋ ದೊಡ್ಡಸ್ತಿಕೆ ಅನ್ನುವಂತೆ…! ಯಾಕೆ? ಹಾಗೆಯೇ…, ಈ ಪ್ರಪಂಚಕ್ಕೇ ಸಂಬಂಧಪಡದವನಂತೆ ನಾನು ಹೇಗೆ ಇಷ್ಟು ಖುಷಿಯಾಗಿ- ನೆಮ್ಮದಿಯಾಗಿ ಬದುಕಿದ್ದೇನೆ? ತೀರಾ ಆಕಸ್ಮಿಕವಾಗಿ ಇದರಬಗ್ಗೆ ಯೋಚಿಸುವ ಸಂದರ್ಭ ಒದಗಿತು! ಬೆಳಿಗ್ಗೆ ಮತ್ತು ಸಂಜೆ…, ಅಮ್ಮ ಮಗ ಒಟ್ಟಿಗೆ ಕುಳಿತು ಟಿ ಕುಡಿಯುತ್ತೇವೆ. ಆ ಸಮಯ ನಮ್ಮದು…, ಪ್ರಪಂಚದ ಅಷ್ಟೂ ಆಗುಹೋಗುಗಳ ಬಗ್ಗೆ ಮಾತುಕತೆಯಾಗುತ್ತದೆ. ಕೆಲವೊಮ್ಮೆ ಎರಡುಮೂರು ನಿಮಿಷಕ್ಕೆ ನಮ್ಮ ಮಾತುಗಳು ಮುಗಿದು ಇನ್ನು ಮಾತನಾಡಲು ಏನೆಂದರೆ ಏನೂ ಉಳಿದೇ ಇಲ್ಲವೇನೋ ಅನ್ನಿಸುತ್ತದೆ! ಮತ್ತೆ ಕೆಲವೊಮ್ಮೆ…, ಮಾತನಾಡಿದಷ್ಟೂ ಮುಗಿಯುವುದೇ ಇಲ್ಲ! ಹಾಗೇ ಮಾತುಕತೆಯಾಡುತ್ತಿದ್ದಾಗ…, ನನ್ನ ಬದುಕಿನ ನಷ್ಟಗಳ ಬಗ್ಗೆ ಮಾತು ಬಂತು! ಅದು…, ಹುಟ್ಟಿನಿಂದಲೇ ಶುರುವಾಗಿದ್ದು!!! ನಾನು ಹುಟ್ಟಿದ ವರ್ಷ…, ಜನಸಂಖ್ಯಾ ನಿಯಂತ್ರಣಕ್ಕೆ ಅನುಗುಣವಾಗಿ ನಿಯಮವೊಂದು ಚಾಲ್ತಿಗೆ ಬಂತು! ಎರಡಕ್ಕಿಂತ ಹೆಚ್ಚಿನ ಮಕ್ಕಳಾದರೆ…, ಅವರಿಗೆ ಸರಕಾರದ ಅನುಕೂಲತೆಗಳು ಸಿಕ್ಕುವುದಿಲ್ಲ!!! ಇಬ್ಬರು ಅಕ್ಕಂದಿರ ನಂತರ ನಾನು ಮೂರನೇಯವ! ನಿಯಮ ಚಾಲ್ತಿಗೆ ಬಂದಿದ್ದು ನಾನ...